“ಗುಜರಿ ಬಕೀಟಿನೊಂದಿಗೆ ಶಿವಾಯನಮಹ" ಎಂಬ ವಿಲಕ್ಷಣ ಹೆಸರಿನ ಕೃತಿಯೊಂದನ್ನು ಬರೆದು ಪ್ರಕಟಿಸಿದ್ದಾರೆ ಲೇಖಕರಾದ ಕೃಷ್ಣಮೂರ್ತಿ ಬಿಳಿಗೆರೆ ಇವರು. ಮನುಷ್ಯ ಪಾತ್ರಗಳು ಬಂದರೂ ಅವು ನಿಮಿತ್ತ ಮಾತ್ರ ಇಡಿಯಾದ ನೋಟವನ್ನು ಸಾಧಿಸಿಕೊಂಡಿರುವುದರಿಂದಲೇ ಅವರು ವೈರುಧ್ಯ ಪಾತ್ರಗಳ ಎದಿರು ಬದಿರು ನಿಲ್ಲಿಸಿ ಜಗಳ ಮಾಡಿಸುವುದಿಲ್ಲ. ಭೂಮಿ ತಾಯಿಯ ಸಲುವಾಗಿ ತಾನೇ ಸೇನಾನಿಯಾಗಲು ತೊಡಗುವ ಬರಹಗಳಲ್ಲಿ ಲೇಖಕರು ಮುಳುಗುತ್ತಾರೆ ಎನ್ನುತ್ತಾರೆ ಮುನ್ನುಡಿಯನ್ನು ಬರೆದ ಲೇಖಕರಾದ ಮೊಗಳ್ಳಿ ಗಣೇಶ್ ಇವರು. ಇವರು ಬರೆದ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...
“ಕೃಷ್ಣಮೂರ್ತಿ ಬಿಳಿಗೆರೆ ಹಳ್ಳಿಯ ಬೇರುಗಳ ಮೂಲಕವೇ ಬದುಕನ್ನು ಕಂಡವರು. ಗ್ರಾಮ ಭಾರತದ ಜೀವ ಜಾಲ ಸಂಬಂಧಗಳು ಜನಪದರ…