ಪುಸ್ತಕ ಸಂಪದ

  • ಲೇಖಕರಾದ ನಿತ್ಯಾನಂದ ಶೆಟ್ಟಿ ಇವರು ‘ಮಾರ್ಗಾನ್ವೇಷಣೆ' ಎಂಬ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಸವಿವರವಾದ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಎನ್ ಎಸ್ ಗುಂಡೂರ ಇವರು. ನಿತ್ಯಾನಂದ ಬಿ. ಶೆಟ್ಟಿ ಅವರ ಸಂಶೋಧನಾತ್ಮಕ ಕೃತಿ ‘ಮಾರ್ಗಾನ್ವೇಷಣೆ’ಗೆ ಬರೆದ ಅರ್ಥಪೂರ್ಣ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ.

    ತರವಲ್ಲ ತಗಿ ನಿನ್ನ ತಂಬೂರಿ ಸ್ವರ
    ಬರದೇ ಬಾರಿಸದಿರು ತಂಬೂರಿ
    -ಶಿಶುನಾಳ ಶರೀಫಜ್ಜ

    ಕಂಡದ್ದರ ಬಲದ ಮೇಲೆ ಕಣ್ಣಿಗೆ ಕಾಣದ್ದನ್ನು
    ಹುಡುಕುವುದೆಂದರೇ ಸಂಶೋಧನೆ.
    -ಕೀರ್ತಿನಾಥ ಕುರ್ತಕೋಟಿ

    ಪ್ರಾರ್ಥನೆ: ನಮಗಿರುವ ಕಾಳಜಿ ಮತ್ತು ಪ್ರಾಮಾಣಿಕತೆ ನಮ್ಮ…

  • ಕಥೆಗಾರ, ಪತ್ರಕರ್ತ ಪದ್ಮನಾಭ ಭಟ್ ಅವರು ಬರೆದ ‘ದೇವ್ರು' ಪುಸ್ತಕದ ಬಗ್ಗೆ ಖುದ್ದು ಲೇಖಕರೇ ತಮ್ಮ ಮಾತುಗಳಲ್ಲಿ ಹೇಳಿರುವುದು ಹೀಗೆ..."ಇದನ್ನು ಬರೆಯಲು ಕೂಡುವ ಹೊತ್ತಿಗೆ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೇಡ್ತಿ ನದಿ ಉಕ್ಕಿ, ನನ್ನೂರಿಗೂ ಹೊರಜಗತ್ತಿಗೂ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ನಡುಮಧ್ಯ ಮುರಿದು ಬಿದ್ದಿದೆ. ಪ್ರತಿವರ್ಷ ಹೊಳೆ ಬಂದಾಗ ಆ ಸೇತುವೆ ಮೇಲೆ ನಿಂತು ನೋಡುವುದು, ಅದರ ಕಂಭಕ್ಕೆ ಹೊಳೆಯಲ್ಲಿ ತೇಲಿಬಂದ ದಿಮ್ಮಿಗಳು ಬಡಿದು ಕಂಪಿಸಿದಾಗ ಭಯಭೀತ ರಾಗುವುದು... ಎಷ್ಟೆಲ್ಲ ನೆನಪುಗಳು ಉಕ್ಕುತ್ತಿವೆ. ಮತ್ತೊಂದೆಡೆ ಪ್ರವಾಹದ ವಿವಿಧ ಚಿತ್ರ, ದೃಶ್ಯದ ತುಣುಕುಗಳು, ಉತ್ಸಾಹದಿಂದ ಕೊಡುತ್ತಿರುವ ವೀಕ್ಷಕ ವಿವರಣೆಯ ಪರಿಚಿತ ಧ್ವನಿಗಳು ಮೊಬೈಲ್‌ನೊಳಗೆ ಸಂದಣಿಗಟ್ಟಿ…

  • ವಿಜಯನಗರ ಸಾಮ್ರಾಜ್ಯದ ಬಗ್ಗೆ ಹಲವಾರು ಉಪಯುಕ್ತ ಪುಸ್ತಕಗಳು ಹೊರಬಂದಿವೆ. ಅದೇ ಸಾಲಿನಲ್ಲಿ ವಿಂಗ್ ಕಮಾಂಡರ್ ಬಿ ಎಸ್ ಸುದರ್ಶನ್ ಅವರು ಬರೆದ ‘ಉದಯವಾಯಿತು ವಿಜಯನಗರ' ಪುಸ್ತಕ ನಿಲ್ಲುತ್ತದೆ. ಈ ಪುಸ್ತಕಕ್ಕೆ ಹೆಸರಾಂತ ಕಾದಂಬರಿಕಾರರಾದ ಸದ್ಯೋಜಾತ ಭಟ್ಟ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಾದ ‘ಕನ್ನಡಿಗ ಕುಲಕೆ ರತ್ನ ಕನ್ನಡಿ' ಎನ್ನುವ ಬರಹದಲ್ಲಿ ಬರೆದ ಕೆಲವೊಂದು ಸಾಲುಗಳು ಇಲ್ಲಿವೆ…

    “ಭಾರತಕ್ಕೆ ವಿದೇಶಿಗರ ಆಗಮನವೇ ಹಾಗೆ. ಯಾವುದೋ ಕಲ್ಪನೆಯಲ್ಲಿ ಬಂದವರಿಗೆ ಇಲ್ಲಿನ ಜನರ ಆಚಾರ, ವಿಚಾರ, ಸಂಸ್ಕೃತಿ ಸಂಪ್ರದಾಯಗಳು ಹೊಸದಾದ ಜಗತ್ತನ್ನೇ ತೆರೆದಿಡುತ್ತವೆ. ಜಗತ್ತಿನ ಯಾವುದೇ ದೇಶ ಗಮನಿಸಿ. ಆ ದೇಶದಲ್ಲಿ ಇಲ್ಲಿನ ಸಾಂಸ್ಕೃತಿಕ ಬದುಕು ಕಾಣ…

  • ಮೈಸೂರಿನ ಪ್ರಸಿದ್ಧ ಕೌನ್ಸಿಲರ್ ಡಾ. ಮೀನಗುಂಡಿ ಸುಬ್ರಹ್ಮಣ್ಯಂ ಹತ್ತು ಸಮಸ್ಯಾವರ್ತನೆಗಳನ್ನು ಈ ಪುಸ್ತಕದಲ್ಲಿ ಪ್ರಸ್ತುತ ಪಡಿಸಿದ್ದಾರೆ. 1996ರಲ್ಲಿ ನಾನು ಓದಿದ್ದ ಈ ಪುಸ್ತಕವನ್ನು ಓದಬೇಕೆಂದು ಕಳೆದ ಸುಮಾರು ಮೂರು ದಶಕಗಳಲ್ಲಿ ಸಾವಿರಾರು ಜನರಿಗೆ ನಾನು ಶಿಫಾರಸ್ ಮಾಡಿದ್ದೇನೆ. ಯಾಕೆಂದರೆ, ಪುಸ್ತಕದ ಶೀರ್ಷಿಕೆ, “ಈ ವರ್ತನೆಗಳು ನಿಮ್ಮಲ್ಲಿ ಇವೆಯೇ?” ಎಂದು ಕೇಳುತ್ತಿಲ್ಲ, ಬದಲಾಗಿ “... ಎಷ್ಟಿವೆ?” ಎಂದು ಕೇಳುತ್ತಿದೆ.

    “ಅದು ಯಾಕೆ?" ಎಂಬುದನ್ನು ಲೇಖಕರು ಮುನ್ನುಡಿಯಲ್ಲಿ ವಿವರಿಸಿದ್ದಾರೆ: “ಇಲ್ಲಿ ಎರಡು ಬಗೆಯ ಸಮಸ್ಯಾವರ್ತನೆಯ ಚಿತ್ರಣಗಳಿವೆ - ವೈಯುಕ್ತಿಕ ಅನಿಸಿಕೆಗಳಿಂದಾಗಿ ಜೀವನ ಸುಖದ ಮಟ್ಟ ಕೆಳಗಿಳಿಸಿಕೊಂಡು “ನನಗೆ ಮಾನಸಿಕ ಸಮಸ್ಯೆ" ಎಂದು ತಾನೇ ಚೀಟಿ ಅಂಟಿಸಿಕೊಂಡು ಕುಳಿತುಕೊಳ್ಳುವುದು (ಇಂಟ್ರಾ ಪರ್ಸನಲ್…

  • ಖ್ಯಾತ ಇಟಾಲಿಯನ್ ಸಾಹಿತಿ ಒರಿಯಾನಾ ಪಲಾಚಿ ಅವರ ಕಾದಂಬರಿ “LETTER TO A CHILD NEVER BORN” ಎಂಬ ಪುಟ್ಟ ಕಾದಂಬರಿಯನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ್ದಾರೆ ಜಾನ್ ಶೆಪ್ಲಿ ಎಂಬವರು. ಈ ಇಂಗ್ಲೀಷ್ ಕಾದಂಬರಿಯನ್ನು ಮೂಲಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕನ್ನಡ ಭಾಷೆಗೆ ಅನುವಾದ ಮಾಡಿದ್ದಾರೆ ಲೇಖಕಿ ಸುಧಾ ಆಡುಕಳ. ಅವರು ತಮ್ಮ ಅನುವಾದಿತ ‘ಎಂದೂ ಹುಟ್ಟದ ಮಗುವಿಗೆ ಪತ್ರ’ ಕೃತಿಯ ಕುರಿತು ವ್ಯಕ್ತ ಪಡಿಸಿದ ಭಾವ ಹೀಗಿದೆ...

    “ಪ್ರಪಂಚದಷ್ಟೇ ಪುರಾತನವಾದ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ.....ತಾಯ್ತನದ ಆಯ್ಕೆ, ಮಗುವಿನ ಹೊಣೆಗಾರಿಕೆ, ಮಗುವಿನ ಲಿಂಗದ ಬಗ್ಗೆ ನಿರೀಕ್ಷೆ......ಇವೆಲ್ಲವೂ ಪ್ರಪಂಚ ಹುಟ್ಟಿದಾಗಿನಿಂದಲೂ ಜೀವಿಗಳ ಜತೆಗೆ ಸಾಗಿ ಬಂದಿರುವ…

  • ಫಕೀರ ಕಾವ್ಯನಾಮದ ಶ್ರೀಧರ ಬನವಾಸಿ ಇವರು ಬರೆದ ಕವನ ಸಂಕಲನ ‘ಪೂರ್ಣಚಂದ್ರನಿಗೆ ಮುಖವಾಡವಿಲ್ಲ' ಎಂಬ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಡಾ. ಪ್ರದೀಪಕುಮಾರ್ ಹೆಬ್ರಿ ಇವರು. ಇವರು ಶ್ರೀಧರರ ಕವನಗಳನ್ನು ಬಹಳ ಸೊಗಸಾಗಿ ಅನಾವರಣ ಮಾಡುತ್ತಾ ಮುನ್ನುಡಿಯನ್ನು ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಗಿ…

    ತಮ್ಮ ಕೃತಿಗಳ ಮೂಲಕ ಕನ್ನಡನಾಡಿನ ಓದುಗರಿಗೆ ಈಗಾಗಲೇ ಪರಿಚಿತರಾಗಿರುವ ಕವಿ ಶ್ರೀಧರ ಬನವಾಸಿ ಅವರು ತಮ್ಮ `ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಕವನ ಸಂಕಲನಕ್ಕೆ ಮುನ್ನುಡಿ ಅಪೇಕ್ಷಿಸಿ ಕರೆ ಮಾಡಿದಾಗ ನಿಜಕ್ಕೂ ಅಚ್ಚರಿಯಾಯಿತು. ನಾನವರನ್ನು ನೋಡಿದ್ದು ಕೇವಲ ಒಂದು ಬಾರಿ ಆದರೂ ಕೃತಿ ಬಿಡುಗಡೆ ಸಮಾರಂಭಕ್ಕೆ ನಾವಿಬ್ಬರೂ ಮುಖ್ಯ…

  • ಉನ್ನತ ಹುದ್ದೆಯಲ್ಲಿರುವ ರಾಜಕಾರಣಿಗಳು ಬರವಣಿಗೆಯಲ್ಲಿ ತೊಡಗಿಕೊಳ್ಳುವುದು ಬಹಳ ಅಪರೂಪ. ಕೆಲವರು ಸಚಿವರು ಮತ್ತು ಮುಖ್ಯಮಂತ್ರಿಗಳಾಗಿರುವವರು ತಾವು ಅಧಿಕಾರದಲ್ಲಿದ್ದ ಸಮಯದಲ್ಲಿ ತಮ್ಮ ಇಲಾಖೆಯ, ಸರಕಾರದ ಸಾಧನೆಗಳನ್ನು ಡಂಗೂರ ಸಾರಲು ಬೇರೆ ಲೇಖಕರಿಂದ ಲೇಖನಗಳನ್ನು ಬರೆಯಿಸಿ ಪತ್ರಿಕೆಗಳಿಗೆ ರವಾನಿಸುತ್ತಾರೆ. ಆದರೆ ರಾಜಕಾರಣಿಯಾಗಿ, ಮಹತ್ವದ ಹುದ್ದೆಗಳಲ್ಲಿ ಇರುವ ಕೆಲವೇ ಕೆಲವು ಅಪರೂಪದ ಬರಹಗಾರರು ನಮ್ಮ ನಡುವೆ ಇದ್ದಾರೆ. ಅದರಲ್ಲಿ ಪ್ರಮುಖರಾದವರು ಪ್ರಸ್ತುತ ಗೋವಾದ ರಾಜ್ಯಪಾಲರಾಗಿರುವ ಪಿ ಎಸ್ ಶ್ರೀಧರನ್ ಪಿಳ್ಳ ಇವರು. ಇವರು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಮಲಯಾಳಂ ಭಾಷೆಯಲ್ಲಿ ಹಲವಾರು ಬರಹಗಳನ್ನು ಬರೆದಿದ್ದರು. ೧೯೭೨ರಲ್ಲಿ ಪಂದಳಂ ಎನ್ ಎಸ್ ಎಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ…

  • ತಮ್ಮ ಜೀವನಾನುಭವವನ್ನು ಭಟ್ಟಿಯಿಳಿಸಿ “ಪುಟ್ಟ ತಮ್ಮನ ಕಗ್ಗ"ದಲ್ಲಿ ನಮಗೆ ಧಾರೆಯೆರೆದಿದ್ದಾರೆ ಅನಂತ ಭಟ್ ಪೊಳಲಿ ಅವರು. ನಾಲ್ಕುನಾಲ್ಕು ಸಾಲಿನ ಇಲ್ಲಿನ ಮುಕ್ತಕಗಳನ್ನು ಓದುವಾಗ ಕವಿತೆ ಇವರಿಗೆ ಒಲಿದು ಬಂದಿದೆ ಎಂಬುದು ಎದ್ದು ಕಾಣಿಸುತ್ತದೆ. ಅನಾಯಾಸವಾಗಿ ಮೂಡಿ ಬಂದಿರುವ ಚಿಂತನೆಗಳು ನಮ್ಮ ಮನ ಬೆಳಗಿಸುತ್ತವೆ.

    "ನನ್ನ ನುಡಿ"ಯಲ್ಲಿ ಇವು “ಮಿಣುಕು ದೀಪಗಳ ಬೆಳಕ ಹಚ್ಚುವ" ಪ್ರಯತ್ನವೆಂದು ಇವುಗಳ ರಚನಾಕಾರ ಅನಂತ ಭಟ್ ಪೊಳಲಿ ಬರೆದಿದ್ದಾರೆ: “ಈ ಕೃತಿಯು ಒಂದು ಭಾವನಾತ್ಮಕವಾದ ವಿಷಯಗಳ ಸಂಗ್ರಹವಾಗಿದೆ. ಡಿ.ವಿ.ಜಿ.ಯವರ “ಮಂಕುತಿಮ್ಮನ ಕಗ್ಗ”ದ ಪ್ರಭಾವವು ಇದರ ಮೇಲೆ ಬೀರಿದೆ ಎಂದರೆ ತಪ್ಪಾಗಲಾರದು. ಇಲ್ಲಿ ಬಂದಿರುವ ವಿಚಾರಗಳೆಲ್ಲವೂ ಸ್ವಾನುಭವದ ಅಗ್ಗಿಷ್ಟಿಕೆಯಲ್ಲಿ ಸ್ಫುಟಗೊಂಡು ಬೆಳಗುವ, ನೈತಿಕ, ತಾತ್ವಿಕ, ವೈಚಾರಿಕ ಹಾಗೂ…

  • “ಓದಿನ ಒಕ್ಕಲು” ಕೃತಿಯು ರಂಗನಾಥ ಕಂಟನಕುಂಟೆ ಅವರ ಸಾಹಿತ್ಯ ಚಿಂತನೆಯ ಬರೆಹಗಳ ಸಂಕಲನವಾಗಿದೆ. ಓದಿನ ಒಕ್ಕಲು' ಸಾಹಿತ್ಯ ಚಿಂತನೆಯ ಬರೆಹಗಳು, ಸಾಹಿತ್ಯದ ಮೂಲಕ ಸಮಾಜ, ಸಂಸ್ಕೃತಿ, ಅಧಿಕಾರ ರಾಜಕಾರಣ, ಭಾಷೆ, ಜನಪದ ಸಾಹಿತ್ಯ, ಹೆಣ್ಣು ಕಥನಗಳನ್ನು ಒಳಗೊಂಡಂತೆ ಲೋಕದ ಸ್ಥಾಪಿತ ಮೌಲ್ಯಗಳನ್ನು, ಬದುಕಿನ ವಿವಿಧ ಮಗ್ಗುಲುಗಳನ್ನು ಮುಖಾಮುಖಿಯಾಗಲು ಯತ್ನಿಸ ಲಾಗಿದೆ. ಸಾಹಿತ್ಯದ ನೆಲೆಯಲ್ಲಿ ನಿಂತು ಲೋಕಸಂವಾದ ಮತ್ತು ವ್ಯಕ್ತಿಯ ಒಳಸಂವಾದ ನಡೆಸಲಾಗಿದೆ. ಲೋಕಸಂವಾದ ನಡೆಸುತ್ತಲೇ ಸಾಹಿತ್ಯ ಸಂವಾದವನ್ನು ನಡೆಸಲಾಗಿದೆ. ಹೀಗೆ ಸಂವಾದ ನಡೆಸುವ ಹೊತ್ತಿನಲ್ಲಿ ಇದುವರೆಗೂ ಕಟ್ಟಿಕೊಂಡಿರುವ ಕಥನಗಳಲ್ಲಿನ ತಾತ್ವಿಕ ಸಮಸ್ಯೆ ಗಳನ್ನೂ, ಸ್ಥಾಪಿತ ಮೌಲ್ಯಗಳನ್ನು ಎದುರುಗೊಳ್ಳಲು ಯತ್ನಿಸಲಾಗಿದೆ. ನಮ್ಮ ಕೆಲವು ಆಲೋಚನೆಗಳಲ್ಲಿ…

  • ಬಸಯ್ಯ ಸ್ವಾಮಿ ಕಮಲದಿನ್ನಿ (ಡಾ ಬಸಯ್ಯ ಸ್ವಾಮಿ) ಅವರು “ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ" ಎಂಬ ಮಾಹಿತಿಪೂರ್ಣ ಕೃತಿಯನ್ನು ಹೊರತಂದಿದ್ದಾರೆ. ಸುಮಾರು ೧೭೦ ಪುಟಗಳ ತಮ್ಮ ಕೃತಿಗೆ ಬಸಯ್ಯ ಸ್ವಾಮಿಯವರು ಬರೆದ ಲೇಖಕರ ಮಾತಿನಿಂದ ಆಯ್ದ ಸಾಲುಗಳು ಇಲ್ಲಿವೆ...

    ‘ದೊಡ್ಡ ಕಣ್ಣಿಂದ ಹಿಂದೂಸ್ಥಾನವೆಲ್ಲ ತನ್ನದು' ಎಂಬ ಹೆಮ್ಮೆ ಕೊಚ್ಚಬಹುದಾದರೂ ಯಾವುದನ್ನು ಮುಟ್ಟಿದರೂ ತನ್ನದಲ್ಲ ಎಂಬ ಭಾವ”– ಚಿಗುರಿದ ಕನಸು

    “ಒಬ್ಬ ಮನುಷ್ಯ ತನ್ನ ದೇಶವನ್ನು ಏಕೆ ಪ್ರೀತಿಸುತ್ತಾನೆ? ಏಕೆಂದರೆ ಅಲ್ಲಿ ರೊಟ್ಟಿ
    ಹೆಚ್ಚು ರುಚಿಯಾಗಿರುತ್ತದೆ. ಗಾಳಿ ಇನ್ನೂ ಸುಗಂಧವಾಗಿರುತ್ತದೆ, ದನಿಗಳು
    ಹೆಚ್ಚು ಶಕ್ತವಾಗಿ ಕೇಳುತ್ತವೆ, ಆಕಾರ…