ಹಿರಿಯ ಲೇಖಕರಾದ ರಾಜಾರಾಂ ತಲ್ಲೂರು ಅವರ ನಾಲ್ಕನೇ ಕೃತಿ ಇದು. ನುಣ್ಣನ್ನ ಬೆಟ್ಟ (೨೦೧೭), ತಲ್ಲೂರು ಎಲ್ ಎನ್ (೨೦೧೮) ಮತ್ತು ಏನಿದು ಪೌರತ್ವ ತಿದ್ದುಪಡಿ ಕಾಯಿದೆ (೨೦೧೯) ರಾಜಾರಾಂ ತಲ್ಲೂರು ಅವರ ಪ್ರಕಟಿತ ಕೃತಿಗಳು. ಇವರಿಗೆ, ಇವರ ಕೃತಿಗಳಿಗೆ ೨೦೧೭ರಲ್ಲಿ ಅಮ್ಮ ಪ್ರಶಸ್ತಿ ಮತ್ತು ೨೦೨೦ರಲ್ಲಿ ಶಿವರಾಮ ಕಾರಂತ ಪುರಸ್ಕಾರ ಸಂದಿದೆ.
ದುಪ್ಪಟ್ಟು ಆಕರ್ಷಕ ಮತ್ತು ಕುತೂಹಲ ಮೂಡಿಸುವ ಮುಖಪುಟ ಚಿತ್ರದೊಂದಿಗೆ ಗಮನಸೆಳೆಯುತ್ತದೆ. ತಲ್ಲೂರು ಅವರ ಕೃತಿ ಎಂದರೆ ಸಹಜವಾಗಿಯೇ ಅದು ಅಚ್ಚುಕಟ್ಟಾಗಿ ಕಟ್ಟಿದ ಕೃತಿಯಾಗಿರುತ್ತದೆ. ಮಾತ್ರವಲ್ಲ ಅವರ ಸಹಜ ವ್ಯಕ್ತಿತ್ವದ ಹಾಗೆ ಕೃತಿಯೊಳಗಡೆಯೂ ಅಷ್ಟೇ ಘನ ಗಂಭೀರ ವಿಚಾರದ ಮಂಡನೆ ಇರುತ್ತದೆ. ಪುಟ ಪುಟಗಳಲ್ಲೂ ಜನಪರ ಕಾಳಜಿ, ಆಳವಾದ ಚಿಂತನೆಯೊಡನೆ, ಪರ್ಯಾಯ ಚಿಂತನೆಗಳೂ ಇರುತ್ತವೆ. ಇಲ್ಲೂ ಅದನ್ನು…