ಪತ್ರಕರ್ತ ಶ್ರೀಧರ ನಾಯಕ್ ಅವರು ತಮ್ಮ ವೃತ್ತಿ ಜೀವನದಲ್ಲಿನ ಅನುಭವಗಳನ್ನು ಕೃತಿ ರೂಪದಲ್ಲಿ ಹೊರತಂದಿದ್ದಾರೆ. ಅದರ ಹೆಸರೇ ‘ಹೇಳದೇ ಇದ್ದ ವಾಸ್ತವಗಳು'. ಪತ್ರಕರ್ತರು ಕೆಲಸ ಮಾಡುವಾಗ ಬಹಳಷ್ಟು ಸಂಗತಿಗಳು ತಿಳಿದು ಬಂದರೂ ಕೆಲವು ವಿಷಯಗಳನ್ನು ಬರೆಯಲು ಆಗುವುದಿಲ್ಲ. ಆದಕ್ಕೆ ನಾನಾ ಕಾರಣಗಳು ಇರುತ್ತವೆ. ಅಂತಹ ಬರೆಯದೇ ಉಳಿದು ಹೋದ ವಿಚಾರಗಳನ್ನು ‘ಹೇಳದೇ ಇದ್ದ ವಾಸ್ತವಗಳು'ಕೃತಿಯಲ್ಲಿ ಬರೆಯಲು ಮನಸ್ಸು ಮಾಡಿದ್ದಾರೆ. ಈ ಕೃತಿಗೆ ಕನ್ನಡದ ಹಿರಿಯ ಕಥೆಗಾರ, ವಿಮರ್ಶಕ ಎಸ್ ದಿವಾಕರ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...
“ಗೆಳೆಯ ಶ್ರೀಧರ ನಾಯಕ್ ಅವರ "ಹೇಳದೆ ಇದ್ದ ವಾಸ್ತವಗಳು" ಒಂದು ಅಪರೂಪದ ಕೃತಿ. ವ್ಯಕ್ತಿ…