ಪುಸ್ತಕ ಸಂಪದ

  • ಭಾರತ ಹಬ್ಬಗಳ ದೇಶ. ಇಲ್ಲಿ ಮಳೆಗಾಲದ ಹೊರತಾಗಿ ವರುಷದುದ್ದಕ್ಕೂ ಹಬ್ಬಗಳ ಸಂಭ್ರಮ. ಈ ಪುಸ್ತಕದಲ್ಲಿ ನಮ್ಮ ದೇಶದಲ್ಲಿ ವಿವಿಧ ಧರ್ಮದವರು ಆಚರಿಸುವ 15 ಹಬ್ಬಗಳನ್ನು ಪರಿಚಯಿಸಲಾಗಿದೆ. ವಿವಿಧ ಲೇಖಕರು ಬರೆದಿರುವ ಮಾಹಿತಿಪೂರ್ಣ ಲೇಖನಗಳನ್ನು ಎ.ಆರ್. ರಂಗರಾವ್ ಸರಳ ಭಾಷೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

    ಬುದ್ಧ ಪೂರ್ಣಿಮಾ, ಬಿಹು, ರಥ ಯಾತ್ರೆ, ರಕ್ಷಾ ಬಂಧನ್, ಓಣಂ, ಈದ್, ಗಣೇಶ ಚತುರ್ಥಿ, ದುರ್ಗಾ ಪೂಜೆ, ದಸರಾ, ದೀಪಾವಳಿ, ಕ್ರಿಸ್‌ಮಸ್, ಲೋಡಿ, ಪೊಂಗಲ್, ಹೋಳಿ, ನವರೋಜ್ - ಈ ಹಬ್ಬಗಳ ಬಗ್ಗೆ ನಮಗೆ ಸಾಮಾನ್ಯವಾಗಿ ತಿಳಿಯದ ಸಂಗತಿಗಳನ್ನೂ ಪುಸ್ತಕದಲ್ಲಿ ದಾಖಲಿಸಲಾಗಿದೆ.

    ರಾಜ ಶುದ್ಧೋದನ ಮತ್ತು ರಾಣಿ ಮಹಾಮಾಯ ಇವರ ಮಗನಾಗಿ ಹುಟ್ಟಿದ ಸಿದ್ಧಾರ್ಥನಿಗೆ ಬಾಲ್ಯದಿಂದಲೂ ಆಟ-ಬೇಟೆಗಳಲ್ಲಿ ಆಸಕ್ತಿಯಿಲ್ಲ. ಮಡದಿ ಯಶೋಧರ…

  • ಕೇವಲ ೫೨ ಪುಟಗಳಲ್ಲಿ ಬಹಳ ಸೊಗಸಾದ ಕವಿತೆಗಳನ್ನು ಕಟ್ಟಿಕೊಟ್ಟಿದ್ದಾರೆ ಉದಯೋನ್ಮುಖ ಕವಯತ್ರಿ ಡಿ. ಅರುಂಧತಿ. ಇವರು ಬರೆದ ಕವನಗಳ ಸಂಕಲನ “ಜೀವಜಾಲದ ಸಗ್ಗ” ದ ಬಗ್ಗೆ ಲೇಖಕರಾದ ಜಿ ವಿ ಆನಂದಮೂರ್ತಿ ತಮ್ಮ ಮುನ್ನುಡಿಯಲ್ಲಿ ಹೀಗೆ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ...

    “ಸಾರ್ವಜನಿಕ ಜೀವನ, ದಲಿತ ಮತ್ತು ರೈತ ಚಳವಳಿಗಳೊಂದಿಗಿನ ನಿರಂತರ ಸಂಪರ್ಕ, ಮಹಿಳಾ ಸಂಘಟನೆ, ಸಾಹಿತಿ ಕಲಾವಿದರೊಂದಿಗೆ ಬೆರೆವ ಗುಣ, ನಿರ್ಲಕ್ಷಿತ ಸಮುದಾಯಗಳಿಗೆ ತೋರುವ ಕಾರುಣ್ಯ ಹಾಗೂ ವೈದ್ಯ ವೃತ್ತಿಯಲ್ಲಿ ಹಲವಾರು ದಶಕಗಳಿಂದ ತಮ್ಮನ್ನು ಇಡಿಯಾಗಿ ತೊಡಗಿಸಿಕೊಂಡಿರುವ ಡಾ. ಅರುಂಧತಿ ತುಮಕೂರಿನ ಪ್ರಗತಿಪರ ವಲಯದಲ್ಲಿ ಕೇಳಿಬರುವ ಗೌರವದ ಹೆಸರು. ಸಂಕೋಚ ಹಾಗೂ ಸದಾ ಮೌನದಲ್ಲೇ ಸಾರ್ವಜನಿಕವಾಗಿ…

  • ನೀಲಿ ನಕ್ಷೆ’ ಅಮಿತಾ ಭಾಗವತ್‌ ಅವರ ರಚನೆಯ ಕಾದಂಬರಿಯಾಗಿದೆ. ಕಡಲ ಕಿನಾರೆಯಲ್ಲೆ ಹುಟ್ಟಿದ ನದಿಯಂಥ ಸರಯೂಳ, ಕಾಣದ ಕಡಲ ಕಡೆಗಿನ ತುಡಿತದ ಹೊಳಪಿನ ಕಥನ ಇದು. ಲವಲವಿಕೆಯ ಸಣ್ಣ ಊರಾದ ಕಾರವಾರದಿಂದ, ಹತ್ತನೇ ತರಗತಿಯ ನಂತರ, ಕೇವಲ ಸಿನೆಮಾದಲ್ಲಷ್ಟೆ ಕಂಡಿದ್ದ ಮುಂಬಯಿ ಶಹರಕ್ಕೆ ಬಂದ ಹುರುಪಿನ ಕಿಶೋರಿ ಸರಯೂ, ಆ ಮಹಾನಗರದ 'ಮಗಜಮಾರಿ'ಯ ಗೌಜಿಯಲ್ಲಿ ತನ್ನ ಹೆಜ್ಜೆ ದನಿಗಳನ್ನು ಹೊಸದಾಗಿ ಆಲಿಸುತ್ತ, 'ಕಿಟಕಿಯನ್ನು ಒದ್ದೆ ಬಟ್ಟೆಯಿಂದ ಒರೆಸುತ್ತ', ರೂಪುಗೊಂಡ ನಿಬಿಡ ಆವರಣ ಇದು. ಸಮಾಜ ಹೇರುವ ಅಯಾಚಿತ ಅಚ್ಚುಗಳಿಂದ, ಪಾತ್ರಗಳಿಂದ ಮುಕ್ತಗೊಳ್ಳುವುದು ನಿಜವಾದ 'ಗುರುತೆ'? ಅಥವಾ ಹೊಸದೊಂದು ಗುರುತಿಗಾಗಿ ಹವಣಿಸುವುದೇ? ಅಥವಾ ಯಾವುದೇ ಗುರುತಿನ ಹಂಗಿಲ್ಲದೆ ಪ್ರವಹಿಸುವುದೆ? - ಈ ಮೂರು ಎಳೆಗಳನ್ನು ಹಿಡಿದು ಕಟ್ಟಿದ…

  • ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಅವರು ತಮ್ಮ ಸಂಪಾದಕತ್ವದ ‘ವಿಶ್ವವಾಣಿ' ಪತ್ರಿಕೆಯ ಸಂಪಾದಕೀಯ ಕಾಲಂನ ಕೊನೆಯಲ್ಲಿ ಬರೆಯುತ್ತಿರುವ ಪುಟ್ಟ ಪುಟ್ಟ ಬರಹಗಳೇ 'ಸಂಪಾದಕರ ಸದ್ಯಶೋಧನೆ'. ಈ ಬರಹಗಳನ್ನು ತಲಾ ನೂರು ಅಧ್ಯಾಯಗಳಂತೆ ಸಂಗ್ರಹಿಸಿ ಮೂರು ಪುಸ್ತಕಗಳನ್ನು ಹೊರತಂದಿದ್ದಾರೆ. ಈ ಮೂರೂ ಪುಸ್ತಕಗಳಲ್ಲಿ ಯಾವುದನ್ನು ಬೇಕಾದರೂ ಮೊದಲು ಓದಬಹುದು. ಪುಸ್ತಕದಲ್ಲೂ ಯಾವ ಪುಟದಿಂದಲೂ ನಿಮ್ಮ ಓದನ್ನು ಪ್ರಾರಂಭಿಸಬಹುದಾಗಿದೆ ಎಂದು ಲೇಖಕರೇ ಹೇಳಿಕೊಂಡಿದ್ದಾರೆ. ಇದು ನಿಜವೂ ಹೌದು. 

    ಕಡಿಮೆ ವಾಕ್ಯಗಳಲ್ಲಿ ಹಿಂದೆ ನಡೆದ ಘಟನೆಗಳು, ಮಹನೀಯರ ಬದುಕಿನಲ್ಲಿ ಜರುಗಿದ ಸಂಗತಿಗಳು, ನಮಗೆ ತಿಳಿಯದೇ ಇದ್ದ ಹಲವಾರು ಸಂಗತಿಗಳನ್ನು ವಿಶ್ವೇಶ್ವರ ಭಟ್ ಇವರು ಕಡಿಮೆ ಪದಗಳಲ್ಲಿ…

  • ಕರಕುಶಲ ಕಲೆಗಳು ಅಥವಾ ಗುಡಿಗಾರಿಕೆ ನಮ್ಮ ಸಂಪನ್ನ ಪರಂಪರೆಯ ಭಾಗ. ಭಾರತದ ಪ್ರತಿಯೊಂದು ರಾಜ್ಯವೂ ಅಲ್ಲಿನ ವಿಶೇಷ ಕರಕುಶಲ ಕಲೆಗೆ ಜಗತ್ಪ್ರಸಿದ್ಧ. ಕರಕುಶಲಗಾರರು ರಚಿಸುವ ಕರಕುಶಲ ವಸ್ತುಗಳು ನೋಡಲು ಚಂದ ಮಾತ್ರವಲ್ಲ ಬಳಕೆಗೂ ಅನುಕೂಲವಾದವುಗಳು. ಅವು ಬದುಕಿಗೂ ಒಂದು ಅರ್ಥ ಕೊಡುತ್ತವೆ ಎಂಬುದೇ ಅವುಗಳ ವಿಶೇಷತೆ.

    ಈ ಪುಟ್ಟ ಪುಸ್ತಕದಲ್ಲಿ ನಮ್ಮ ದೇಶದ ವಿವಿಧ ರಾಜ್ಯಗಳ ಕರಕುಶಲ ಕಲೆ ಹಾಗೂ ಆ ಕುಶಲಕರ್ಮಿಗಳು ನಿರ್ಮಿಸುವ ವಸ್ತುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ರಾಮಾಯಣ ಕಾಲದಿಂದಲೂ ಇವರಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ಇವರ ಮೂಲಪುರುಷ ವಿಶ್ವಕರ್ಮ ಎಂಬ ನಂಬಿಕೆ. ಹಾಗಾಗಿ ಹಳೆಯ ಕಾಲದ ಕುಶಲಕರ್ಮಿಗಳು ತಾವು ಮಾಡಿದ್ದೆಲ್ಲಾ ತಮ್ಮ ಮೂಲಪುರುಷ ವಿಶ್ವಕರ್ಮನಿಗೇ ಅರ್ಪಿತ ಎಂಬ ಅರ್ಪಣಾಭಾವದಿಂದ ಮಾಡುತ್ತಿದ್ದರು.

  • ನಾಟಕಗಳನ್ನು ಬರೆದು, ಮುದ್ರಿಸಿ ಹೊರತರುವ ನಾಟಕಕಾರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಬಹುಷಃ ಇದಕ್ಕೆ ಕಾರಣ ಬರೆದ ನಾಟಕಗಳು ರಂಗದ ಮೇಲೆ ಪ್ರದರ್ಶನ ಕಾಣುವುದು ಬಹಳ ಕಡಿಮೆ. ಈ ಕಾರಣದಿಂದ ಬರೆದ ನಾಟಕಗಳು ಪ್ರದರ್ಶನದ ಭಾಗ್ಯವಿಲ್ಲದೆ ಸೊರಗತೊಡಗಿವೆ. ದಶಕಗಳ ಹಿಂದೆ ರಂಗ ಮಂದಿರಗಳಲ್ಲಿ ಬಹಳಷ್ಟು ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಆದರೆ ಈಗ ಇವುಗಳ ಸಂಖ್ಯೆ ಬೆರಳೆಣಿಕೆಯಷ್ಟು. 

    ಭರವಸೆಯ ನಾಟಕಕಾರ ಎನ್ ಸಿ ಮಹೇಶ್ ಅವರು ಬರೆದ ‘ಸಾಕು ತಂದೆ ರೂಮಿ' ಎಂಬ ನಾಟಕ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ನೂರು ಪುಟಗಳಲ್ಲಿ ಸತ್ವಯುತವಾಗಿರುವ ಕುತೂಹಲಕಾರಿಯಾದ ಕಥೆಯನ್ನು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸಿದ್ದಾರೆ ಲೇಖಕರು. ಈ ಪುಸ್ತಕಕ್ಕೆ…

  • ೨೦೧೮ನೇ ಸಾಲಿನ ಸಾಹಿತ್ಯ ಅಕಾಡೆಮಿಯ ಚಿ.ಶ್ರೀನಿವಾಸರಾಜು ದತ್ತಿ ಪ್ರಶಸ್ತಿ ಪಡೆದ ಕೃತಿ ಕವಯತ್ರಿ ಸ್ಮಿತಾ ಮಾಕಳ್ಳಿ ಅವರ ‘ಒಂದು ಅಂಕ ಮುಗಿದು’. ಈ ಕೃತಿಗೆ ಡಾ.ಹೆಚ್.ಎಲ್. ಪುಷ್ಪ ಅವರ ಮುನ್ನುಡಿ ಹಾಗೂ ಸುಬ್ಬು ಹೊಲೆಯಾರ್ ಅವರ ಬೆನ್ನುಡಿ ಬರಹಗಳಿವೆ. ಸುಮಾರು ೧೦೬ ಪುಟಗಳ ಈ ಚೊಚ್ಚಲ ಕವನ ಸಂಕಲನದ ಕವಿತೆಗಳು ಬಹಳ ಸೊಗಸಾಗಿವೆ. ಕೃತಿಗೆ ಮುನ್ನುಡಿ ಬರೆದ ಡಾ ಹೆಚ್ ಎಲ್ ಪುಷ್ಪ ಅವರ ಮಾತುಗಳನ್ನು ಆಯ್ದು ಇಲ್ಲಿ ನೀಡಲಾಗಿದೆ...

    “ಸ್ಮಿತಾ ಮಾಕಳ್ಳಿಯವರ ಚೊಚ್ಚಲ ಕವನ ಸಂಕಲನದಲ್ಲಿ ಇಂತಹ ನಿರ್ಜನ ಬಯಲಿನಲ್ಲಿ ಹರಿವ ಜಲದ ಸಲಿಲವಾದ ಹೆಜ್ಜೆಯ ಗುರುತುಗಳಿವೆ. ಇಲ್ಲಿನ ಕವಿತೆಗಳಲ್ಲಿ ಕಾವ್ಯದ ಕಟ್ಟುಪಾಡುಗಳಲ್ಲಿ ಬಂಧಿಸಿಕೊಳ್ಳದ ಸ್ವಾತಂತ್ರ್ಯ ಮನೋಭಾವವೊಂದು ಮೇಲಿಂದ ಮೇಲೆ…

  • ‘ನೀರು” ನಾ.ಮೊಗಸಾಲೆ ಅವರ ರಚನೆಯ ಕಾದಂಬರಿಯಾಗಿದೆ. ಒಂದು ಕುಟುಂಬ ಕತೆ ಮತ್ತು ಒಂದು ಸಣ್ಣ ವ್ಯಾಜ್ಯದಿಂದ ಪ್ರಾರಂಭವಾಗುವ ಈ ಕಾದಂಬರಿಯು ಹಲವು ಸಾಮಾಜಿಕ ವ್ಯವಸ್ಥೆಗಳ ಸಂಘರ್ಷಗಳ ನಿರೂಪಣೆಯಾಗುತ್ತದೆ. ನಾ. ಮೊಗಸಾಲೆಯವರ ಕಾದಂಬರಿಗಳು ವಿಶೇಷವಾಗುವುದೇ ಈ ಹೊಳವಿನಿಂದ. ಅವರ ಎಲ್ಲ ಸಾಮಾಜಿಕ ಪ್ರಯೋಗಗಳ ಉತ್ಪನ್ನವಾಗಿ ಸೀತಾಪುರ ಕಾಣಿಸಿಕೊಳ್ಳುತ್ತದೆ. ಪುರಾಣ, ಇತಿಹಾಸ ಪೂರ್ವ ಮತ್ತು ಪ್ರಸ್ತುತ ಭಾರತಗಳು ಅವರ ಸೀತಾಪುರವೆಂಬ ಬಿಂದುವಿನಲ್ಲಿ ಅಭಿಗಮಿಸುತ್ತವೆ. ಸೀತಾಪುರವು ತನ್ನ ರಕ್ತದಲ್ಲೇ ವಾಸ್ತವಪುರದ ಎಲ್ಲ ಸಮಸ್ಯೆಗಳನ್ನು ಮತ್ತು ಮಹತ್ವಾಕಾಂಕ್ಷೆಗಳನ್ನು ಹೊತ್ತಿರುತ್ತದೆ. ಇದು ಬರೀ ಒಂದು ಆದರ್ಶ ಪುರದ ದರ್ಶನವಲ್ಲ. ಅಲ್ಲೇ ಅದು ಮಾಲ್ಗುಡಿಯಿಂದ ಬೇರೆಯಾಗುವುದು. ಸೀತಾಪುರಕ್ಕೆ ಬಿಳಿಯೆಷ್ಟಿದೆಯೊ ಕಪ್ಪೂ…

  • ನವೀನ್ ಸೂರಿಂಜೆ ಅವರು ಬರೆದ ‘ನೇತ್ರಾವತಿಯಲ್ಲಿ ನೆತ್ತರು' ಕೃತಿ ರಕ್ತಸಿಕ್ತ ಹೋರಾಟದ ಸಮಗ್ರ ಚಿತ್ರಣವನ್ನು ನೀಡುತ್ತದೆ. ೧೮೪ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ನಿವೃತ್ತ ಎಸಿಪಿ ಬಿ.ಕೆ.ಶಿವರಾಂ ಅವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ನಿಮ್ಮ ಓದಿಗಾಗಿ... 

    “ನವೀನ್ ಸೂರಿಂಜೆಯವರು ತಮ್ಮ `ನೇತ್ರಾವತಿಯಲ್ಲಿ ನೆತ್ತರು’ ಪುಸ್ತಕಕ್ಕೆ ಮುನ್ನುಡಿ ಬರೆಯಲು ಹೇಳಿದಾಗ ಒಂದು ಕ್ಷಣ ತಬ್ಬಿಬ್ಬಾದೆ. ಈ ಪುಸ್ತಕವನ್ನು ಕರ್ನಾಟಕ ಕಂಡ ಮಾನವೀಯ ಮೌಲ್ಯಗಳ ಪ್ರತಿಪಾದಕ, ನೇರವಂತಿಕೆಯ ಐಪಿಎಸ್…

  • ನಮ್ಮ ಭಾರತದ ಸಾವಿರಾರು ವರುಷ ಪುರಾತನ “ಸಾರ್ವಕಾಲಿಕ ಪುಸ್ತಕ”ಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಪುಸ್ತಕ ಇದು. ಇದನ್ನು ಬರೆದವರು ಮನೋಜ್ ದಾಸ್ ಮತ್ತು ಕನ್ನಡಕ್ಕೆ ಅನುವಾದಿಸಿದವರು ಪ್ರಖ್ಯಾತ ಸಾಹಿತಿ ಹಾಗೂ ಕವಿ ಎಂ. ಗೋಪಾಲಕೃಷ್ಣ ಅಡಿಗರು. ಸುಕುಮಾರ್ ಚಟರ್ಜಿ ರಚಿಸಿದ ಚಂದದ ಚಿತ್ರಗಳು ಪುಸ್ತಕಕ್ಕೆ ಮೆರುಗು ನೀಡಿವೆ.

    ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಪುರಾಣಗಳು, ತಿರುಕುರಳ್, ಕಥಾಸರಿತ್ಸಾಗರ, ಪಂಚತಂತ್ರ ಮತ್ತು ಜಾತಕ ಕತೆಗಳನ್ನು ಪ್ರತ್ಯೇಕ ಅಧ್ಯಾಯಗಳಲ್ಲಿ ಪರಿಚಯಿಸಲಾಗಿದೆ.

    ಮೊದಲನೆಯ ಅಧ್ಯಾಯದಲ್ಲಿ ಪುಸ್ತಕಗಳ ಸಂಗ್ರಹಗಳನ್ನು ನಾಶಪಡಿಸುವ ಮೂಲಕ ಮಾನವ ಕುಲದ ಸಾವಿರಾರು ವರುಷಗಳ ಜ್ನಾನಸಂಪತ್ತನ್ನು ನಾಶಪಡಿಸಲು ಪ್ರಯತ್ನಿಸಿದ ದುಷ್ಟರು ಹಾಗೂ ಮೂರ್ಖರ ಬಗ್ಗೆ ಪ್ರಸ್ತಾಪಿಸಲಾಗಿದೆ. ಎರಡು ಸಾವಿರ…