ಪುಸ್ತಕ ಸಂಪದ

  • ‘ನೀರು” ನಾ.ಮೊಗಸಾಲೆ ಅವರ ರಚನೆಯ ಕಾದಂಬರಿಯಾಗಿದೆ. ಒಂದು ಕುಟುಂಬ ಕತೆ ಮತ್ತು ಒಂದು ಸಣ್ಣ ವ್ಯಾಜ್ಯದಿಂದ ಪ್ರಾರಂಭವಾಗುವ ಈ ಕಾದಂಬರಿಯು ಹಲವು ಸಾಮಾಜಿಕ ವ್ಯವಸ್ಥೆಗಳ ಸಂಘರ್ಷಗಳ ನಿರೂಪಣೆಯಾಗುತ್ತದೆ. ನಾ. ಮೊಗಸಾಲೆಯವರ ಕಾದಂಬರಿಗಳು ವಿಶೇಷವಾಗುವುದೇ ಈ ಹೊಳವಿನಿಂದ. ಅವರ ಎಲ್ಲ ಸಾಮಾಜಿಕ ಪ್ರಯೋಗಗಳ ಉತ್ಪನ್ನವಾಗಿ ಸೀತಾಪುರ ಕಾಣಿಸಿಕೊಳ್ಳುತ್ತದೆ. ಪುರಾಣ, ಇತಿಹಾಸ ಪೂರ್ವ ಮತ್ತು ಪ್ರಸ್ತುತ ಭಾರತಗಳು ಅವರ ಸೀತಾಪುರವೆಂಬ ಬಿಂದುವಿನಲ್ಲಿ ಅಭಿಗಮಿಸುತ್ತವೆ. ಸೀತಾಪುರವು ತನ್ನ ರಕ್ತದಲ್ಲೇ ವಾಸ್ತವಪುರದ ಎಲ್ಲ ಸಮಸ್ಯೆಗಳನ್ನು ಮತ್ತು ಮಹತ್ವಾಕಾಂಕ್ಷೆಗಳನ್ನು ಹೊತ್ತಿರುತ್ತದೆ. ಇದು ಬರೀ ಒಂದು ಆದರ್ಶ ಪುರದ ದರ್ಶನವಲ್ಲ. ಅಲ್ಲೇ ಅದು ಮಾಲ್ಗುಡಿಯಿಂದ ಬೇರೆಯಾಗುವುದು. ಸೀತಾಪುರಕ್ಕೆ ಬಿಳಿಯೆಷ್ಟಿದೆಯೊ ಕಪ್ಪೂ…

  • ನವೀನ್ ಸೂರಿಂಜೆ ಅವರು ಬರೆದ ‘ನೇತ್ರಾವತಿಯಲ್ಲಿ ನೆತ್ತರು' ಕೃತಿ ರಕ್ತಸಿಕ್ತ ಹೋರಾಟದ ಸಮಗ್ರ ಚಿತ್ರಣವನ್ನು ನೀಡುತ್ತದೆ. ೧೮೪ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ನಿವೃತ್ತ ಎಸಿಪಿ ಬಿ.ಕೆ.ಶಿವರಾಂ ಅವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ನಿಮ್ಮ ಓದಿಗಾಗಿ... 

    “ನವೀನ್ ಸೂರಿಂಜೆಯವರು ತಮ್ಮ `ನೇತ್ರಾವತಿಯಲ್ಲಿ ನೆತ್ತರು’ ಪುಸ್ತಕಕ್ಕೆ ಮುನ್ನುಡಿ ಬರೆಯಲು ಹೇಳಿದಾಗ ಒಂದು ಕ್ಷಣ ತಬ್ಬಿಬ್ಬಾದೆ. ಈ ಪುಸ್ತಕವನ್ನು ಕರ್ನಾಟಕ ಕಂಡ ಮಾನವೀಯ ಮೌಲ್ಯಗಳ ಪ್ರತಿಪಾದಕ, ನೇರವಂತಿಕೆಯ ಐಪಿಎಸ್…

  • ನಮ್ಮ ಭಾರತದ ಸಾವಿರಾರು ವರುಷ ಪುರಾತನ “ಸಾರ್ವಕಾಲಿಕ ಪುಸ್ತಕ”ಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಪುಸ್ತಕ ಇದು. ಇದನ್ನು ಬರೆದವರು ಮನೋಜ್ ದಾಸ್ ಮತ್ತು ಕನ್ನಡಕ್ಕೆ ಅನುವಾದಿಸಿದವರು ಪ್ರಖ್ಯಾತ ಸಾಹಿತಿ ಹಾಗೂ ಕವಿ ಎಂ. ಗೋಪಾಲಕೃಷ್ಣ ಅಡಿಗರು. ಸುಕುಮಾರ್ ಚಟರ್ಜಿ ರಚಿಸಿದ ಚಂದದ ಚಿತ್ರಗಳು ಪುಸ್ತಕಕ್ಕೆ ಮೆರುಗು ನೀಡಿವೆ.

    ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಪುರಾಣಗಳು, ತಿರುಕುರಳ್, ಕಥಾಸರಿತ್ಸಾಗರ, ಪಂಚತಂತ್ರ ಮತ್ತು ಜಾತಕ ಕತೆಗಳನ್ನು ಪ್ರತ್ಯೇಕ ಅಧ್ಯಾಯಗಳಲ್ಲಿ ಪರಿಚಯಿಸಲಾಗಿದೆ.

    ಮೊದಲನೆಯ ಅಧ್ಯಾಯದಲ್ಲಿ ಪುಸ್ತಕಗಳ ಸಂಗ್ರಹಗಳನ್ನು ನಾಶಪಡಿಸುವ ಮೂಲಕ ಮಾನವ ಕುಲದ ಸಾವಿರಾರು ವರುಷಗಳ ಜ್ನಾನಸಂಪತ್ತನ್ನು ನಾಶಪಡಿಸಲು ಪ್ರಯತ್ನಿಸಿದ ದುಷ್ಟರು ಹಾಗೂ ಮೂರ್ಖರ ಬಗ್ಗೆ ಪ್ರಸ್ತಾಪಿಸಲಾಗಿದೆ. ಎರಡು ಸಾವಿರ…

  • “ವಿನೋದಕ್ಕಾಗಿ ಹೇಳಿದ ಮಾತುಗಳನ್ನು ನಿಜಾರ್ಥದಲ್ಲಿ ಗಂಭೀರವಾಗಿ ಪರಿಗಣಿಸಬೇಡಿ.” ಎನ್ನುವ ಮಾತನ್ನು ಪುಸ್ತಕದ ಮೊದಲ ಪುಟಗಳಲ್ಲೇ ಓದುಗರ ಗಮನಕ್ಕೆ ತಂದಿದ್ದಾರೆ ನ್ಯಾಯವಾದಿಗಳೂ, ಲೇಖಕರೂ ಆಗಿರುವ ಕೆ ಎಂ ಕೃಷ್ಣ ಭಟ್. “ಕುದುರೆ ವ್ಯಾಪಾರ" ಎನ್ನುವ ಲಲಿತ ಪ್ರಬಂಧಗಳ ಕೃತಿಯನ್ನು ಹೊರತಂದಿರುವ ಇವರ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಲೇಖಕರಾದ ಡಾ. ವಸಂತಕುಮಾರ ಪೆರ್ಲ. ಅವರು ತಮ್ಮ ಮುನ್ನುಡಿಯಲ್ಲಿ “ಕೆ ಎಂ ಕೃಷ್ಣ ಭಟ್ಟರು ಕಾಸರಗೋಡು ಜಿಲ್ಲೆಯ ನೀರ್ಚಾಲು ಪ್ರದೇಶದವರು. ೮೩ರ ಈ ಇಳಿವಯಸ್ಸಿನಲ್ಲಿ ಯುವಕರನ್ನು ನಾಚಿಸುವಂತೆ ನ್ಯಾಯಕ್ಷೇತ್ರ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿರುವುದನ್ನು ನೋಡಿದರೆ ತುಂಬ ಸಂತೋಷವಾಗುತ್ತದೆ. ಅವರ ಉತ್ಸಾಹ ಮತ್ತು ಕಾರ್ಯಪಟುತ್ವ ಬಹಳ ದೊಡ್ದದು. ಈ…

  • ವಿಶ್ವ ಶ್ರೇಷ್ಟ ಸಾಧಕರ ಸಾಧನೆಗಳ ಬಗ್ಗೆ ಸವಿವರವಾಗಿ ತಿಳಿಸುವ ಪುಸ್ತಕವೇ ‘ಅಮೂಲ್ಯ ರತ್ನಗಳು' ಈ ಪುಸ್ತಕದಲ್ಲಿ ಲೇಖಕರಾದ ಎಲ್ ಪಿ ಕುಲಕರ್ಣಿ ಇವರು ವಿಶ್ವಕಂಡ ಅತ್ಯದ್ಭುತ ಸಾಧಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಖ್ಯಾತ ವೈದ್ಯರೂ, ಬರಹಗಾರರೂ ಆಗಿರುವ ಡಾ. ಕರಮವೀರಪ್ರಭು ಕ್ಯಾಲಕೊಂಡ ಇವರು. ಇವರು ತಮ್ಮ ಬೆನ್ನುಡಿಯಲ್ಲಿ “ ಅಮೂಲ್ಯ ರತ್ನಗಳು ಪುಸ್ತಕದಲ್ಲಿ ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟು ಹೋರಾಡಿ ಬದುಕಿದವರ ಜೀವನ ಚರಿತ್ರೆಗಳಿವೆ. ಮನುಕುಲದ ಉದ್ಧಾರಕ್ಕಾಗಿ ಹಗಲಿರುಳು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಸಂಶೋಧನೆಯಲ್ಲಿ ಕಾಲಕಳೆದ ವಿಜ್ಞಾನಿಗಳ ಬದುಕು ಬರಹಗಳಿವೆ. ನೊಬೆಲ್ ಪ್ರಶಸ್ತಿ ವಂಚಿತ ಭಾರತದ ವಿಜ್ಞಾನಿ ಜಗದೀಶ್ ಚಂದ್ರ ಬೋಸ್, ಗಣಿತಜ್ಞ…

  • “ದಿಬ್ಬದಿಂದ ಹತ್ತಿರ ಆಗಸ”ಕ್ಕೆ ಎನ್ನುವುದು ಕರ್ಕಿ ಕೃಷ್ಣಮೂರ್ತಿ ಅವರ ಕಥಾ ಸಂಕಲನ. ಸುಮಾರು ೧೫೦ ಪುಟಗಳ ಈ ಸಂಕಲನದ ಒಂದು ಕಥೆ ‘ದಿ ಗ್ರೇಟ್ ವಾಲ್ ಆಫ್ ಚೈನಾ’ ಇದರ ಆಯ್ದ ಭಾಗ ಇಲ್ಲಿದೆ…

    “ಜೊಂಪು ಜೊಂಪಾಗಿ ಬೆಳೆದಿದ್ದ ಗಿಡಗಂಟಿಗಳನ್ನು ಕೈಯ್ಯಿಂದ ಅತ್ತಿತ್ತ ತಳ್ಳುತ್ತ ಮಣ್ಣಿನ ಸಣ್ಣ ಗುಡ್ಡವೊಂದನ್ನು ಏರಿ ಉಧ್ಗರಿಸಿದ ಸ್ಯಾಂಡಿ.
    ಅವನ ಹಿಂದೆಯೇ ಎದುರುಸಿರು ಬಿಡುತ್ತ ಬಂದು, ದಿಬ್ಬದ ತುದಿಯಲ್ಲಿ ಸೊಂಟದ ಮೇಲೆ ಕೈಯ್ಯಿಟ್ಟು ನಿಂತ ಸದಾಶಿವ. ಸುತ್ತಲೂ ಕಣ್ಣಾಡಿಸಿದ. ಅಂಥಾ ದಟ್ಟ ಕಾಡಲ್ಲದಿದ್ದರೂ, ಮರ ಗಿಡಗಳಿಂದ ತುಂಬಿದ ಪ್ರದೇಶದಲ್ಲಿ ತಾನು ನಿಂತಿರುವುದಂತೂ ಸ್ಪಷ್ಟವಿತ್ತು. 'ಗ್ರೇಟ್ ವಾಲ್' ಅಂತಾ ಕರೆಯಬಹುದಾದ ಯಾವುದೂ ಅಲ್ಲಿ ಗೋಚರಿಸಲಿಲ್ಲ. ಹಸಿರು ಗಿಡಗಳ…

  • “ಕಾಲಮಾನದ ಮೊದಲು" ಎಂಬ ಆರಂಭದ ಬರಹದಲ್ಲಿ ಲೇಖಕ ಶಿವಾನಂದ ಕಳವೆ ಬರೆದಿರುವ ಒಂದು ಮಾತು: "ಈಸ್ಟ್ ಇಂಡಿಯಾ ಕಂಪೆನಿ ನಿರ್ದೇಶನದಂತೆ ಡಾ. ಫ್ರಾನ್ಸಿಸ್ ಬುಕಾನನ್ ಎಂಬ ವಿದೇಶಿ ಪ್ರವಾಸಿ ಕ್ರಿ.ಶ.1801ರಲ್ಲಿ ಉತ್ತರ ಕನ್ನಡದಲ್ಲಿ ಪ್ರವಾಸ ಮಾಡಿದ್ದರು. ಅವರು ಫೆಬ್ರವರಿ 18ರಿಂದ ಮಾರ್ಚ್ 16ರ ವರೆಗೆ ಆಗ ಭಟ್ಕಳದಿಂದ ಬನವಾಸಿಯ ವರೆಗೆ ಕೃಷಿ - ಕಾಡು - ಜನಜೀವನದ ಬಗೆಗೆ ಅಧ್ಯಯನ ನಡೆಸಿದರು. ಸರಿಯಾಗಿ 200 ವರ್ಷಗಳ ಬಳಿಕ ಬುಕಾನನ್ ಮಾರ್ಗದಲ್ಲಿ ಮರುಪ್ರಯಾಣ ನಡೆಸಿರುವೆ…" ಆ ಮರುಪ್ರಯಾಣದ ದಾಖಲಾತಿ ಈ ಪುಸ್ತಕ. ಆದ್ದರಿಂದ ಇದು ತೀರಾ ಅಪರೂಪದ ಪುಸ್ತಕ.

    2001ರಲ್ಲಿ ಪ್ರಕಟವಾದ ಇದು ಕೇವಲ ಮರುಪ್ರಯಾಣದ ದಾಖಲಾತಿ ಮಾತ್ರವಲ್ಲ ಎಂಬುದನ್ನು ಲೇಖಕರು “ಕಾಲಮಾನದ ಮೊದಲು" ಬರಹದಲ್ಲಿ ಸ್ಪಷ್ಟ ಪಡಿಸುತ್ತಾರೆ: "ನಿಜವಾಗಿ ಈ ಪ್ರವಾಸ ಯೋಜನೆ…

  • ಶ್ರೀನಿವಾಸ ಪಾ.ನಾಯ್ಡು ಅವರು ಬರೆದ ‘ಎಲ್ಲರಂತಲ್ಲ ನಾವು' ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಲೇಖಕ ವಾಸುದೇವ ನಾಡಿಗ್. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವ ಹೀಗಿದೆ...

    “ಭಾವಲೋಕವು ಬತ್ತಬಾರದು. ಅದನ್ನು ಮೊಗೆ ಮೊಗೆದು ಕೊಡುವ ಸೂಕ್ಷ್ಮ ಬೊಗಸೆ ಖಾಲಿಯಾಗಬಾರದು. ಶ್ರೀನಿವಾಸ್ ಅವರ ಹಸ್ತಪ್ರತಿ ಓದುವಾಗ ಹೊಳೆದ ಯೋಚನೆಗಳಿವು. ಇದು ವಿಮರ್ಶೆ ಅಲ್ಲ ಮತ್ತು ತಕ್ಕಡಿಯೂ ಅಲ್ಲ. ಕವಿತೆಯೇ ಹೀಗೆ. ಅವರವರ ಭಾವಕೋಶದ ಅವರವರದೇ ಕಾವ್ಯ ಮೀಮಾಂಸೆ. ಮೌಲ್ಯಮಾಪನ ಇಲ್ಲಿ ಮುಖ್ಯವಲ್ಲ ಒಂದು ವಿನಮ್ರ ಓದು ಮತ್ತು ಆ ಮೂಲಕ ಅನಿಸುವ ಪ್ರಾಮಾಣಿಕ ಅಭಿಪ್ರಾಯಗಳಷ್ಟೇ ಮುಖ್ಯ. ಪಂಪನಾದಿಯಾಗಿ ಈವರೆಗೂ…

  • ಸ್ತ್ರೀ ಸಂವೇದನೆಗಳ ಮಾನಸಿಕ ತೊಳಲಾಟದ ಬಗ್ಗೆ ಲೇಖಕಿ ಸುಮಾ ಉಮೇಶ್ ಗೌಡ ಇವರು ತಮ್ಮ ನೂತನ ಕಾದಂಬರಿ “ಮನಸುಗಳ ಮಿಲನ" ವನ್ನು ರಚಿಸಿದ್ದಾರೆ. ಈ ೮೮ ಪುಟಗಳ ಪುಟ್ಟ ಕಾದಂಬರಿ ಇತ್ತೀಚೆಗೆ ಬಿಡುಗಡೆಯಾಗಿದೆ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಂಥ ಕಾದಂಬರಿಯಾದರೂ ಓದಿದ ಬಳಿಕ ಅದರ ಕಥಾ ವಸ್ತು ಬಹಳ ಕಾಲ ನಮ್ಮ ಮನದಲ್ಲಿ ಉಳಿಯಲಿದೆ. ಈ ಬಗ್ಗೆ ಲೇಖಕರಾದ ಪದ್ಮನಾಭ ಡಿ. ಅವರು ತಮ್ಮ ಮುನ್ನುಡಿಯಲ್ಲಿ ಹೇಳುವುದು ಹೀಗೆ... 

    ಸಂಗೀತ ಸಾಹಿತ್ಯ ಕಲಾವಿಹೀನಃ
    ಸಾಕ್ಷಾತ್ ಪಶೂನಾಂ ಪರಪುಚ್ಛಹೀನಃ
    ತೃಣಂ ನ ಖಾದನ್ನಪಿ ಜೀವಮಾನಃ
    ತದ್ಭಾಗದೇಯಂ ಪರಮಂ ಪಶೂನಾಂ

    ಈ ಶ್ಲೋಕದ ಭಾವಾರ್ಥವೆಂದರೆ ಸಂಗೀತ ಸಾಹಿತ್ಯ ಕಲೆಗಳಲ್ಲಿ ಆಸಕ್ತಿ…

  • “ನಿಮ್ಮ ಬುದ್ಧಿಯನ್ನು ಪ್ರಖರಗೊಳಿಸುವ, ನಿಮ್ಮ ಹೃದಯವನ್ನು ಶುದ್ಧಗೊಳಿಸುವ ಹಾಗೂ ನಿಮ್ಮ ಆತ್ಮವನ್ನು ಪುನಶ್ಚೇತನಗೊಳಿಸುವ ಕಥೆಗಳು” ಇದು ಈ ಪುಸ್ತಕದ ಶೀರ್ಷಿಕೆಯ ಕೆಳಗೆ ಮುಖಪುಟದಲ್ಲಿ ಮುದ್ರಿಸಲಾಗಿರುವ ಬರಹ.

    ಹೌದು, ಈ ಸಂಕಲನದ ಕಥೆಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಇಂತಹ ಪುಟ್ಟಪುಟ್ಟ ಕಥೆಗಳು ಬಾಲಕಬಾಲಕಿಯರ, ವಯಸ್ಕರ ಹಾಗೂ ವಯೋವೃದ್ಧರ ಮನಸೂರೆಗೊಳ್ಳುತ್ತವೆ ಎಂಬುದಂತೂ ಖಂಡಿತ. ಎಲ್ಲ ದೇಶಗಳಲ್ಲಿಯೂ ಅಲ್ಲಿನ ಪರಂಪರೆಯನ್ನು ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳು ಪ್ರಚಲಿತವಾಗಿವೆ. ಸಾವಿರಾರು ವರುಷಗಳು ಸರಿದರೂ ಎಲ್ಲ ತಲೆಮಾರಿನವರನ್ನೂ ಈ ಕಥೆಗಳು ರಂಜಿಸುತ್ತವೆ ಹಾಗೂ ಎಲ್ಲರ ಜ್ನಾನಖಜಾನೆಯ ಭಾಗವಾಗಿ ಉಳಿಯುತ್ತವೆ. ನಮ್ಮ ದೇಶದ ಉಪನಿಷತ್ತಿನ ಮತ್ತು ಪಂಚತಂತ್ರದ ಕಥೆಗಳು ಶ್ರೇಷ್ಠ ಕತೆಗಳ ನಿದರ್ಶನಗಳಾಗಿವೆ.