ಪುಸ್ತಕ ಸಂಪದ

  • ತಮ್ಮ ಜೀವನಾನುಭವವನ್ನು ಭಟ್ಟಿಯಿಳಿಸಿ “ಪುಟ್ಟ ತಮ್ಮನ ಕಗ್ಗ"ದಲ್ಲಿ ನಮಗೆ ಧಾರೆಯೆರೆದಿದ್ದಾರೆ ಅನಂತ ಭಟ್ ಪೊಳಲಿ ಅವರು. ನಾಲ್ಕುನಾಲ್ಕು ಸಾಲಿನ ಇಲ್ಲಿನ ಮುಕ್ತಕಗಳನ್ನು ಓದುವಾಗ ಕವಿತೆ ಇವರಿಗೆ ಒಲಿದು ಬಂದಿದೆ ಎಂಬುದು ಎದ್ದು ಕಾಣಿಸುತ್ತದೆ. ಅನಾಯಾಸವಾಗಿ ಮೂಡಿ ಬಂದಿರುವ ಚಿಂತನೆಗಳು ನಮ್ಮ ಮನ ಬೆಳಗಿಸುತ್ತವೆ.

    "ನನ್ನ ನುಡಿ"ಯಲ್ಲಿ ಇವು “ಮಿಣುಕು ದೀಪಗಳ ಬೆಳಕ ಹಚ್ಚುವ" ಪ್ರಯತ್ನವೆಂದು ಇವುಗಳ ರಚನಾಕಾರ ಅನಂತ ಭಟ್ ಪೊಳಲಿ ಬರೆದಿದ್ದಾರೆ: “ಈ ಕೃತಿಯು ಒಂದು ಭಾವನಾತ್ಮಕವಾದ ವಿಷಯಗಳ ಸಂಗ್ರಹವಾಗಿದೆ. ಡಿ.ವಿ.ಜಿ.ಯವರ “ಮಂಕುತಿಮ್ಮನ ಕಗ್ಗ”ದ ಪ್ರಭಾವವು ಇದರ ಮೇಲೆ ಬೀರಿದೆ ಎಂದರೆ ತಪ್ಪಾಗಲಾರದು. ಇಲ್ಲಿ ಬಂದಿರುವ ವಿಚಾರಗಳೆಲ್ಲವೂ ಸ್ವಾನುಭವದ ಅಗ್ಗಿಷ್ಟಿಕೆಯಲ್ಲಿ ಸ್ಫುಟಗೊಂಡು ಬೆಳಗುವ, ನೈತಿಕ, ತಾತ್ವಿಕ, ವೈಚಾರಿಕ ಹಾಗೂ…

  • “ಓದಿನ ಒಕ್ಕಲು” ಕೃತಿಯು ರಂಗನಾಥ ಕಂಟನಕುಂಟೆ ಅವರ ಸಾಹಿತ್ಯ ಚಿಂತನೆಯ ಬರೆಹಗಳ ಸಂಕಲನವಾಗಿದೆ. ಓದಿನ ಒಕ್ಕಲು' ಸಾಹಿತ್ಯ ಚಿಂತನೆಯ ಬರೆಹಗಳು, ಸಾಹಿತ್ಯದ ಮೂಲಕ ಸಮಾಜ, ಸಂಸ್ಕೃತಿ, ಅಧಿಕಾರ ರಾಜಕಾರಣ, ಭಾಷೆ, ಜನಪದ ಸಾಹಿತ್ಯ, ಹೆಣ್ಣು ಕಥನಗಳನ್ನು ಒಳಗೊಂಡಂತೆ ಲೋಕದ ಸ್ಥಾಪಿತ ಮೌಲ್ಯಗಳನ್ನು, ಬದುಕಿನ ವಿವಿಧ ಮಗ್ಗುಲುಗಳನ್ನು ಮುಖಾಮುಖಿಯಾಗಲು ಯತ್ನಿಸ ಲಾಗಿದೆ. ಸಾಹಿತ್ಯದ ನೆಲೆಯಲ್ಲಿ ನಿಂತು ಲೋಕಸಂವಾದ ಮತ್ತು ವ್ಯಕ್ತಿಯ ಒಳಸಂವಾದ ನಡೆಸಲಾಗಿದೆ. ಲೋಕಸಂವಾದ ನಡೆಸುತ್ತಲೇ ಸಾಹಿತ್ಯ ಸಂವಾದವನ್ನು ನಡೆಸಲಾಗಿದೆ. ಹೀಗೆ ಸಂವಾದ ನಡೆಸುವ ಹೊತ್ತಿನಲ್ಲಿ ಇದುವರೆಗೂ ಕಟ್ಟಿಕೊಂಡಿರುವ ಕಥನಗಳಲ್ಲಿನ ತಾತ್ವಿಕ ಸಮಸ್ಯೆ ಗಳನ್ನೂ, ಸ್ಥಾಪಿತ ಮೌಲ್ಯಗಳನ್ನು ಎದುರುಗೊಳ್ಳಲು ಯತ್ನಿಸಲಾಗಿದೆ. ನಮ್ಮ ಕೆಲವು ಆಲೋಚನೆಗಳಲ್ಲಿ…

  • ಬಸಯ್ಯ ಸ್ವಾಮಿ ಕಮಲದಿನ್ನಿ (ಡಾ ಬಸಯ್ಯ ಸ್ವಾಮಿ) ಅವರು “ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ" ಎಂಬ ಮಾಹಿತಿಪೂರ್ಣ ಕೃತಿಯನ್ನು ಹೊರತಂದಿದ್ದಾರೆ. ಸುಮಾರು ೧೭೦ ಪುಟಗಳ ತಮ್ಮ ಕೃತಿಗೆ ಬಸಯ್ಯ ಸ್ವಾಮಿಯವರು ಬರೆದ ಲೇಖಕರ ಮಾತಿನಿಂದ ಆಯ್ದ ಸಾಲುಗಳು ಇಲ್ಲಿವೆ...

    ‘ದೊಡ್ಡ ಕಣ್ಣಿಂದ ಹಿಂದೂಸ್ಥಾನವೆಲ್ಲ ತನ್ನದು' ಎಂಬ ಹೆಮ್ಮೆ ಕೊಚ್ಚಬಹುದಾದರೂ ಯಾವುದನ್ನು ಮುಟ್ಟಿದರೂ ತನ್ನದಲ್ಲ ಎಂಬ ಭಾವ”– ಚಿಗುರಿದ ಕನಸು

    “ಒಬ್ಬ ಮನುಷ್ಯ ತನ್ನ ದೇಶವನ್ನು ಏಕೆ ಪ್ರೀತಿಸುತ್ತಾನೆ? ಏಕೆಂದರೆ ಅಲ್ಲಿ ರೊಟ್ಟಿ
    ಹೆಚ್ಚು ರುಚಿಯಾಗಿರುತ್ತದೆ. ಗಾಳಿ ಇನ್ನೂ ಸುಗಂಧವಾಗಿರುತ್ತದೆ, ದನಿಗಳು
    ಹೆಚ್ಚು ಶಕ್ತವಾಗಿ ಕೇಳುತ್ತವೆ, ಆಕಾರ…

  • ಭರವಸೆಯ ಕವಯತ್ರಿ ಸುಮತಿ ಕೃಷ್ಣಮೂರ್ತಿ ಅವರು ಬರೆದಿರುವ “ಹೆಣ್ಣಾಲದ ಮರ" ಎನ್ನುವ ಕವನ ಸಂಕಲನ ಇತ್ತಿಚೆಗೆ ಬಿಡುಗಡೆಯಾಗಿದೆ. ಸುಮತಿಯವರ ಕವನಗಳ ಬಗ್ಗೆ ಸಾಹಿತಿ ಎಚ್ ಎಸ್ ವೆಂಕಟೇಶಮೂರ್ತಿಯವರು ತಾವು ಬರೆದ ಮುನ್ನುಡಿಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ...

    “ಸುಮತಿ ಕೃಷ್ಣಮೂರ್ತಿ ತಮ್ಮ ಅಪಾರವಾದ ಕಾವ್ಯ ಪ್ರೀತಿಯಿಂದ ನನಗೆ ಪ್ರಿಯರಾದವರು. ಹಿಂದಿನಿಂದ ಗೊತ್ತಾದದ್ದು ಅವರು ಸ್ವತಃ ಒಳ್ಳೆಯ ಕವಿ ಎಂಬುದು. ತಮ್ಮ ಕವಿತೆಗಳ ಹಸ್ತ ಪ್ರತಿ ಕಳಿಸಿ ಮುನ್ನುಡಿಯಾಗಿ ಕೆಲವು ಮಾತು ಬರೆದುಕೊಡುವಿರಾ ಎಂದು ಅವರು ಕೇಳಿದಾಗ, ಕವಿತೆಗಳನ್ನು ಓದಿ ಆ ಬಗ್ಗೆ ಹೇಳುತ್ತೇನೆ ಎಂದೆ. ಕವಿತೆ ಕಳಿಸಿದರು. ಮನಸ್ಸಿಟ್ಟು ಅವನ್ನು ಓದಿದ್ದೇನೆ. ಓರ್ವ ನಿಜವಾದ ಕವಿಯ ಎದೆಮಿಡಿತಗಳನ್ನು ಅಲ್ಲಿ…

  • ಇದರಲ್ಲಿವೆ "ಬದುಕು ಬದಲಿಸುವ 18 ಜನರ” ಕಥೆಗಳು. ಪ್ರತಿಯೊಂದು ಕಥೆ ಓದಿದಾಗಲೂ ನಮ್ಮಲ್ಲಿ ಮೂಡುವ ಪ್ರಶ್ನೆ:  ಬದುಕಿನಲ್ಲಿ ಹೀಗೂ ಗೆಲ್ಲಲು ಸಾಧ್ಯವೇ? “ಸಾಧ್ಯ" ಎಂದು ಆಗಷ್ಟೇ ಓದಿದ ಸತ್ಯಕಥೆ ಸಾರಿಸಾರಿ ಹೇಳುತ್ತದೆ.

    “ಪ್ರತಿ ಅವಮಾನ ನಿಮ್ಮ ಆತ್ಮಸ್ಥೈರ್ಯ ಹೆಚ್ಚಿಸಲಿ” ಎಂಬ ಮೊದಲ ಬರಹವನ್ನು ಲೇಖಕರು ಶುರು ಮಾಡೋದು ಹೀಗೆ: "ನಾವು ಯಾವಾಗ್ಲು ಹಾಗೆ, ಬೇರೆಯವರಿಗೆ ಹೋಲಿಕೆ ಮಾಡಿಕೊಂಡು ನಮ್ಮನ್ನು ನಾವೇ ಮರೆತು ಬಿಡುತ್ತೇವೆ. "ಛೇ, ಅವನ್ನ ನೋಡು ಹಾಗಿದಾನೆ. ನನ್ನ ನೋಡು ಹೀಗಿದೀನಿ. ಎಲ್ಲದಕ್ಕೂ ಪಡೆದುಕೊಂಡು ಬಂದಿರಬೇಕು. ನನ್ನ ಅದೃಷ್ಟವೇ ಸರಿಯಿಲ್ಲ. ನನ್ನ ಟೈಂ ಖರಾಬಾಗಿದೆ” ಅಂತೆಲ್ಲ ನಮ್ಮ ಸ್ಥಿತಿ ಕುರಿತು ನಾವೇ ನೊಂದುಕೊಳ್ಳುತ್ತೇವೆ. ನಿಜ, ಪ್ರತಿ ಮನುಷ್ಯನಿಗೂ ಅವನದ್ದೇ ಆದ ನೂರಾರು ಕನಸುಗಳು ಇರುತ್ತವೆ. … ನಾವು ಜಿದ್ದಿಗೆ…

  • ಛಂದ ಪುಸ್ತಕ ಪ್ರಕಾಶನದ ನೂರನೇ ಪುಸ್ತಕವಾಗಿ “ಸರಿಗನ್ನಡಂ ಗೆಲ್ಗೆ" ಪ್ರಕಟವಾಗಿದೆ. ಪತ್ರಕರ್ತ ಹಾಗೂ ಮುಖಪುಟ ವಿನ್ಯಾಸಗಾರರಾದ ‘ಅಪಾರ' ಇವರು ಈ ಪುಸ್ತಕದ ಲೇಖಕರು. ಇವರು ಕನ್ನಡದ ಬೆರಗನ್ನು ಕುರಿತ ೬೦೦ ಸ್ವಾರಸ್ಯಕರ ಕಿರು ಟಿಪ್ಪಣಿಗಳನ್ನು ಈ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಇವೆಲ್ಲವೂ ‘ಕಲರ್ಸ್ ಕನ್ನಡ’ ಟಿವಿ ಚಾನೆಲ್ ನಲ್ಲಿ ಪ್ರಸಾರವಾದ ಕಿರುಟಿಪ್ಪಣಿಗಳು. ಕಿರುತೆರೆಯಲ್ಲಿ ಬರುತ್ತಿದ್ದ “ಕನ್ನಡತಿ" ಧಾರಾವಾಹಿಯನ್ನು ಇನ್ನಷ್ಟು ಆಸಕ್ತಿದಾಯಕವನ್ನಾಗಿಸಲು ಮಾಡಿದ ಕಿರು ಪ್ರಯತ್ನವೇ ‘ಸರಿಗನ್ನಡಂ ಗೆಲ್ಗೆ'. ಅಪಾರ ಅವರು ಬರೆದ ಸಾಲುಗಳು ಆ ಧಾರಾವಾಹಿಗೆ ಬಹಳಷ್ಟು ಖ್ಯಾತಿಯನ್ನು ತಂದುಕೊಟ್ಟಿತು. 

    ಈ ಪುಸ್ತಕದ ಬೆನ್ನುಡಿಯಲ್ಲಿ ಕಂಡ ಸ್ವಾರಸ್ಯಕರವಾದ ಸಾಲುಗಳು…

  • ಮಕ್ಕಳಿಗಾಗಿ ಕಾದಂಬರಿ ಬರೆಯುವವರು ಅಪರೂಪದಲ್ಲಿ ಅಪರೂಪ. ಏಕೆಂದರೆ ಮಕ್ಕಳಿಗೆ ಸುದೀರ್ಘ ಓದು ಹಿಡಿಸುವುದಿಲ್ಲ. ಅಷ್ಟೊಂದು ತನ್ಮಯತೆಯಿಂದ ಓದಲು ಅವರಿಗೆ ಕಷ್ಟವಾಗುತ್ತದೆ. ಓದುತ್ತಾ ಓದುತ್ತಾ ಹಿಂದಿನ ಕಥೆ ಮರೆತುಹೋಗುತ್ತದೆ ಎಂಬೆಲ್ಲಾ ಆಪಾದನೆಗಳ ನಡುವೆ ಲೇಖಕರಾದ ಹ ಸ ಬ್ಯಾಕೋಡ ಅವರು “ಜುಟ್ಟಕ್ಕಿ" ಎನ್ನುವ ಸ್ವಾರಸ್ಯಕರವಾದ ಕಾದಂಬರಿಯನ್ನು ಹೊರತಂದಿದ್ದಾರೆ. ಈ ಕಾದಂಬರಿಗೆ ಅವರು ಬರೆದ ಲೇಖಕರ ಮಾತಿನಿಂದ ಆಯ್ದ ಕೆಲವು ಸಾಲುಗಳು ಇಲ್ಲಿವೆ...

    “ಅಕ್ಷರ ಕಲಿಕೆಗೂ ಮುನ್ನ ಮುಗ್ಧ ಮಕ್ಕಳಲ್ಲಿ ಸರಿ, ತಪ್ಪುಗಳು ಬಗ್ಗೆ ಅರಿವು ಇರುವುದಿಲ್ಲ. ಸದಾ ಬೆರಗುಗಣ್ಣಿನಿಂದ ಸುತ್ತಮುತ್ತಲಿನ ಪರಿಸರವನ್ನು ನೋಡುತ್ತವೆ. ಇಂಪಾಗಿ ಹಾಡುವ ಕೋಗಿಲೆಯ ಧ್ವನಿಯನ್ನು ಕೇಳಿ ಕಣ್ಣರಳಿಸಿ ಆ…

  • ಝೆನ್ ಬೆರಗು (ಸಂಪುಟ- ೧)’ ಕನ್ನಡದ ಝೆನ್ ಕತೆಗಳು ಲೇಖಕಿ ಜಿ.ಆರ್. ಪರಿಮಳಾ ರಾವ್ ಅವರ ಅನುವಾದಿತ ಕತಾ ಸಂಕಲನ. ಈ ಕೃತಿಗೆ ಮಲ್ಲೇಪುರಂ ಜಿ. ವೆಂಕಟೇಶ್ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಝೆನ್ ಎಂದರೆ 'ಧ್ಯಾನ' ಎಂದೇ ಅರ್ಥ. ಇದು ಬೌದ್ಧ ಪರಂಪರೆಯ ಮಾತು. 'ಝೆನ್ ಬುದ್ಧಿಸಂ' ಒಂದುಂಟು. ನಾವು ಮಾಡುವ 'ಝೆನ್ ಮಂತ್ರ' ಕತೆಯ ಆಕಾರ ತಾಳಿದಾಗ ಎಷ್ಟೆಷ್ಟು ಬಗೆಯ ವೈವಿಧ್ಯತೆಗೆ ಅವಕಾಶ ಕೊಡುಬಹುದೆಂಬುದನ್ನು ಜಿ.ಆರ್. ಪರಿಮಳಾ ರಾವ್ ತಮ್ಮ 'ಝೆನ್ ಬೆರಗು' ಕತೆಗಳ ಮಾಲೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಜಿ. ವೆಂಕಟೇಶ್ ಅವರ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...

    “ಕತೆ ಕಿರಿದಾದರೂ ಹಿರಿದಾದುದು. ಆದರೆ ಆಶಯವು ಹಿರಿದು. ಆಕೃತಿ ಕಿರಿದೇನೋ…

  • “ಎಲೆ ಮರೆಯ ಹಣ್ಣುಗಳು" - ಮರೆಯಲ್ಲೇ ಉಳಿದ ದಿಟ್ಟ ಮಹಿಳೆಯರ ಬದುಕಿನ ಚಿತ್ರಣ ಎನ್ನುತ್ತದೆ ಉಪಶೀರ್ಷಿಕೆ. ಇದರಲ್ಲಿರುವ ಒಂಭತ್ತು ಮಹಿಳೆಯರ ಸಂಕಟಗಳ ಕಥನ ಓದುವಾಗ ಕಣ್ಣು ಮಂಜಾಗುತ್ತದೆ.

    "ದೇವರು ನನಗೇ ಯಾಕೆ ಇಂತಹ ಕಷ್ಟ ಕೊಟ್ಟ?” ಎಂದು ಹಲುಬುವ ಎಲ್ಲರೂ, ಮುಖ್ಯವಾಗಿ ಮಹಿಳೆಯರು ಓದಲೇ ಬೇಕಾದ ಪುಸ್ತಕವಿದು. ಇವುಗಳ ಹಿನ್ನೆಲೆಯ ಬಗ್ಗೆ "ಓದುವ ಮುನ್ನ”ದಲ್ಲಿ ಲೇಖಕಿ ಬರೆದಿರುವ ಮಾತುಗಳು: “ಜೀವನದಲ್ಲಿ ಎಂದೋ ಕೇಳಿದ ಸುದ್ದಿಗಳು, ನಡೆದ ಘಟನೆಗಳು, ಭೆಟ್ಟಿಯಾದ ವ್ಯಕ್ತಿಗಳು ಎಲ್ಲವೂ ನನ್ನ ನೆನಪಿನ ಅಂತರಾಳದಲ್ಲಿ ಹುದುಗಿ ಕುಳಿತಿದ್ದವು. ಈಗ ಅವು ತಲೆ ಎತ್ತಿ ನನ್ನ ಕಲ್ಪನಾಧಾರೆಗೆ ಸಿಲುಕಿ, ಕಥಾಸಾಗರ ಸೇರಿದ್ದರ ಫಲವೇ “ಎಲೆ ಮರೆಯ ಹಣ್ಣುಗಳು”.

    ಮುಂದುವರಿದು ಅವರು ಹೀಗೆ ಬರೆದಿದ್ದಾರೆ: “ಸಮಾಜ ಎಂಬುದು ಮಾನವ…

  • ರವಿ ಬೆಳಗೆರೆಯವರ ಅಕಾಲ ನಿಧನದ ಬಳಿಕ ಅವರು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬರೆದ, ಪ್ರಕಟವಾಗದೇ ಉಳಿದಿದ್ದ, ಅಪೂರ್ಣವಾಗಿದ್ದ ಬರಹಗಳು ಒಂದೊಂದಾಗಿ ಪುಸ್ತಕರೂಪದಲ್ಲಿ ಹೊರ ಬರುತ್ತಿದೆ. ಅದೇ ಸಾಲಿಗೆ ಸೇರುವ ಒಂದು ಪುಸ್ತಕ ಇತ್ತೀಚೆಗೆ ಹೊರ ಬಂದಿದೆ. ಈ ಪುಸ್ತಕದ ಬಹಳಷ್ಟು ವಿಷಯಗಳನ್ನು ರವಿ ಬೆಳಗೆರೆ ತಮ್ಮ ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರೆದಿದ್ದಾರೆ. ಒಂದು ಸಮಯದಲ್ಲಿ ನಕ್ಸಲ್ ಚಳುವಳಿಯ ಮೇಲೆ ಒಲವಿದ್ದ ರವಿ ಬೆಳಗೆರೆ ಪತ್ರಕರ್ತರಾಗಿದ್ದ ಸಮಯದಲ್ಲಿ ಪೀಪಲ್ಸ್ ವಾರ್ ಗ್ರೂಪ್ ಸಂಸ್ಥಾಪಕ ಕೊಂಡಪಲ್ಲಿ ಸೀತಾರಾಮಯ್ಯ ಅವರ ಸಂದರ್ಶನ ಮಾಡಿದ್ದರು. ಈ ಸಂದರ್ಶನದ ಪೂರ್ಣ ಪಾಠವನ್ನು 'ನಕ್ಸಲೀಯರ ನಾಡಿನಲ್ಲಿ ರವಿ ಬೆಳಗೆರೆ' ಎನ್ನುವ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.