ಪುಸ್ತಕ ಸಂಪದ

  • ಶರಣಬಸವ ಕೆ.ಗುಡದಿನ್ನಿ ಅವರು ಬರೆದ ನೂತನ ಕಥಾ ಸಂಕಲನ “ಏಳು ಮಲ್ಲಿಗೆ ತೂಕದವಳು" ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಅಮರೇಶ ನುಗಡೋಣಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವ ನಿಮ್ಮ ಓದಿಗಾಗಿ...

    “ಶರಣಬಸವ ಕೆ. ಗುಡದಿನ್ನಿಯವರು ಕಳೆದ ಆರೇಳು ವರ್ಷಗಳಿಂದ ಕತೆಗಳನ್ನು ಬರೆಯುತ್ತಲೇ ಇದ್ದಾರೆ. ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಈಗ ಮತ್ತೊಂದು ಕಥೆಗಳ ಕಟ್ಟನ್ನು ಪ್ರಕಟಣೆಗೆ ಸಿದ್ಧ ಮಾಡಿದ್ದಾರೆ.ರಾಯಚೂರು ಜಿಲ್ಲಾ ಪ್ರದೇಶದಲ್ಲಿ ಹುಟ್ಟಿ ಬೆಳೆದ ಕತೆಗಾರರು ತಮ್ಮ ಕತೆಗಳಲ್ಲಿ ಮನುಷ್ಯ ಪರಿಸರವನ್ನು,ಅವರ ಸಂಕಟಗಳನ್ನು ತೀವ್ರವಾಗಿ ಶೋಧಿಸುತ್ತಿದ್ದಾರೆ. ವ್ಯಕ್ತಿ ತನ್ನಲ್ಲಿರುವ ಮನುಷ್ಯತ್ವವನ್ನು ಕಂಡುಕೊಂಡಂತೆ ತನ್ನ…

  • ಸ್ಟ್ಯಾನಿ ಲೋಪಿಸ್ ಅವರು ತಮ್ಮ ನೂತನ ಕಾದಂಬರಿ “ಬರುವಳು...ಬರುವಳು...ಬರುವಳು..." ಇದರಲ್ಲಿ ದುಬೈನ ಶಿಕ್ಷಣ ವ್ಯವಸ್ಥೆ, ಜೀವನ ವಿಧಾನ ಇತ್ಯಾದಿಗಳ ವಿವರ ನೀಡುತ್ತಾರೆ. ನಾಳೆ ಹುಟ್ಟಲಿರುವುದು ಹೆಣ್ಣು ಎಂಬುದನ್ನ ತಿಳಿದೂ ಆ ಕುಟುಂಬದವರು ಹೆಣ್ಣನ್ನು ಸ್ವಾಗತಿಸಲು ಕಾಯುವುದು, ಇತ್ಯಾದಿ ಅಂಶಗಳನ್ನ ಸುಂದರವಾಗಿ ಚಿತ್ರಿಸುತ್ತಾರೆ. ಈ ಕೃತಿಗೆ ಖ್ಯಾತ ಲೇಖಕ ನಾ. ಡಿಸೋಜ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರ ಬರಹದ ಆಯ್ದ ಭಾಗ ನಿಮ್ಮ ಓದಿಗಾಗಿ...

    “ಯುನೈಟೆಡ್ ಅರಬ್ ಎಮಿರೇಟ್ಸ್ ಅಂದರೆ ದುಬೈ ಅನ್ನುವುದು ಎಲ್ಲರಿಗೂ ತಿಳಿದಿರುವ ದೇಶ. ಇಲ್ಲಿಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರುವ ಸುಧಾಳ ಕತೆ ಇದು. ಸುಧಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿ ಕೊಂಡವಳು…

  • ಡಾ. ಪ್ರಕಾಶ ಗ ಖಾಡೆ ಇವರ ನೂತನ ಕಥಾ ಸಂಕಲನ ‘ಬಾಳುಕುನ ಪುರಾಣ'. ತಮ್ಮ ಕಥಾ ಸಂಕಲನದ ಕುರಿತಾಗಿ, ತಮ್ಮ ಕಥೆಗಳ ಬಗ್ಗೆ ಲೇಖಕರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ...

    “ಕಾರಣಗಳಿಲ್ಲದೇ ಕಥೆ ಹುಟ್ಟಿತೇ? ಕಥೆಗಳಿಗಿರುವ ಮೋಹಕತೆ ಎಂಥದು? ಕಥೆ ಕಟ್ಟುವ ಕುಶಲತೆಯೂ ಕಲ್ಲಲ್ಲಿ ಒಂದು ಮೂರುತಿಯನ್ನು, ಕಟ್ಟಿಗೆಯಲ್ಲಿ ಒಂದು ಆಕೃತಿಯನ್ನು ರೂಪಿಸಿದಂತೆ. ಕಥೆ ಎಲ್ಲ ವಯೋಮಾನದವರಿಗೂ ಬೇಕು. ವ್ಯಕ್ತಿ ತಾನೇ ಒಂದು ಕಥೆಯಾಗುವ, ತನ್ನ ಸುತ್ತಲ ಘಟನೆಗಳೇ ಆಕಾರಗಳಾಗುವ, ತನ್ನ ಕಾಲದ ಜನರ ಮನೋಭಾವಗಳು ದಾಖಲಾಗುವ ಇಂಥ ವಿಸ್ಮಯಗಳನ್ನು ತನ್ನ ಒಡಲಲ್ಲಿ ತುಂಬಿಟ್ಟುಕೊಂಡು ಎಲ್ಲವನ್ನು ತೋಡಿ ಬಯಲಾಗುವ ಮತ್ತೇ ಹೊಸತನಕ್ಕೆ ತೆರೆದುಕೊಳ್ಳುವ ಕಥಾ ಪಯಣ ಒಂದು ಜೀವಂತಿಕೆಯ ಲಕ್ಷಣ. ನಾನು ಕಥೆ…

  • ಅಲೈಕ್ಯ ಮೈತ್ರೇಯಿ ಅವರ ಚೊಚ್ಚಲ ಕಾದಂಬರಿ ಪಿಂಕಿ ‘ವೇ’ ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ೧೪೦ ಪುಟಗಳ ಈ ಕಾದಂಬರಿಯ ಕುರಿತು ಲೇಖಕರಾದ ಅನಂತ ಕುಣಿಗಲ್ ಅವರು ಪುಸ್ತಕದಲ್ಲಿ ತಮ್ಮ ‘ಮೊದಲ ಮಾತನ್ನು ದಾಖಲು ಮಾಡಿದ್ದಾರೆ. ಅವರು ತಮ್ಮ ಮೊದಲ ಮಾತಿನಲ್ಲಿ ವ್ಯಕ್ತ ಪಡಿಸಿದ ಭಾವಗಳು ಹೀಗಿವೆ...

    “ನಾನು ಹಿಂದೂ ಅಲ್ಲ ಎಂದರೆ ನೀವು ನಂಬಬೇಕು. ಹೌದು, ನಾನು ಮುಸ್ಲಿಂ ಅಲ್ಲ ಕ್ರೈಸ್ತ, ಜೈನ, ಬೌದ್ಧ ಯಾವುದೂ ಅಲ್ಲ ನಾನು ಮನುಷ್ಯನೆಂದರೆ ನೀವು ನಂಬಲೇಬೇಕು!" ಧರ್ಮ ಎಂದರೇನು ಎಂಬ ಪ್ರಶ್ನೆಗೆ ಸುಲಭವಾಗಿ ಮತ್ತು ನೇರವಾಗಿ ಯಾರೂ ಉತ್ತರಿಸಲಾರದಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವೆಲ್ಲರೂ ಇದ್ದೇವೆ. ಧರ್ಮವೆಂದರೆ ಆಚಾರ, ವಿಚಾರ, ಅಸ್ತಿತ್ವ ಎಂದು ನಂಬಲಾಗಿದ್ದ ದಿನಗಳು ದೂರವಾಗಿ,…

  • ಸಾಹಿತಿ ಗಂಗಪ್ಪ ತಳವಾರ ಅವರ ವಿನೂತನ ಕಾದಂಬರಿ “ಧಾವತಿ" ಇತ್ತೀಚೆಗೆ ಬಿಡುಗಡೆಯಾಗಿದೆ. ವಿಮರ್ಶಕಿ ಭಾರತೀ ದೇವಿ ಪಿ. ಇವರು ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

    “ಕಿಚ್ಚಿಲ್ಲದ ಬೇಗೆ, ಏರಿಲ್ಲದ ಧಾವತಿ ಇವು ಬರಿಕಂಗಳಿಗೆ ಕಾಣದ, ಆದರೆ ಒಳಗೇ ಇರಿಯುವ ನೋವು. ಒಳಗೆ ಚುಚ್ಚಿ ಮುರಿದ ಮುಳ್ಳಿನ ನೋವು ಅದು. ಅಕ್ಕನ ವಚನಗಳಲ್ಲಿ ಬರುವ ಈ ಪದಗಳು ಹಲವು ನೆಲೆಗಳಲ್ಲಿ ನಮ್ಮನ್ನು ತಟ್ಟುತ್ತವೆ. ಭವಗಳಲ್ಲಿ ಏಗಿ ಏಗಿ ದಾಟುವ ಹಾದಿ ಅದು. ಶರಣರು ಸವೆಸುವ ಹಾದಿಗೆ ಮೋಕ್ಷವೆಂಬ ಗಂತವ್ಯ ಇದೆ. ಆದರೆ ಹಲವು ಜೀವಗಳ ಬದುಕಲ್ಲಿ ನೋವೇ ಹಾದಿ ಮತ್ತು ಕೊನೆಯೂ ಕೂಡಾ. ಗಂಗಪ್ಪ ತಳವಾರ್ ಅವರು ತಮ್ಮ‘ಧಾವತಿ’ಯಲ್ಲಿ ಈ…

  • ಖ್ಯಾತ ಲೇಖಕ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಇವರು “ಕೀಟಲೆಯ ದಿನಗಳು" ಎಂಬ ೪೫೬ ಪುಟಗಳ ಬೃಹತ್ ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯನ್ನು ಅವರು “ಹೀಗೊಂದು ಆಕಸ್ಮಿಕ ಆತ್ಮಕಥನ" ಎಂದು ಹೆಸರಿಸಿದ್ದಾರೆ. ಈ ಕೃತಿಗೆ ಲೇಖಕ ಅಗ್ರಹಾರ ಕೃಷ್ಣ ಮೂರ್ತಿ ಇವರು ಬೆನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ಹೀಗಿವೆ…

    “ತುಂಟತನ, ಕೀಟಲೆ ಬಾಲ್ಯದಲ್ಲಿ ಅಲಂಕಾರಗಳೇ ಆಗಿರುತ್ತವೆ. ಸಹಜ ಮುಗ್ಧತೆ, ಸತ್ಯ ಶುದ್ಧತೆ ಸುತ್ತಮುತ್ತಲವರಿಗೆ ಅಪೇಕ್ಷಣೀಯವೂ, ಕ್ಷಮಾರ್ಹವೂ, ಚುರುಕು ಎಂಬಂತೆಯೂ ಕಾಣುವುದುಂಟು. ಈ ಅಲಂಕಾರಗಳು ಆಗಾಗ ಶಿಕ್ಷೆಗೊಳಗಾದರೂ ಮತ್ತಷ್ಟು ಶುದ್ಧತೆಯ ಹೊಳಪು ಪಡೆಯುತ್ತವೆ. ಬಾಲ್ಯ ಕಳೆದಂತೆಲ್ಲ ಈ ಗುಣಗಳು ಕಳೆದುಹೋಗುವುದು…

  • ಭಾರತಿ ಹೆಗಡೆ ಇವರು ನಿರೂಪಿಸಿರುವ ವೇದಾ ಮನೋಹರ ಅವರ ‘ಪಂಚಮ ವೇದ’ ಎಂಬ ಕೃತಿ ‘ವೇದಾ’ ಬದುಕಿನ ಸಾರ ಎಂದು ಹೇಳಿದ್ದಾರೆ. ಇವರ ಈ ಕೃತಿಗೆ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ ಖ್ಯಾತ ಸಾಹಿತಿ ನಾಡೋಜ ಪ್ರೊ. ಕಮಲಾ ಹಂಪನಾ. ಇವರ ಬೆನ್ನುಡಿ “ಮಥಿಸುವ ಜೀವನಾನುಭವದ ನವನೀತ" ದಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ನಿಮ್ಮ ಓದಿಗಾಗಿ…

    “ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಂಡ ಕನಸನ್ನು ಛಲ ಬಿಡದೆ ನನಸು ಮಾಡುವುದೇ ಪಂಚಮವೇದದ ಸಾರ. ಇಲ್ಲಿ ನೋವಿದೆ, ನಲಿವಿದೆ, ಕತ್ತಲೆಯೂ ಇದೆ. ಆದರೆ ಆಶಾ ಕಿರಣದ ಬೆಳಕು ಹೊಮ್ಮುತ್ತಾ, ಆ ಬೆಳಕು ನೂರಾರು ಜನರಿಗೆ ಜೀವನೋಪಾಯದ ಮೆಟ್ಟಿಲಾಗುವ ಹೆಣ್ಣೊಬ್ಬಳ ಆತ್ಮಸ್ಥೈರ್ಯದ ಯಶೋಗಾಥೆ ಇದು. 

  • ಯಶೋಮತಿ ಬೆಳಗೆರೆ ಇವರು ಬರೆಯುತ್ತಿದ್ದ ‘ಯಶೋವಾಣಿ' ಎಂಬ ಅಂಕಣ ವಿಶ್ವವಾಣಿ ಪತ್ರಿಕೆಯಲ್ಲಿ ಮೂಡಿ ಬರುತ್ತಿತ್ತು. ಆ ಅಂಕಣಗಳನ್ನು ಸೇರಿಸಿ ಮಾಡಿದ ಪುಸ್ತಕವೇ ‘ಯಶೋವಾಣಿ'. ಖ್ಯಾತ ಪತ್ರಕರ್ತ, ಬರಹಗಾರ ದಿ. ರವಿ ಬೆಳಗೆರೆ ಅವರ ದ್ವಿತೀಯ ಪತ್ನಿಯಾಗಿ ಸಮಾಜದ, ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಿ ಬದುಕು ಕಟ್ಟಲು ಯಶೋಮತಿ ಪಟ್ಟ ಕಷ್ಟವನ್ನು ತಮ್ಮ ಬರಹಗಳ ಮೂಲಕ ಹೊರಹಾಕಿದ್ದಾರೆ. ೧೬೮ ಪುಟಗಳ ಈ ಪುಸ್ತಕದಲ್ಲಿ ತಮ್ಮ ಮಾತಿನಲ್ಲಿ ಯಶೋಮತಿ ಬೆಳಗೆರೆ ವ್ಯಕ್ತ ಪಡಿಸಿದ ಕೆಲವೊಂದು ಅನಿಸಿಕೆಗಳನ್ನು ಆಯ್ದು ಇಲ್ಲಿ ನೀಡಲಾಗಿದೆ. ಓದುವ ಸುಖ ನಿಮ್ಮದಾಗಲಿ... 

    “ಅಕ್ಷರ ಲೋಕದ ಗಂಧ-ಗಾಳಿಯಿಲ್ಲದ ಕಲೆಯ ನೆರಳಲ್ಲಿ ಬದುಕು ಕಟ್ಟಿಕೊಳ್ಳುವ ವಿಶ್ವಕರ್ಮ ಜನಾಂಗದ ಮಧ್ಯಮ ವರ್ಗದ ಶ್ರಮಿಕರ…

  • ಮಹಾಭಾರತ, ರಾಮಾಯಣದಲ್ಲಿ ಬರುವ ಎಷ್ಟೋ ಪಾತ್ರಗಳ ಮಧ್ಯೆ ಪ್ರಸಿದ್ದಿಯಾಗದೇ ಉಳಿದ ಪಾತ್ರಗಳು ಅವೆಷ್ಟಿವೆ.!!! ಆ ಪಾತ್ರಗಳೇ ತಾವಾಗಿ ಪ್ರತಿ ಪಾತ್ರಗಳ ತುಮುಲವನ್ನು ಲೇಖಕರು ಎಷ್ಟು ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ್ದಾರೆ ಎಂದರೆ ಅದನ್ನು "ಪರಕಾಯ ಪ್ರವೇಶ " ಓದಿಯೇ ತಿಳಿಯಬೇಕು. ನಾವೂ ಆ ಪಾತ್ರವಾಗಿ ಓದುವ ಆನಂದವನ್ನು, ಆಗ ಉಂಟಾಗುವ ಭಾವ ವೈವಿಧ್ಯವನ್ನು ಬಣ್ಣಿಸಲು ಅಸಾಧ್ಯ. 

    ಓದುಗರೇ ಬನ್ನಿ, ನೀವೆಲ್ಲರೂ ಒಮ್ಮೆ "ರುಮಾ" ಆಗಿ ನನ್ನ ತಳಮಳವನ್ನು ತಿಳಿದುಕೊಳ್ಳಿ. ನಾನು "ರುಮಾ ". ಕಿಷ್ಕಿಂದೆಯ ವಾನರ ರಾಜ "ವಾಲಿ"ಯ ತಮ್ಮ" ಸುಗ್ರೀವ"ನ ಪತ್ನಿ. ರಾಮಾಯಣದ ಮಹಾಕಥನದಲ್ಲಿ ಕಳೆದುಹೋದವಳು. ಹಾಗೆಂದು ನಾನು ದೊಡ್ಡ ಸಾಧನೆ ಮಾಡಿದವಳಲ್ಲ. ಸುಗ್ರೀವನನ್ನು ವರಿಸಿ ಸುಖವಾಗಿದ್ದೆ.…

  • ‘Red ವೈನ್ ‘ ಎಂಬ ೧೭೨ ಪುಟಗಳ ಕವನ ಸಂಕಲನವನ್ನು ಹೊರತಂದಿದ್ದಾರೆ ಭರವಸೆಯ ಕವಯತ್ರಿ ವಿ ನಿಶಾ ಗೋಪಿನಾಥ್ ಅವರು. ಅವರ ಕವನ ಸಂಕಲನಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಡಿ ಎಸ್ ಚೌಗಲೆ ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ಇಲ್ಲಿದೆ...

    “ನೀಲಿನಕ್ಷತ್ರ' ಕವನ ಸಂಕಲನದ ಮೂಲಕ ಭರವಸೆ ಮೂಡಿಸಿದ ಕವಿ ವಿ.ನಿಶಾ ಗೋಪಿನಾಥ್ ಅರವತ್ತು ಪ್ರೇಮ ಕವಿತೆಗಳ 'ರೆಡ್ ವೈನ್' ಕೃತಿ ಮೂಲಕ ಕಾವ್ಯ ಕ್ಷೇತ್ರದಲ್ಲಿ ತಮ್ಮ ಗಟ್ಟಿ ಹೆಜ್ಜೆಗಳನ್ನು ಊರಿದ್ದಾರೆ. ಖರೇ ಅರ್ಥದ ಭಾವ ಜಗತ್ತು ಅಭಿವ್ಯಕ್ತಗೊಳ್ಳುವುದು ಮನುಷ್ಯನ ಅಮೂರ್ತರೂಪದ ವಿಕ್ಷಿಪ್ತ, ಪ್ರೇಮ, ವಿರಹ, ತಳಮಳ, ಖಿನ್ನತೆ, ಸೂಕ್ಷ್ಮ- ಇಂಥ ಉತ್ಕರ್ಷಗಳ ಮಧ್ಯೆ ಇಲ್ಲಿ ಹುಟ್ಟುವ…