ಪುಸ್ತಕ ಸಂಪದ

  • ಹೊಂಬಳ್ಳಿ' ಹಿರಿಯ ಲೇಖಕಿ ಎಂ.ಆರ್. ಕಮಲ ಅವರ ಹಗುರ ಪ್ರಬಂಧಗಳ ಸಂಕಲನ. ಬಯಲು ಸೀಮೆಯ ಬೇಲಿಗಳಲ್ಲಿ, ತೆಂಗಿನ ತೋಟಗಳಲ್ಲಿ, ಎಲ್ಲೆಂದರಲ್ಲಿ ಹಬ್ಬುವ ಬಳ್ಳಿಯೇ `ಹೊಂಬಳ್ಳಿ’. ತೋಟದಲ್ಲಿ ಬಿದ್ದಿರುವ ಕುರುಂಬಾಳೆ, ಹೆಡೆಮಟ್ಟೆ, ಸೀಬಿ, ಸೋಗೆ ಮುಂತಾದ ತೆಂಗಿನ ಭಾಗಗಳನ್ನು ಹೊರೆ ಕಟ್ಟಲು ಈ ಬಳ್ಳಿಯನ್ನು ಬಳಸುತ್ತಾರೆ. ಈ ಹೊರೆಯಲ್ಲಿ ನಿರ್ದಿಷ್ಟ ವಸ್ತುಗಳು ಇರಬೇಕೆಂಬ ನಿಯಮವಿಲ್ಲ. ಗಟ್ಟಿಯಾದ ಈ ಬಳ್ಳಿ ಎಲ್ಲವನ್ನು ಬಿಗಿಯಾಗಿ ಹಿಡಿದಿಡಬಲ್ಲದು. ಹಾಗಾಗಿ ಅನೇಕ ವಿಷಯಗಳನ್ನು ಒಟ್ಟಾಗಿಸಿರುವ ಈ ಪ್ರಬಂಧ ಸಂಕಲನಕ್ಕೆ `ಹೊಂಬಳ್ಳಿ’ ಎಂದು ಹೆಸರಿಟ್ಟಿದ್ದೇನೆ ಎಂದಿದ್ದಾರೆ. 

    ಕಥೆಗಾರ್ತಿ ಚೇತನಾ ಕುಕ್ಕಿಲ ಅವರು ಈ ಹಗುರ ಪ್ರಬಂಧಗಳ ಸಂಕಲನ `ಹೊಂಬಳ್ಳಿ’ ಬಗ್ಗೆ ತಮ್ಮ ಮನದಾಳದ…

  • ಕ್ಯಾನ್ಸರ್ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ವೈದ್ಯರಾದ ಡಾ. ಅಪರ್ಣಾ ಶ್ರೀವತ್ಸ ಅವರು ಬರೆದ ಪುಸ್ತಕವೇ ‘ಕ್ಯಾನ್ಸರ್ ಗೆ ಆನ್ಸರ್'. ಈ ಕೃತಿಯಲ್ಲಿ ಅವರು ಕ್ಯಾನ್ಸರ್ ಪತ್ತೆ, ಅವರ ಗುಣಲಕ್ಷಣಗಳು, ವೈದ್ಯೋಪಚಾರ ಮೊದಲಾದುವುಗಳನ್ನು ಸರಳವಾಗಿ ವಿವರಿಸುತ್ತಾ ಹೋಗಿದ್ದಾರೆ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ…

    “‘ಕ್ಯಾನ್ಸರ್’ ಎಂಬ ಹೆಸರಿಗೆ ಕೆಚ್ಚೆದೆಯನ್ನೂ ಅಡಗಿಸುವ ಶಕ್ತಿ ಇದೆ. ‘ಕ್ಯಾನ್ಸರ್’ ಇದೆ ಎಂದು ಪತ್ತೆ ಆದಾಗ ಕೇವಲ ರೋಗಿಯಷ್ಟೇ ಅಲ್ಲ, ಇಡೀ ಪರಿವಾರವೇ ದುಃಖ ಸಾಗರದಲ್ಲಿ ಮುಳುಗುತ್ತದೆ. ಆತಂಕ, ಸಂದಿಗ್ದತೆ, ಕೋಪ, ಅವಮಾನ, ಜಿಗುಪ್ಸೆ-ಹೀಗೆ ಅನೇಕ ಮನೋವೈಪರೀತ್ಯಗಳು ಕಾಡುತ್ತವೆ. ಕ್ಯಾನ್ಸರ್ ರೋಗಿಗಳನ್ನು ಸುಮಾರು ಒಂದು ದಶಕದಿಂದ ನಾನು ನೋಡುತ್ತಿದ್ದೆನಾದರೂ…

  • ಮಕ್ಕಳಿಗಾಗಿ ಮಕ್ಕಳ ಸಾಹಸ ಕತೆಗಳ ಸಂಕಲನವಿದು. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಇದರಲ್ಲಿ ವಿವಿಧ ಲೇಖಕರ 17 ಕತೆಗಳಿವೆ.

    ಇವುಗಳ ಲೇಖಕರು ಪಳಕಳ ಸೀತಾರಾಮ ಭಟ್ಟ, ಬೇಬಿ ಎಮ್. ಮಣಿಯಾಟ್, ಮತ್ತೂರು ಸುಬ್ಬಣ್ಣ, ಗಣೇಶ ಪಿ. ನಾಡೋರ, ಎನ್ಕೆ. ಸುಬ್ರಹ್ಮಣ್ಯ, ದು. ನಿಂ. ಬೆಳಗಲಿ, ನೀಲಾಂಬರಿ ಮತ್ತು ಸಹನ.

    ಅಮ್ಮ ಹೇಳುತ್ತಿದ್ದ ಶೌರ್ಯದ ಕತೆಗಳನ್ನು ಕೇಳುತ್ತಾ ಬೆಳೆದಿದ್ದ ಶಿವಾಜಿ ಆ ಕತೆಗಳಿಂದ ಬಹಳ ಪ್ರಭಾವಿತನಾಗಿದ್ದ; ಮುಂದೆ ಅವನು ಒಬ್ಬ ಧೀರ ಯೋಧನಾಗಿ ರೂಪುಗೊಂಡು ಮರಾಠಾ ಸಾಮ್ರಾಜ್ಯ ಕಟ್ಟುವ ಸಾಧನೆ ಮಾಡಲು ಆತ ಬಾಲ್ಯದಲ್ಲೇ ಮಾನಸಿಕ ಸಿದ್ಧತೆ ಮಾಡಿದ್ದ ಎಂಬ ಪ್ರತೀತಿಯಿದೆ.

    ಈಗಿನ ಮಕ್ಕಳಿಗೆ ಅಂಥ ಕತೆಗಳನ್ನು ಹೇಳಿ ಅವರನ್ನು ಆತ್ಮವಿಶ್ವಾಸದ ಮನುಷ್ಯರನ್ನಾಗಿ ರೂಪಿಸುವವರು ಯಾರು? ಈಗ ನಗರಗಳಲ್ಲಿ ವಾಸವಿರುವ…

  • ‘ಹ್ಯೂಮರೇ ಅಸೆಟ್ಟು ನಗುವೇ ಪ್ರಾಫಿಟ್ಟು' ಎನ್ನುವ ದಶರಥ ಅವರು ಬಿಸ್ ನೆಸ್ ಸೀಕ್ರೆಟ್ಸ್ ಅನ್ನು ತಿಳಿಸಿಕೊಡುವ ‘ನಗುತಾ ಮಾರಿದೆ ಲಾಭ ಮಾಡಿದೆ' ಎನ್ನುವ ಹೊಸ ಪುಸ್ತಕವೊಂದನ್ನು ಬರೆದು ಪ್ರಕಟಿಸಿದ್ದಾರೆ. ನಿಮಗೆ ವ್ಯವಹಾರ ಮಾಡುವುದರಲ್ಲಿ ಆಸಕ್ತಿ ಇದ್ದರೆ, ಈ ಕೃತಿಯಲ್ಲಿರುವ ಕೆಲವು ಟಿಪ್ಸ್ ಗಳನ್ನು ಬಳಸಿಕೊಳ್ಳಬಹುದು. ತಮ್ಮ ಪುಸ್ತಕದ ಬಗ್ಗೆ ದಶರಥ ಅವರು ಹೇಳುವುದು ಹೀಗೆ…

    “ನಮ್ಮ ಊರಲ್ಲಿ ಒಬ್ಬ ಡಾಕ್ಟ್ರು ಮತ್ತು ಒಬ್ಬ ಬಿಸಿನೆಸ್ಮನ್ ಇದ್ದರು. ಅವರಿಬ್ಬರೂ ಭಾರಿ ಗೆಳೆಯರು. ಬಿಸಿನೆಸ್ಮನ್ ಯಾವಾಗಲೂ ಫ್ರೀ ಇದ್ದಾಗ ಡಾಕ್ಟ್ರ ಕ್ಲಿನಿಕ್ ಗೆ ಹೋಗಿ ಕೂರುತ್ತಿದ್ದರು. ಅವತ್ತೊಮೆ ಹಾಗೇ ಸಂಜೆ ಹೊತ್ತು ಕ್ಲಿನಿಕ್ ಗೆ ಹೋದಾಗ ಡಾಕ್ಟ್ರು ಕೈಯಲ್ಲಿ ಎಕ್ಸ್ರೇ ಹಿಡಿದುಕೊಂಡು…

  • ‘ಮಲೆನಾಡಿನ ರೋಚಕ ಕಥೆಗಳು' ಖ್ಯಾತಿಯ ಲೇಖಕ ಗಿರಿಮನೆ ಶ್ಯಾಮರಾವ್ ಅವರು ಬರೆದ ಸಣ್ಣ ಕತೆಗಳ ಸಂಗ್ರಹವೇ ‘ಅರ್ಧರಾತ್ರಿಯ ಸಂಭಾಷಣೆ'. ಗಿರಿಮನೆಯವರು ತಮ್ಮ ಮುನ್ನುಡಿ ‘ನಮಸ್ಕಾರ' ದಲ್ಲಿ ಬರೆದಂತೆ “ಮನುಷ್ಯರಲ್ಲಿ ಮುಖ್ಯವಾಗಿ ಮೂರು ವಿಷಯಗಳ ಬಗ್ಗೆ ಅಜ್ಞಾನ ಆವರಿಸಿರುತ್ತದೆ. ದೇವರು, ವಿದ್ಯೆ ಮತ್ತು ಆರೋಗ್ಯ. ಅದನ್ನೇ ಕ್ಯಾಷ್ ಮಾಡಿಕೊಳ್ಳುವ ವರ್ಗ ಕೆಲವರನ್ನು ಮತ್ತೂ ಅಜ್ಞಾನಕ್ಕೆ ತಳ್ಳಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತದೆ. ವಿಶೇಷವೆಂದರೆ ಹಾಗೆ ಜನರನ್ನು ಅಜ್ಞಾನಕ್ಕೆ ತಳ್ಳುವವರಿಗೂ ಸತ್ಯ ತಿಳಿದಿರುವುದಿಲ್ಲ. ಆದರೆ ಅಲ್ಲೊಂದು ಅವಕಾಶವಿದೆ ಎಂದು ಅದರ ದುರುಪಯೋಗ ಮಾಡಿ ಅದರ ಲಾಭ ಪಡೆಯಲು ಮಾತ್ರ ತಿಳಿದಿರುತ್ತದೆ. ಇವು ಮೂರೂ ವಿಷಯಗಳಲ್ಲಿ ಅನರ್ಥಕಾರಿಯಾದ ಅರ್ಧ ಸತ್ಯದ ಲಾಭ ಪಡೆದು ದುರುಪಯೋಗ ಮಾಡುವುದು…

  • ಕನ್ನಡದ ಖ್ಯಾತ ಚಿಂತಕ, ಬರಹಗಾರ ಕೆ ವಿ ತಿರುಮಲೇಶ್ ‘ವಾಚನಶಾಲೆ' ಎನ್ನುವ ಹೊಸ ಕೃತಿಯನ್ನು ಹೊರತಂದಿದ್ದಾರೆ. ಸಾಹಿತ್ಯ, ಸಂಸ್ಕೃತಿ ಮತ್ತು ವಿಚಾರ ಎನ್ನುವ ವಿಷಯವನ್ನು ಒಳಗೊಂಡ ಪುಸ್ತಕ ಸುಂದರ ಮುಖಪುಟದಿಂದ ಗಮನ ಸೆಳೆಯುತ್ತಿದೆ. ಯಾವುದು ಒಳ್ಳೆಯ ಸಾಹಿತ್ಯ, ಯಾವುದು ಸಾಮಾನ್ಯದ್ದು ಎನ್ನುವ ಅಳತೆಗೋಲು ಇಲ್ಲ, ನಿಜ. ಹೆಚ್ಚಿನಮಟ್ಟಿಗೆ ಅದು ನಮ್ಮ ನಮ್ಮ ಅನುಭವಕ್ಕೆ ಬರಬೇಕಾದ ಸಂಗತಿ. ಕೆಲವು ಓದುಗರು ಓದುತ್ತ ಬೆಳೆಯುತ್ತಾರೆ. ಆದರೆ ದಿನವೂ ಪತ್ರಿಕೆಗಳನ್ನಷ್ಟೇ ಓದುವ ವ್ಯಕ್ತಿಗಳ ಕುರಿತು ಯೋಚಿಸಿ ನೋಡಿ. ಅವರು ಅಷ್ಟಕ್ಕೆ ತೃಪ್ತರಾಗುತ್ತಾರೆ. ಅಲ್ಲದೆ ಇಲ್ಲೊಂದು ಅಪಾಯವೂ ಇದೆ: ಗ್ರೆಶರ್ ಲಾ! ಕೆಟ್ಟ ಹಣ ಒಳ್ಳೆಯ ಹಣವನ್ನು ಕೊಚ್ಚಿಕೊಂಡು ಹೋಗುವಂತೆ, ಸಾಮಾನ್ಯ ಸಾಹಿತ್ಯ ಉತೃಷ್ಟ ಸಾಹಿತ್ಯವನ್ನು ಒತ್ತರಿಸಬಹುದು…

  • ಕನ್ನಡದ ಖ್ಯಾತ ಅಂಕಣಕಾರ, ಲೇಖಕ ಪ್ರೇಮಶೇಖರ ಇವರು ಬರೆದ ಪುಟ್ಟ ಕಾದಂಬರಿ ‘ಮಳೆ'. ಈ ಕಾದಂಬರಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಅನುರಾಧಾ ಪಿ ಎಸ್ ಇವರು. ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

    “ಕಥೆಗಾರ, ಅವನೊಳಗೊಬ್ಬ ಚಿತ್ರಗಾರ. ಅವನ ಕಥೆಗಳ ಅಪೂರ್ವ ಅಭಿಮಾನಿ ಚಾರುಲತಾಳಿಂದ ತನ್ನ ಪೋರ್ಟ್ ರೇಟ್ ಮಾಡಿಕೊಡುವಂತೆ ಬರುವ ಕೋರಿಕೆ. ಅವಳ ವಿಶಿಷ್ಟ ವ್ಯಕ್ತಿತ್ವ ಹಾಗೂ ತನ್ನ ಕಥನಕ್ರಮದ ಮೇಲೆ ಅವಳ ಅಭಿಪ್ರಾಯ, ಸಲಹೆಗಳಿಂದಾದ ಸತ್ಪರಿಣಾಮಗಳ ದೆಸೆಯಿಂದ ಮೋಡಿಗೊಳಗಾದವನಂತೆ ಅವಳನ್ನು ಕಾಣಲು ಅತೀವ ಆತುರದಲ್ಲಿ ಅವಳೂರಿನೆಡೆಗೆ ಹೊರಡುವ ಕಥೆಗಾರ, ಮಳೆ ಕಾಡೀತೆಂದು ಅವಳು ಎಚ್ಚರಿಸಿದರೂ ಲೆಕ್ಕಿಸದೇ ಬೈಕ್ ನಲ್ಲಿ ಹೊರಟು,…

  • ‘ನೀರ ಸುಟ್ಟ ಸೂರ್ಯ’ ದೇವೂ ಮಾಕೊಂಡ ಕವಿತೆಗಳು. ಕೃತಿಯ ಕುರಿತು ಬರೆಯುತ್ತಾ ದೇವು ಮಾಕೊಂಡ ಅವರ ಕವಿತೆಗಳು ತಮ್ಮಷ್ಟಕ್ಕೆ ತಾವು ಬಿಚ್ಚಿಕೊಳ್ಳುತ್ತಾ ಹೋಗುವ ಗುಣವುಳ್ಳವು. ಕವಿತೆಗಳೆಂದರೆ ಗಟ್ಟಿದನಿಯಲ್ಲಿ ಮಾತನಾಡಬೇಕಾದುದಿಲ್ಲ. ಅವುಗಳಿಗೆ ಒಂದು ಒಳದನಿ ಇರುತ್ತದೆ. ಅವು ಒಳಗಿವಿಗಳಿಗೆ ಕೇಳಿದರೆ ಸಾಕು ಎನ್ನುವಂತೆ ದೇವು ಪದ್ಯ ಬರೆಯುತ್ತಾರೆ. ಹಾಗಂತ ಇವು ಸ್ವಗತ ಪದ್ಯಗಳಲ್ಲ. ಇವುಗಳಲ್ಲಿ ಇರುವ ಸೃಜನಶೀಲ ಪಸೆ ಕವಿತೆಗಳಿಗೆ ಮೃದುಲವಾದ ಸ್ಪರ್ಶ ನೀಡುತ್ತವೆ ಎಂದಿದ್ದಾರೆ.

    ಜೊತೆಗೆ ದೇವು ಅವರ ಕವಿತೆಗಳ ಕಟ್ಟನ್ನು ಬಿಚ್ಚಿದರೆ ಅಲ್ಲಿ ಎರಡು ಬಗೆಯ ನಿವೇದನೆಗಳಿರುವುದನ್ನು ಕಾಣಬಹುದು: ಒಂದು, ಪ್ರೇಮ ತುಡಿತವನ್ನೇ ಪ್ರಧಾನವಾಗುಳ್ಳ ಕವಿತೆಗಳು; ಮತ್ತೊಂದು ರಾಜಕೀಯ…

  • ಪ್ರಚಂಡ ಚೋರ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು. 

    ೬೦-೭೦ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಯನ್ನು ಅದೂ ಪತ್ತೇದಾರಿ ಸಾಹಿತ್ಯವನ್ನು ಬರೆದು ಜನರಿಗೆ ಓದುವುದರ ಚಟವನ್ನು ಹಿಡಿಸಿದವರು ನರಸಿಂಹಯ್ಯನವರು. ಇವರು…

  • ಕಳೆದ ಹಲವಾರು ವರ್ಷಗಳಿಂದ ಅಮೇರಿಕದಲ್ಲಿರುವ ಬರಹಗಾರ ಮೈ ಶ್ರೀ ನಟರಾಜ ಅವರು ಬರೆದ ವಿಡಂಬನಾತ್ಮಕ ಕವಿತೆಗಳ ಸಂಗ್ರಹವೇ ‘ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ’ ಎಂಬ ಕೃತಿ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಅಂಕಣಕಾರ, ಲೇಖಕ ಜೋಗಿಯವರು. “ಸರಸಮಯ ಶೈಲಿ, ಲಯಬದ್ಧತೆ, ತುಸು ವ್ಯಂಗ್ಯ ಮತ್ತು ನಿರಾಳ ಕನ್ನಡದ ಈ ಕವಿತೆಗಳು ಕಷ್ಟ ಕೊಡುವುದಿಲ್ಲ. ಕವಿಯ ಸಕಾರಣ ಸಿಟ್ಟನ್ನು ತೋರುವಾಗಲೂ ಈ ಕವಿತೆಗಳು ಗದ್ದಲ ಮಾಡುವುದಿಲ್ಲ. ಅಣಕವಾಡು, ಸಾಂದರ್ಭಿಕ ರಚನೆ, ಪ್ರತಿಕ್ರಿಯೆ - ಹೀಗೆ ಮೂರು ಬಗೆಯ ಪದ್ಯಗಳು ಇಲ್ಲಿವೆ. ಇವು ಅರ್ಥ ಮಾಡಿಕೊಳ್ಳಲು ತಿಣುಕಾಡಬೇಕಾದ ರಚನೆಗಳಲ್ಲ. ಬದಲಾಗಿ ಮನಸ್ಸನ್ನು ಮುದಗೊಳಿಸಿ, ಮುಗುಳ್ನಗು ತುಳುಕಿಸುವಂಥ ಸಜ್ಜನ ಕವಿತೆಗಳು" ಎಂದಿದ್ದಾರೆ ಜೋಗಿ.