ವಿಜಯಲಕ್ಷ್ಮೀ ನಾಗೇಶ್ ಅವರ ‘ಒಂಟಿ ನಾನಲ್ಲ' ಎನ್ನುವ ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ವಿಮರ್ಶಕ ವೆಂಕಟೇಶ್ ಮಾನು ಇವರು. ಅವರ ಪ್ರಕಾರ ಈ ಕವನಗಳು ಸಂಯಮದೊಡಲಲ್ಲಿ ಬದುಕಿನ ನೋವುಗಳನ್ನು ಮೌನವಾಗಿ ಅನುಭವಿಸಿದ ಪಳೆಯುಳಿಕೆಗಳಂತಿವೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ವಿಜಯಲಕ್ಷ್ಮೀ ನುಗ್ಗೇಹಳ್ಳಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವ ಹೀಗಿದೆ...
“ಖಾಸಗಿ ವೃತ್ತಿಯಲ್ಲಿ ಶುಶ್ರೂಶಕಿಯಾಗಿದ್ದು ಜನರ ಸ್ವಾಸ್ಥ್ಯ ನೋಡಿಕೊಳ್ಳುವ ವಿಜಯಲಕ್ಷ್ಮೀ ನಾಗೇಶ್ ಅವರು ತಮ್ಮ ಮನಸ್ಸಿನ ಸ್ವಾಸ್ಥ್ಯಕ್ಕೆ ಸಾಹಿತ್ಯದ ಸಾಂಗತ್ಯವನ್ನು ಬೆಳೆಸಿಕೊಂಡು ಅದರ ಸಂಪ್ರೀತಿಯಲ್ಲಿ ತಲ್ಲೀನವಾಗಿ ತಮ್ಮ ಮೊದಲ…