ಪುಸ್ತಕ ಸಂಪದ

  • ಕಪ್ಪು ವರ್ಣದ ಚೂಪು ಹಲ್ಲುಗಳ ವ್ಯಕ್ತಿಯೊಬ್ಬನ ಮುಖಪುಟವನ್ನು ಹೊಂದಿರುವ ‘ಓಟಾ ಬೆಂಗ' ಎಂಬ ಪುಸ್ತಕವು ಹಲವು ಬರಹಗಳ ಸಂಕಲನ. ಲೇಖಕರಾದ ರೋಹಿತ್ ಚಕ್ರತೀರ್ಥ ಇವರು ಬೇರೆ ಬೇರೆ ಸಂದರ್ಭಗಳಲ್ಲಿ ವಿವಿಧ ಪತ್ರಿಕೆಗಳಿಗೆ ಬರೆದ ಚುಟುಕು ಬರಹಗಳು ಪುಸ್ತಕದ ರೂಪದಲ್ಲಿ ಹೊರಬಂದಿವೆ. ಈ ಬರಹಗಳಲ್ಲಿ ಸುಖಕ್ಕಿಂತ ಅಧಿಕ ದುಃಖದ ಛಾಯೆ ಇದೆ. 

    ಪುಸ್ತಕದ ಪುಟ ತೆರೆದಂತೆ ‘ಓಟಾ ಬೆಂಗ' ಸೇರಿ ೧೧ ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯವನ್ನು ಓದಿದಾಗಲೂ ನೋವು ಸಹಜವಾಗಿ ಕಾಡುತ್ತದೆ. ಒಂದಿಷ್ಟು ಅದೃಷ್ಟ ಕೈ ಹಿಡಿದಿದ್ದರೆ ಈ ಅಧ್ಯಾಯದಲಿನ ವ್ಯಕ್ತಿಗಳ ಬದುಕು ಇನ್ನೇನೋ ಆಗಿ ಬಿಡುತ್ತಿತ್ತು ಎಂದು ಅನಿಸುತ್ತದೆ. ಪುಸ್ತಕದ…

  • ನಿನ್ನೆ ಪ್ರಕಟವಾದ ಭಾಗ-1ರಲ್ಲಿ ಈ ಪುಸ್ತಕದ “ಮಕ್ಕಳಿಗಾಗಿ" ಮತ್ತು “ದೊಡ್ಡವರಿಗಾಗಿ" ಎಂಬ 2 ಭಾಗಗಳ ಮಾಹಿತಿ ನೀಡಲಾಗಿತ್ತು.

    "ಕಲಿಯುವುದು" ಎಂಬ ಕೊನೆಯ ಅಧ್ಯಾಯ ಹೀಗೆ ಆರಂಭವಾಗುತ್ತದೆ: "ಮಕ್ಕಳು ಏಕೆ ಶಾಲೆಗೆ ಹೋಗುತ್ತಾರೆ? ಅವರು ಏಕೆ ತರಗತಿಯಲ್ಲಿ ಕುಳಿತುಕೊಳ್ಳಬೇಕು? ಅವರು ಏಕೆ ಟೀಚರ್ ಹೇಳಿಕೊಡುವ ಪಾಠಗಳನ್ನು ಕೇಳಿಸಿಕೊಳ್ಳಬೇಕು? ಶಾಲೆಗೆ ಹೋಗುವುದಕ್ಕಿಂತ ಇಡೀ ದಿನ ಆಡುತ್ತಾ ಓಡುತ್ತಾ ಕಳೆಯುವುದೇ ಎಷ್ಟೋ ಚೆನ್ನಾಗಿರುತ್ತದೆ ಎಂದು ಬಹಳ ಮಕ್ಕಳಿಗೆ ಅನ್ನಿಸಬಹುದು." ಮುಂದುವರಿದು, ಪ್ರಾಣಿಗಳು ಮತ್ತು ಮನುಷ್ಯರಿಗೆ ಒಂದು ದೊಡ್ಡ ಶಕ್ತಿ ಇದೆ. ಅದೇ ಕಲಿಕೆಯ ಶಕ್ತಿ. ಹೊಸತನ್ನು ತಿಳಿಯುವ ನಿರಂತರ ಕ್ರಿಯೆಯೇ ಕಲಿಕೆ; ಅದು ಈಗಾಗಲೇ ತಿಳಿದಿರುವ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆಯೂ ಹೌದು ಎಂದು ವಿವರಿಸಲಾಗಿದೆ.…

  • ಇದೊಂದು ಅಪರೂಪದ ಪುಸ್ತಕ. ಸುಂದರ್ ಸರುಕ್ಕೈ ಬರೆದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಮಾಧವ ಚಿಪ್ಪಳಿ. ನೋಡುವುದು, ಯೋಚನೆ, ಓದುವುದು, ಬರೆಯುವುದು, ಗಣಿತ, ಕಲೆ, ಒಳ್ಳೆಯತನ, ಕಲಿಯುವುದು - ಎಂಬ ಎಂಟು ಅಧ್ಯಾಯಗಳಲ್ಲಿ ಈ ಮೂಲಭೂತ ಸಂಗತಿಗಳ ಬಗ್ಗೆ ಸರಳವಾಗಿ ವಿವರಿಸಲಾಗಿದೆ.

    ಪುಸ್ತಕದ ಪ್ರಸ್ತಾವನೆಯಲ್ಲಿ “ಮಕ್ಕಳಿಗಾಗಿ" ಮತ್ತು “ದೊಡ್ಡವರಿಗಾಗಿ" ಎಂಬ ಎರಡು ಭಾಗಗಳಿವೆ. “ಮಕ್ಕಳಿಗಾಗಿ” ಭಾಗದಲ್ಲಿ ಬರೆದಿರುವ ಕೆಲವು ವಿಷಯಗಳು ಹೀಗಿವೆ: “ಈ ಪುಸ್ತಕವು ನಿಮಗೆ ತಾತ್ತ್ವಿಕವಾಗಿ ಯೋಚನೆ ಮಾಡುವುದನ್ನು ಕಲಿಸುತ್ತದೆ. ತತ್ತ್ವಶಾಸ್ತ್ರ ಎಂದರೆ ಅದು ವಿಜ್ಞಾನ, ಗಣಿತಗಳಂತೆ ಮತ್ತೊಂದು ವಿಷಯ ಮಾತ್ರವಲ್ಲ, ಅದು ಯೋಚನೆ ಮಾಡುವ ಒಂದು ಮಾರ್ಗ - ನಮ್ಮ ಜಗತ್ತಿನ ಕುರಿತು ಯೋಚಿಸುವ ಮತ್ತು ಮನುಷ್ಯರಾಗಿರುವ ನಾವು ಯಾರು ಎಂದು ಅರ್ಥ…

  • ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಇದರ ಬೈರವೈಕ್ಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಇವರ ಬಗ್ಗೆ ಅವರ ಶಿಷ್ಯರೂ, ಮಂಗಳೂರಿನ ಶಾಖಾ ಮಠದ ಮುಖ್ಯಸ್ಥರೂ ಆಗಿರುವ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಬರೆದ ಪುಸ್ತಕವೇ “ಮಹಾತಪಸ್ವಿ". ಆದಿಚುಂಚನಗಿರಿ ಮಠ ಹಾಗೂ ಮಠದ ಮುಖಾಂತರ ನಡೆಯುತ್ತಿರುವ ವಿದ್ಯಾದಾನ ಮೊದಲಾದ ಸಾಮಾಜಿಕ ಕಳಕಳಿಯ ಕಾರ್ಯಗಳ ಬಗ್ಗೆ ಮತ್ತು ಶ್ರೀ ಗುರುಗಳ ಬಗ್ಗೆ ಸವಿವರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಪುಸ್ತಕಕ್ಕೆ ತಮ್ಮ ‘ಅನುಗ್ರಹ ಸಂದೇಶ'ವನ್ನು ಬರೆದಿದ್ದಾರೆ ಈಗಿನ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಇವರು. ಇವರು ತಮ್ಮ ಸಂದೇಶದಲ್ಲಿ “ಶ್ರೀಕ್ಷೇತ್ರ ಆದಿಚುಂಚನಗಿರಿಯ…

  • “ಪರಿಸರ ಮಾಲಿನ್ಯದಲ್ಲಿ ಸರ್ಕಾರದ ಪಾತ್ರ ಎಷ್ಟಿದೆ, ಯಾವ ಯಾವ ಹಂತದಲ್ಲಿ ಯಾರು ಯಾರು ಎಷ್ಟು ಕಮಿಷನ್ ತಿನ್ನುತ್ತಾರೆ, ಮತ್ತೆ ಒಂದು ಸಣ್ಣ ಸಮಸ್ಯೆ ನಿರ್ಲಕ್ಷಿಸಿದರೆ ಅದು ಮುಂದೆ ಹೇಗೆ ಒಂದು ಸರ್ಕಾರದ ಪತನಕ್ಕೆ ಕಾರಣಾವಾಗುತ್ತೆ ಎಂಬುದನ್ನು ತೀರಾ ಸಾಮಾನ್ಯವಾಗಿ, ನೇರವಾಗಿ ಅರ್ಥವಾಗುವಂತೆ ಕೆ.ಆರ್. ಚಂದ್ರಶೇಖರ್ ಅವರು ಬರೆದಿದ್ದಾರೆ" ಎನ್ನುವುದು ನನ್ನ ಅನಿಸಿಕೆ.

    ʻನಮಾಮಿ ಗಂಗೆʼ ಪುಸ್ತಕ ನನ್ನ ಕೈ ಸೇರಿ ಸುಮಾರು ತಿಂಗಳುಗಳೇ ಕಳೆದಿದ್ದರೂ, ಎರಡು ಬಾರಿ ಅರ್ಧ ಓದಿ ಅನಿವಾರ್ಯ ಮತ್ತು ಅಗತ್ಯ ಕೆಲಸಗಳಿಂದ ಮುಂದೆ ಓದಲು ಸಾಧ್ಯವಾಗಿರಲಿಲ್ಲ. ಈ ವಾರ ಓದಲೇಬೇಕೆಂದು ಹಟದಿಂದ ಓದಿ ಮುಗಿಸಿದೆ. ಮತ್ತೊಮ್ಮೆ ಮೊದಲಿನಿಂದ ಕೊನೆಯವರೆಗೂ ಪೂರ್ತಿಯಾಗಿ. ಬೆಂಗಳೂರಿನ ಕೊಳಚೆ ನೀರು,…

  • ಅಕ್ಷಯ ನಾಗ್ರೇಶಿ ಅವರ “ಮ್ಯಾಜಿಕ್ ನಡಿದು ಹೋಯಿತು..!” ಎನ್ನುವ ಕೃತಿಯು ಹದಿಹರೆಯಕ್ಕೆ ಕಾಲಿಡುತ್ತಿರುವ ಯುವಕ ಯುವತಿಯರ ಹುಡುಗು ಮನದಲ್ಲಿ ಕಾಡುವ ಕಥೆಗಳ ಸಂಗ್ರಹ. “ಪರೀಕ್ಷೆಯಲ್ಲಿ ಫೇಲಾಗಿ ಆತ್ಮಹತ್ಯೆಗೆ ಪ್ರಯತ್ನಿಸುವ ವಿದ್ಯಾರ್ಥಿಗಳು ಮತ್ತು ಅವರ ಮಾನಸಿಕ ಲೋಕದತ್ತಲೇ ಸುತ್ತುವ ಕತೆ ಇದು" ಎನ್ನುತ್ತಾರೆ ಸಾಹಿತಿ ಸುನಂದಾ ಕಡಮೆ. ಸುನಂದಾ ಕಡಮೆ ಅವರು ‘ಮ್ಯಾಜಿಕ್ ನಡಿದು ಹೋಯಿತು...!’ ಪುಸ್ತಕಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಅದರಲ್ಲಿ ಅವರು ವ್ಯಕ್ತ ಪಡಿಸಿದ ಭಾವನೆಗಳು ಇಲ್ಲಿವೆ  “ಮಕ್ಕಳ ಬರಹಗಾರರಾದ ಅಕ್ಷಯ ನಾಗ್ರೇಶಿಯವರ ʻಮ್ಯಾಜಿಕ್ ನಡಿದು ಹೋಯಿತು’ ಸಂಕಲನವು ಎಂಟು ಅಪರೂಪದ ಕತೆಗಳನ್ನು ಹೊಂದಿದ್ದು, ಮಕ್ಕಳ ಮನಸ್ಸನ್ನು ಹಿಡಿದಿಟ್ಟುಕೊಂಡು ಓದಿಸಿಕೊಳ್ಳುವುದರಲ್ಲಿ ಯಾವುದೇ…

  • “ಎಷ್ಟೋ ಜನ ತಮಗೆ ಗೊತ್ತಿರುವ ವಿಚಾರಕ್ಕೆ ಅಥವಾ ಕಣ್ಣಾರೆ ಕಂಡ ವಿಚಾರಕ್ಕೆ ಸಾಕ್ಷಿಯಾಗಲು ಒಪ್ಪುವುದಿಲ್ಲ. ಇನ್ನು ಕೆಲವರು ತಮಗೆ ಸಂಬಂಧವೇ ಇರದ ವಿಚಾರದಲ್ಲಿ ಸಾಕ್ಷಿಯಾಗಿ ಒದ್ದಾಡುತ್ತಿರುತ್ತಾರೆ. ಇನ್ನು ಕೆಲವರಿಗೆ ಸಾಕ್ಷಿ ಹೇಳುವುದೇ ವೃತ್ತಿಯೂ ಆಗಬಲ್ಲದು. ಸುನಂದಕ್ಕನ ಕೇಸಿಗೆ ಮನು ಸಾಕ್ಷಿಯಾದ ನಂತರ ಏನಾಯಿತು? ಒಂದು "ಸಾಕ್ಷಿ" ಕೇವಲ ಕೇಸನ್ನು ಅಷ್ಟೇ ಅಲ್ಲ, ಸಂಬಂಧಗಳನ್ನು, ನೆಮ್ಮದಿಯ ಬದುಕನ್ನು ತಿರುವು ಮುರುವು ಮಾಡಿ ಬಿಡಬಲ್ಲದು," ಎನ್ನುವುದು ನನ್ನ ಅನಿಸಿಕೆ. ಲೇಖಕ ನರೇಂದ್ರ ಪೈ ಅವರ "ಕನಸುಗಳು ಖಾಸಗಿ" ಪುಸ್ತಕವನ್ನು ಓದಿದಾಗ ನನ್ನ ಮನದಲ್ಲಿ ಮೂಡಿದ ಭಾವಗಳು ಹೀಗಿವೆ....

    “ಈ ಕಥಾ ಸಂಕಲನದ ಎಲ್ಲಾ ಕತೆಗಳು ಪತ್ರಿಕೆಗಳಲ್ಲಿ ಮುದ್ರಣಗೊಂಡು ಓದುಗರ ಮನಸ್ಸು…

  • ‘ಬುಗುರಿ’ ಕವನ ಸಂಕಲನವು ವಿಜಯ ಪದ್ಮಶಾಲಿಯವರ ಹೊಸ ಕವನ ಸಂಕಲನವಾಗಿದೆ. ಈ ಕವನ ಸಮಕಾಲೀನ ಸಂಕಲನದ ಕೌತುಕವಾಗಿದೆ ವಿಷಯ ವೈವಿಧ್ಯತೆ, ಸಂದರ್ಭದ ಅನೇಕ ವಿಷಯಗಳನ್ನು ಒಳಗೊಂಡು ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. “ಸಂಜೆಯೊಲವಿನ ರಂಗು" ಕವನದಲ್ಲಿ ಸಂಜೆಯೊಲವಿನ ರಂಗನ್ನು ಎಲ್ಲರ ನಯನಗಳಲ್ಲಿ ತುಂಬಿರುವ ಅವರ ಚಮತ್ಕಾರ ಮೆಚ್ಚುವಂತದ್ದು. “ಕುರುಡು ಕಂಚಾಣ” ಕವನದಲ್ಲಿ ಒಲಿಯದ ಕುರುಡು ಕಾಂಚಾಣದ ನಿರೀಕ್ಷೆಯಲ್ಲಿ ತಲ್ಲಣಗೊಂಡು ಕನಸುಗಳ ತೆಕ್ಕೆಯೊಳಡಗಿದೆ ಎನ್ನುವ ವಾಸ್ತವ ವಿವರಿಸಿದ್ದಾರೆ ಎನ್ನುತ್ತಾರೆ ಸಾಹಿತಿ ಎ. ಸರಸಮ್ಮ. ಅವರು ಲೇಖಕಿ ವಿಜಯ ಪದ್ಮಶಾಲಿ ಅವರ ಬುಗುರಿ ಕವನಸಂಕಲನಕ್ಕೆ ಬರೆದ ಮುನ್ನುಡಿ ಬರಹದಲ್ಲಿ ಬರೆದದ್ದು ಹೀಗೆ...

    “ಕನ್ನಡ ಸಾಹಿತ್ಯವು ನಮ್ಮ…

  • ‘ಯುವಜನತೆಗೆ ಸ್ಪೂರ್ತಿ’ ಎಂಬ ಪುಸ್ತಕವನ್ನು ಬಾಲಚಂದ್ರ ಎಂ ರವರು ಬರೆದಿದ್ದಾರೆ. ಈ ಪುಸ್ತಕವನ್ನು ಈಗಿನ ಯುವಜನತೆಯಲ್ಲಿ ಕಾಣುತ್ತಿರುವ ಆತ್ಮವಿಶ್ವಾಸದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಬರೆದಿದ್ದಾರೆ. ಯುವಮಂದಿಯಲ್ಲಿ ಆತ್ಮವಿಶ್ವಾಸವನ್ನು ಬಡಿದೆಚ್ಚರಿಸುವುದಕ್ಕೆ ಮತ್ತು ದುರ್ಬಲತೆಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುವುದಕ್ಕೆ, ತಮ್ಮ ಈ ಪುಸ್ತಕದಲ್ಲಿ ೬೩ ಲೇಖನಗಳ ಮೂಲಕ ಯುವಮಂದಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ. ಪ್ರತಿ ವರ್ಷ ಸಾವಿರಾರು ಯುವ ಮಂದಿ ಹಲವಾರು ಕಾರಣಗಳಿಗೆ ತಮ್ಮ ಅತ್ಯಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಸಣ್ಣ ಸಣ್ಣ ವಿಷಯಗಳಿಗೆ ತಮ್ಮ ಜೀವವನ್ನು ಕಳೆದುಕೊಳ್ಳುವುದಕ್ಕೆ ತಯಾರಾಗುವ ಯುವ ಮಂದಿ, ಸಾಯುವ ಮುನ್ನ ಈ ಪುಸ್ತಕ ಓದಿದ್ದರೆ ತಮ್ಮ ನಿಲುವನ್ನು…

  • ಕನ್ನಡದಲ್ಲಿ ಮಕ್ಕಳಿಗಾಗಿ ಸಾಹಿತ್ಯ ರಚನೆ ಮಾಡಿದ ಪ್ರಮುಖರಲ್ಲೊಬ್ಬರು ಹೊಯಿಸಳ ಕಾವ್ಯನಾಮದ ಅರಗ ಲಕ್ಷ್ಣಣರಾಯರು. (ಜನನ 2-5-1893) ಅವರು ಆರಂಭದ ಶಿಕ್ಷಣ ಪಡೆದದ್ದು ಹುಟ್ಟೂರು ನರಸಿಂಹರಾಜಪುರದಲ್ಲಿ. ಮೈಸೂರಿನಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದ ನಂತರ, ಮದನಪಲ್ಲಿಯ ನ್ಯಾಷನಲ್ ಕಾಲೇಜಿನಲ್ಲಿ ಕಲಿತು ಬಿ.ಎ. ಪದವೀಧರರಾದರು.  ತದನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.

    ಚನ್ನಪಟ್ಟಣದ ಪ್ರೌಢಶಾಲೆಯಲ್ಲಿ 1922ರಲ್ಲಿ ಅಧ್ಯಾಪಕರಾಗಿ ನೇಮಕವಾದ ಹೊಯಿಸಳರು ನಿವೃತ್ತಿಯ ವರೆಗೂ ಅದೇ ವೃತ್ತಿಯಲ್ಲಿ ದುಡಿದರು. ಅವರು ಮಕ್ಕಳ ಮನಸ್ಸನ್ನು ಚೆನ್ನಾಗಿ ಅರ್ಥಮಾಡಿಕೊಂಡವರು. ಮಕ್ಕಳಿಗಾಗಿ ಬೋಧನೆಯ ಜೊತೆಗೆ ಸಾಹಿತ್ಯ ಸೃಷ್ಟಿ ಮಾಡಬೇಕೆಂಬ ತುಡಿತದಿಂದ “ಹೊಯಿಸಳ" ಕಾವ್ಯನಾಮದಲ್ಲಿ ಕತೆಕವನಗಳನ್ನು ಬರೆಯಲು ಶುರುವಿಟ್ಟರು.