ಪುಸ್ತಕ ಸಂಪದ

  • “ಜನ ಆಡಿಬಿಡುತ್ತಾರೆ” ಎಂಬ ಶೀರ್ಷಿಕೆಯ ಈ ಕವನ ಸಂಕಲನದ ವಸ್ತು ಚೈನಾ ದೇಶದ ಒಂದು ಕಾಲ ಮಾನದಲ್ಲಿ ಸಂದುಹೋದ ಸಾಮಾನ್ಯಜನರ ಬದುಕು-ಬವಣೆಗಳ ಹೋರಾಟ-ಬಿಡುಗಡೆಗಳ ಹೃದಯವಿದ್ರಾವಕ ಪರಿಣಾಮದಿಂದಾಗಿ ವಿಶೇಷವಾಗಿ ತೋರುವಂಥದು. ಬರೆದ ಕವಿ ಅಜ್ಞಾತನಿರಲಿ, ಜ್ಞಾತನೇ ಇರಲಿ, ಬರೆದದ್ದು ಕಪ್ಪು ಮಸಿಯಿಂದಲ್ಲ, ಎದೆಯಿಂದ ಬಸಿದ ಕೆನ್ನೆತ್ತರ ಗಸಿಯಿಂದ ಎನ್ನುವಂತೆ ಸಾಲುಗಳು ಮನಸ್ಸನ್ನು ಕಲಕುತ್ತವೆ ಎನ್ನುತ್ತಾರೆ ಸಂಶೋಧಕ, ಪ್ರಾಧ್ಯಾಪಕ ಟಿ.ವಿ. ವೆಂಕಟಾಚಲ ಶಾಸ್ತ್ರೀ. ಅವರು ಲೇಖಕ ನೈಷಧಂ ಎಸ್ಸೆ ಅವರ 'ಜನ ಆಡಿಬಿಡುತ್ತಾರೆ' ಕೃತಿಗೆ ಬರೆದ ನಲ್ನುಡಿ ನಿಮ್ಮ ಓದಿಗಾಗಿ ಇಲ್ಲಿದೆ...

    “ಮಿತ್ರರಾದ ನೈಷಧಂ ಅವರು (ಎನ್.ಎಸ್. ಅಶ್ವತ್ಥ ನಾರಾಯಣ ಶಾಸ್ತ್ರಿಗಳು) ಸಿದ್ಧಪಡಿಸಿರುವ ಚೀನೀ ಕಾವ್ಯ…

  • ಇತ್ತೀಚೆಗೆ ನಮ್ಮನ್ನು ಅಗಲಿದ ಸ್ವಾಮಿ ಸಿದ್ದೇಶ್ವರರು ತಮ್ಮ ಪ್ರಖರವಾದ ಪ್ರವಚನಗಳಿಗೆ ಬಹಳ ಖ್ಯಾತಿಯನ್ನು ಪಡೆದವರು. ಅವರ ಮಾತುಗಳನ್ನು ಆಲಿಸಲು ಬೆಳ್ಳಂಬೆಳಿಗ್ಗೆ ಜನರು ತಂಡೋಪತಂಡವಾಗಿ ಅವರ ಆಶ್ರಮಕ್ಕೆ ಬರುತ್ತಿದ್ದರು. ಅವರು ತಮ್ಮ ಪ್ರವಚನಗಳಲ್ಲಿ ಹೇಳಿದ ಹಲವಾರು ಕಥೆಗಳು, ವಿಷಯಗಳು ಮಕ್ಕಳಿಗೆ ದಾರಿದೀಪವಾಗುವಂಥವುಗಳು. ಅಂತಹ ೩೬ ಕಥೆಗಳನ್ನು ಲೇಖಕರಾದ ರೋಹಿತ್ ಚಕ್ರತೀರ್ಥ ಇವರು ಮಕ್ಕಳಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ನಿರೂಪಣೆ ಮಾಡಿ ‘ಮಕ್ಕಳಿಗಾಗಿ ಸ್ವಾಮಿ ಸಿದ್ಧೇಶ್ವರರ ಕಥೆಗಳು' ಎಂಬ ಹೆಸರಿನಲ್ಲಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. 

    ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಪತ್ರಕರ್ತ, ಲೇಖಕರಾದ ವಿಶ್ವೇಶ್ವರ ಭಟ್ ಇವರು. ಇವರು ತಮ್ಮ…

  • “ಇಲ್ಲಿಯ ಕಥೆಗಳಲ್ಲಿ ಬಲಿಯಾಗುವ ಯಾರೊಬ್ಬರೂ ತಪ್ಪಿತಸ್ತರಲ್ಲ ಎನ್ನುವುದು ಕೇಡಿನ ಭೀಕರತೆಯನ್ನು ಹೆಚ್ಚು ಮಾಡುತ್ತದೆ. ಕತೆಗಾರ ಮಲ್ಲಿಕಾರ್ಜುನ ಅವರು ಸಹಜವಾಗಿ ಕಟ್ಟಿದ ಕಥೆಗಳು ನಮ್ಮ ಅಂತರಂಗಕ್ಕೆ ಇಳಿಯುತ್ತವೆ. ಆದರೆ ಕೆಲವು ಸಲ ಅವರು ಮಹತ್ವಾಕಾಂಕ್ಷಿಯಿಂದ ಕಥೆಗಳಲ್ಲಿ ಇಣುಕಿದಾಗ ಕಥೆ ಓದುಗರ ಪರಿಧಿಯಿಂದ ದೂರ ಹೋಗುತ್ತದೆ ಎನ್ನಿಸುತ್ತದೆ” ಲೇಖಕ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ದೀಡೆಕೆರೆ ಜಮೀನು ಪುಸ್ತಕಕ್ಕೆ ನಾನು ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

    ಕನ್ನಡದಲ್ಲಿ ಗ್ರಾಮೀಣ ಸಂವೇದನೆಯ ಕತೆಗಳಿಗೆ ಬರ ಎಂಬುದಿಲ್ಲ. ನಮ್ಮ ಕತೆಗಳ ಜೀವ ಚೈತನ್ಯಕ್ಕೆ ಗ್ರಾಮ ಜಗತ್ತಿನ ಹಲವಾರು ಗೋಜಲುಗಳು, ದ್ವಂದ್ವಗಳು, ಹರಾಹರಿಗಳೇ ಮೂಲದ್ರವ್ಯವಾಗಿವೆ. ಹೊರ ಜಗತ್ತಿನಲ್ಲಿ…

  • ಕಥೆಗಾರ ಶಿವಕುಮಾರ ಮಾವಲಿ ಅವರು ‘ಪ್ರೇಮದ ಆಫೀಸು ಮತ್ತು ಅವಳು' ಎಂಬ ಕುತೂಹಲ ಭರಿತ ಶೀರ್ಷಿಕೆಯನ್ನು ಹೊಂದಿರುವ ಕಥಾ ಸಂಕಲನವನ್ನು ಹೊರತಂದಿದ್ದಾರೆ. "ಕೆಲವೊಮ್ಮೆ ನಾಟಕೀಯತೆ ಈ ಕತೆಗಳ ಸಂವಿಧಾನವೇನೋ ಅನ್ನಿಸುವಷ್ಟರಲ್ಲೇ, ಬದುಕಿನಲ್ಲಿರುವ ನಾಟಕೀಯತೆಯನ್ನು ಅವು ನೆನಪಿಸುತ್ತವೆ. 'ಕತೆ ಕಟ್ಟುವಿಕೆ' ಎಂಬುದನ್ನೇ ನಾನು ನಂಬುತ್ತೇನೆ. ಕೆಲವೇ ನಿಮಿಷಗಳಲ್ಲಿ ಓದಿ ಮುಗಿಸಬಹುದಾದ ಕತೆಯೊಂದು ಅನಂತರದಲ್ಲಿ ಓದುಗನಲ್ಲಿಯೂ ಮುಂದುವರೆಯಬಹುದು" ಎನ್ನುವುದು ಲೇಖಕರಾದ  ಶಿವಕುಮಾರ ಮಾವಲಿ ಅವರ ಮಾತು . “ಪ್ರೇಮಪತ್ರದ ಆಫೀಸು ಮತ್ತು ಅವಳು” ಕಥಾ ಸಂಕಲನಕ್ಕೆ ಅವರೇ ಬರೆದ ಮಾತುಗಳು ಹೀಗಿವೆ...

    “ಹಾಗೆ ನೋಡಿದರೆ ನಮ್ಮೆಲ್ಲರ ಬದುಕು ಮತ್ತಷ್ಟು ಗಟ್ಟಿಯಾಗುವುದು 'ಸಹಿಷ್ಣುತೆ'ಯಿಂದಲೇ…

  • ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ನೀವು ಈಗಾಗಲೇ ಕೇಳಿರಬಹುದು. ಸಾವಿತ್ರಿಬಾಯಿಯವರ ಬದುಕಿನ ಹೋರಾಟದ ಕಥೆಯನ್ನು ನಾಟಕದ ಮೂಲಕ ಪ್ರಸ್ತುತ ಪಡಿಸಿದ್ದಾರೆ ವೈಜ್ಞಾನಿಕ ಬರಹಗಾರ, ಕವಿ ಕೆ ನಟರಾಜ್ ಅವರು. ತಮ್ಮ ಲೇಖಕರ ನುಡಿಯಲ್ಲಿ ಅವರು ಹೇಳಿದ್ದು

    “ಸಾವಿತ್ರಿ ಬಾಯಿ ಫುಲೆ ಹಾಗೂ ಜ್ಯೋತಿರಾವ್ ಫುಲೆಯವರ ಹೆಸರು ಭಾರತದ ಇತಿಹಾಸದಲ್ಲಿ ಮರೆಯಲಾಗದ ಹೆಸರುಗಳು. ಕತ್ತಲೆಯ ಕೂಪದಂತಿದ್ದ ಭಾರತೀಯ ಸಮಾಜವನ್ನು ಬೆಳಕಿನಡೆಗೆ ಕೊಂಡೊಯ್ದವರು. ಭಾರತೀಯ ಸ್ತ್ರೀ ಸಮಾಜಕ್ಕೆ ಹೊಸ ಮನ್ವಂತರವನ್ನೇ ತಂದವರು. ಹೆಣ್ಣು ಮಕ್ಕಳಿಗಾಗುತ್ತಿದ್ದ ಶೋಷಣೆಗಳನ್ನು ಎತ್ತಿಹಿಡಿದು, ಅವುಗಳ ನಿವಾರಣೆಗೆ ಟೊಂಕ ಕಟ್ಟಿ ನಿಂತವರು. ಅದರಲ್ಲೂ ಹಿಂದುಳಿದ ಹೆಣ್ಣು ಮಕ್ಕಳ…

  • ಬಿ.ಎಸ್. ರುಕ್ಕಮ್ಮ ಅವರ ಈ ಮಕ್ಕಳ ಕತೆಗಳ ಸಂಕಲನದಲ್ಲಿ ಹತ್ತು ಮಕ್ಕಳ ಕತೆಗಳಿವೆ. ಇವೆಲ್ಲವೂ ವಿವಿಧ ಲೇಖಕರು ಬರೆದ ಮಕ್ಕಳ ಕುತೂಹಲ ಕೆರಳಿಸುವ ಕತೆಗಳು.

    ಮೊದಲನೆಯ ಕತೆ “ಜಾಣರು ತೋಡಿದ ಬಾವಿ”. ಪರೋಪಕಾರಿ ಗಣಪತಿ ಮತ್ತು ಅವನ ಗೆಳೆಯ ಧನಪ್ಪನ ಕತೆ. ತನ್ನ ಹೊಲದಲ್ಲಿ ಬಾವಿ ತೋಡಲು ಹೊರಟ ಧನಪ್ಪನಿಗೆ ಗಣಪತಿಯ ಸಹಾಯ. ಇಬ್ಬರೂ ಹತ್ತಡಿ ಆಳದ ಬಾವಿ ತೋಡುತ್ತಾರೆ. ಅನಂತರ, ಮಳೆ ಬಂದರೆ ಬಾವಿಯಿಂದ ತೆಗೆದ ಮಣ್ಣೆಲ್ಲ ಕೊಚ್ಚಿ ಹೋಗುತ್ತದೆ ಎಂಬ ಆತಂಕ ಧನಪ್ಪನಿಗೆ. ಹಾಗಾಗಿ ಎರಡನೇ ಬಾವಿ ತೋಡಿ ಅದರಲ್ಲಿ ಮೊದಲನೆಯ ಬಾವಿಯ ಮಣ್ಣನ್ನು ತುಂಬಿಸುತ್ತಾರೆ. ಈಗ, ಎರಡನೇ ಬಾವಿಯ ಮಣ್ಣು ಮಳೆಗೆ ಕೊಚ್ಚಿ ಹೋಗುತ್ತದೆಂಬ ಆತಂಕ ಧನಪ್ಪನಿಗೆ. ಅವರು ಮೂರ್ಖತನದಿಂದ ಮೂರನೇ ಬಾವಿ ತೋಡುತ್ತಾರೆ!

    “ಶ್ರೀಮಂತೆ ಆರಿಸಿಕೊಂಡ ಹುಡುಗಿ” ಎಂಬ ಎರಡನೆಯ…

  • “ಕರ್ನಾಟಕದ ಒಂದು ಭಾಗದವರು ಇನ್ನೊಂದು ಭಾಗದ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಅನುಭವ ಹಂಚಿಕೊಳ್ಳುವ ವಿನ್ಯಾಸವು ಕನ್ನಡದಲ್ಲಿ ಜನಪ್ರಿಯವಾಗಿದೆ. ಆದರೆ ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ ವಿಶಿಷ್ಟವಾದ ಭಾಷೆಯನ್ನಾಗಲಿ ಅನುಭವವನ್ನಾಗಲಿ ವೈಭವೀಕರಿಸುವುದಿಲ್ಲ ಇಲ್ಲವೇ ಕೀಳೀಕರಿಸುವುದಿಲ್ಲ. ತನ್ನ ಪಾಲಿಗೆ ಕನ್ನಡ ನಾಡಿನ ಬದುಕೆಲ್ಲ ಒಂದೇ ಎಂಬ ಸಮದರ್ಶಿಯಾದ ದೃಷ್ಟಿಕೋನವು ಇಲ್ಲಿ ಕೆಲಸ ಮಾಡುತ್ತದೆ,'' ಎನ್ನುತ್ತಾರೆ "ಮಿಲ್ಟ್ರಿ ಟ್ರಂಕು' ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಲೇಖಕ, ವಿಮರ್ಶಕ ರಹಮತ್ ತರೀಕೆರೆ. “ಮೂಲತಃ ವೈದ್ಯರಾದ ಲಕ್ಷ್ಮಣ ಅವರು, ತಮ್ಮ ನೆನಪುಗಳನ್ನು ಪುಟ್ಟಪುಟ್ಟ ಲೇಖನಗಳಲ್ಲಿ ಹಿಡಿದಿಟ್ಟಿದ್ದಾರೆ. ಈ ಸ್ಮೃತಿಚಿತ್ರಗಳು ಹಲವು…

  • “ಪ್ರೇಮ ಋತುಮಾನಗಳಾಗಿ, ಶತಮಾನದ ಭಾವಗಳಾಗಿ, ಯುಗ ಯುಗಗಳ ಬಂಧನಗಳಾಗಿ ಬೆಳೆದರೂ ಹಳತಾಗುವುದಿಲ್ಲ. ಅಳತೆಯ ಸೆಳೆತದಲ್ಲಿ ಸಿಲುಕಿ ನಲುಗುವ ಹಲವಾರು ಪಡ್ಡೆ ಹುಡುಗರನ್ನು ಇಬ್ಬನಿಯ ರೂಪಕದಲ್ಲಿ ವಿವರಿಸುವ ಪ್ರಯತ್ನ‌ ಕೂಡ ಪ್ರಯಾಸದಿಂದ ಕೂಡಿದ್ದರೂ ಕೆಚ್ಚೆದೆಯಲ್ಲಿ ದೇಶಬಾಂದವರನ್ನು ಹಚ್ಚೆ ಹಾಕಿಸಿಕೊಳ್ಳಿ ಎನ್ನುವ 'ಮೌನರಾಗ' ಹೊಸತಲೆಮಾರಿನ ಹೋರಾಟಗಾರರಿಗೆ ಪರಿಚಯ ಮಾಡಿಸುತ್ತದೆ" ಷಕೀಬ್ ಎಸ್. ಕಣದ್ಮನೆ ನವಿಲೇಹಾಳ್ ಅವರ ʻಮೋಹದ ಮೋಡಗಳುʼ ಕವನ ಸಂಕಲನ. 72 ಪುಟಗಳ ಈ ಕವನ ಸಂಕಲನವು ಪುಟ್ಟದಾಗಿದ್ದರೂ ಹೊರಹೊಮ್ಮಿಸುತ್ತಿರುವ ಭಾವಗಳು ಹಲವಾರು.

    “ಕಡಿಮೆ ಸಮಯದಲ್ಲಿ ಮಮತೆಯಿಂದ ಮನಗೆದ್ದ ಸಹೋದರ ಷಕೀಬ್ ಕಣದ್ಮನೆಯವರ ಸರಳತೆ ಎಂತಹ ವ್ಯಕ್ತಿಗೂ ಮಾದರಿ. ತಲೆ ಹೋಗುವ…

  • ‘ಮೌನದ ಚಿಪ್ಪಿನೊಳಗೆ' -ಮನದ ಕಣಿವಿಗೆ ಆಶಾಕಿರಣ ಎಂಬ ಕೃತಿಯನ್ನು ರಚಿಸಿದ್ದಾರೆ ಧಾರಿಣ್ ಮಾಯಾ ಇವರು. ದಿನನಿತ್ಯದ ಮನಸ್ಸಿನ ಕೋಲಾಹಲ-ನೋವಿನೆಳೆಗಳು, ಬದುಕಿನ ಬವಣೆ-ಏರಿಳಿತಗಳು, ಕಗ್ಗಂಟು-ಮಜಲುಗಳನ್ನು ತನ್ನ ಮಡಿಲಲ್ಲೇ ಮುಚ್ಚಿಟ್ಟು, ಹೆಣ್ಣು ತನ್ನ ಜೀವನ ನಡೆಸುವ ಪರಿಯನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ. ಪುರುಷನಿಂದ ಮಾನಸಿಕ ಹಾಗು ಲೈಂಗಿಕ ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳ ಬದುಕಿನ ಕರಾಳತೆಗೆ ಕನ್ನಡಿ ಹಿಡಿವ ಪ್ರಯತ್ನ ಮಾಡಿದ್ದಾರೆ ಲೇಖಕಿ ಧಾರಿಣಿ ಮಾಯಾ. ಅವರು ತಮ್ಮ ‘ಮೌನದ ಚಿಪ್ಪಿನೊಳಗೆ’ ಕೃತಿಗೆ ಬರೆದಿರುವ ಲೇಖಕರ ಮಾತು ಇಲ್ಲಿದೆ...

    “ಕಾಲ ಬದಲಾಗುತ್ತಲೇ ಇದೆ. ಇಪ್ಪತ್ತೊಂದನೇ ಶತಮಾನದ ಹೆಣ್ಣು ಮಕ್ಕಳ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಯನ್ನು…

  • ಎಚ್.ಎಸ್. ಸತ್ಯನಾರಾಯಣರವರು ತಮ್ಮ ವೈಯಕ್ತಿಕ ಬದುಕಿನ ಅನುಭವಗಳನ್ನು, ಅವರು ಅನುಭವಿಸಿದ ಕಷ್ಟಕೋಟಲೆಗಳನ್ನು ಯಾವುದೇ ಸಂಕೋಚಕ್ಕೆ ಒಳಗಾಗದೇ ನಿರ್ಭೀತಿಯಿಂದ, ಪ್ರಾಮಾಣಿಕವಾಗಿ ಓದುಗರ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಅವರ ಬಗ್ಗೆ ಮತ್ತಷ್ಟು ಗೌರವ ಭಾವ ಹುಟ್ಟುವಂತೆ ಪ್ರಬಂಧ ರಚಿಸಿದ್ದಾರೆ.

    ಹಾಸ್ಯ ಬರಹಗಳಲ್ಲಿ ಲಲಿತ ಪ್ರಬಂಧಗಳು ಬಹಳ ಮುಂಚೂಣಿಯಲ್ಲಿರುವ ಸಶಕ್ತವಾದ ಪ್ರಕಾರವೆನ್ನಬಹುದು. ಯಾರು ಸಹನೆ ಮತ್ತು ತಾಳ್ಮೆಯ ಗುಣವನ್ನು ಹೊಂದಿದ್ದು ಗಂಭೀರ ವಿಷಯವನ್ನೂ ಕೂಡ ಸಕಾರಾತ್ಮಕ ಮನೋಭಾವದಿಂದ ನೋಡಿ ಅದರೊಳಗೆ ಅಂತರ್ಗತವಾಗಿರುವ, ಮನಸ್ಸಿಗೆ ಉಲ್ಲಾಸ ಉತ್ಸಾಹ ತುಂಬುವ ಅಂಶಗಳನ್ನು ಹೆಕ್ಕಿ ತೆಗೆದು ಅದನ್ನು ತನ್ನದೇ ಆದ ವಿಶಿಷ್ಟ ರೂಪದಲ್ಲಿ ಬರಹ ರೂಪಕ್ಕಿಳಿಸುವಂತಹ…