“ಜನ ಆಡಿಬಿಡುತ್ತಾರೆ” ಎಂಬ ಶೀರ್ಷಿಕೆಯ ಈ ಕವನ ಸಂಕಲನದ ವಸ್ತು ಚೈನಾ ದೇಶದ ಒಂದು ಕಾಲ ಮಾನದಲ್ಲಿ ಸಂದುಹೋದ ಸಾಮಾನ್ಯಜನರ ಬದುಕು-ಬವಣೆಗಳ ಹೋರಾಟ-ಬಿಡುಗಡೆಗಳ ಹೃದಯವಿದ್ರಾವಕ ಪರಿಣಾಮದಿಂದಾಗಿ ವಿಶೇಷವಾಗಿ ತೋರುವಂಥದು. ಬರೆದ ಕವಿ ಅಜ್ಞಾತನಿರಲಿ, ಜ್ಞಾತನೇ ಇರಲಿ, ಬರೆದದ್ದು ಕಪ್ಪು ಮಸಿಯಿಂದಲ್ಲ, ಎದೆಯಿಂದ ಬಸಿದ ಕೆನ್ನೆತ್ತರ ಗಸಿಯಿಂದ ಎನ್ನುವಂತೆ ಸಾಲುಗಳು ಮನಸ್ಸನ್ನು ಕಲಕುತ್ತವೆ ಎನ್ನುತ್ತಾರೆ ಸಂಶೋಧಕ, ಪ್ರಾಧ್ಯಾಪಕ ಟಿ.ವಿ. ವೆಂಕಟಾಚಲ ಶಾಸ್ತ್ರೀ. ಅವರು ಲೇಖಕ ನೈಷಧಂ ಎಸ್ಸೆ ಅವರ 'ಜನ ಆಡಿಬಿಡುತ್ತಾರೆ' ಕೃತಿಗೆ ಬರೆದ ನಲ್ನುಡಿ ನಿಮ್ಮ ಓದಿಗಾಗಿ ಇಲ್ಲಿದೆ...
“ಮಿತ್ರರಾದ ನೈಷಧಂ ಅವರು (ಎನ್.ಎಸ್. ಅಶ್ವತ್ಥ ನಾರಾಯಣ ಶಾಸ್ತ್ರಿಗಳು) ಸಿದ್ಧಪಡಿಸಿರುವ ಚೀನೀ ಕಾವ್ಯ…