ಭಾರತ ಕಂಡ ಶ್ರೇಷ್ಟ ವಿಜ್ಞಾನಿ ಪ್ರೊ. ಸಿ ಎನ್ ಆರ್ ರಾವ್ ಅವರು “A Life in Science” ಎಂಬ ಹೆಸರಿನಲ್ಲಿ ತಮ್ಮ ಆತ್ಮ ಕಥೆಯನ್ನು ಬರೆದಿದ್ದಾರೆ. ಆಂಗ್ಲ ಭಾಷೆಯಲ್ಲಿರುವ ಈ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಅನುವಾದಕರಾದ ಎಂ ಎಸ್ ಎಸ್ ಮೂರ್ತಿ ಇವರು. “ವಿಜ್ಞಾನದೊಳಗೊಂದು ಜೀವನ" ಎಂಬ ಹೆಸರಿನಲ್ಲು ಪ್ರೊ. ರಾವ್ ಅವರ ಆತ್ಮಕಥೆ ಕನ್ನಡಕ್ಕೆ ಬಂದಿದೆ. ಅನುವಾದಕರು ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ...
“೧೯೩೪ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಸಿ. ಎನ್. ಆರ್. ರಾವ್ ಇಂದು ವಿಶ್ವವಿಖ್ಯಾತ ರಸಾಯನ ವಿಜ್ಞಾನಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಕಳೆದ ಐದು ದಶಕಗಳಲ್ಲಿ ಟ್ರ್ಯಾನ್ಸಿಶನ್ ಮೆಟಲ್ ಆಕ್ಸೆಡ್ಗಳು, ಇನಾರ್ಗ್ಯಾನಿಕ್-ಆರ್ಗ್ಯಾನಿಕ್…