ಮೊದಲೆಲ್ಲ ಹೆಚ್ಚೆಚ್ಚು ಪತ್ತೇದಾರಿ ಕಾದಂಬರಿ ಓದುತ್ತಿದ್ದೆ. ಅದೊಮ್ಮೆ ಅಪ್ಪ ಆತನ ಪರಿಚಯದವರಿಂದ ಎನ್.ನರಸಿಂಹಯ್ಯ ಅವರು ಬರೆದ 'ಕುಂಟ,ಕುರುಡ,ಕುರೂಪಿ' ಅಂಬುದೊಂದು ಪತ್ತೇದಾರಿ ಕಾದಂಬರಿ ಕಡ ತಂದಿದ್ದರು. ಒಮ್ಮೆ ಹಿಡಿದರೆ ಓದುವವರೆಗೆ ಬಿಡದಷ್ಟು ರೋಮಾಂಚನಕಾರಿ ಕಥಾವಸ್ತು ಅದು.ಆಮೇಲೆ ಅದೇ ಅಭ್ಯಾಸವಾಗಿ ಅಪ್ಪನಿಗೆ ದುಂಬಾಲು ಬಿದ್ದು, ಆತನ ಗೆಳೆಯರ ಮನೆಯವರೆಗೂ ಹೋಗಿ ಬೆಳೆಗೆರೆಯ 'ಒಮಾರ್ಟಾ' ಭೈರಪ್ಪರ 'ವಂಶವೃಕ್ಷ' ಐದಾರು ಕಾದಂಬರಿ ತಂದು ಬಿಡದೆ ಓದಿದೆ. ಆಗಿನ ಕಾಲಕ್ಕೆ ಮಯೂರದಲ್ಲಿ ಧಾರಾವಾಹಿಯಾಗಿ ಬರುತ್ತಿದ್ದ ತ್ರಿವೇಣಿಯವರ 'ಬೆಕ್ಕಿನ ಕಣ್ಣು' ಹುಚ್ಚು ಹಿಡಿಸಿ ಮುಂದಿನ ಸಂಚಿಕೆಗಾಗಿ ಕಾತುರದಿಂದ ಕಾಯುವಂತೆ ಮಾಡಿತ್ತು.
ಇಂತಹದೇ ನೂರಾರು ಕಾದಂಬರಿ ಓದಿದರೂ…