ದೂರದ ಅಮೇರಿಕಾ ದೇಶದಿಂದ ‘ವಿಶ್ವವಾಣಿ' ಪತ್ರಿಕೆಗೆ ಪ್ರತೀ ಭಾನುವಾರ ಹೊಸ ಹೊಸ ವಿಚಾರಗಳನ್ನು ಹೊತ್ತುಕೊಂಡು ಅಂಕಣವನ್ನು ಬರೆಯುವವರು ಶ್ರೀವತ್ಸ ಜೋಶಿ. ವಿಶ್ವವಾಣಿಗೂ ಮೊದಲು ವಿಜಯ ಕರ್ನಾಟಕ ಪತ್ರಿಕೆಗೆ ಬರೆಯುತ್ತಿದ್ದರು. ವಿಶ್ವವಾಣಿ ಪತ್ರಿಕೆಗೆ ಅಂಕಣ ಬರೆಯಲು ಶುರು ಮಾಡಿದ ಬಳಿಕ ಪರ್ಣಮಾಲೆ ೩ ಮತ್ತು ೪ ಪುಸ್ತಕಗಳು ಹೊರಬಂದವು. ಅದೇ ತಿಳಿರುತೋರಣ ಅಂಕಣ ಬರಹಗಳ ಸಂಗ್ರಹ ಸರಣಿಯಲ್ಲಿ ಪರ್ಣಮಾಲೆಯ ೫ನೇ ಭಾಗ ಪುಸ್ತಕವಾಗಿ ಪ್ರಕಟವಾಗಿದೆ.
ಈ ಪುಸ್ತಕದ ಬೆನ್ನುಡಿಯಲ್ಲಿ ಅಂಕಣಕಾರ, ಸಾಹಿತಿ ಜೋಗಿಯವರು ಬರೆದ ಮಾತುಗಳು ಬಹಳ ಸೊಗಸಾಗಿವೆ. ಅವರು ಬರೆಯುತ್ತಾರೆ “ಇಂಗ್ಲಿಷ್ ಸಾಹಿತ್ಯಲೋಕದ ಸೊಗಸೇನೆಂದರೆ ಅಲ್ಲಿ ವೈವಿಧ್ಯಮಯ ವಿಚಾರಗಳನ್ನು ಕುರಿತ ಪುಸ್ತಕಗಳು…