ಪುಸ್ತಕ ಸಂಪದ

  • ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾಗಿ ವಿಂಗಡಿಸಿ 'ಹೊಸತು ಸಂಚಿಕೆ' ರೂಪದಲ್ಲಿ ಓದುಗರಿಗೆ ನೀಡುತ್ತಿದ್ದೇವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ ದೊರೆತರೆ ಬೌದ್ಧಿಕ ಮತ್ತು ಕ್ರಿಯಾತ್ಮಕ ಚರ್ಚೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂಬುದು ಈ ವಾಚಿಕೆಗಳ ಪ್ರಕಟಣೆಯ ಹಿಂದಿರುವ ಉದ್ದೇಶ.

    ಈ 'ಮಹಿಳಾ ಲೋಕ' ೩೪ ಲೇಖನಗಳ ಸಂಕಲನ. ಹೊಸತು ಪತ್ರಿಕೆಯ ಆರಂಭದ ಐದು ವರ್ಷಗಳ ಅರವತ್ತು ಸಂಚಿಕೆಗಳಿಂದ ಈ ಲೇಖನಗಳನ್ನು ಆಯ್ದುಕೊಳ್ಳಲಾಗಿದೆ.

    'ಮಹಿಳಾ ಲೋಕ' ಸಂಪುಟವನ್ನು ಸಂಪಾದಿಸಿ ಕೊಟ್ಟವರು ನೇಮಿಚಂದ್ರ. ಅವರು ಕತೆಗಾರ್ತಿಯಾಗಿ, ಅಂಕಣಗಾರ್ತಿಯಾಗಿ…

  • 'ಪರಿಮಳದ ಸುಗ್ಗಿ' ಎಂಬ ಕವಿತೆಗಳ ಸಂಗ್ರಹವನ್ನು ಸಂಪಾದಿಸಿದ್ದಾರೆ ಬಿ ಶ್ರೀನಿವಾಸ ರಾಜು ಅವರು. 'ಹೊಸತು' ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾರಾಗಿ ವಿಂಗಡಿಸಿ 'ಹೊಸತು ವಾಚಿಕೆ' ರೂಪದಲ್ಲಿ ಓದುಗರಿಗೆ ನೀಡುತ್ತಿದ್ದೇವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ ದೊರೆತರೆ ಬೌದ್ಧಿಕ ಮತ್ತು ಕ್ರಿಯಾತ್ಮಕ ಚರ್ಚೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂಬುದು ಈ ವಾಚಿಕೆಗಳ ಪ್ರಕಟಣೆಯ ಹಿಂದಿರುವ ಉದ್ದೇಶ.

    ಈ 'ಪರಿಮಳದ ಸುಗ್ಗಿ' ೯೬ ಕವಿತೆಗಳ ಸಂಕಲನ. ಹೊಸತು ಪತ್ರಿಕೆಯ ಆರಂಭದ ಐದು ವರ್ಷಗಳ ಅರವತ್ತು ಸಂಚಿಕೆಗಳಿಂದ ಈ ಕವಿತೆಗಳನ್ನು ಆಯ್ದುಕೊಳ್ಳಲಾಗಿದೆ. 

  • ಗರಿಮಾ ಶ್ರೀವಾಸ್ತವ ಅವರ ಯುದ್ಧಕಾಲದ ಮಹಿಳೆಯರ ಅನುಭವ ಕಥನವನ್ನು ವಿಕ್ರಮ ವಿಸಾಜಿಯವರು ಕನ್ನಡಕ್ಕೆ 'ದೇಹವೇ ದೇಶ' ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ೧೯೯೨ ರಿಂದ ೧೯೯೫ರವರೆಗೆ ಪೂರ್ವ ಯುರೋಪಿನ ದೇಶಗಳ ನಡುವೆ ನಡೆದ ಯುದ್ಧ ಹಲವು ಘೋರ ದುರಂತಗಳಿಗೆ ಕಾರಣವಾಯಿತು. ಮುಖ್ಯವಾಗಿ ಕ್ರೊವೇಶಿಯಾ, ಸರ್ಬಿಯಾ, ಹರ್ಜೆಗೋವಿನಾ ಮತ್ತು ಬೋಸ್ನಿಯಾ ದೇಶಗಳಲ್ಲಿ ರಕ್ತದ ಕಲೆಗಳು ಎಲ್ಲೆಡೆ ಉಳಿದುಕೊಂಡವು. ಇಂಥ ನರಕದಲ್ಲಿ ಹೆಚ್ಚಾಗಿ ಬೆಂದವರು ಸ್ತ್ರೀಯರು ಮತ್ತು ಮಕ್ಕಳು. ಹತ್ಯೆ, ಅತ್ಯಾಚಾರ, ಮಾನವ ಕಳ್ಳ ಸಾಗಾಣಿಕೆ- ಇಲ್ಲಿ ನಿತ್ಯದ ಚಟುವಟಿಕೆಗಳಾದವು. ಯುದ್ಧಗಳು ಎಲ್ಲಿಯೇ ನಡೆಯಲಿ. ಅವುಗಳ ಪರಿಣಾಮ ಮಾತ್ರ ಬಹುಕಾಲದವರೆಗೆ ಯಾವ್ಯಾವುದೋ ರೂಪದಲ್ಲಿ ಬೇರು ಬಿಟ್ಟಿರುತ್ತದೆ. ಕೆಲವರು ಕುಟುಂಬ ಕಳೆದುಕೊಂಡರೆ ಮತ್ತೆ…

  • ಕರ್ನಾಟಕದಲ್ಲಿ 'ಸಂವಿಧಾನದ ಓದು' ಎಂಬ ಆಂದೋಲನವನ್ನೇ ಪ್ರಾರಂಭಿಸಿ, ವಿವಿಧ ನಗರಗಳಲ್ಲಿ ಸಂಚರಿಸಿ ಭಾರತದ ಸಂವಿಧಾನದ ಆಶಯಗಳನ್ನು ಮನೆ-ಮನಗಳಿಗೆ, ಶಾಲಾ-ಕಾಲೇಜುಗಳಿಗೆ ತಲುಪಿಸುವ ಮಹತ್ವದ ಕೆಲಸವನ್ನು ಮಾಡಿದ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ್ ಇವರು ಬರೆದ ಕೃತಿಯೇ'ಸಂವಿಧಾನ ಮತ್ತು ವಚನಗಳು'.

    ಪುಸ್ತಕದ ಬೆನ್ನುಡಿಯಲ್ಲಿ ಸಾಹಿತಿ ಡಾ. ಸಿದ್ಧನಗೌಡ ಪಾಟೀಲ ಇವರು ಅಭಿಪ್ರಾಯ ಪಡುವಂತೆ "ಸಂವಿಧಾನದ ಮೂಲ ಆಶಯಗಳು ಜನಪರವಾದ ತತ್ವಶಾಸ್ತ್ರೀಯ ಚಿಂತನೆಗಳಲ್ಲೂ ಹೇಗೆ ಪ್ರತಿಪಾದನೆಗೊಂಡಿದೆ ಎಂಬ ಆಶಯವನ್ನು ತಮ್ಮ ಆಳವಾದ ಅಧ್ಯಯನ ವಿಶ್ಲೇಷಣೆಯ ಮೂಲಕ ಸಾದರಪಡಿಸಿದ್ದಾರೆ. ವಿಶ್ವದ ಮತ್ತು ಭಾರತೀಯ ಪರಂಪರೆಯಲ್ಲಿ ಜೀವಪರ ಚಿಂತನೆಗಳು, ಜೀವ ವಿರೋಧಿ ಚಿಂತನೆಗಳ ವಿರುದ್ಧ ಸದಾ…

  • ಅರವಿಂದ ಚೊಕ್ಕಾಡಿಯವರು ಬರೆದ ಸುಂದರ ಕೃತಿ 'ಮೂರನೆಯ ಇರುವು'. ಪುಸ್ತಕದ ಬೆನ್ನುಡಿಯಲ್ಲಿ ಯು ಆರ್ ಅನಂತಮೂರ್ತಿ ಇವರು ಹೀಗೆ ಬರೆದಿದ್ದಾರೆ " ಕನ್ನಡ ಭಾಷೆಯಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ದೀರ್ಘವಾಗಿ ಸಮಗ್ರವಾಗಿ ಯೋಚಿಸಿ ಬರೆದಿರುವವರ ಸಂಖ್ಯೆ ತೀರಾ ವಿರಳ. ಅರವಿಂದ ಚೊಕ್ಕಾಡಿ ಅವರ ಈ ಪುಸ್ತಕ ವಿನಾಯಿತಿ. ಬ್ರಿಟಿಷ್ ವಿಮರ್ಶಕನೊಬ್ಬ ಶೋಧನಾತ್ಮಕವಾದ ಬರಹಗಾರರಿಗೆ ಒಂದು ಸೂಚನೆ ಕೊಡುತ್ತಾನೆ "Only Connect” ಅಂದರೆ ಸಂಬಂಧವಿರದಂತೆ ಕಾಣುವ ವಿಷಯಗಳಲ್ಲಿ ಸಂಬಂಧಗಳನ್ನು ಕಂಡಾಗ ನಿಜವಾದ ಚಿಂತನೆ ಪ್ರಾರಂಭವಾಗುತ್ತದೆ. ಉತ್ಪಾದನಾ ವಿಧಾನಕ್ಕೂ ಉತ್ಪಾದನಾ ಸಂಬಂಧಗಳಿಗೂ ನಡುವೆ ಕೊಂಡಿಯನ್ನು ಕಾಣುವವನು ನಮಗೆ ಪರಿಚಯವಿರುವ ಮಾರ್ಕಿಸ್ಟರಿಗಿಂತ ಮುಂದೆ ಹೋಗುತ್ತಾನೆ. ನಮ್ಮ ಕ್ರಾಂತಿಕಾರರು ಉತ್ಪಾದನಾ…

  • ಸಾಹಿತಿ ಶೋಭಾ ರಾವ್ ಅವರು 'ಹನಿ ಕಡಿಯದ ಮಳೆ' ಎಂಬ ಪ್ರಬಂಧ ಮಾಲೆಯನ್ನು ರಚಿಸಿದ್ದಾರೆ. ಈ ಕೃತಿಗೆ ಮಾಲಿನಿ ಗುರುಪ್ರಸನ್ನ ಅವರು ಬೆನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ "ಸಿಕ್ಕಿದ್ದನ್ನು ಸಿಕ್ಕ ಹಾಗೆಯೇ ಬಳಸಲಾಗದ ಕೆಸ, ಕಳಲೆ ಬದುಕಿನಲ್ಲಿ ಸಂಸ್ಕರಣದ ಅಗತ್ಯವನ್ನು ಎತ್ತಿಹಿಡಿಯುತ್ತಲೇ ಬಾಯಲ್ಲಿ ನೀರೂರಿಸುತ್ತದೆ. ಯಾರು ಪಳಗಿಸಿದರು ಮೊದಲು ಇವನ್ನು? ಮುಟ್ಟಿದರೆ ತುರಿಸುವ ಕೆಸು, ಬಾಯಿಗಿಡಲಾಗದಷ್ಟು ಕಪ್ಪಟೆ ಕಹಿ ಕಳಲೆಯನ್ನು ಇಷ್ಟು ರುಚಿಕಟ್ಟಾಗಿ ಉಣ್ಣಬಹುದು ಎಂದು ಕಂಡುಹಿಡಿದವರಾರು? ಮಲೆನಾಡಿನಲ್ಲಿ ತರಕಾರಿಯ ಹಂಗಿಲ್ಲದೆ ಅಡುಗೆ ಮಾಡಿಬಿಡುವ ಗೃಹಿಣಿಯ ಕೌಶಲ ಆ ಪರಿಸರ ತಂದಿಟ್ಟ ಅನಿವಾರ್ಯತೆ, ಸುರಿವ ಮಳೆಯಲ್ಲಿ ಹುರುಳಿ ಸಾರು, ಅಕ್ಕಿ ಕಾಳುಮೆಣಸಿನ ಸಾರು ಸುರಿದುಣ್ಣುವ ಬೆಡಗು,…

  • ಬಿ ಎಸ್ ಜಯಪ್ರಕಾಶ್ ನಾರಾಯಣ ಇವರು ತಮ್ಮ ಅಂತರಂಗದ ಅನನ್ಯರ ಬಗ್ಗೆ ಬರೆದ 'ಜೀವ ಜೀವದ ನಂಟು' ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಜಿ.ಬಿ.ಹರೀಶ್ ಇವರು. ತಮ್ಮ ಮುನ್ನುಡಿಯಲ್ಲಿ "ಸಮಾಜ ಎಂದರೆ ಮನುಷ್ಯರ ವಿಚಿತ್ರಗತಿಯ ಒಕ್ಕೂಟ. ಕಾಲ ಪ್ರವಾಹದಲ್ಲಿ ಅದು ಉಬ್ಬಿ, ಸಂಕೋಚಗೊಂಡು ಒಂದು ನದಿ ಹೇಗೆ ಯುಗಯುಗಗಳಿಗೆ ತನ್ನ ಪಾತ್ರ ಬದಲಿಸುತ್ತದೆಯೋ ಹಾಗೆ ಬದಲಾಗುತ್ತದೆ. ನಾನು ಮತ್ತು ಜೆ ಪಿ ಒಂದೇ ಜಿಲ್ಲೆಯವರು. ಅವರು ಬೆಳೆದದ್ದು ತೆಂಗಿನ ಸೀಮೆಯಲ್ಲಿ. ನಾನು ಬೆಳೆದದ್ದು ಅರೆಮಲೆನಾಡಿನ ಹಾಸನ ನಗರದಲ್ಲಿ. ಹೀಗಾಗಿ ಹೊರಗಿನ ಪರಿಸರ ನನಗೆ ಚಿರಪರಿಚಿತವಾದರೂ ಈ ತೆಂಗಿನ ಸೀಮೆಯ ಒಳಚಿತ್ರಕ್ಕೆ ನಾನೂ ಜೆ.ಪಿ.ಯ ಬರವಣಿಗೆಯನ್ನೇ ಆಶ್ರಯಿಸಬೇಕು! ಇದು ನನಗೆ ಸಂತಸ ಕೂಡ. 

    ಬದುಕು ಎಷ್ಟು…

  • ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಹಲವಾರು ಉತ್ತಮ ಪುಸ್ತಕಗಳು ಹೊರಬಂದಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಪುಸ್ತಕ ಖ್ಯಾತ ಸಾಹಿತಿ ಕೌಂಡಿನ್ಯ ಇವರು ಬರೆದ 'ಆ ವಿಜಯನಗರ'. ಇದೊಂದು ಐತಿಹಾಸಿಕ ಕಾದಂಬರಿ. ವಿಜಯನಗರದ ವೀರಪುತ್ರನ ಯಶೋಗಾಥೆಯನ್ನು ಹೇಳುವ ಕಾದಂಬರಿ ಎನ್ನುತ್ತಾರೆ ಲೇಖಕರು. ಯಾರು ವಿಜಯನಗರದ ವೀರಪುತ್ರ? ಎಂಬ ಕುತೂಹಲವೇ? ತಿಳಿಯಲು ಈ ಐತಿಹಾಸಿಕ ಕಾದಂಬರಿಯನ್ನು ಓದಿ.

    ಪುಸ್ತಕದ ಬೆನ್ನುಡಿಯಲ್ಲಿ ಕಂಡ ಬರಹ "ಹಿಂದೂಗಳ, ಹಿಂದೂ ಧರ್ಮದ ರಕ್ಷಾ ಕವಚವಾಗಿ, ಸಾಮ್ರಾಜ್ಯ ವಿಸ್ತರಣೆ ಮತ್ತು ಆಡಳಿತದಲ್ಲಿ ದಕ್ಷತೆಯಿಂದ ಮತ್ತು ಹಿಂದೆ ಎಂದೂ ಕಾಣದ ಮಹಾವೈಭವವನ್ನು ದೇಶ-ವಿದೇಶಗಳಲ್ಲಿ ಪ್ರಖ್ಯಾತಗೊಳ್ಳುವಂತೆ ಮಾಡಿದ್ದ ಏಕೈಕ ಸಾಮ್ರಾಜ್ಯವೇ ವಿಜಯನಗರ. ಎಲ್ಲವೂ ಎಲ್ಲಾ…

  • ಜಗದ್ವಿಖ್ಯಾತ ಸ್ತ್ರೀವಾದಿ ಚಿಂತಕಿ ಕೇಟ್ ಮಿಲೆಟ್ ಅವರ 'Sexual Politics’ ಕೃತಿಯ ಕನ್ನಡ ನಿರೂಪಣೆ ಶ್ರೀಮತಿ ಎಚ್ ಎಸ್ ಅವರಿಂದ ಮೊದಲ ಬಾರಿ ಕನ್ನಡಕ್ಕೆ ಅನುವಾದಗೊಂಡಿದೆ. ಇದು ಸ್ತ್ರೀವಾದ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಕೃತಿ ಎಂದೇ ಹೇಳಬಹುದು. ಪುರುಷ ಪ್ರಧಾನತೆಯ ಹೆಣ್ಣನ್ನು ಲೈಂಗಿಕತೆಯ ಮೂಲಕ ಅಧೀನಗೊಳಿಸಿರುವುದನ್ನು ಕೂಲಂಕುಷವಾಗಿ ತೆರೆದಿಡುತ್ತದೆ. ಲೈಂಗಿಕತಾ ರಾಜಕಾರಣದ ಅನೇಕ ಆಯಾಮಗಳನ್ನು ಸಮರ್ಪಕವಾದ, ಖಚಿತವಾದ ನೆಲೆಯಲ್ಲಿ ಶೋಧಿಸಿದೆ. ಅಧಿಕಾರವು ಪುರುಷ ಪ್ರಧಾನತೆಯನ್ನು ಹೇಗೆಲ್ಲ ಸೃಷ್ಟಿಸಿಕೊಂಡು ಹೆಣ್ಣನ್ನು ಅಧೀನವಾಗಿಸುವ ತಂತ್ರಗಳನ್ನು ಹೆಣೆದಿದೆ ಎಂಬುದರ ವಿಸ್ತೃತ, ವಿದ್ವತ್ಪೂರ್ಣ ಅಧ್ಯಯನವೇ ಈ ಕೃತಿ. ಇನ್ನು ಇದರ ಕನ್ನಡ ನಿರೂಪಣೆಯನ್ನು ಮಾಡಿರುವ ಡಾ. ಶ್ರೀಮತಿ ಅವರು…

  • "ಮಂಜೇಶ್ವರದ ಸಾರಸ್ವತ ಕೊಂಕಣಿ ಮನೆತನದ ಪುಟ್ಟ ಬಾಲೆ ಅಮ್ಮಣು ಆರೇಳರ ಹರೆಯದ ಬಾಲ್ಯದ ತನ್ನ ಅರಸುವ ಕಣ್ಗಳಿಂದ ಕಂಡ ಕಥನವಿದು ! ಒಂದೊಂದು ಅಧ್ಯಾಯವನ್ನು ಓದುತ್ತಿದ್ದಂತೆ ನಾನು ಆ ಬರಹದಲ್ಲಿ ಜಿನುಗುತ್ತಿದ್ದ ವಾತ್ಸಲ್ಯದ ಧಾರೆಯಲ್ಲಿ ತೊಯ್ದು ಹೋದೆ. ಎಂಬತ್ತು ವರ್ಷಗಳ ಹಿಂದೆ ನಿಧಾನವಾಗಿ ಸರಿದು ಹೋದ ಎಂಥ ಸುಂದರ ದಿನಗಳವು ! ಬಾಲ್ಯಕಾಲ ಬೀಸಿದ ಆ ತಂಬೆಲರ ಮಾಯಾಜಾಲದೊಳಗೆ ನಾನು ಕಳೆದೇ ಹೋದೆ.

    ಸಾರಸ್ವತ ಕೊಂಕಣಿ ಸಮಾಜದ ಆಗಿನ ಕಾಲದ ಜನರ ಜೀವನದ ರೀತಿ, ನೀತಿಗಳು ಉತ್ತಮ ದಾಖಲಾತಿ ಕೃತಿಯುದ್ದಕ್ಕೂ ನಡೆದಿದೆ. ಸಾಂಸ್ಕೃತಿಕವಾಗಿ ಅತ್ಯಂತ ಉನ್ನತ ಆದರೆ ಅಷ್ಟೇ ಉದಾರ ಮತ್ತು ಸರಳ ಕುಟುಂಬವೊಂದರ ಕಿರಿಯ ಸದಸ್ಯೆಯಾಗಿ ಸಾವಿತ್ರಿಯವರು ತನ್ನ ಬಾಲ್ಯ ಸಹಜ ಕುತೂಹಲದಿಂದ ಕಂಡ ಅಂದಿನ…