ಪುಸ್ತಕ ಸಂಪದ

  • ಕೃಷಿ ಪ್ರಯೋಗ ಪರಿವಾರ ಸಂಸ್ಥೆಯವರು ಹೊರತರುತ್ತಿದ್ದ ನಮ್ಮೂರ ವೈವಿಧ್ಯ ಮಾಲಿಕೆಯ ಮೂರನೇ ಕಾಣಿಕೆಯಾಗಿದೆ ಕದಿರು. ಇವರು ಭತ್ತದ ನಾಟಿತಳಿಗಳ ದಾಖಲೆಯನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಪುಸ್ತಕದಲ್ಲಿರುವ ಐವತ್ತಕ್ಕೂ ಮಿಕ್ಕಿದ ನಾಟಿತಳಿಗಳ ಹೆಸರು ಮತ್ತು ಅವುಗಳ ವಿಶ್ಲೇಷಣೆಗಳನ್ನು ಗಮನಿಸುವಾಗ ಅಚ್ಚರಿಯೆನಿಸುತ್ತದೆ. ಈ ರೀತಿಯ ದಾಖಲಾತಿಯನ್ನು ಮಾಡುವುದು ಒಂದು ಅಪರೂಪದ ವಿದ್ಯಮಾನವೇ ಸರಿ. ಈ ನಿಟ್ಟಿನಲ್ಲಿ ಕೃಷಿ ಪ್ರಯೋಗ ಪರಿವಾರದ ಕೆಲಸ ಸ್ತುತ್ಯಾರ್ಹ. 

    ಸಿಹಿ ಕೆಂಪಕ್ಕಿಯ ಸಿದ್ಧಸಾಲೆ, ಪಾಯಸಕ್ಕೆ ಪರಿಮಳ ಕೊಡುವ ಪರಿಮಳ ಸಾಲೆ-ಜೀರಿಗೆ ಸಾಲೆ-ಗಂಧ ಸಾಲೆ, ತಾಯಿತಳಿ ಎನಿಸಿಕೊಂಡ ಕಳವೆ, ಬುತ್ತಿಊಟಕ್ಕೆ ಹೇಳಿಮಾಡಿಸಿದ ಸಣ್ಣವಾಳ್ಯ, ಚಕ್ಕುಲಿಗೆ ಸೂಕ್ತವೆನಿಸಿದ…

  • ಕಥೆಗಳ ರಚನೆಯಲ್ಲಿ ಆಸಕ್ತಿ ಹೊಂದಿರುವ ರವೀಂದ್ರ ಶೆಟ್ಟಿ ಕುತ್ತೆತ್ತೂರು ಅವರ ಚೊಚ್ಚಲ ಕಥಾ ಸಂಕಲನೇ 'ಪುನರ್ಜನ್ಮ'. ವಿವಿಧ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿರುವ ೧೦ ಉತ್ತಮ ಕಥೆಗಳನ್ನು ಆರಿಸಿ ಪುಟ್ಟ ಪುಸ್ತಕವನ್ನಾಗಿಸಿ ಓದುಗರ ಕೈಗಿರಿಸಿದ್ದಾರೆ. ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಪತ್ರಕರ್ತರಾದ ಕೆ. ಆನಂದ ಶೆಟ್ಟಿ ಇವರು. ಅವರ ಅಭಿಪ್ರಾಯದಂತೆ "ರವೀಂದ್ರ ಶೆಟ್ಟಿಯವರು ಬರೆದ ಹಲವಾರು ಕಥೆಗಳು ವಿವಿಧ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡು ಓದುಗರ ಗಮನ ಸೆಳೆದಿದೆ. ಇದೀಗ 'ಪುನರ್ಜನ್ಮ' ಕಥಾ ಸಂಕಲನದ ಪ್ರಕಟಣೆ ಮೂಲಕ ಓದುಗ ವಲಯವನ್ನು ವಿಸ್ತರಿಸ ಹೊರಟ ಪ್ರಯತ್ನ ಶ್ಲಾಘನೀಯ.

    ಪ್ರಥಮ ಸಂಕಲನದಲ್ಲಿ ಇರಬಹುದಾದ ಸಹಜ ಸಣ್ಣ ಪುಟ್ಟ ದೋಷಗಳು '…

  • ನರಹಳ್ಳಿ ಬಾಲಸುಬ್ರಹ್ಮಣ್ಯ ಇವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಇವರು ಹಲವಾರು ವಿಮರ್ಶಾ ಕೃತಿಗಳನ್ನು, ಪ್ರಬಂಧ ಸಂಕಲನಗಳನ್ನು ರಚಿಸಿದ್ದಾರೆ. ಇವರ ನೂತನ ಕೃತಿ 'ಅರಿವಿನ ಬಂಡಾಯ'ವನ್ನು ಕಣ್ಣ ಕೈದೀವಿಗೆಯ ಬೆಳಕು ಎಂದಿದ್ದಾರೆ. ಪುಸ್ತಕದ ಒಳಪುಟಗಳಿಂದ ಆಯ್ದ ಕೆಲವು ಸಾಲುಗಳೂ ಇಲ್ಲಿವೆ…

    "...ಇಂದು ಜಗತ್ತನ್ನು ಗಾಢವಾಗಿ ಪ್ರಭಾವಿಸುತ್ತಿರುವ ಮೂರು ಪ್ರಭಾವೀ ಶಕ್ತಿಗಳೆಂದರೆ ರಾಜಕೀಯ, ಧರ್ಮ ಹಾಗೂ ತಂತ್ರಜ್ಞಾನ. ಇವುಗಳಲ್ಲಿ ರಾಜಕೀಯ ಹಾಗೂ ಧರ್ಮ ಅಧಿಕಾರ ಕೇಂದ್ರಗಳಾಗಿದ್ದು ಅಧೀನ ಮನೋವೃತ್ತಿಯನ್ನು ಮಾತ್ರ ಪೋಷಿಸುತ್ತವೆ. ಸ್ವತಂತ್ರ ಚಿಂತನೆಗೆ, ಸೃಜನಶೀಲ ಕ್ರಿಯಾತ್ಮಕತೆಗೆ ಇಲ್ಲಿ ಅವಕಾಶವಿಲ್ಲ. ಇನ್ನು ಪ್ರಕೃತಿಯ ಜೊತೆ ಶೋಷಣಾತ್ಮಕ ಸಂಬಂಧ ಹೊಂದಿರುವ…

  • ಭಾರತದ ಚರಿತ್ರೆ ಎಡ-ಬಲಗಳ ಅತಿರೇಕದ ನಡುವೆ ಸಿಕ್ಕು ತತ್ತರಿಸಿದೆ. ನಿರ್ಮಲ ಚಿತ್ತದಿಂದ, ವಸ್ತುನಿಷ್ಟವಾಗಿ, ಕಲೆ, ಸಾಹಿತ್ಯ ಚರಿತ್ರೆಗಳನ್ನೆಲ್ಲ ಪೃಥಕ್ಕರಿಸಿ ಸತ್ಯಶೋಧನೆಗೆ ತೊಡಗಬೇಕೆಂಬ ಆದ್ಯತೆಯನ್ನು ಬಹುತೇಕರು ಮರೆತು, ತಾವು ನಂಬಿದ ಸಿದ್ಧಾಂತಕ್ಕೆ ಆಕರಗಳನ್ನು ಹುಡುಕಿದ್ದಾರೆ ಅಥವಾ ಜೋಡಿಸಿದ್ದಾರೆ. ಭಾರತದಂತ ಬಹುಮುಖಿ ಸಂಸ್ಕೃತಿಯ ದೇಶವನ್ನು ಕುರಿತು ಅಧ್ಯಯನ ಮಾಡುವಾಗ ಎಷ್ಟು ವ್ಯವಧಾನವಿದ್ದರು ಅದು ಅಲ್ಪವೇ. ವ್ಯವಧಾನದ ಜೊತೆಗೆ ಬಹುಜ್ಞಾತ ವ್ಯುತ್ಪತ್ತಿ ಹಾಗೂ ಚಿಕಿತ್ಸ ಬುದ್ಧಿಗಳು ಸಮ್ಮಿಳತಗೊಂಡಾಗ ಮಾತ್ರ ಭಾರತದ ಚರಿತ್ರೆಯನ್ನು ಸರಿಯಾಗಿ ಅರಿಯಬಹುದು. ಇಲ್ಲಿ ಚರಿತ್ರೆಯನ್ನು ಆಧುನಿಕ ಪರಿಕಲ್ಪನೆಯನ್ನು ಶೋಧಿಸುವವನಿಗೆ ಒಂದು ಮರುಭೂಮಿಯಾಗಿ ಕಾಣುತ್ತದೆ. ಇಲ್ಲ ದಟ್ಟ ವಿಪಿನವಾಗಿರುತ್ತದೆ. ಹಾಗೂ…

  • 'ದೇಶದ ಪಥ ಬದಲಿಸಿದ ೨೫ ಪ್ರಮುಖ ತೀರ್ಪುಗಳು' ಪುಸ್ತಕದ ಲೇಖಕ ವೈ ಜಿ ಮುರಳೀಧರನ್ ಅವರು ಕಳೆದ ೨೫ ವರ್ಷಗಳಿಂದ ಗ್ರಾಹಕ ಜಾಗೃತಿ, ಮಾನವ ಹಕ್ಕು, ವ್ಯಕ್ತಿತ್ವ ವಿಕಸನ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ರಚನೆ ಮತ್ತು ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇವರ ೫೦೦೦ಕ್ಕೂ ಹೆಚ್ಚು ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

    ಕೆಲವು ಘಟನೆಗಳು, ಪುಸ್ತಕಗಳು, ವ್ಯಕ್ತಿಗಳು ಮತ್ತು ಪ್ರಸಂಗಗಳು ಮಾನವ ಸಮಾಜದ ದಿಕ್ಕನ್ನು ಬದಲಿಸಿರುವುದನ್ನು ಚರಿತ್ರೆಯಲ್ಲಿ ನೋಡಬಹುದು. ಸಾರ್ವಜನಿಕ ಬಸ್ ನಲ್ಲಿ ಬಿಳಿಯರಿಗೆ ಸೀಟು ಬಿಟ್ಟುಕೊಡದ ರೋಸಾ ಪಾರ್ಕ್ಸ್, ನಡುರಾತ್ರಿ ರೈಲಿನಿಂದ ಹೊರದಬ್ಬಿಸಿಕೊಂಡ ಮೋಹನದಾಸ ಗಾಂಧಿ…

  • ನೀರಿನ ಮೌಲ್ಯ ಗೊತ್ತಾಗುವುದು ಅದರ ಕೊರತೆಯಾದಾಗಲೇ. ಇದನ್ನು ಇಸ್ರೇಲ್ ದೇಶದವರು ಚೆನ್ನಾಗಿ ಅರಿತುಕೊಂಡಿದ್ದಾರೆ. ಹೇಳಿ ಕೇಳಿ ಇಸ್ರೇಲ್ ದೇಶದ ಬಹುಪಾಲು ಭೂಮಿ ಮರಳುಗಾಡು. ಮಳೆಯಾಗುವುದು ಬಹಳ ಕಡಿಮೆ. ಆದರೂ ನೀರಾವರಿ ತಂತ್ರಜ್ಞಾನ, ಕೃಷಿಯಲ್ಲಿ ಅವರು ಬಹಳ ಮುಂದುವರಿದಿದ್ದಾರೆ. ಇಸ್ರೇಲ್ ಜನರ ನೀರಾವರಿ ತಂತ್ರಗಳ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿವೆ. ಅಂತಹದ್ದೇ ಒಂದು ಪುಸ್ತಕ 'ನಾಳೆಗೂ ಇರಲಿ ನೀರು' ಇದು ಜಲದಾಹದಿಂದ ತತ್ತರಿಸುತ್ತಿರುವ ಜಗತ್ತಿಗೆ ಇಸ್ರೇಲ್ ನ ಪರಿಹಾರ ಎಂದಿದ್ದಾರೆ ಲೇಖಕರು. 

    ಹಲವಾರು ಬಾರಿ ಇಸ್ರೇಲ್ ಗೆ ಹೋಗಿ ಬಂದಿರುವ, ಇಸ್ರೇಲ್ ಬಗ್ಗೆ ಪುಸ್ತಕವನ್ನೂ ಬರೆದಿರುವ ಪತ್ರಕರ್ತ, ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರು…

  • 'ಸುಡು ಬಯಲು' ಎನ್ನುವುದು ಒಂದು ಅಂಕಣ ಬರಹಗಳ ಸಂಗ್ರಹ. ೭೨ ಬರಹಗಳು ಈ ಪುಸ್ತಕದಲ್ಲಿವೆ. ಈ ಪುಸ್ತಕವು ಕೊರೊನಾ ಸಾಂಕ್ರಾಮಿಕದ ಸಮಯದ ಜನರ ತಲ್ಲಣಗಳು, ವೈದ್ಯರ ಶ್ರಮ, ಮಾಧ್ಯಮದವರ ಅತಿರೇಕ ಎಲ್ಲವುದರ ಕುರಿತು ಬೆಳಕು ಚೆಲ್ಲುತ್ತದೆ. ಅದಕ್ಕೇ ಮಣಿ ಅವರು ಪುಸ್ತಕದ ಮುಖಪುಟದಲ್ಲೇ 'ಸತ್ಯಾನ್ವೇಷಣೆಯ ಬೆನ್ನೇರಿ...' ಎಂದು ಮುದ್ರಿಸಿದ್ದಾರೆ. ಪತ್ರಕರ್ತರಾಗಿರುವ ಮಣಿ ಅವರು ಕೊರೊನಾ ಸಂದರ್ಭದ ವಾಸ್ತವಾಂಶಗಳನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. 

    ಬೆಂಗಳೂರಿನ ಹಿರಿಯ ಪತ್ರಕರ್ತರೂ, ರೆಡ್ ಕ್ರಾಸ್ ಸೊಸೈಟಿಯ ಮಾಜಿ ಅಧ್ಯಕ್ಷರೂ ಆಗಿರುವ ಎಸ್. ನಾಗಣ್ಣ ಇವರು ಪುಸ್ತಕ ಬೆನ್ನುಡಿ ಬರೆಯುತ್ತಾ ಹೇಳುತ್ತಾರೆ "ಕಳೆದೆರಡು ವರ್ಷಗಳಿಂದ ಕೊರೋನಾ ಎಂಬ ಕಾಣದ ವೈರಾಣು…

  • ರೈತ ಹೋರಾಟಗಾರ ಹೆಚ್ ಆರ್ ಬಸವರಾಜಪ್ಪನವರ ಐದು ದಶಕಗಳ ಹೋರಾಟದ ಹಿನ್ನೋಟವೇ 'ಹಸಿರು ಹಾದಿಯ ಕಥನ' ಎಂಬ ಕೃತಿ. ಬಸವರಾಜಪ್ಪನವರ ಮಾತುಗಳನ್ನು ಗಿರೀಶ್ ತಾಳೀಕಟ್ಟೆ ಹಾಗೂ ಕೆ ಎಲ್ ಅಶೋಕ್ ಅವರು ಸೊಗಸಾಗಿ ನಿರೂಪಿಸುತ್ತಾ ಅಕ್ಷರರೂಪಕ್ಕೆ ಇಳಿಸಿದ್ದಾರೆ. ೮೦ರ ದಶಕದಲ್ಲಿ ಆರಂಭವಾದ ರೈತ ಚಳುವಳಿಯಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದ ಬಸವರಾಜಪ್ಪನವರು ಇಂದಿಗೂ ಅಷ್ಟೇ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ರೈತರ ಮನೆ ಜಪ್ತಿಗೆ ಪ್ರತಿಯಾಗಿ ಬಸವರಾಜಪ್ಪನವರ ನೇತೃತ್ವದಲ್ಲಿ ಭದ್ರಾವತಿಯ ತಹಶೀಲ್ದಾರ್ ಮನೆ ಜಪ್ತಿ ಮಾಡುವ ಹೋರಾಟ ನಡೆದಿತ್ತು. ಅಲ್ಲಿಂದ ಆರಂಭವಾಗಿ ದೆಹಲಿಯಲ್ಲಿ ವಿಶ್ವ ವಾಣಿಜ್ಯ ಸಂಸ್ಥೆ ನಿರ್ದೇಶಕರ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದ್ದರು. ನಾಗಸಮುದ್ರ ಗೋಲೀಬಾರ್ ವಿರುದ್ಧ ಹಲವು ವರ್ಷಗಳ ಕಾಲ…

  • ದೀಪಾ ಹಿರೇಗುತ್ತಿ ಇವರು ಬರೆದ ವ್ಯಕ್ತಿತ್ವ ವಿಕಸನದ ಬರಹಗಳೇ 'ಸೋಲೆಂಬ ಗೆಲುವು' ಈ ಪುಸ್ತಕವನ್ನು ಪ್ರಕಾಶಿಸಿದವರು ವೀರಲೋಕ ಪ್ರಕಾಶನ ಇವರು. ಇದರ ಮಾಲಕರಾದ ವೀರಕಲೋಕ ಶ್ರೀನಿವಾಸ ಇವರು ತಮ್ಮ ಬೆನ್ನುಡಿಯಲ್ಲಿ ಈ ಪುಸ್ತಕ ಪ್ರಕಾಶನದ ಹೇಳಿಕೊಂಡದ್ದು ಹೀಗೆ..." "ನಿಮ್ಮ ನಾಲಿಗೆ ಬಯಸುವ ಚಾಕೋಲೆಟೊಂದು ಸಲೀಸಾಗಿ ನಿಮ್ಮನ್ನು ತಲುಪುವಂತೆ, ನಿಮ್ಮ ಬುದ್ಧಿ ಇಷ್ಟ ಪಡುವ ಪುಸ್ತಕವೊಂದು ನಿಮ್ಮ ಗೂಡಿಗೆ ತಲುಪಿಸಲು ಹರಸಾಹಸ ಪಡಬೇಕಾದ ಸ್ಥಿತಿ ಕನ್ನಡದಲ್ಲಿದೆ. ಅದನ್ನು ಮನಗಂಡು ನೀವು ಇರುವಲ್ಲೇ, ನೀವು ಇಷ್ಟ ಪಡುವ ಪುಸ್ತಕಗಳನ್ನು ನಿಮಗೆ ತಲುಪಿಸುವ ಜವಾಬ್ದಾರಿ ಇನ್ಮುಂದೆ 'ವೀರಲೋಕ ಬುಕ್ಸ್' ಹೊರಲಿದೆ. ನಿಶ್ಚಿಂತೆಯಿಂದ ಓದುವ ಸುಖ ನಿಮ್ಮದಾಗಲಿ.

    ಯುವ ಜನತೆ ಪುಸ್ತಕ…

  • ಈ ಪುಸ್ತಕದ ಒಂದೊಂದೇ ಲೇಖನ ಓದುತ್ತ ಹೋದಂತೆ, ಪರಿಸರ ನಮ್ಮ ಬದುಕನ್ನು ತಟ್ಟುವ ವಿವಿಧ ಪರಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಊರಿಗೆ ಮಂಜೂರಾದ ಮೂರು ಟ್ಯೂಬ್‍ಲೈಟ್‍ಗಳನ್ನು ಗ್ರಾಮ ಪಂಚಾಯತಿಯ ಸದಸ್ಯರ ಮನೆ ಮುಂದೆಯೇ ಹಾಕಬೇಕೆಂದು ಕೆಇಬಿ ಲೈನ್‍ಮನ್‍ಗೆ ತಾಕೀತು ಮಾಡುವ ಒಬ್ಬ  ಗ್ರಾಮ ಪಂಚಾಯತಿ ಸದಸ್ಯನ ಉದಾಹರಣೆಯೊಂದಿಗೆ ಪುಸ್ತಕದ "ಮುನ್ನುಡಿ"ಯನ್ನು ಆರಂಭಿಸುತ್ತಾರೆ ಸಂಪಾದಕರು.

    "ಹಳ್ಳಿಗಳಲ್ಲಿನ ರಾಜಕೀಯ ಮತ್ತು ಇಂದಿನ ಪರಿಸ್ಠಿತಿಗಳ ಬಗ್ಗೆ ಗೊತ್ತಿರುವ ಯಾರೂ ಆ ಕಡೆ ಸುಳಿಯದಂಥ ವಾತಾವರಣ ಸೃಷ್ಠಿಯಾಗಿ ಬಿಟ್ಟಿದೆ......... ಇಂದು ಬಹುಪಾಲು ಎಲ್ಲ ಊರುಗಳು ದ್ವೇಷ, ಅಸೂಯೆ, ಜಗಳಮಯವಾಗಿವೆ. ಹಿಂದೆ ವಿನೋಬಾರ ಶ್ರಮದಾನ ಚಳುವಳಿಯಲ್ಲಿ ಭಾಗವಹಿಸಿ ಕಟ್ಟಿದ ಶಾಲೆ, ಆಸ್ಪತ್ರೆ, ರಸ್ತೆಗಳು ದುರಸ್ತಿ ಕಾಣದೆ ನಿಂತಿವೆ. ಆಗ…