ಪುಸ್ತಕ ಸಂಪದ

  • 'ಸಾರಮತಿ' ಪುಸ್ತಕವು ಸಂಗೀತಕ್ಕೆ ಸಂಬಂಧಿಸಿದ ಕೃತಿ. ಇದರ ಬೆನ್ನುಡಿಯಲ್ಲಿ "ಕಲಾವಿದರಲ್ಲಿ ಶೋಧಿಸುದಕ್ಕಿರುವ ತುಡಿತದ ಕಾರಣವೇನು? ಸಂಪ್ರದಾಯ ಎನ್ನುವಂಥದ್ದು ಕೇವಲ ಅನುಕರಣೆಯಾದಾಗ ಆಗುವ ಸಮಸ್ಯೆ ಎಂಥದ್ದು? ಸೃಷ್ಟಿಶೀಲಮನಸ್ಸುಳ್ಳ, ಪ್ರತಿಭೆಯುಳ್ಳ ಕಲಾವಿದನಲ್ಲಿ ಏಕೆ ಅದು ಪ್ರಶ್ನೆಗಳನ್ನು ಎಬ್ಬಿಸುತ್ತದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಕಳೆದ ಶತಮಾನ ಕಂಡ ಶ್ರೇಷ್ಟ ಸಂಗೀತಗಾರರಲ್ಲಿ ಒಬ್ಬರು ಆಂಧ್ರದ ವೋಲೇಟಿ ವೆಂಕಟೇಶ್ವರಲು, ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಂಪ್ರದಾಯಕ್ಕೊಂದು ವ್ಯಕ್ತಿರೂಪವೆಂದು ಪರಿಗಣಿಸಬಹುದಾದ ಡಾ. ಶ್ರೀಪಾದ ಪಿನಾಕಪಾಣಿಯವರ ಶಿಷ್ಯ. ಇಷ್ಟಾಗಿಯೂ ವೋಲೇಟಿಯವರ ಸಂಗೀತ ತಮ್ಮ ಗುರುಗಳ ಬಾಣಿಗಿಂತ ಭಿನ್ನ ಮತ್ತು ಸ್ವತಂತ್ರ. ಒಂದು ರೈಲು ಪ್ರಯಾಣವನ್ನು ಗಮನಿಸುವುದಾದರೆ, ಅಲ್ಲಿ…

  • ಒಂದು ಸಮಯದಲ್ಲಿ ಪತ್ತೇದಾರಿ ಕಾದಂಬರಿಯನ್ನು ಬರೆಯುವವರ ಸಂಖ್ಯೆ ಬಹಳವಿತ್ತು. ಅವುಗಳನ್ನು ಪ್ರಕಾಶಿಸಲು ಹಾಗೂ ಪ್ರಕಟವಾದ ಬಳಿಕ ಖರೀದಿಸಿ ಓದಲು, ಓದುಗರ ಸಂಖ್ಯೆಯೂ ಸಾಕಷ್ಟಿತ್ತು. ಪತ್ತೇದಾರಿ ಕಾದಂಬರಿಗಳನ್ನು ಪ್ರಕಟ ಮಾಡಲೆಂದೇ ಹಲವಾರು ಮಾಸ ಪತ್ರಿಕೆಗಳಿದ್ದವು, ಕ್ರೈಂ ಕಾದಂಬರಿ, ಸ್ಪೈ, ಡಿಟೆಕ್ಟಿವ್ ಥ್ರಿಲ್ಲರ್ ಮೊದಲಾದ ಪುಸ್ತಕಗಳಿಗೆ ಬಹಳ ಬೇಡಿಕೆ ಇತ್ತು. ಕಾಲಕ್ರಮೇಣ ಮೊಬೈಲ್ ಪ್ರತಿಯೊಬ್ಬರ ಕೈಗೆ ಬಂದಾಗ ಈ ಓದುವ ಹವ್ಯಾಸ ಕಡಿಮೆಯಾಗತೊಡಗಿತು. ಈಗಂತೂ ಮಾರುಕಟ್ಟೆಯಲ್ಲಿ ಒಂದೇ ಒಂದು ಪತ್ತೇದಾರಿ ಕಥೆಗಳಿಗೆ ಮೀಸಲಾದ ಪತ್ರಿಕೆಗಳಿಲ್ಲ. ಆದರೆ ಪತ್ತೇದಾರಿ ಕಾದಂಬರಿ, ಕಥೆಗಳು ಆಗೊಮ್ಮೆ ಈಗೊಮ್ಮೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇವೆ. 

    ಈ ನಿಟ್ಟಿನಲ್ಲಿ…

  • ತೆಲುಗು ಭಾಷೆಯಿಂದ ಅನುವಾದಗೊಂಡಿರುವ ಈ 'ಮೌನಸಾಕ್ಷಿ' ಕಥಾ ಸಂಕಲನದಲ್ಲಿ ಹನ್ನೊಂದು ವೈವಿಧ್ಯಮಯ ಬದುಕಿನ ಕಥೆಗಳಿವೆ. ಇಲ್ಲಿ ಜಟಿಲವಾದ ಘಟ್ಟದಲ್ಲಿ ಮಧ್ಯಮ ವರ್ಗದ ಹೆಣ್ಣೊಬ್ಬಳು ತನ್ನ ಜೀವನದ ಗಮ್ಯವನ್ನು ರೂಪಿಸಿಕೊಳ್ಳುವ ಗಟ್ಟಿನಿಲುವಿನ ಕಥೆ, ಒಂದು ಸಾಮಾಜಿಕ ಧ್ಯೇಯ ಸಾಧನೆಗೆ ಹೋರಾಡುವ ನಿಸ್ವಾರ್ಥ ಮತ್ತು ಸ್ವಾರ್ಥ ಹೋರಾಟಗಾರರ ಭಿನ್ನ ನಿಲುವುಗಳನ್ನು ಅನಾವರಣಗೊಳಿಸುವ, ಮಕ್ಕಳ ಭವಿಷ್ಯತ್ತಿಗಾಗಿ ಭಾರತೀಯ ಮತ್ತು ಅನಿವಾಸಿ ಭಾರತೀಯ ಪೋಷಕರ ಚಿಂತನೆಗೆ ಕನ್ನಡಿ ಹಿಡಿಯುವ, ನಾಗರಿಕತೆ ಮತ್ತು ಮಾನವೀಯತೆಯ ವ್ಯಾಖ್ಯಾನವನ್ನು ಪ್ರಶ್ನಿಸುವ ಹಾಗೂ ಸಾಮಾಜಿಕ ತುಡಿತದ ಎಳೆಯುಳ್ಳ ಕಥೆಗಳಿವೆ. ಅವು ಕಣ್ಣಿಗೆ ಕಟ್ಟುವಂತೆ ನಿರೂಪಣೆಗೊಂಡಿವೆ.

    ತೆಲುಗು ಭಾಷೆಯ ಮೂಲ ಲೇಖಕರಾದ…

  • ಪತ್ರಕರ್ತ ಗಣೇಶ್ ಕಾಸರಗೋಡು ಇವರ ' ಬೆಳ್ಳಿ ತೆರೆಯ ಬಂಗಾರದ ಗೆರೆ' ಪುಸ್ತಕವು ಸಿನೆಮಾ ರಂಗದ ಅಪರೂಪದ ಕಥೆಗಳನ್ನು ನಮ್ಮ ಮುಂದೆ ಹರಡುತ್ತದೆ. ಬಹಳ ಮುದ್ದಾದ ಮುಖಪುಟದೊಂದಿಗೆ ಮೂಡಿ ಬಂದಿರುವ ಪುಸ್ತಕವು ಅತ್ಯಂತ ಸುಂದರವಾಗಿ ಕನ್ನಡ ಚಿತ್ರರಂಗದ ಅಂತರಾಳವನ್ನು ಬಿಚ್ಚಿಡುತ್ತಾಹೋಗುತ್ತದೆ. ಪತ್ರಕರ್ತರಾದ ಡಾ। ಶರಣು ಹುಲ್ಲೂರು ಇವರು ಬೆನ್ನುಡಿಯನ್ನು ಬರೆದಿದ್ದಾರೆ. ತಮ್ಮ ನುಡಿಯಲ್ಲಿ ಅವರು "ದೂರದಿಂದ ಇವರು ಸಂಜೆ ಆಕಾಶ. ಹಲವು ರೀತಿಯ ಆಕಾರ. ಆಕರ, ಚಿತ್ತಾರ. ಕೆಲವರಿಗೆ ಉರಿವ ಜಮದಗ್ನಿ. ಹಿಡಿದರೆ ಬಿಡದ ವಿಶ್ವಾಮಿತ್ರ. ಬಲ್ಲವರಿಗೆ ಹಿರಿಯಣ್ಣ ಮಾರ್ಗದರ್ಶಿ. ಉರಿವ ದೀಪದಲ್ಲಿನ ಬೆಳಗು. ಬೆಳಕು ಆಯ್ಕೆ ನಿಮ್ಮದು. 

    ಸಿನೆಮಾ ಪತ್ರಕರ್ತರಿಗೆ ಗಾಸಿಪ್. ಗ್ಲಾಮರ್ ಹೊರತಾಗಿ…

  • ಕೃಷಿ ಪತ್ರಕರ್ತರಾದ ರಾಧಾಕೃಷ್ಣ ಹೊಳ್ಳ ಇವರು ತಾವು ಬಾಳೆ ಬೆಳೆಯ ಬಗ್ಗೆ ಬರೆದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಇವರ ಈ ಪ್ರಯತ್ನಕ್ಕೆ ಸಹಕಾರ ನೀಡಿದ್ದಾರೆ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಪಿ ವಿ ಹೇರಳೆ ಇವರು. ಬಾಳೆ ಬೆಳೆಯ ಬಗ್ಗೆ ಸಮಗ್ರವಾದ ವಿಷಯವನ್ನು ತಿಳಿಸಿಕೊಡುವ ಒಂದು ಕೈಪಿಡಿ ಈ ಪುಸ್ತಕ ಎಂದರೆ ತಪ್ಪಾಗಲಾರದು. 

    ಬಾಳೆ ಬೆಳೆಯ ಪರಿಚಯದಿಂದ ಪ್ರಾರಂಭಿಸಿ ಅದರ ತಳಿ ವೈವಿಧ್ಯಗಳು, ಬೇಸಾಯ ಕ್ರಮ, ನೆಡು ಸಾಮಾಗ್ರಿ, ಅಧಿಕ ಇಳುವರಿಗೆ ಗೊಬ್ಬರಗಳ ಬಳಕೆ, ಸುಧಾರಿತ ಬಾಳೆ ಬೇಸಾಯದ ಕ್ರಮ, ಬಾಳೆಯೊಂದಿಗೆ ಬೆಳೆಯಬಹುದಾದ ಮಿಶ್ರ ಬೆಳೆಗಳು, ಅಧಿಕ ಸಾಂದ್ರ ಬೇಸಾಯ, ಬಾಳೆ ಬೆಳೆಯ ಆರ್ಥಿಕತೆ, ನೀರಾವರಿ, ಬೆಳೆಯನ್ನು ಸಂರಕ್ಷಿಸುವ…

  • ವಿಶಿಷ್ಟ, ವಿನೂತನ ಪುಸ್ತಕಗಳ ಸರಮಾಲೆಗಳನ್ನು ಹೊರತರುತ್ತಿರುವ ಅಯೋಧ್ಯಾ ಪ್ರಕಾಶನವು ರೋಹಿತ್ ಚಕ್ರತೀರ್ಥ ಅವರ 'ನೂರಾರು ಯಹೂದಿ ಕಥೆಗಳು' ಎಂಬ ಪುಟ್ಟ ಪುಸ್ತಕವನ್ನು ಹೊರತಂದಿದೆ. ಯಹೂದಿ ಕಥೆಗಳನ್ನು ನೀವು ಅಲ್ಲೊಂದು ಇಲ್ಲೊಂದು ಓದಿರಬಹುದು. ಆದರೆ ಒಂದೇ ಗುಕ್ಕಿಗೆ ಇಷ್ಟೊಂದು ಕಥೆಗಳನ್ನು ಓದುವ ಅವಕಾಶ ಸಿಗುವುದು ಅಪರೂಪ. ನೂರ ಆರು ಕಥೆಗಳನ್ನು 'ಮಂದಹಾಸ ಮಿನುಗಿಸುವ ನಗೆಮಿಂಚುಗಳು' ಎಂದು ಲೇಖಕರು ಕರೆದಿದ್ದಾರೆ.

    ರೋಹಿತ್ ಚಕ್ರತೀರ್ಥ ಇವರು ತಮ್ಮ ಮುನ್ನುಡಿಯಲ್ಲಿ ಯಹೂದ್ಯರ ಜನಪದ ಕತೆಗಳ ಹಾಸ್ಯ - ಹಾಲಿನ ಮೇಲೆ ತೇಲುವ ತಿಳಿ ಕೆನೆಯ ಮಾದರಿಯದು. ಅಲ್ಲಿ ಧರ್ಮಗುರುವಿನ ಪೀಠದಲ್ಲಿ ಕೂತರೂ ಅದರ ಬಿಗುಮಾನವಿಲ್ಲದೆ ಹಾಸ್ಯ ಚಟಾಕಿ ಹಾರಿಸುವ, ತನ್ನ ಪೆದ್ದುತನದಿಂದಲೇ ಜನಕ್ಕೆ ಹತ್ತಿರವಾಗುವ ರಬೈ ಇದ್ದಾನೆ. ಪೆದ್ದು ಶಿಖಾಮಣಿಗಳ ನಡುವೆ…

  • ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಹಲವಾರು ಪುಸ್ತಕಗಳು ಈಗಾಗಲೇ ಹೊರಬಂದಿವೆ. ಆದರೆ 'ಕ್ಷತ್ರಿಯ ಕುಲಾವತಂಸ' ಎಂಬ ಈ ಹೊಸ ಕೃತಿ ಶಿವಾಜಿಯ ಭಿನ್ನ ವ್ಯಕ್ತಿತ್ವವನ್ನು ವಿಭಿನ್ನ ದೃಷ್ಟಿಕೋನದಿಂದ ಬಿಂಬಿಸುತ್ತದೆ. ಲೇಖಕಿ ಶೋಭಾ ರಾವ್ ಅವರು ಈ ಕೃತಿಯನ್ನು ಹುಲಿಯ ಹೆಜ್ಜೆಯ ಗುರುತು... ಎಂದು ಹೆಸರಿಸಿದ್ದಾರೆ. ಖ್ಯಾತ ಲೇಖಕ ಸೇತುರಾಮ್ ಅವರು ತಮ್ಮ ಮುನ್ನುಡಿಯಲ್ಲಿ ".... ಸಹಜವಾಗಿ ಇಲ್ಲಿಯ ಜನ ಸಮುದಾಯ ದಾಸ್ಯ ಮನಸ್ಥಿತಿಯಲ್ಲಿಯೇ ಮುಂದುವರೆದಿದೆ. ಆಳುವವರಿಗೆ ಅವಶ್ಯಕತೆ ಕಂಡಿಲ್ಲ. ಹಾಗಾಗಿ ಆಳ್ವಿಕೆಗೆ ಒಳಗಾದವರು ಪ್ರಬುದ್ಧರು ಅನ್ನೋದೇ ಆದರೆ, ಸತ್ಯ ಇತಿಹಾಸದ ದಾಖಲಾತಿ ಜನ ಸಮುದಾಯದ ಜವಾಬ್ದಾರಿ ಆಗುತ್ತೆ. ಈ ನಿಟ್ಟಿನಲ್ಲಿ ಶ್ರೀಮತಿ ಶೋಭಾ ರಾವ್ ಅವರ ಸಫಲ ಪ್ರಯತ್ನ ಛತ್ರಪತಿ ಶಿವಾಜಿಯ ಬದುಕು, ಘಟನೆಗಳು…

  • 'ಭಾರತೀಯ ವೈದ್ಯ ವಿದ್ಯೆಯ ಪಿತಾಮಹ ಸುಶ್ರುತ' ಎಂಬ ಸೊಗಸಾದ ಮಾಹಿತಿಪೂರ್ಣ ಪುಸ್ತಕವನ್ನು ಬರೆದಿದ್ದಾರೆ ಬೆಂಗಳೂರಿನ ಮೀರಾ ಬಿ ಕೆ ಇವರು. "ರೋಗಿಗೆ ದ್ರಾಕ್ಷಾ ರಸ ಕುಡಿಸಿ ಪ್ರಜ್ಞೆ ತಪ್ಪಿಸಿ, ಆತನ ಕೆನ್ನೆಯ ಭಾಗವನ್ನೇ ಕೊಯ್ದು ತೆಗೆದು, ಹರಿದ ಮೂಗಿನ ಮೇಲಿಟ್ಟು, ಯಶಸ್ವಿಯಾಗಿ 'ಸುರೂಪ ಶಸ್ತ್ರಚಿಕಿತ್ಸೆ' ಮಾಡಿ, 'ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆಯ ಪಿತಾಮಹ' ನೆಂದೇ ಹೆಸರಾದ ಮಹಾವೈದ್ಯ ಸುಶ್ರುತ. ಎರಡುವರೆ ಸಾವಿರ ವರ್ಷಗಳಿಗೆ ಹಿಂದೆಯೇ ವೈದ್ಯಶಾಸ್ತ್ರದ ಇಂತಹ ಅದ್ಭುತವನ್ನು ಮಾಡಿತೋರಿಸಿದ ಈತ ಭಾರತೀಯನೆನ್ನುವುದು ಹೆಮ್ಮೆಯ ವಿಷಯ. ಸುಶ್ರುತನ ಪ್ರಖ್ಯಾತ 'ಸುಶ್ರುತ ಸಂಹಿತೆ' ಯ ಪರಿಚಯದೊಂದಿಗೆ ಆಯುರ್ವೇದದ ಉಗಮ, ವಿಕಾಸಗಳನ್ನೂ ಸಂಕ್ಷಿಪ್ತವಾಗಿ ಈ ಕೃತಿಯಲ್ಲಿ ಪರಿಚಯ ಮಾಡಿಕೊಡಲಾಗಿದೆ. ವಿಜ್ಞಾನ ದೀಪಮಾಲೆ…

  • ಸೋದೆ ಸದಾಶಿವರಾಯರ ನಿಗೂಢ ಆತ್ಮಕಥನವಾದ 'ಅನುರಾಯ ಶಾಲ್ಮಲೆ' ಇದರ ಲೇಖಕರು ಖ್ಯಾತ ಇತಿಹಾಸಕಾರರೂ, ವಾಗ್ಮಿಗಳೂ ಆದ ಡಾ. ಲಕ್ಷ್ಮೀಶ್ ಹೆಗಡೆ ಸೋಂದಾ ಇವರು. ಇವರು ಕಳೆದ ೧೫ ವರ್ಷಗಳಿಂದ ಇತಿಹಾಸ ಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನು ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿದ್ದಾರೆ. 

    "'ಅನುರಾಯ ಶಾಲ್ಮಲೆ' ಎಂಬ ಈ ಐತಿಹಾಸಿಕ ಕಾದಂಬರಿಯ ಮೂಲವಸ್ತು ಸದಾಶಿವರಾಯ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋದೆ ಎಂಬ ಪ್ರದೇಶವನ್ನು ಕ್ರಿ ಶ ೧೬೭೮ರಿಂದ ೧೭೧೮ರವರೆಗೆ ಆಳ್ವಿಕೆ ಮಾಡಿದ ಪರಾಕ್ರಮಿ, ಸಾಹಿತಿ, ಸಂಗೀತ ಪ್ರೇಮಿ ಅರಸ. ಈತನ ಶ್ರೇಷ್ಟ ಸಾಧನೆಯೆಂದರೆ ಕ್ರಿ ಶ.೧೬೮೦ರಲ್ಲೇ ದೇಶದಲ್ಲಿ ಮೊದಲ ಬಾರಿಗೆ…

  • ಕಥೆಗಾರ, ಪತ್ರಕರ್ತ ರವೀಂದ್ರ ಶೆಟ್ಟಿ ಕುತ್ತೆತ್ತೂರು ಇವರ ಎರಡನೇ ಕಥಾ ಸಂಕಲನವೇ 'ಅಂತಿಮವಾದ'. ಕರ್ಮವೀರ, ಹೊಸದಿಗಂತ, ಕುಂದಪ್ರಭ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾದ ಹತ್ತು ಕಥೆಗಳು ಈ ಸಂಕಲನದಲ್ಲಿವೆ. ಈ ಕಥಾ ಸಂಕಲನದಲ್ಲಿ ಅಂತಿಮವಾದ, ದೊಡ್ಮನೆ ನಾಯಿ, ಆಧುನಿಕ ಭಸ್ಮಾಸುರ, ಸೀಮಾ, ತೀರಗಳು, ಕೊರಡು ಕೊನರುವುದೇ?, ಬಲಿ, ದಾರಿ ತೋರಿಸಿದಾಕೆ, ಭ್ರಮೆ, ಹೀಗೊಬ್ಬ ಕಥೆಗಾರ ಎಂಬ ಹತ್ತು ಕಥೆಗಳಿವೆ.

    ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಖ್ಯಾತ ಸಾಹಿತಿ ಅಮೃತ ಸೋಮೇಶ್ವರ. ಇವರು ತಮ್ಮ ನುಡಿಯಲ್ಲಿ "ಕನ್ನಡದಲ್ಲಿ ಪಂಜೆ ಮಂಗೇಶರಾಯರಿಂದ ತೊಡಗಿದ ಆಧುನಿಕ ಸಣ್ಣ ಕತೆಗಳ ಪರಂಪರೆ ಹರಿಗಡಿಯದೆ ಮುಂದುವರಿದಿದ್ದು, ಪ್ರಮಾಣ, ವೈವಿಧ್ಯ, ಸತ್ವ, ಮೌಲ್ಯಗಳಲ್ಲಿ ಯಾವುದೇ ಇತರ ಭಾಷೆಯ…