ಪುಸ್ತಕ ಸಂಪದ

  • ನೀರಿನ ಮೌಲ್ಯ ಗೊತ್ತಾಗುವುದು ಅದರ ಕೊರತೆಯಾದಾಗಲೇ. ಇದನ್ನು ಇಸ್ರೇಲ್ ದೇಶದವರು ಚೆನ್ನಾಗಿ ಅರಿತುಕೊಂಡಿದ್ದಾರೆ. ಹೇಳಿ ಕೇಳಿ ಇಸ್ರೇಲ್ ದೇಶದ ಬಹುಪಾಲು ಭೂಮಿ ಮರಳುಗಾಡು. ಮಳೆಯಾಗುವುದು ಬಹಳ ಕಡಿಮೆ. ಆದರೂ ನೀರಾವರಿ ತಂತ್ರಜ್ಞಾನ, ಕೃಷಿಯಲ್ಲಿ ಅವರು ಬಹಳ ಮುಂದುವರಿದಿದ್ದಾರೆ. ಇಸ್ರೇಲ್ ಜನರ ನೀರಾವರಿ ತಂತ್ರಗಳ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿವೆ. ಅಂತಹದ್ದೇ ಒಂದು ಪುಸ್ತಕ 'ನಾಳೆಗೂ ಇರಲಿ ನೀರು' ಇದು ಜಲದಾಹದಿಂದ ತತ್ತರಿಸುತ್ತಿರುವ ಜಗತ್ತಿಗೆ ಇಸ್ರೇಲ್ ನ ಪರಿಹಾರ ಎಂದಿದ್ದಾರೆ ಲೇಖಕರು. 

    ಹಲವಾರು ಬಾರಿ ಇಸ್ರೇಲ್ ಗೆ ಹೋಗಿ ಬಂದಿರುವ, ಇಸ್ರೇಲ್ ಬಗ್ಗೆ ಪುಸ್ತಕವನ್ನೂ ಬರೆದಿರುವ ಪತ್ರಕರ್ತ, ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರು…

  • 'ಸುಡು ಬಯಲು' ಎನ್ನುವುದು ಒಂದು ಅಂಕಣ ಬರಹಗಳ ಸಂಗ್ರಹ. ೭೨ ಬರಹಗಳು ಈ ಪುಸ್ತಕದಲ್ಲಿವೆ. ಈ ಪುಸ್ತಕವು ಕೊರೊನಾ ಸಾಂಕ್ರಾಮಿಕದ ಸಮಯದ ಜನರ ತಲ್ಲಣಗಳು, ವೈದ್ಯರ ಶ್ರಮ, ಮಾಧ್ಯಮದವರ ಅತಿರೇಕ ಎಲ್ಲವುದರ ಕುರಿತು ಬೆಳಕು ಚೆಲ್ಲುತ್ತದೆ. ಅದಕ್ಕೇ ಮಣಿ ಅವರು ಪುಸ್ತಕದ ಮುಖಪುಟದಲ್ಲೇ 'ಸತ್ಯಾನ್ವೇಷಣೆಯ ಬೆನ್ನೇರಿ...' ಎಂದು ಮುದ್ರಿಸಿದ್ದಾರೆ. ಪತ್ರಕರ್ತರಾಗಿರುವ ಮಣಿ ಅವರು ಕೊರೊನಾ ಸಂದರ್ಭದ ವಾಸ್ತವಾಂಶಗಳನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. 

    ಬೆಂಗಳೂರಿನ ಹಿರಿಯ ಪತ್ರಕರ್ತರೂ, ರೆಡ್ ಕ್ರಾಸ್ ಸೊಸೈಟಿಯ ಮಾಜಿ ಅಧ್ಯಕ್ಷರೂ ಆಗಿರುವ ಎಸ್. ನಾಗಣ್ಣ ಇವರು ಪುಸ್ತಕ ಬೆನ್ನುಡಿ ಬರೆಯುತ್ತಾ ಹೇಳುತ್ತಾರೆ "ಕಳೆದೆರಡು ವರ್ಷಗಳಿಂದ ಕೊರೋನಾ ಎಂಬ ಕಾಣದ ವೈರಾಣು…

  • ರೈತ ಹೋರಾಟಗಾರ ಹೆಚ್ ಆರ್ ಬಸವರಾಜಪ್ಪನವರ ಐದು ದಶಕಗಳ ಹೋರಾಟದ ಹಿನ್ನೋಟವೇ 'ಹಸಿರು ಹಾದಿಯ ಕಥನ' ಎಂಬ ಕೃತಿ. ಬಸವರಾಜಪ್ಪನವರ ಮಾತುಗಳನ್ನು ಗಿರೀಶ್ ತಾಳೀಕಟ್ಟೆ ಹಾಗೂ ಕೆ ಎಲ್ ಅಶೋಕ್ ಅವರು ಸೊಗಸಾಗಿ ನಿರೂಪಿಸುತ್ತಾ ಅಕ್ಷರರೂಪಕ್ಕೆ ಇಳಿಸಿದ್ದಾರೆ. ೮೦ರ ದಶಕದಲ್ಲಿ ಆರಂಭವಾದ ರೈತ ಚಳುವಳಿಯಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದ ಬಸವರಾಜಪ್ಪನವರು ಇಂದಿಗೂ ಅಷ್ಟೇ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ರೈತರ ಮನೆ ಜಪ್ತಿಗೆ ಪ್ರತಿಯಾಗಿ ಬಸವರಾಜಪ್ಪನವರ ನೇತೃತ್ವದಲ್ಲಿ ಭದ್ರಾವತಿಯ ತಹಶೀಲ್ದಾರ್ ಮನೆ ಜಪ್ತಿ ಮಾಡುವ ಹೋರಾಟ ನಡೆದಿತ್ತು. ಅಲ್ಲಿಂದ ಆರಂಭವಾಗಿ ದೆಹಲಿಯಲ್ಲಿ ವಿಶ್ವ ವಾಣಿಜ್ಯ ಸಂಸ್ಥೆ ನಿರ್ದೇಶಕರ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದ್ದರು. ನಾಗಸಮುದ್ರ ಗೋಲೀಬಾರ್ ವಿರುದ್ಧ ಹಲವು ವರ್ಷಗಳ ಕಾಲ…

  • ದೀಪಾ ಹಿರೇಗುತ್ತಿ ಇವರು ಬರೆದ ವ್ಯಕ್ತಿತ್ವ ವಿಕಸನದ ಬರಹಗಳೇ 'ಸೋಲೆಂಬ ಗೆಲುವು' ಈ ಪುಸ್ತಕವನ್ನು ಪ್ರಕಾಶಿಸಿದವರು ವೀರಲೋಕ ಪ್ರಕಾಶನ ಇವರು. ಇದರ ಮಾಲಕರಾದ ವೀರಕಲೋಕ ಶ್ರೀನಿವಾಸ ಇವರು ತಮ್ಮ ಬೆನ್ನುಡಿಯಲ್ಲಿ ಈ ಪುಸ್ತಕ ಪ್ರಕಾಶನದ ಹೇಳಿಕೊಂಡದ್ದು ಹೀಗೆ..." "ನಿಮ್ಮ ನಾಲಿಗೆ ಬಯಸುವ ಚಾಕೋಲೆಟೊಂದು ಸಲೀಸಾಗಿ ನಿಮ್ಮನ್ನು ತಲುಪುವಂತೆ, ನಿಮ್ಮ ಬುದ್ಧಿ ಇಷ್ಟ ಪಡುವ ಪುಸ್ತಕವೊಂದು ನಿಮ್ಮ ಗೂಡಿಗೆ ತಲುಪಿಸಲು ಹರಸಾಹಸ ಪಡಬೇಕಾದ ಸ್ಥಿತಿ ಕನ್ನಡದಲ್ಲಿದೆ. ಅದನ್ನು ಮನಗಂಡು ನೀವು ಇರುವಲ್ಲೇ, ನೀವು ಇಷ್ಟ ಪಡುವ ಪುಸ್ತಕಗಳನ್ನು ನಿಮಗೆ ತಲುಪಿಸುವ ಜವಾಬ್ದಾರಿ ಇನ್ಮುಂದೆ 'ವೀರಲೋಕ ಬುಕ್ಸ್' ಹೊರಲಿದೆ. ನಿಶ್ಚಿಂತೆಯಿಂದ ಓದುವ ಸುಖ ನಿಮ್ಮದಾಗಲಿ.

    ಯುವ ಜನತೆ ಪುಸ್ತಕ…

  • ಈ ಪುಸ್ತಕದ ಒಂದೊಂದೇ ಲೇಖನ ಓದುತ್ತ ಹೋದಂತೆ, ಪರಿಸರ ನಮ್ಮ ಬದುಕನ್ನು ತಟ್ಟುವ ವಿವಿಧ ಪರಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಊರಿಗೆ ಮಂಜೂರಾದ ಮೂರು ಟ್ಯೂಬ್‍ಲೈಟ್‍ಗಳನ್ನು ಗ್ರಾಮ ಪಂಚಾಯತಿಯ ಸದಸ್ಯರ ಮನೆ ಮುಂದೆಯೇ ಹಾಕಬೇಕೆಂದು ಕೆಇಬಿ ಲೈನ್‍ಮನ್‍ಗೆ ತಾಕೀತು ಮಾಡುವ ಒಬ್ಬ  ಗ್ರಾಮ ಪಂಚಾಯತಿ ಸದಸ್ಯನ ಉದಾಹರಣೆಯೊಂದಿಗೆ ಪುಸ್ತಕದ "ಮುನ್ನುಡಿ"ಯನ್ನು ಆರಂಭಿಸುತ್ತಾರೆ ಸಂಪಾದಕರು.

    "ಹಳ್ಳಿಗಳಲ್ಲಿನ ರಾಜಕೀಯ ಮತ್ತು ಇಂದಿನ ಪರಿಸ್ಠಿತಿಗಳ ಬಗ್ಗೆ ಗೊತ್ತಿರುವ ಯಾರೂ ಆ ಕಡೆ ಸುಳಿಯದಂಥ ವಾತಾವರಣ ಸೃಷ್ಠಿಯಾಗಿ ಬಿಟ್ಟಿದೆ......... ಇಂದು ಬಹುಪಾಲು ಎಲ್ಲ ಊರುಗಳು ದ್ವೇಷ, ಅಸೂಯೆ, ಜಗಳಮಯವಾಗಿವೆ. ಹಿಂದೆ ವಿನೋಬಾರ ಶ್ರಮದಾನ ಚಳುವಳಿಯಲ್ಲಿ ಭಾಗವಹಿಸಿ ಕಟ್ಟಿದ ಶಾಲೆ, ಆಸ್ಪತ್ರೆ, ರಸ್ತೆಗಳು ದುರಸ್ತಿ ಕಾಣದೆ ನಿಂತಿವೆ. ಆಗ…

  • ನವಕರ್ನಾಟಕ ಪ್ರಕಾಶನ ಇವರು ಹೊರತರುತ್ತಿರುವ 'ವಿಶ್ವ ಮಾನ್ಯರು' ಮಾಲಿಕೆಯಲ್ಲಿ ಹೊರಬಂದ ಕೃತಿಯೇ ನಕ್ಷತ್ರಗಳ ಭವಿಷ್ಯಕಾರ 'ಸುಬ್ರಹ್ಮಣ್ಯನ್ ಚಂದ್ರಶೇಖರ್'. ಈ ಮಾಲಿಕೆಯ ಸಂಪಾದಕರು ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಹಾಗೂ ಕೃತಿಯ ಲೇಖಕರು ವಿಜ್ಞಾನ ಬರಹಗಾರರಾದ ರೋಹಿತ್ ಚಕ್ರತೀರ್ಥ ಇವರು. ರೋಹಿತ್ ಅವರು ಕನ್ನಡದಲ್ಲಿ ವಿಜ್ಞಾನ-ಗಣಿತ ಬರಹಗಾರರ ಸಂಖ್ಯೆ ಕಡಿಮೆ ಎಂಬ ಕೊರತೆಯನ್ನು ನೀಗಿಸಿದವರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರ ಹಲವಾರು ಪುಸ್ತಕಗಳನ್ನು ನವಕರ್ನಾಟಕ ಪ್ರಕಾಶನ ಹೊರ ತಂದಿದೆ.

    ಸುಬ್ರಹ್ಮಣ್ಯನ್ ಚಂದ್ರಶೇಖರ್ ಪುಸ್ತಕದ ಮೊದಲ ಸಾಲುಗಳಲ್ಲಿ ಚಕ್ರತೀರ್ಥ ಅವರು ಹೀಗೆ ಬರೆಯುತ್ತಾರೆ "ಸುಬ್ರಹ್ಮಣ್ಯನ್ ಚಂದ್ರಶೇಖರ್ ೧೯ ವರ್ಷದ ಹುಡುಗ. ಭಾರತದಿಂದ…

  • ಸಾಮಾಜಿಕ ಕಳಕಳಿಯ ಧೀಮಂತ ವಿಜ್ಞಾನಿ 'ಸತೀಶ್ ಧವನ್' ಎಂಬ ಪುಸ್ತಕವನ್ನು 'ವಿಶ್ವಮಾನ್ಯರು' ಪ್ರಕಟಣೆಯ ಅಡಿಯಲ್ಲಿ ಮುದ್ರಿಸಿ ಹೊರತಂದಿದ್ದಾರೆ ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಇವರು. ವಿಶ್ವಮಾನ್ಯರು ಸರಣಿಯ ಸಂಪಾದಕರು ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಇವರು. ಸತೀಶ್ ಧವನ್ ಬಗ್ಗೆ ಸೊಗಸಾದ ಮಾಹಿತಿ ಬರೆದಿದ್ದಾರೆ ಡಾ ಬಿ ಆರ್ ಗುರುಪ್ರಸಾದ್ ಇವರು. ಬಾಹ್ಯಾಕಾಶ ಮತ್ತು ಖಗೋಳ ವಿಜ್ಞಾನದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿರುವ ಗುರುಪ್ರಸಾದ್ ಇವರು ೩೭ ವರ್ಷ ಇಸ್ರೋದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದಂತೆ ಐದು ನೂರಕ್ಕೂ ಲೇಖನಗಳು ಹಾಗೂ ಉಪನ್ಯಾಸಗಳನ್ನು ನೀಡಿದ್ದಾರೆ.

    ನಮ್ಮ ಭಾರತೀಯ ಉದ್ಯಮ ಕ್ಷೇತ್ರದ ಮೇರು ಶಿಖರ ಜೆ ಆರ್ ಡಿ ಟಾಟಾ…

  • ರಮೇಶ್ ಅರವಿಂದ್ ಕನ್ನಡದ ಖ್ಯಾತ ಚಲನಚಿತ್ರ ನಟರು, ನಿರ್ದೇಶಕರು ಹಾಗೂ ಕಿರುತೆರೆಯ ಕಾರ್ಯಕ್ರಮ ನಿರೂಪಕರು ಎಂಬ ಸಂಗತಿ ನಿಮಗೆ ಗೊತ್ತೇ ಇದೆ. ಕಿರುತೆರೆಯಲ್ಲಿ 'ವೀಕೆಂಡ್ ವಿದ್ ರಮೇಶ್' ಹಾಗೂ 'ಪ್ರೀತಿಯಿಂದ ರಮೇಶ್' ಮೊದಲಾದ ಕಾರ್ಯಕ್ರಮಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ರಮೇಶ್ ಅವರ ಲೇಖನಿಯಿಂದ ಮೂಡಿಬಂದ 'ಆರ್ಟ್ ಆಫ್ ಸಕ್ಸಸ್' ಪುಸ್ತಕವನ್ನು ವೀರಲೋಕ ಬುಕ್ಸ್ ಪ್ರಕಾಶನ ಸಂಸ್ಥೆಯವರು ಬಿಡುಗಡೆಗೊಳಿಸಿದ್ದಾರೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ೧೬೦ ಟಿಪ್ಸ್ ಗಳು ಈ ಪುಸ್ತಕದಲ್ಲಿ ಅಡಕವಾಗಿವೆ. 

    ವೀರಲೋಕ ಪ್ರಕಾಶನದ ಪರವಾಗಿ ಮಾಲಕರಾದ ವೀರಕಪುತ್ರ ಶ್ರೀನಿವಾಸ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡದ್ದು ಹೀಗೆ "ನಿಮ್ಮ ನಾಲಿಗೆ ಬಯಸುವ ಚಾಕೋಲೆಟೊಂದು…

  • "ಸುಬ್ಬರಾಯರು ನಮ್ಮೂರಿನ ಹಿರಿಯರು, ಶತಾಯುಷಿಗಳು. ಅವರಿಗೆ ಈಗ ೧೦೩ ವರ್ಷ. .... ನೂರರ ಮೇಲೆ ಮೂರಾದರೂ ಲವಲವಿಕೆಯಿಂದ ಓಡಾಡಿಕೊಂಡಿರುವ ಒಂದೇ ಕಾರಣದಿಂದ ಅವರು ನಮ್ಮೂರಿನ ಆಕರ್ಷಣೆಯ ಕೇಂದ್ರ" ಎಂದು ಆರಂಭವಾಗುತ್ತದೆ ಮೊದಲ ಅಧ್ಯಾಯ, "ಮರಗಳ ಒಡನಾಟ."

    ಅದರ ಎರಡನೇ ಪಾರಾದಲ್ಲೇ ಈ ಪ್ರಶ್ನೆ ಎತ್ತುತ್ತಾರೆ, ಲೇಖಕರಾದ ಎಚ್. ಆರ್. ಕೃಷ್ಣಮೂರ್ತಿಯವರು, "ನೂರು ವಸಂತಗಳನ್ನು ಕಂಡ ಸುಬ್ಬರಾಯರೇ ಇಂತಹ ಆಕರ್ಷಣೆಯ ಕೇಂದ್ರವಾದರೆ, ನೂರಾರು ಸಾವಿರಾರು ವರ್ಷಗಳಾದರೂ ಆರೋಗ್ಯಪೂರ್ಣವಾಗಿ ಬದುಕುತ್ತಿರುವ ಜೀವಿಗಳನ್ನು ನಾವು ಹೇಗೆ ಕಾಣಬೇಕು?" "ಎಲ್ಲಿವೆ ಅಂಥ ಜೀವಿಗಳು?" ಎಂಬ ಪ್ರಶ್ನೆಗೆ ಉತ್ತರವಾಗಿ ಸಾವಿರಾರು ವರುಷ ಬದುಕಿರುವ ಮರಗಳನ್ನು ಉದಾಹರಿಸುತ್ತಾರೆ: (1) ಡೆಹ್ರಾಡೂನಿನ ಅರಣ್ಯ ಸಂಶೋಧನಾ ಸಂಸ್ಠೆಯ ಆವರಣದಲ್ಲಿರುವ ದೇವದಾರು ಮರ. ಇದು…

  • ಮಗ - ಸೊಸೆ ಸಂಪಾದಿಸಿದ ಕೃತಿ "ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ"

    "ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ", ದಿ | ಕೆ. ಎಸ್. ಪದ್ಮನಾಭ ಆಚಾರ್ಯ ಅವರ ಪುತ್ರ ಕಡಿಯಾಳಿ ಬಾಲಕೃಷ್ಣ ಆಚಾರ್ಯ ಹಾಗೂ ಸೊಸೆ ಶ್ರೀಮತಿ ವಾಣಿ ಬಿ. ಆಚಾರ್ಯ ಅವರು ಜಂಟಿಯಾಗಿ ಜವಾಬ್ದಾರಿ ವಹಿಸಿಕೊಂಡು ಸಂಪಾದಿಸಿ ತಮ್ಮದೇ ಆದ " ಸೌರಭ ಪ್ರಕಾಶನ, ಕೊರಂಗ್ರಪಾಡಿ, ಉಡುಪಿ" ಇದರ ಮೂಲಕ ಪ್ರಕಟಿಸಿದ ಕೃತಿ.

    ಕಡಿಯಾಳಿ ಬಾಲಕೃಷ್ಣ ಆಚಾರ್ಯರು ಬಹುಮುಖ ಸಾಧಕರಾಗಿ ಪ್ರಸಿದ್ಧಿ ಪಡೆದವರು. ಇವರ ಪತ್ನಿ ವಾಣಿ ಬಿ. ಆಚಾರ್ಯ ಅವರು ಸಹ ಪ್ರತಿಭಾ ಸಂಪನ್ನೆ. ಇವರೀರ್ವರೂ ಸಹ…