ಪುಸ್ತಕ ಸಂಪದ

  • ಪೆನ್ ಗ್ವಿನ್ ಬುಕ್ಸ್ ಪ್ರಕಾಶನ ಸಂಸ್ಥೆಯವರು ಆಂಗ್ಲ ಭಾಷೆಯಲ್ಲಿ ಪ್ರಕಟಿಸಿದ ‘ಬ್ಲ್ಯಾಕ್ ಫ್ರೈಡೇ’ ಎಂಬ ನೈಜ ಘಟನಾಧಾರಿತ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಖ್ಯಾತ ಪತ್ರಕರ್ತರಾದ ರವಿ ಬೆಳಗೆರೆ ಇವರು. ಈ ಪುಸ್ತಕದ ಮೂಲ ವಸ್ತು ಮುಂಬಯಿನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಮತ್ತು ಆ ನಂತರ ನಡೆದ ಘಟನಾವಳಿಗಳ ವಿವರಗಳು ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. 

    ಈ ಬಗ್ಗೆ ರವಿ ಬೆಳಗೆರೆಯವರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ “ಭಾರತವೆಂಬ ಮಹಾದೈತ್ಯ. ಸಾತ್ವಿಕ ಶಕ್ತಿಯ ಕರಡಿಗೆ ಮೈಯೆಲ್ಲ ಗಾಯ. ಹಾಗೆ ಗಾಯ ಮಾಡಿ ಮಾಡಿ, ನೆತ್ತರು ಹರಿಸಿ ಹರಿಸಿಯೇ ಭಾರತವನ್ನು ನಿಶ್ಯಕ್ತಗೊಳಿಸುವುದು ಪಾಕಿಸ್ತಾನವೆಂಬ ಕ್ಷುದ್ರರಾಷ್ಟ್ರದ ಹುನ್ನಾರ, ಅಂಥದ್ದೊಂದು…

  • ಜ್ಞಾನಪೀಠ ಪ್ರಶಸ್ತಿ ಪಡೆದ ಐವರು (೧೯೯೧ರ ವರೆಗೆ) ಕನ್ನಡ ಸಾಹಿತಿಗಳ ಸಮಗ್ರ ಮಾಹಿತಿಯನ್ನು ನೀಡುವ ಪುಸ್ತಕವೇ ಎಸ್. ಮಹಾಬಲೇಶ್ವರ ಇವರು ಬರೆದ ‘ಕನ್ನಡದ ಭಾಗ್ಯಶಿಲ್ಪಿಗಳು'. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ ಕುವೆಂಪು, ದ ರಾ ಬೇಂದ್ರೆ, ಶಿವರಾಮ ಕಾರಂತ, ವಿನಾಯಕ ಕೃಷ್ಣ ಗೋಕಾಕ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಬದುಕು ಹಾಗೂ ಬರಹವನ್ನು ಜನಸಾಮಾನ್ಯರಿಗೂ ಅರ್ಥವಾಗುವಂತಹ ತಿಳಿಯಾದ ಕನ್ನಡದಲ್ಲಿ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ಈ ಐವರು ಮಹನೀಯರು ತಮ್ಮ ಕೃತಿಗಳಿಂದ ಕನ್ನಡದ ಸಿರಿವಂತಿಕೆಯನ್ನು  ಹೆಚ್ಚಿಸಿರುವಂತೆಯೇ ತಮ್ಮ ಉದಾತ್ತ ಮೌಲ್ಯಗಳಿಂದ ಕನ್ನಡಿಗರ ಬದುಕನ್ನು ಶ್ರೀಮಂತಗೊಳಿಸಿದ್ದಾರೆ. ಈ ಅಂಶಗಳನ್ನು ಸೂಕ್ತ ನಿದರ್ಶನಗಳ ಮೂಲಕ ಇದರಲ್ಲಿ ಒತ್ತಿ…

  • ವೃತ್ತಿಯಿಂದ ವಕೀಲರಾಗಿರುವ ಲೋಹಿತ್ ನಾಯ್ಕರ ಅವರ ಮೂರನೆಯ ಕಥಾಸಂಕಲನ ಇದು. ಮಾನವ ಹಕ್ಕುಗಳ ವಿಷಯದಲ್ಲಿ ಅವರಿಗಿರುವ ವಿಶೇಷ ಆಸಕ್ತಿ, ಇಲ್ಲಿನ ಕತೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆಂದು ಇಲ್ಲಿರುವ ಕತೆಗಳು ಜನಸಾಮಾನ್ಯರ ಬದುಕಿನಲ್ಲಿ ಎದುರಾಗುವ ಮಾನವಹಕ್ಕು ಪ್ರಕರಣಗಳ ದಾಖಲಾತಿಗಳಲ್ಲ. ಮಾನವೀಯ ಸಂಬಂಧಗಳು ಮತ್ತು ಮಾನವಹಕ್ಕುಗಳ ಸಂಕೀರ್ಣ ಒಳನೋಟಗಳನ್ನು ಸೃಜನಾತ್ಮಕವಾಗಿ ಅಭಿವ್ಯಕ್ತಿಸುವ ವಿಶಿಷ್ಟ ಬರಹಗಳು ಇವು.

    “ಪಿಂಕಿ ಮದುವೆಯಾಗಿ ಹೋದಾಗ” ಎಂಬ ಮೊದಲ ಕತೆ, ಕಥಾನಾಯಕನ ಆತ್ಮವೃತ್ತಾಂತದ ಶೈಲಿಯಲ್ಲಿದೆ. ಕೊಲೆಯ ಶಿಕ್ಷೆ ಅನುಭವಿಸಿ ಬಿಡುಗಡೆಯಾದವನು ಅವನು. ಈಗ ಬೆಂಗಳೂರಿನ ಶ್ರೀಮಂತ ಕುಟುಂಬವೊಂದರ ಕಾರಿನ ಚಾಲಕ. ಆ ಕುಟುಂಬದ ಮಗಳಾದ ಪಿಂಕಿ ಮದುವೆಯ ವಯಸ್ಸಿಗೆ ಬಂದಿದ್ದಾಳೆ. ಆದರೆ, ಅಪ್ಪನ ಸಲುಗೆಯಿಂದಾಗಿ ಶಿಸ್ತು…

  • ಗಂಗಾವತಿಯ ಎಂ ಪರಶುರಾಮ ಪ್ರಿಯರ ಚೊಚ್ಚಲ ಹನಿ ಕವನಗಳ ಸಂಕಲನವೇ ‘ಕೀ ಯಾವದು?’ ಈ ಹನಿಗವನಗಳ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಉಪನ್ಯಾಸಕರಾದ ಬಿ.ಎನ್. ನಾಯಕ ಇವರು. ಇವರು ತಮ್ಮ ಮುನ್ನುಡಿಯಲ್ಲಿ “ಎಂ. ಪರಶುರಾಮ ಪ್ರಿಯ ಅವರು ತಮ್ಮ ಪ್ರಥಮ ಹನಿಗವನಗಳ ಸಂಕಲನ ‘ಕೀ ಯಾವದು?' ವನ್ನು ಸಹೃದಯರೆದುರು ಬಿಡುಗಡೆಗೊಳಿಸಲು ಉತ್ಸುಕರಾಗಿದ್ದಾರೆ. ಪ್ರಸ್ತುತ ಸಂಗ್ರಹದಲ್ಲಿ ಅನೇಕ ಚಿಕ್ಕ ಚಿಕ್ಕ ಹನಿಗವನಗಳಿವೆ. ಮೊದಲೇ ತರುಣ ಕವಿ ತಮ್ಮ ವಯಸ್ಸಿಗನುಗುಣವಾಗಿ ಪ್ರೀತಿ ಪ್ರೇಮಗಳ ವಿವಿಧ ಸ್ತರಗಳ ವಿಚಾರಗಳನ್ನು ಪ್ರಾಮಾಣಿಕವಾಗಿ ತಿಳಿಸಿದ್ದಾರೆ. ನಲ್ಲೆಯಾದವಳು ನಲ್ಲನ ಮನವನ್ನು ಸರಿಯಾಗಿ ತಿಳಿದು ಪವಿತ್ರವಾದ ವಿವಾಹ ಬಂಧನದಲ್ಲಿ ಒಂದಾಗಬೇಕೆಂಬುದು ಕವಿಯ ಆಶಯ ಹಿರಿದಾಗಿದೆ" ಎಂದಿದ್ದಾರೆ.

  • ‘ಕಡಲ ಸೃಷ್ಟಿ’ ಎಂಬ ಸದಭಿರುಚಿ ಮಾಸಿಕದ ಸಂಪಾದಕರಾದ ಬಿ.ಸಂಜೀವ ಇವರ ಜೀವನದ ಅನುಭವಗಳ ಸಾರವೇ ‘ಸಂಜೀವಿನಿ'. ಇವರು ಈ ಪುಸ್ತಕದಲ್ಲಿ ತಮ್ಮ ಜೀವನದಲ್ಲಿ ಅನುಭವಕ್ಕೆ ಬಂದ ಘಟನಾವಳಿಗಳು, ಸ್ವರಚಿತ ಕವನಗಳು ಎಲ್ಲವನ್ನೂ ಸೇರಿಸಿ ಒಂದು ಮಾಹಿತಿ ಪೂರ್ಣ ಪುಸ್ತಕವನ್ನಾಗಿಸಿದ್ದಾರೆ. ಧ್ಯಾನದ ಬಗ್ಗೆ ಅವರು ಮಾಡಿದ ಅಧ್ಯಯನಗಳ ಬಗ್ಗೆಯೂ ಸವಿವರವಾದ ಮಾಹಿತಿ ನೀಡಿದ್ದಾರೆ.

    ಸಂಜೀವ ಅವರು ತಮ್ಮ ‘ಮನದಾಳದ ಮಾತು’ ಎಂಬ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ಸಂಜೀವಿನಿ ಈ ಪುಸ್ತಕದಲ್ಲಿ ವಚನ-ಕವನ ರೂಪದಲ್ಲಿ ಧ್ಯಾನದ ಬಗ್ಗೆ ಬರೆದು, ನನ್ನ ಜೀವನದ ಧ್ಯಾನ ಸಾಧನೆಯ ಬಗ್ಗೆ ಬರೆದಿದ್ದೇನೆ. ಇದರಲ್ಲಿ ಬರೆದಿರುವ ವಿಷಯ ಸಂಗ್ರಹ ಎಲ್ಲಾ ಕೇಳಿ, ಓದಿ, ಅನುಭವಿಸಿದ ವಿಷಯ ಹೊರತು ಎಲ್ಲಾ…

  • ಬಿ. ಜಿ. ಎಲ್. ಸ್ವಾಮಿಯವರು ತಮ್ಮ "ಹಸುರು ಹೊನ್ನು” ಪುಸ್ತಕದಿಂದ ಪ್ರಖ್ಯಾತರು. ಸಸ್ಯಗಳ ಬಗ್ಗೆ ಅದೊಂದು ಅಪರೂಪದ ಪುಸ್ತಕ. ಕತೆ ಹೇಳಿದಂತೆ ಸಸ್ಯಗಳ ಪರಿಚಯವನ್ನು ಮಾಡಿಕೊಡುವ ಪುಸ್ತಕ ಅದು. ಶುಷ್ಕ ಎನಿಸಬಹುದಾದ ವಿಜ್ನಾನದ ವಿಷಯಗಳನ್ನು ಹಾಸ್ಯ ಲೇಪಿಸಿ, ಚೇತೋಹಾರಿಯಾಗಿ ಹೇಗೆ ಓದುಗರಿಗೆ ಉಣಬಡಿಸಬೇಕು ಎಂಬುದಕ್ಕೊಂದು ಮಾದರಿ ಅದು.

    “ಬೃಹದಾರಣ್ಯಕ" ಅವರು ಪ್ರಾಣಿಗಳು ಮತ್ತು ಕಾಡಿನ ವಿಸ್ಮಯಗಳ ಬಗ್ಗೆ ಬರೆದಿರುವ 11 ಅಧ್ಯಾಯಗಳ ಪುಸ್ತಕ. ಸಸ್ಯಗಳ ಬಗ್ಗೆ "ಹಸುರು ಹೊನ್ನು” ಬರೆದಂತೆ ಪ್ರಾಣಿಗಳ ಬಗ್ಗೆ ವಿವರವಾದ ಪುಸ್ತಕವೊಂದನ್ನು ಬರೆಯಬೇಕೆಂದು ಅವರು ಹಲವು ಪುಟಗಳ ವಿವರಣೆ ಬರೆದಿದ್ದರು. ಆದರೆ, ಆ ಪುಸ್ತಕವನ್ನು ಬರೆದು ಮುಗಿಸುವ ಮುನ್ನ ಅವರು ನಮ್ಮನ್ನು ಅಗಲಿದರು. ಆ ವಿವರಣಾ ಪುಟಗಳನ್ನು ಅವರ ಭಾಮೈದುನ ಕೃಷ್ಣವೂರ್ತಿಯವರು…

  • ಇತಿಹಾಸ ಅರಿಯದವನು ಇತಿಹಾಸವನ್ನು ಸೃಷ್ಟಿಸಲೂ ಸಾಧ್ಯವಿಲ್ಲ. ಹೊಸ ಇತಿಹಾಸವನ್ನು ಪುನರ್ ರಚಿಸಲೂ ಸಾಧ್ಯವಿಲ್ಲ. ಜೊತೆಗೆ ಇತಿಹಾಸವನ್ನು ಪುನರ್ ರಚಿಸಲೂ ಸಾಧ್ಯವಿಲ್ಲ ಎನ್ನುವ ಮಾತಿದೆ. ಹೊಸ ಪೀಳಿಗೆಯ ಓದುಗರ ನೆಚ್ಚಿನ ಬರಹಗಾರ ಪ್ರೊ.ಕೆ.ಎನ್. ಗಣೇಶಯ್ಯ ಇತಿಹಾಸದ ಬೆನ್ನು ಹತ್ತಿ ಅದರ ವಿಶಿಷ್ಟ ಹಾಗೂ ವಿಸ್ಮಯಕಾರಿ ಆಯಾಮಗಳನ್ನು ಪುನರ್ ಸೃಷ್ಟಿಸಲು ತೊಡಗಿದ ಲೇಖಕ.

    ಮೂಲತಃ ಕೋಲಾರ ಜಿಲ್ಲೆಯ ಕೋಟಗಾನ ಗ್ರಾಮದವರಾದ ಪ್ರೊ. ಕೆ.ಎನ್. ಗಣೇಶಯ್ಯ ವೃತ್ತಿಯಲ್ಲಿ ಕೃಷಿ ವಿಜ್ಞಾನಿ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದವರು. ಜಿಕೆವಿಕೆಯಲ್ಲಿ ಕೃಷಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಗಣೇಶಯ್ಯ ಲೇಖಕರಾಗಿಯೇ ಕರ್ನಾಟಕದ ಜನತೆಗೆ ಪರಿಚಿತರು. ಇವರ ಇನ್ನೊಂದು…

  • ಖ್ಯಾತ ಚಿತ್ರ ನಿರ್ದೇಶಕ, ಅಂಕಣಕಾರ, ಕಥೆಗಾರ ನಾಗತಿಹಳ್ಳಿ ಚಂದ್ರಶೇಖರ ಇವರ ಲೇಖನಿಯಿಂದ ಮೂಡಿಬಂದ ಅದ್ಬುತ ಕಾದಂಬರಿ ‘ಚುಕ್ಕಿ ಚಂದ್ರಮರ ನಾಡಿನಲ್ಲಿ'. ಈ ಕಾದಂಬರಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ್ದಾರೆ ಮತ್ತೊರ್ವ ಅಪರೂಪದ ಕಥೆಗಾರ ಜಯಂತ್ ಕಾಯ್ಕಿಣಿಯವರು. ಅವರು ಹೇಳುವಂತೆ “ಭಾಗ್ಯ, ಭಾಗೂ ಅಥವಾ ಭಾಗ್ಯಲಕ್ಷ್ಮಿ ಥೇಟು ನಿಮ್ಮ ಪಕ್ಕದ ಮನೆಯ ಹುಡುಗಿ. ಮಮತೆಗಾಗಿ ಮುದ್ದಿಗಾಗಿ ಮಿಡಿಯುವ ಚಡಪಡಿಸುವ ಜೀವಸೆಲೆಯ ಕಾರಂಜಿ. ಎಂಥ ಕಾರಂಜಿ-ಪುಟಿವ ನೆಲದಲ್ಲಿ ಹಸಿರು ನಿಮಿರಬೇಕು ಅಂಥದು. ಈಗಷ್ಟೆ ಕಣ್ತೆರೆದ ಎಲೆಯಂಥ ಈ ಹುಡುಗಿ ತನ್ನ ಪುಟ್ಟ ಬೊಗಸೆಯಲ್ಲಿ ಅಕ್ಕರೆ ತುಂಬಿಕೊಂಡು ಇಡೀ ಬದುಕನ್ನು, ಚುಕ್ಕಿ ಚಂದ್ರಮರನ್ನೊಳಗೊಂಡ ವಿಶ್ವವನ್ನು ಎದುರು ಹಾಕಿಕೊಳ್ಳುತ್ತಾಳೆ. ಮಮತೆಯ ಪಣತಿ…

  • ಹಿರಿಯ ರಾಜಕಾರಣಿ, ಮಾಜಿ ಸಚಿವರಾದ ಎಚ್ ವಿಶ್ವನಾಥ್ ಅವರ ಆತ್ಮಕಥನವೇ ‘ಹಳ್ಳಿ ಹಕ್ಕಿಯ ಹಾಡು' ಎಂಬ ಕೃತಿ. ವಿಶ್ವನಾಥ್ ಇವರು ಈ ಕೃತಿಯಲ್ಲಿ ತಮ್ಮ ಬಾಲ್ಯದ ದಿನಗಳಿಂದ ಹಿಡಿದು, ಕಲಿತ ಶಾಲೆ, ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಗೆ, ಸಚಿವರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ರೀತಿ ಇತ್ಯಾದಿಗಳನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ. ಎಚ್ ವಿಶ್ವನಾಥ್ ಅವರು ಉತ್ತಮ ಬರಹಗಾರರೂ ಹೌದು. ಪುಸ್ತಕದ ಬೆನ್ನುಡಿಯಲ್ಲಿ ಅವರೇ ಬರೆದುಕೊಂಡಂತೆ “ಯಾವುದೇ ವ್ಯಕ್ತಿ ಶಾಸಕನಾಗಿ ಮಂತ್ರಿಯಾಗಿರುವ ಅವಧಿ ಪ್ರಚಂಡ ವೇಗದ, ಹಗಲು ರಾತ್ರಿಗಳ ವ್ಯತ್ಯಾಸ ತಿಳಿಯದ ಕಾಲವಾಗಿರುತ್ತದೆ. ಆಗ ಅವನನ್ನು ನಿಯಂತ್ರಿಸುವ, ಸರಿದಾರಿಯಲ್ಲಿ ನಡೆಸುವ ಪ್ರೇರಣೆ, ಪ್ರಚೋದನೆಗಳು ಅಗತ್ಯವಾಗಿರುತ್ತವೆ. ಈ ನಿಟ್ಟಿನಲ್ಲಿ ಆತ್ಮಾವಲೋಕನ ಒಂದು ಉತ್ತಮ…

  • ಜೂಲ್ಸ್ ವರ್ನ್ (1828 - 1905)  ಆಧುನಿಕ ವೈಜ್ನಾನಿಕ ಕತೆಗಳ ಜನಕ ಎಂದೇ ಪ್ರಸಿದ್ಧರು. ವಿಜ್ನಾನದ ಆಧಾರವಿರುವ ಕಾಲ್ಪನಿಕ ಘಟನೆಗಳನ್ನು ಪೋಣಿಸಿ, ಅದ್ಭುತರಮ್ಯವಾದ ಕಾದಂಬರಿಗಳನ್ನು ಬರೆದು ಹೆಸರು ಗಳಿಸಿದವರು. ಹಲವಾರು ವೈಜ್ನಾನಿಕ ಅನ್ವೇಷಣೆಗಳು ಬೆಳಕಿಗೆ ಬಂದ 19ನೇ ಶತಮಾನದಲ್ಲಿ ಅಂತಹ ಕತೆಗಳೂ ಕಾದಂಬರಿಗಳೂ ಜನಪ್ರಿಯವಾದದ್ದು ಅಚ್ಚರಿಯ ಸಂಗತಿಯೇನಲ್ಲ. ಒಂದು ನೂರು ವರುಷಗಳ ಮುಂಚೆಯೇ ಜೂಲ್ಸ್ ವರ್ನ್ ಫ್ಯಾಕ್ಸ್ ಯಂತ್ರ, ಜಲಾಂತರ್ಗಾಮಿ ಇತ್ಯಾದಿಗಳ ಬಗ್ಗೆ ಕಲ್ಪಿಸಿ ಬರೆದಿದ್ದರು.

     ಇದು 1873ರಲ್ಲಿ ರಚಿಸಲಾದ ಕಾದಂಬರಿ. ಫಿಲಿಯಾಸ್ ಫಾಗ್ ಎಂಬವರು ತನ್ನ ಸ್ನೇಹಿತರೊಂದಿಗೆ 20,000 ಪೌಂಡುಗಳ ಮೊತ್ತಕ್ಕೆ ಪಂಥ ಕಟ್ಟುತ್ತಾರೆ: ಕೇವಲ 80 ದಿನಗಳಲ್ಲಿ ಭೂಮಿಯನ್ನು ಸುತ್ತಿ ಬರುತ್ತೇನೆ ಎಂದು! ಲಂಡನಿನಿಂದ ಅಕ್ಟೋಬರ್ 2ರಂದು ರಾತ್ರಿ 8.…