ಪುಸ್ತಕ ಸಂಪದ

  • ಪತ್ರಕರ್ತರಾದ ವಿಶ್ವೇಶ್ವರ ಭಟ್ ಇವರು ಬರೆದಿರುವ ಸರಿಗಮ ‘ಪದ' ಎಂಬ ಪುಸ್ತಕವು ಪತ್ರಿಕಾ ಭಾಷೆಗೊಂದು ಹದ ಎಂದು ಅವರೇ ಪುಸ್ತಕದ ಮುಖಪುಟದಲ್ಲೇ ಬರೆದುಕೊಂಡಿದ್ದಾರೆ. ‘ಪದ'ಕ್ಕೊಂದು ನನ್ನ ರಾಗ ಎಂಬ ಮುನ್ನುಡಿಯಲ್ಲಿ “ಇದು ನಾನು ಏಷಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಪತ್ರಿಕೋದ್ಯಮದ ಮೇಷ್ಟ್ರಾಗಿ ಪಾಠ ಮಾಡುವಾಗ ವಿದ್ಯಾರ್ಥಿಗಳಿಗೆಂದು ಸಿದ್ಧಪಡಿಸಿದ ನೋಟ್ಸ್. ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಬರೆದಿದ್ದು. ಭಾಷೆ ಹಾಗೂ ಪದ ಬಳಕೆ ಬಗ್ಗೆ ಎಂಥ ಸಂಯಮ, ಪ್ರೀತಿ, ಶ್ರದ್ಧೆ ಎಚ್ಚರ ವಹಿಸಬೇಕೆಂಬುದನ್ನು ಇಲ್ಲಿ ಸಾಕಷ್ಟು ನಿದರ್ಶನಗಳ ಮೂಲಕ ಹೇಳಲು ಪ್ರಯತ್ನಿಸಿದ್ದೇನೆ. ಈ ಕೃತಿ ಪತ್ರಕರ್ತರಿಗೆ ಬರೆಯುವುದು ಹೇಗೆಂದು ಕಲಿಸಿಕೊಡಲಿಕ್ಕಿಲ್ಲ. ಆದರೆ ಭಾಷೆ ಬಗ್ಗೆ ಒಂದಷ್ಟು ಜಾಗೃತಿ ಹಾಗೂ…

  • ಬಾಹ್ಯಾಕಾಶ, ಗ್ರಹಣಗಳು ಮತ್ತು ಆಕಾಶಕಾಯಗಳ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿರುವ ಬಿ. ಎಸ್. ಶೈಲಜಾ ಅವರ ಪ್ರವಾಸ ಕಥನ ಇದು. ಡಿಸೆಂಬರ ತಿಂಗಳಿನಲ್ಲಿ ಘಟಿಸಿದ ಸೂರ್ಯಗ್ರಹಣದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಎರಡು ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸಲು ಹೋಗಿದ್ದಾಗಿನ ಅನುಭವಗಳನ್ನು ಇದರಲ್ಲಿ ನಿರೂಪಿಸಿದ್ದಾರೆ.

    ಆಫ್ರಿಕಾದ ನ್ಯಾಷನಲ್ ಪಾರ್ಕುಗಳಲ್ಲಿ ಸಫಾರಿ ಹೋದಾಗ ಕಂಡ ಆನೆಗಳು, ಸಿಂಹಗಳು, ಚಿರತೆಗಳು, ಜಿರಾಫೆಗಳು, ಜೀಬ್ರಾಗಳು, ಕತ್ತೆಕಿರುಬಗಳು ಇತ್ಯಾದಿ ಹತ್ತು ಹಲವು ಪ್ರಾಣಿಗಳ ವೀಕ್ಷಣೆಯ ವಿವರಗಳು ಚೇತೋಹಾರಿಯಾಗಿವೆ. ಅಲ್ಲಿಯ ವರೆಗೆ ತಾನು ಮಾಡಿದ್ದ ಏಕಮಾತ್ರ ಸಫಾರಿ ಎಂದರೆ ಬನ್ನೇರುಘಟ್ಟದ್ದು; ಕಿಟಕಿ ಬಾಗಿಲು ಭದ್ರವಾಗಿ ಮುಚ್ಚಿದ್ದ ಸಣ್ಣ ಬಸ್ಸಿನಲ್ಲಿ. ಆದರೆ ದಕ್ಷಿಣ ಆಫ್ರಿಕಾದ ಸಫಾರಿ ತೆರೆದ ಜೀಪಿನಲ್ಲಿ ಎಂದು…

  • 108 Daily ಮನಿ ಎಂಬ ಪುಸ್ತಕವು ವಿತ್ತ ಪದಗಳ ಅರ್ಥಗುಚ್ಛ.  “ನಿಮಗೆಲ್ಲಾ ಬದುಕಿನಲ್ಲಿ ಒಂದಲ್ಲ ಒಂದು ಬಾರಿ ಜಂಕ್ ಬಾಂಡ್ ಎಂದರೇನು? ಎನ್ನುವ ಪ್ರಶ್ನೆ ಬಂದಿರುತ್ತದೆ. ಮಸಾಲಾ ಬಾಂಡ್ ಎನ್ನುವ ಹೆಸರನ್ನ ಕೇಳಿರುತ್ತೀರಿ ಆದರೆ ಅದೇನು ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿರುವುದಿಲ್ಲ. ಎಲ್ಲರ ಬಾಯಲ್ಲಿ ‘ಎಕಾನಮಿ' ಬಿದ್ದೋಗಿದೆ ಅಥವಾ ಎಕಾನಮಿ ರಿಕವರಿ ಆಗಿದೆ ಎನ್ನುವ ಮಾತನ್ನ ಕೇಳಿರುತ್ತೀರಿ. ಆದರೆ ಯಾರಾದರೂ ವಾಟ್ ಇಸ್ ಎಕಾನಮಿ? ಎಂದಾಗ ತಬ್ಬಿಬ್ಬಾಗುತ್ತೇವೆ ಅಲ್ಲವೇ?

    ಗ್ರೋಥ್ ರೇಟ್, ಬಯ್ ಬ್ಯಾಕ್ ಆಫ್ ಶೇರ್ಸ್, ಮ್ಯೂಚುವಲ್ ಫಂಡ್, ನೆಗೆಟಿವ್ ರೇಟ್ ಆಫ್ ಇಂಟರೆಸ್ಟ್, ಮಾಡರ್ನ್ ಮನಿ ಥಿಯರಿಗಳು ಏನು ಹೇಳುತ್ತವೆ? ಯೂನಿವರ್ಸಲ್ ಬೇಸಿಕ್ ಇನ್ ಕಮ್ ಸಿದ್ಧಾಂತವೇನು?…

  • ಅಜ್ಞಾತ ವಾಸ ಅನುಭವಿಸಲು ಪಾಂಡವರು ಕಾಡಿಗೆ ಬಂದಾಗ ಅವರು ಅನುಭವಿಸಿದ ಸಂಕಷ್ಟಗಳು ಹಾಗೂ ಅವುಗಳನ್ನು ಎದುರಿಸಿಕೊಂಡ ಬಗೆಗಳ ಕುರಿತು ಧಾರ್ಮಿಕ ಚಿಂತಕರಾದ ಡಾ. ಕೆ ಎಸ್ ನಾರಾಯಣಾಚಾರ್ಯ ಇವರು ಸವಿವರವಾಗಿ ‘ವನದಲ್ಲಿ ಪಾಂಡವರು' ಕೃತಿಯಲ್ಲಿ ಬರೆದಿದ್ದಾರೆ. ಆಜ್ಞಾತವಾಸದ ನಿಯಮಗಳನ್ನು ಮುರಿಯಲು ದುರ್ಯೋಧನ ನಡೆಸಿದ ಕುಯುಕ್ತಿಗಳಿಗೆ ಪಾಂಡವರು ಇಟ್ಟ ಎಚ್ಚರಿಕೆಯ ಹೆಜ್ಜೆಗಳ ಬಗ್ಗೆ, ಕೀಚಕನ ಸಂಹಾರದ ಬಗ್ಗೆ, ಅರಗಿನ ಅರಮನೆಗೆ ಬೆಂಕಿ ಬಿದ್ದ ಬಗ್ಗೆ ಈ ಎಲ್ಲಾ ಸನ್ನಿವೇಶಗಳನ್ನು ಬಹಳ ಸಮರ್ಥವಾಗಿ ಬರೆದು ಓದುಗರ ಮಡಿಲಿಗೆ ಹಾಕಿದ್ದಾರೆ ನಾರಾಯಣಾಚಾರ್ಯ ಇವರು. 

    ಲೇಖಕರು ತಮ್ಮ ಅರಿಕೆಯಲ್ಲಿ ಹೀಗೆ ಬರೆಯುತ್ತಾರೆ “ಶ್ರೀಮನ್ಮಹಾಭಾರತದ ಕಾದಂಬರೀಕರಣ ಮಾಲಿಕೆಯಲ್ಲಿ ಈಗಣ ‘ವನದಲ್ಲಿ…

  • ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಯಾವುದೇ ಕೃಷಿ ಮೇಳಗಳು ನಡೆದಿರಲಿಲ್ಲ. ಕೃಷಿಕರೂ ಕೃಷಿಯಲ್ಲಿ ಆಗುತ್ತಿರುವ ಹೊಸ ಹೊಸ ಅನ್ವೇಷಣೆ, ಮಾಹಿತಿಗಳಿಂದ ದೂರವೇ ಉಳಿದುಹೋಗಿದ್ದರು. ಈ ಕಾರಣದಿಂದ ರಾಜ್ಯ ಮಟ್ಟದ ಬೃಹತ್ ಕೃಷಿ ಮೇಳವನ್ನು ಆಯೋಜನೆ ಮಾಡಬೇಕೆಂದು ಯೋಚನೆ ಮಾಡಿ ‘ಕೃಷಿ ಸಿರಿ- 2022’ ಎಂದು ಹೆಸರಿಸಿದರು. ‘ಕೃಷಿ ಸಿರಿ’ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷರಾಗಿ ಪ್ರಣವ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಶ್ರೀ ಜಿ.ಆರ್. ಪ್ರಸಾದ್, ಅಧ್ಯಕ್ಷರಾಗಿ ವಿನಯ ಕೃಷಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಕೊಲ್ನಾಡು ಇವರುಗಳು ತಮ್ಮ ತಂಡದ ಜೊತೆ ಸೇರಿ ಕೃಷಿ ಮೇಳವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಬಳಿಯ ಕೊಲ್ನಾಡ್ ಗ್ರಾಮದಲ್ಲಿ ಆಯೋಜನೆ ಮಾಡಿದರು. ರಾಷ್ಟೀಯ ಹೆದ್ದಾರಿಗೆ ಸಮೀಪವೇ…

  • ತಮ್ಮ ಕಾವ್ಯಾತ್ಮಕ ಭಾಷೆಯ ಮೂಲಕ ಸಮುದಾಯಗಳ ಅತ್ಯಂತ ಖಾಸಗಿ ಹಾಗೂ ಸಾರ್ವಜನಿಕವಾದ ಸಂಕೀರ್ಣ ಅನುಭವಗಳನ್ನು ದಾಖಲಿಸುತ್ತ ಬಂದವರು ಕೇಶವ ಮಳಗಿ. ಅವರ ಹೊಸ ಬಗೆಯ 26 ಕಥನಗಳು ಇದರಲ್ಲಿವೆ.

    ಎಂಬತ್ತರ ದಶಕದಲ್ಲಿ ಬರೆಯಲು ಶುರುವಿಟ್ಟ ಲೇಖಕರಲ್ಲಿ ಕೇಶವ ಮಳಗಿ ಅವರದು ವಿಭಿನ್ನ ಕಥನ ಮಾರ್ಗ. 1963ರಲ್ಲಿ ಜನಿಸಿದ ಇವರು ವಿಜಾಪುರ, ಬಾಗಿಲುಕೋಟೆ, ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಗಳ ಭಾಷೆ ಹಾಗೂ ಸಂಸ್ಕೃತಿಗಳ ಬನಿಯನ್ನು ತಮ್ಮ ಬರಹದಲ್ಲಿ ಇಳಿಸಿದ್ದಾರೆ. ಹೊಸ ಬಗೆಯ ಅಭಿವ್ಯಕ್ತಿ ಶೈಲಿ, ವಸ್ತು ನಿರೂಪಣೆಯಿಂದಾಗಿ ಇವರ ಕಥನ ಗಮನಾರ್ಹ.

    ಪುಸ್ತಕದ ಆರಂಭದಲ್ಲಿ ಕೇಶವ ಮಳಗಿ ಹೇಳಿಕೊಂಡಿರುವ ಮಾತುಗಳು: "ಸುಮಾರು ನಲ್ವತ್ತು ವರ್ಷಗಳಿಂದ ನನ್ನೊಳಗೆ ಬುಗುರಿಯಂತೆ ನಿದ್ರಿಸುತ್ತಿದ್ದ ರೂಪಕ, ಭಾವ ನುಡಿ, ವಿಚಾರ, ಚಿತ್ರಗಳ ಲೋಕವನ್ನು…

  • ಮೂಲತಃ ಗಡಿನಾಡು ಕಾಸರಗೋಡಿನ ಕುಂಬಳೆಯವರಾದ ಸೂರ್ಯ ನಾರಾಯಣ ಹಿಳ್ಳೆಮನೆಯವರ ಮೊದಲ ಪ್ರಯತ್ನವೇ ‘ಗೋವು, ಮಹಿಷಿ ಮತ್ತು ಮಹಾವೃಕ್ಷ' ಎಂಬ ಕಥಾ ಸಂಕಲನ. ಅವರೇ ತಮ್ಮ ಸಂಕಲನದ ಮುನ್ನುಡಿಯಲ್ಲಿ ಬರೆದಂತೆ “ ಈ ಸಂಕಲನದಲ್ಲಿ ಇರುವ ಹೆಚ್ಚಿನ ಬರಹಗಳ ಕಾಲಘಟ್ಟ ೧೯೮೦-೯೦ರ ದಶಕಗಳು. ಶುದ್ಧ ಗ್ರಾಮೀಣ ಪರಿಸರ, ಹಿತ ಮಿತ ಅರಿತು ಬದುಕುವ ಸಣ್ಣ ಹಿಡುವಳಿದಾರ ಕುಟುಂಬಗಳು. ಅವರ ಜನಜೀವನ ಇತ್ಯಾದಿ ಈ ಬರಹಗಳ ಕಥಾ ವಸ್ತು. ಸನಾತನ ಸಂಸ್ಕೃತಿಯಲ್ಲಿ, ಪ್ರಕೃತಿಯನ್ನೂ ಪ್ರಾಣಿಗಳನ್ನೂ ಒಂದು ರೀತಿಯ ಆದರದಿಂದ ಕಾಣುವ ಪರಿಪಾಠವಿದೆ. ಎಲ್ಲದಕ್ಕೂ ಅದರದ್ದೇ ಆದ ಮಹತ್ವವಿದೆ; ಎಲ್ಲವೂ ದೈವಸೃಷ್ಟಿಯೇ! ಮನುಷ್ಯ ಸಾಕು ಪ್ರಾಣಿಗಳ ನಡುವಿನ ಸಂಬಂಧ ಹಾಗೂ ಮನುಷ್ಯನ ಪ್ರಕೃತಿ, ಮರಗಳ ನಡುವಿನ ಜೀವನದ ವಿವಿಧ ಚಿತ್ರಣ, ಈ ಸಂಕಲನದ ಎಲ್ಲ…

  • ‘ಕಾನನ ಜನಾರ್ದನ' ಎಂಬುವುದು ಕೆ ಎನ್ ಗಣೇಶಯ್ಯ ಅವರ ಮತ್ತೊಂದು ರೋಚಕ ಕಾದಂಬರಿ. ಪುಸ್ತಕದ ಬೆನ್ನುಡಿಯಲ್ಲಿ “ ಮೇಘಾಲಯದ ಪರ್ವತಗಳ ಮೇಲೆ ಚರಿತ್ರೆಯ ವಿದ್ಯಾರ್ಥಿಗಳಿಗೆ ಶಿಲಾಯುಗದ ಮಾನವನ ಸಂಸ್ಕೃತಿಯ ಪಳೆಯುಳಿಕೆಯೊಂದನ್ನು ಪರಿಚಯಿಸುತ್ತಿದ್ದ ಪಲ್ಲವಿಗೆ ಬಂದ ಕರೆಯೊಂದು ಆಕೆಯನ್ನು ತಲ್ಲಣಗೊಳಿಸುತ್ತದೆ. ಅಮೇರಿಕದ ಕಂಪೆನಿಯೊಂದಿಗೆ ಕೈ ಜೋಡಿಸಿದ ಮುಂಬೈನ ಉದ್ಯಮಿಯೊಬ್ಬ ಭಾರತದ ಧಾರ್ಮಿಕ ಮತ್ತು ಸಂವಿಧಾನದ ನಿಲುವನ್ನೆ ಬದಲಾಯಿಸುವ ಷಡ್ಯಂತ್ರಕ್ಕೆ ಕೈ ಹಾಕುತ್ತಾನೆ. ಕನ್ನಡದ ಕಾದಂಬರಿಕಾರ ನಾಗಯ್ಯನವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯಿಂದಾಗಿ ಅವರು ಮೂರ್ಛ್ಹಾಸ್ಥಿತಿ ತಲುಪುತ್ತಾರೆ. ಆ ಹಲ್ಲೆಯ ಹಿಂದಿನ ರಹಸ್ಯವೂ ಅವರು ಬರೆದ ಕಾದಂಬರಿಯಲ್ಲಿಯೇ ಅಡಗಿರಬಹುದು ಎಂಬ ಅನುಮಾನ ಮೂಡುತ್ತದೆ. ಆದರೆ ಮೂರು ಸಾವಿರ ವರ್ಷಗಳ…

  • ಕುಸುಮಾ ಶಾನಭಾಗ “ಉದಯವಾಣಿ" ದಿನಪತ್ರಿಕೆಯಲ್ಲಿ ೨೦೦೮-೨೦೦೯ರಲ್ಲಿ ಎಂಟು ತಿಂಗಳ ಅವಧಿಯಲ್ಲಿ ಬರೆದ ಲೇಖನಗಳ ಸಂಗ್ರಹ ಇದು. “ಪ್ರಜಾವಾಣಿ" ವಾರ್ತಾಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಸ್ವಯಂನಿವೃತ್ತಿಯ ನಂತರ ಬರೆದ ಬದುಕಿನ ಅನುಭವಗಳು ಮತ್ತು ನಿತ್ಯ ಜೀವನದಲ್ಲಿ ಅವರು ಕಂಡ, ಅನುಭವಿಸಿದ ಕೆಲವು ಘಟನೆಗಳು ಇಲ್ಲಿವೆ.

    ಇದರ ಒಂದೊಂದು ಲೇಖನವೂ ಮನಸ್ಸನ್ನು ತಟ್ಟುತ್ತದೆ. ಯಾಕೆಂದರೆ, ಇವೆಲ್ಲವೂ ನೈಜಕತೆಗಳೇ ಆಗಿವೆ. ಬೆಂಗಳೂರಿನ ನಂದಿನಿ ಲೇಔಟಿನಿಂದ ಕಾಣೆಯಾದ ಯುವತಿಯರ ಬಗ್ಗೆ ಬರೆದ “ಎಲ್ಲಿ ಹೋದರು ಈ ಬಾಲೆಯರು!” ಲೇಖನ, ನಗರಜೀವನದ ಕರಾಳಮುಖವೊಂದನ್ನು ಬಹಿರಂಗ ಪಡಿಸುತ್ತದೆ. ಅಲ್ಲಿ ಬಡಯುವತಿಯರು ಸುರಕ್ಷಿತರಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತದೆ.

    “ಉಪಕಾರ ಎಂಬ ಸಿಹಿಗೆ ಮುತ್ತುವ…" ಲೇಖನ ಹೆಗ್ಗಡದೇವನಕೋಟೆ ಸಮೀಪದ ಬೀಚನಹಳ್ಳಿ…

  • ಪತ್ರಕರ್ತರಾದ ಪಿ.ಶ್ರೀಧರ್ ನಾಯಕ್ ಅವರ ಪ್ರಬಂಧ ಮತ್ತು ಲೇಖನಗಳ ಸಂಕಲನವೇ ‘ಭಾವಲೋಕ'. ಈ ಪುಸ್ತಕಕ್ಕೆ ಸೊಗಸಾದ ಮುನ್ನುಡಿ ಬರೆದಿದ್ದಾರೆ ಲೇಖಕ, ಶಿಕ್ಷಣ ತಜ್ಞರಾದ ಡಾ. ಮಹಾಬಲೇಶ್ವರ ರಾವ್. ಅವರು ಹೀಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾರೆ. “ನವುರಾದ ಹಾಸ್ಯ, ಸರಸ ನಿರೂಪಣೆ, ಸುಂದರ ವರ್ಣನೆ ಸಹಿತವಾದ ‘ತುಂಟಿ ರೂಬಿಯ ದಶಾವತಾರ' ಪ್ರಬಂಧ ಉತ್ತಮ ಲಲಿತ ಪ್ರಬಂಧಗಳ ಸಾಲಿನಲ್ಲಿ ನಿಲ್ಲುವಂತದ್ದು. ಈ ಪ್ರಬಂಧವನ್ನು ಓದುವಾಗ ನನಗೆ ಕೆ.ಎಸ್. ನ. ಅವರ ‘ತುಂಗಭದ್ರೆ', ಡಾ. ಹಾ. ಮ. ನಾಯಕರ ‘ನಮ್ಮ ಮನೆಯ ದೀಪ', ಡಾ. ಎ ಎನ್ ಮೂರ್ತಿರಾಯರ, ವಿ.ಸೀ. ಅವರ ಮತ್ತು ಇತ್ತೀಚಿನ ಎಂ. ಆರ್. ಕಮಲಾ ಅವರ ಪ್ರಬಂಧಗಳು ನೆನಪಿಗೆ ಬಂದವು. ಈ ಪ್ರಬಂಧವನ್ನು, ರೆಕ್ಕೆ, ಬಾಲಗಳ ಲೋಕ' ಹಾಗೂ ಗುಬ್ಬಚ್ಚಿಗಳ ಶೋಕ ಪ್ರಸಂಗ'…