ಪುಸ್ತಕ ಸಂಪದ

  • ನಾಡಿನ ಖ್ಯಾತ ವಿಮರ್ಶಕರಾದ ನಟರಾಜ್ ಹುಳಿಯಾರ್ ಬರೆದ ಕಾಮನ ಹುಣ್ಣಿಮೆ ಎನ್ನುವ ಕಾದಂಬರಿ ಓದಿ ಮುಗಿಸಿದೆ. ಕಾದಂಬರಿ ಒಳ್ಳೆಯ ರೀತಿಯಿಂದ ಅದ್ಭುತವಾಗಿ ಹೊರಬಂದಿದೆ. ಓದುತ್ತಾ ಹೋದಂತೆ ಇನ್ನೂ ಮುಂದೆ ಏನಿದೆ ಎಂಬ ಕುತೂಹಲ ಹುಟ್ಟುತ್ತದೆ.

    ಕಾದಂಬರಿ ಸೂತ್ರಧಾರಿಯಾದ ಚಂದ್ರಣ್ಣ ಮಿಂಟ್ರಿಯವನ ಮಗ. ಆದರೆ ಮಿಂಟ್ರಿಗೆ ಹೋದ ತಂದೆ ಮರಳಿ ಊರಿಗೆ ಬರದಿದ್ದದ್ದು ಒಂದು ಆಘಾತಕಾರಿಯ ಸುದ್ದಿ. ಆದರೂ ತಾಯಿ ಶಾಂತಮ್ಮ ತನ್ನ ಮಗ ಚಂದ್ರಣ್ಣನನ್ನು ಕಣ್ಣು ರೆಪ್ಪೆಯಂತೆ ನೋಡಿಕೊಂಡು ಮಗನಿಗೆ ಸರಿಯಾಗಿ ಓದಿಸುತ್ತಾಳೆ. ಒಳ್ಳೆಯ ವಿಧ್ಯಾವಂತನನ್ನಾಗಿ ಮಾಡಲು ಹಗಲಿರುಳು ಹೆಣಗುತ್ತಾಳೆ. ಮಗನನ್ನು ಕುರಿತು ಚಂದ್ರು ಮುಂದೆ ನೀನು ಮಿಂಟ್ರಿ ನೌಕರಿಯನ್ನು ಬಿಟ್ಟು ಯಾವುದಾದರೂ ಮಾಡೆಂದು ಹೇಳುತ್ತಲೇ…

  • “ಸಮಾಜದ ಅನಿಷ್ಟಗಳಿಗೆ ಪ್ರಸ್ತುತ ವ್ಯವಸ್ಥೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂಬುದು ಸುಸ್ಪಷ್ಟ" ಎಂದು ಹೇಳುವ ಕೋಬಾಡ್ ಗಾಂಧಿಯವರು “ಒಳಿತಿನ ಮತ್ತು ಭರವಸೆಯ ಬೀಜಗಳು ಮಾನವಕುಲದಲ್ಲಿ ಅಂತರ್ಗತವಾಗಿದೆ. ಒಂದಲ್ಲ ಒಂದು ದಿನ ಅವು ಹೂವಾಗಿ ಅರಳುತ್ತವೆ” ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸುವುದನ್ನು ಕಾಣಬಹುದು ಎಂದು ಅನುವಾದಕಿ ಜ್ಯೋತಿ. ಎ ಅವರು ‘ಅತಂತ್ರ ಸ್ವಾತಂತ್ಯ್ರ’ ಕೃತಿಗೆ ಬರೆದ ಅನುವಾದಕರ ನುಡಿ ನಿಮ್ಮ ಓದಿಗಾಗಿ ನೀಡಲಾಗಿದೆ.

    “ಕೆಲವು ವರ್ಷಗಳಿಂದೀಚೆಗೆ ನಮ್ಮ ದೇಶದಲ್ಲಿ ಸರ್ಕಾರದ ಜನವಿರೋಧಿ ನೀತಿಗಳನ್ನು ಗಟ್ಟಿ ದನಿಯಲ್ಲಿ ಪ್ರತಿಭಟಿಸುವ ಜನಪರ ಹೋರಾಟಗಾರರ ವಿರುದ್ಧ ಕ್ರಿಮಿನಲ್ ಜಾಥಾಗಳನ್ನು ಬೇಕಾಬಿಟ್ಟಿಯಾಗಿ ದಾಖಲಿಸಿ ಅವರನ್ನು ಜೈಲಿಗೆ…

  • ಈಗಿನ ಜಗತ್ತನ್ನೂ ನಮ್ಮ ಬದುಕನ್ನೂ ಗಮನಿಸಿದರೆ ನಾವು ಹಲವಾರು ಅನುಕೂಲಗಳನ್ನು ಅನುಭವಿಸುತ್ತಿರುವುದು ನಮ್ಮ ಅರಿವಿಗೆ ಬರುತ್ತದೆ. ಉದಾಹರಣೆಗೆ ವೇಗದ ಪ್ರಯಾಣ, ಪತ್ರಿಕೆ ಮತ್ತು ಪುಸ್ತಕಗಳ ಮೂಲಕ ಸುಲಭ ಲಭ್ಯ ಮಾಹಿತಿ, ಕೊರೊನಾ ವೈರಸಿನಂತಹ ಅಪಾಯಕಾರಿ ಸೂಕ್ಷ್ಮಜೀವಿಯನ್ನೂ ನಿಯಂತ್ರಿಸಿದ ವೈದ್ಯಕೀಯ ಬೆಳವಣಿಗೆಗಳು ಇತ್ಯಾದಿ.

    ಇವುಗಳಲ್ಲಿ ಏನೇನೂ ವಿಶೇಷವಿಲ್ಲ; ಇವೆಲ್ಲ ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗ ಎಂದು ನಮಗೆ ಅನಿಸುತ್ತದೆ. ಆದರೆ, ಐದಾರು ಶತಮಾನಗಳ ಮುಂಚೆ ಪರಿಸ್ಥಿತಿ ಹೇಗಿದ್ದಿರಬಹುದು? ಸಾವಿರಾರು ವರುಷಗಳ ಮುಂಚೆ ಮಾನವರು ಕಾಡುಮೇಡುಗಳಲ್ಲಿ ವಾಸ ಮಾಡುತ್ತಿದ್ದಾಗ, ಇವು ಯಾವುದೇ ಸವಲತ್ತುಗಳು ಲಭ್ಯವಿಲ್ಲದಿದ್ದಾಗ ಬದುಕು ಹೇಗಿದ್ದಿರಬಹುದು? ಅದನ್ನೆಲ್ಲ ಈಗ ಕಲ್ಪಿಸುವುದೂ ಬಹಳ ಕಷ್ಟ.

    ನಾಗರಿಕತೆ ಬೆಳೆದಂತೆ,…

  • ಆರತಿಯವರ ಬರೆಹದಲ್ಲಿ ಸ್ತ್ರೀ ಪರವಾದ ಧೋರಣೆಯಿದೆ. ಅದು ಸಹಜ ಮತ್ತು ನ್ಯಾಯ ಸಮ್ಮತ ಕೂಡ. ನಾವು ಬಹಳ ಆಧುನಿಕರಾಗಿದ್ದೇವೆ ಎಂಬ ಹೆಮ್ಮೆಯ ಒಳಗೆ ಅವಿತ ನೂರಾರು ಕರಾಳಮುಖಗಳನ್ನು, ವಿಷ ಹೃದಯಗಳನ್ನು ಕಾಣಲಾರೆವು. ಈ ಒಣ ಹೆಮ್ಮೆಯ ಬಣವೆಗೆ ಸಣ್ಣ ಕಿಡಿಸೋಕಿಸುತ್ತಾರೆ, ಲೇಖಕಿ ಎಂಬುದು ಲೇಖಕ ರಾಧಾಕೃಷ್ಣ ಕಲ್ಚಾರ್ ಅವರ ಮಾತು. ಲೇಖಕಿ ಆರತಿ ಪಟ್ರಮೆ ಅವರ ‘ಒಂದು ಕಪ್ ಚಹಾ ಸಿಗಬಹುದೇ ?’ ಎಂಬ ಲಲಿತ ಪ್ರಬಂಧ ಸಂಕಲದಲ್ಲಿ ಅವರು ಬರೆದ ಮುನ್ನುಡಿಯಾದ “ನಲ್ನುಡಿ" ಇಲ್ಲಿದೆ... 

    “ಲೇಖಕಿಯಾಗಿ, ಯಕ್ಷಗಾನ ಕಲಾವಿದೆಯಾಗಿ, ಅಂಕಣಕಾರ್ತಿಯಾಗಿ ಈಗಾಗಲೇ ಪ್ರಸಿದ್ಧರಾಗಿರುವ ಆರತಿ ಪಟ್ರಮೆಯವರ ಲೇಖನಿ ಸಶಕ್ತವಾದುದು. ಅವರ ಹಿಂದಿನ ಕೃತಿಗಳು ಓದುಗರ ಗಮನ ಸೆಳೆದು ಸಾರ್ಥಕವಾಗಿವೆ. ಆ…

  • “ನಮ್ಮ ತಾಯ್ನುಡಿ ಕನ್ನಡದಲ್ಲಿ ಕ್ರಿಕೆಟ್ ಗೆ ಒತ್ತು ಕೊಟ್ಟು ಹೊರಬಂದಿರುವ ಈ ಬಗೆಯ ಪುಸ್ತಕವನ್ನು ನಾನೆಂದು ಕಂಡಿಲ್ಲ. ಆದುದರಿಂದ ಇದು ಒಂದು ವಿಶೇಷ ಹಾಗೂ ವಿಭಿನ್ನ ಪ್ರಯತ್ನ ಎನಿಸಿಕೊಂಡು ಒಬ್ಬ ಕ್ರಿಕೆಟಿಗನಾದ ನನ್ನ ಮನಸ್ಸಿಗೆ ಇನ್ನೂ ಹತ್ತಿರ ಆಗಿದೆ. ಕನ್ನಡದಲ್ಲಿ ಕ್ರಿಕೆಟ್ ನ ಟೆಕ್ನಿಕಲ್ ವಿಷಯಗಳನ್ನು ಈ ಪುಸ್ತಕದಲ್ಲಿ ಸರಳವಾಗಿ ಬರೆದಿರುವುದರಿಂದ ಕನ್ನಡಿಗರು ಆಟವನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಖಂಡಿತ ಸಹಕಾರಿಯಾಗಲಿದೆ ಎಂದೆನಿಸುತ್ತಿದೆ” ಎನ್ನುತ್ತಾರೆ ಮಾಜಿ ಅಂತರಾಷ್ಟ್ರೀಯ ಕ್ರಿಕೆಟರ್ ದೊಡ್ಡ ಗಣೇಶ. ಲೇಖಕಿ ಮೇಘನಾ ಸುಧೀಂದ್ರ. ಅವರ ‘ಅಂಗಳದಿಂದ ಬೈನರಿಯವರೆಗೆ’ ಕೃತಿಯಲ್ಲಿ ಬರೆದಿರುವ ಮುನ್ನುಡಿಯ ಮಾತು ನಿಮ್ಮ ಓದಿಗಾಗಿ..

    “ನಮ್ಮೆಲ್ಲರ…

  • ಮುನ್ನುಡಿಯಲ್ಲಿ ಹೇಳಿದ ಹಾಗೆ ಇಲ್ಲಿ ಉಪನ್ಯಾಸಕ ಕೃಷ್ಣಚಂದ್ರ ಪ್ರಧಾನ ಪಾತ್ರ, ವೇಶ್ಯಾ ವಂಶ ಎನ್ನಲಾಗುವ ಗೇಟ್ ಭಾರತಿ ಪ್ರವೇಶಿಸಿ ಕಥೆ ಬೆಳೆಸುತ್ತಾಳೆ. ಆ ಕಾಲದ ವೇಶ್ಯಾ ಮನಸ್ಥಿತಿಯನ್ನು ಅರಿಯಲು ಗೇಟ್ ಭಾರತಿಯ ಮೂಲಕ ಸಂಶೋಧನೆಗೆ ತೊಡಗಿ ಭೂವರಾಹ ಪಾಂಡ್ಯನ ಕಥೆಯನ್ನು ಹೇಳುತ್ತಾ ಹೋಗುತ್ತಾರೆ.

    ಸುಮಿತ್ರ ಹೆರಿಗೆಗೆಂದು ತವರುಮನೆಗೆ ಹೋಗಿ ಕೃಷ್ಣಚಂದ್ರ ಬ್ರಹ್ಮಚಾರಿ ಜೀವನಕ್ಕೆ ಮರಳಿದ್ದ, ಗೇಟ್ ಭಾರತಿಯ ಕುಟುಂಬಕ್ಕೂ ಹಾಗು ಬೂಬಾವರದ ಗಣ್ಯವ್ಯಕ್ತಿ ಪಟೇಲ್ ಗುಣಪಾಲ ಸೆಟ್ಟಿಯವರ ಕುಟುಂಬಕ್ಕೆ ಸಂಬಂಧ ಇದೆಯನ್ನುವುದನ್ನು ಆಧಾರವಾಗಿಟ್ಟುಕೊಂಡು ತನ್ನ ಪಿ.ಎಚ್.ಡಿ ಅಧ್ಯಯನ ಮಾಡಲು ಆಸಕ್ತನಾಗಿದ್ದ, ಆದರೆ ಪಾಂಡ್ಯ ರಾಜ್ಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಗೇಟ್ ಭಾರತಿಯ…

  • ಕೆಲವು ಕತೆಗಳನ್ನು ಓದುಗರು ಹೀಗೂ ಪ್ರವೇಶಿಸಬಹುದು ಎಂಬುದಕ್ಕೆ ಈ ಕಥಾ ಸಂಕಲನದಲ್ಲಿ ನಿದರ್ಶನಗಳಿವೆ. ‘ಸೂರೊಳೊಂದು ಕಿಟಕಿ’ ಕತೆಯಲ್ಲಿ ಮನುಷ್ಯನ ಹಸಿವಿಗೂ ಹಂಬಲಕ್ಕೂ ಮೂಲ ಕಾರಣ ಭ್ರಮೆ ಎಂಬುದನ್ನು ಪೂರ್ಣಿಮಾ ಸರಳವಾಗಿ ಪ್ರತಿಪಾದಿಸುತ್ತಾರೆ” ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಗೋಪಾಲ ಕೃಷ್ಣ ಕುಂಟಿನಿ. ಕತೆಗಾರ್ತಿ ಪೂರ್ಣಿಮಾ ಮಾಳಗಿಮನಿಯವರ ‘ಡೂಡಲ್ ಕತೆಗಳು’ ಕೃತಿಗೆ ಬರೆದಿರುವ ಮುನ್ನುಡಿ ಹೀಗಿದೆ...

    “ಸ್ನೇಹಿತೆ ಪೂರ್ಣಿಮಾ ಮಾಳಗಿಮನಿ ‘ಡೂಡಲ್ ಕತೆ’ಗಳನ್ನು ಬರೆದಿದ್ದಾರೆ. ಡೂಡಲಿಂಗ್ ಎನ್ನುವುದು ಸೃಜನಶೀಲ ಚಿಂತನೆಯನ್ನು, ಮಾಸುವ ಒಂದು ಕಲೆ. ಈ ಸಂಕಲನದಲ್ಲಿ ಬರುವ ಅಷ್ಟೂ ಕತೆಗಳು ಒಂದು ರೀತಿಯಲ್ಲಿ ಜೀವನದ ಬೃಹತ್ ಕ್ಯಾನ್ವಾಸ್ ಮೇಲೆ ನಾವಿಡುವ ಒಂದೊಂದು…

  • ಆಬಿದ್ ಸುರತಿ ಅವರ ನವಾಬ್ ರಂಗೀಲೆ ಎಂಬ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಡಿ. ಎನ್. ಶ್ರೀನಾಥ್. ಇದಕ್ಕೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಆಬಿದ್ ಸುರತಿ. ಮಕ್ಕಳ ಪುಸ್ತಕವಾದರೂ ಹಿರಿಯರನ್ನೂ ಚಿಂತನೆಗೆ ಹಚ್ಚುವ ಪುಸ್ತಕವಿದು.

    ಭಾರತ - ಪಾಕಿಸ್ಥಾನದ ಗಡಿಯ ಪಕ್ಕದ ನಗಡಾಪುರದಲ್ಲಿ ನಡೆಯುವ ಕಾಲ್ಪನಿಕ ಘಟನೆಗಳ ಸರಣಿಯ ಕಥನ ಇದು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನಗಡಾಪುರ ರಾಜ್ಯ ನಮ್ಮ ದೇಶದೊಂದಿಗೆ ಸೇರಬೇಕಾಯಿತು. ಅದರೊಂದಿಗೆ ನವಾಬನ ನವಾಬಗಿರಿ ಅಂತ್ಯವಾಗಿತ್ತು. ಆದರೆ ಆ ರಾಜ್ಯದ ಪ್ರಜೆಗಳು ಇನ್ನೂ ಇದ್ದರು. ಅಲ್ಲಿನ ಹಿರಿಯರು ಇಂದಿಗೂ ರಸಿಕ ನವಾಬನನ್ನು ಗೌರವದಿಂದ ಕಾಣುತ್ತಿದ್ದರು …. ನವಾಬಗಿರಿಯೊಂದೇ ಅಲ್ಲ, ಕಾಲದೊಂದಿಗೆ ಎಲ್ಲವೂ ಬದಲಾದವು. ಈಗ ರಸಿಕ ನವಾಬರು ಒಂದು ಚಿಕ್ಕ ಮನೆಯಲ್ಲಿ ತಮ್ಮ ರಸಿಕ ಬೇಗಂಳೊಂದಿಗೆ…

  • ‘ಚಾಲುಕ್ಯರ ಶಿಲ್ಪಕಲೆ’ ಕೃತಿಯು ಪುಂಡಲೀಕ ಕಲ್ಲಿಗನೂರ ಅವರ ಸಂಶೋಧನಾ ಗ್ರಂಥ. ಈ ಬೃಹತ್ ಗ್ರಂಥದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಚಿತ್ರಗಳಿವೆ. ಈ ಚಿತ್ರಗಳು ಚಾಲುಕ್ಯರ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುತ್ತವೆ. ಪುಸ್ತಕದ ಕಲಾತ್ಮಕ ಪುಟ ವಿನ್ಯಾಸ ಓದುಗರನ್ನು ಸೆಳೆಯುತ್ತವೆ.

    ಕೃತಿಗೆ ಬೆನ್ನುಡಿ ಬರೆದಿರುವ ನಳಿನ ಡಿ. ಅವರು, ಜಗತ್ತಿನ ಇತಿಹಾಸ ಕಟ್ಟುವಲ್ಲಿ ಶಿಲ್ಪಗಳು, ಸ್ಮಾರಕಗಳು, ಶಾಸನಗಳು ತಮ್ಮದೇ ಆದ ಕೊಡುಗೆ ನೀಡಿದೆ. ಆದರೂ ಇತಿಹಾಸವೇ ಹಾಗೆ ತಿರುಚುಮಲ್ಲನ ಘೋರ ಕಾಳಗದ ನಡುವೆ ಎಲ್ಲೆಲ್ಲೋ ಸತ್ಯಗಳು ಅಡಗಿರುವುದನ್ನು ಕಾಣಬಹುದು. ಸತ್ಯಶೋಧನೆಗೆ ಒಳಪಡಿಸದೆ ಒಪ್ಪಬಾರದೆಂಬ ತತ್ವಕ್ಕೆ ಕಟ್ಟುಬಿದ್ದವರಿಗೆ ಇತಿಹಾಸವೆಂದು ತಿಳಿದಿದಕ್ಕಿಂತ ಸಂಶೋಧನಾತ್ಮಕವಾಗಿ…

  • "ಎದೆ ಹಾಲಿನ ಪಾಳಿ " ಲೇಖಕರಾದ ಆರಫ್ ರಾಜಾ ಅವರ ಕೃತಿ. ಬದುಕಿನ ಗಟ್ಟಿ ತುಮುಲಗಳನ್ನು, ಸಂಘರ್ಷಗಳನ್ನು, ಅನುರಾಗದ ಅಲೆಗಳನ್ನು ಹಾಗೂ ಮಮತೆಯ ಸೆಲೆಯನ್ನು ತಮ್ಮದೇ ಆದ ಪದಗಳಲ್ಲಿ ಬಂಧಿಸಿ ಕವಿತೆಯಾಗಿಸಿದ್ದಾರೆ. ಪ್ರತಿ ಕವಿತೆಗಳು ಒಂದು" ಜಗತ್ತು" ಎನ್ನುವಷ್ಟು ಆಳವಾಗಿವೆ, ಈ ಜಗದ ಸಂತೆ (ಕವಿತೆ ಒಳಗಿನ ಭಾವ) ಓದುಗರನ್ನು ಚಿಂತನೆಗೆ ಒಯ್ಯುತ್ತವೆ. ನೀರಿಗಾಗಿ ನಳದ ಮುಂದೆ (ನಲ್ಲಿ) ಪಾಳಿ, ಟಿಕೆಟ್ ಗಾಗಿ ಸಿನಿಮಾ ಥಿಯೇಟರ್ ಅಲ್ಲಿ ಪಾಳಿ, ಬ್ಯಾಂಕಿನಲ್ಲಿ ಸಂಬಳಕ್ಕಾಗಿ ಪಾಳಿ (ಈಗ ಚಿತ್ರಣ ಸ್ವಲ್ಪ ಬದಲಾಗಿದೆ), ಓಟಿಗಾಗಿ-ನೋಟಿಗಾಗಿ ಪಾಳಿ, ಭಾರತ ನೋಡದ ಸರತಿ ಸಾಲು ಇಲ್ಲವೇ ಇಲ್ಲ... ಈಗೀಗ ಪಾಳಿ(ಸರತಿ ಸಾಲು) ವಿವಿಧ ಉದ್ದೇಶ, ಅವರರವರ ಅನುಕೂಲಕ್ಕಾಗಿ ಪಾಳಿ ಬದಲಾಗಿದೆ ಅಷ್ಟೇ, ಆದರೆ ಪಾಳಿಯೇ ಇಲ್ಲ ಎಂಬುದಿಲ್ಲ…