ಪುಸ್ತಕ ಸಂಪದ

  • ಖ್ಯಾತ ಆಂಗ್ಲ ಲೇಖಕರಾದ ಅಮೀಶ್ ತ್ರಿಪಾಠಿ ಅವರ ರಾಮಚಂದ್ರ ಸರಣಿಯ ಮೊದಲ ಪುಸ್ತಕವೇ ‘ಇಕ್ಷ್ವಾಕು ಕುಲತಿಲಕ' (Scion of Ikshvaku). ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಬಿ.ಕೆ.ಎಸ್. ಮೂರ್ತಿ ಇವರು. ಶಿವ ಸರಣಿಯ ಮೂರು ಪುಸ್ತಕಗಳನ್ನು (ಮೆಲೂಹದ ಮೃತ್ಯುಂಜಯ, ನಾಗ ರಹಸ್ಯ, ವಾಯುಪುತ್ರರ ಶಪಥ - ಅನುವಾದ: ಎಸ್.ಉಮೇಶ್) ಈಗಾಗಲೇ ಕನ್ನಡದಲ್ಲಿ ಓದಿರುತ್ತೀರಿ. ಪೌರಾಣಿಕ ಪಾತ್ರಗಳನ್ನು ಈಗಿನ ಕಾಲಕ್ಕೆ ಸೂಕ್ತವಾಗುವಂತೆ ಮಾರ್ಪಾಡು ಮಾಡಿ ಮೂಲ ಉದ್ದೇಶಕ್ಕೆ, ಕಥೆಗೆ ಚ್ಯುತಿಯಾಗದಂತೆ ಬರೆವ ಕಲೆ ಅಮೀಶ್ ಅವರಿಗೆ ಸಿದ್ಧಿಸಿದೆ. 

    ಈ ಪುಸ್ತಕದ ಬೆನ್ನುಡಿಯಲ್ಲಿ “ರಾಮರಾಜ್ಯ ಅತಿ ಶ್ರೇಷ್ಟ ನೆಲ. ಆದರೆ…

  • ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ೧೯೮೯-೯೦ರ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಕೈಗೊಂಡಿರುವ 'ಜನಪ್ರಿಯ ಪುಸ್ತಕ ಮಾಲೆ' ಒಂದು ಮೊದಲ ಹೆಜ್ಜೆ. ಇಂದಿನ ಈ ಪುಸ್ತಕ ಪ್ರಕಟಣೆ ಯೋಜನೆಯು ಮುಂದೆ ‘…

  • ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಅನುಮಾನಾಸ್ಪದ ಸಾವಿನ ಕುರಿತು ಬೆಳಕು ಚೆಲ್ಲುವ ‘ತಾಷ್ಕೆಂಟ್ ಡೈರಿ' ಎಂಬ ಪುಸ್ತಕ ಬರೆದ ಖ್ಯಾತ ಲೇಖಕರಾದ ಎಸ್.ಉಮೇಶ್ ಅವರ ಲೇಖನಿಯಿಂದ ಹೊರಬಂದ ನೂತನ ಕೃತಿ ‘ಸಿಯಾಚಿನ್'. ಜಗತ್ತಿನ ಭಯಾನಕ ಯುದ್ಧಭೂಮಿಯ ಸಾಹಸಗಾಥೆ ಇದು. ಜನ ಸಾಮಾನ್ಯರಿಗೆ ಹೋಗಲು ಕಷ್ಟ ಸಾಧ್ಯವಾದ, ಅಲ್ಲಿಯ ಬಗ್ಗೆ ಕೇಳಿಯಷ್ಟೇ ತಿಳಿದಿರುವವರಿಗೆ ಸಮಗ್ರ ಮಾಹಿತಿಯನ್ನು ಒಂದು ಪ್ರವಾಸ ಕಥನದ ರೀತಿಯಲ್ಲಿ ಬರೆದಿದ್ದಾರೆ. ಲೇಖಕರು ಸಿಯಾಚಿನ್ ದಾರಿಯಲ್ಲಿ ಕಂಡ ಪ್ರತಿಯೊಂದು ಪುಟ್ಟ ಪುಟ್ಟ ಅಂಶವನ್ನು ಸೊಗಸಾಗಿ ಹಂಚಿಕೊಂಡಿದ್ದಾರೆ ಮತ್ತು ಪ್ರತಿಯೊಂದು ವಿಷಯದ ಬಗ್ಗೆ ನಮ್ಮಲ್ಲಿ ಮೂಡಬಹುದಾದ ಸಂಶಯವನ್ನು ಪರಿಹರಿಸಿದ್ದಾರೆ. 

  • ಕುವೆಂಪು ಅವರ “ಮಲೆನಾಡಿನ ಚಿತ್ರಗಳು" ಹಲವು ಬಾರಿ ಮರುಮುದ್ರಣವಾಗಿರುವ ಕನ್ನಡದ ಜನಜನಿತ ಪುಸ್ತಕ. “ಮಲೆನಾಡಿಗೆ ಬಾ" ಎಂಬ ಕವಿತೆ ಮತ್ತು ಹನ್ನೆರಡು ಅಕ್ಷರಚಿತ್ರಗಳ ಮೂಲಕ ಮಲೆನಾಡಿನ ಪ್ರಕೃತಿ ಮತ್ತು ಬದುಕನ್ನು ಅಮರವಾಗಿಸಿರುವ ಪುಸ್ತಕ. (ಮೊದಲ ಮುದ್ರಣ ೧೯೩೩)

    “ಮಲೆನಾಡಿನ ಚಿತ್ರಗಳು" ಮೂಡಿ ಬಂದ ಬಗೆಯನ್ನು ಮುನ್ನುಡಿಯಲ್ಲಿ ಕುವೆಂಪು ಅವರ ಆಪ್ತವಾಗಿ ಹೀಗೆ ತಿಳಿಸಿದ್ದಾರೆ: “ಮಲೆನಾಡನ್ನು ಬಿಟ್ಟುಬಂದು ಬಯಲುಸೀಮೆಯಲ್ಲಿದ್ದಾಗ ನನ್ನ ಮನಸ್ಸು ಆಗಾಗ್ಗೆ ತವರುನಾಡಿನ ಚೆಲುವು ಗೆಲುವುಗಳನ್ನೂ ದೃಶ್ಯಗಳನ್ನೂ ಸನ್ನಿವೇಶಗಳನ್ನೂ ನೆನೆದು ಸುಖಪಡುತ್ತದೆ. ನನ್ನ ಆಪ್ತಮಿತ್ರರಿಗೆ ಅವುಗಳನ್ನು ಹೇಳಿ ನಲಿಯುತ್ತದೆ. ಅದರ ಪರಿಣಾಮವೇ ಈ “ಮಲೆನಾಡಿನ ಚಿತ್ರಗಳು.” ಒಂದು ದಿನ ಸಾಯಂಕಾಲ ನಾನು ಶ್ರೀಮಾನ್ ವೆಂಕಣ್ಣಯ್ಯನವರೊಡನೆ (ಮೈಸೂರಿನ)…

  • ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು ಪುಸ್ತಕ ಬರೆದವರು ಪತ್ರಕರ್ತರಾದ ರವಿ ಬೆಳಗೆರೆ ಇವರು. ಇವರು ತಮ್ಮ ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ಇಲ್ಲಿ ಆರು ದಶಕ ಅವಿಚ್ಛಿನ್ನವಾಗಿ ಹಾರಿದ್ದು ಕಾಂಗ್ರೆಸ್ ಪತಾಕೆ. ನನ್ನ ಜಿಲ್ಲೆಯ ಕೆನ್ನೆ, ಬೆಟ್ಟಗಳ ಎದೆಗೆ ಮೊದಲ ಹಾರೆ ಹಾಕಿದ್ದೂ ಕಾಂಗ್ರೆಸಿಗರೇ. ಇಂದಿರಾ ಗಾಂಧಿಯಿಂದ ಹಿಡಿದು ಸೋನಿಯಾ ಗಾಂಧಿಯ ತನಕ ನಿರಂತರವಾಗಿ ಕಾಂಗ್ರೆಸ್ ಅಧಿನಾಯಕರು ಹೇಳಿದ ಸರಣಿ ಸುಳ್ಳುಗಳನ್ನು ನಮ್ಮ ಜನ ಕೇಳಿಸಿಕೊಂಡೇ ಬಂದಿದ್ದಾರೆ. ಬಡತನ ಮತ್ತು ಅಮಾಯಕತೆ ಆವರಿಸಿಕೊಂಡ ಈ ನೆಲದಲ್ಲಿ ಇದ್ದಕ್ಕಿದ್ದಂತೆ ಆರಂಭವಾದದ್ದು ಮೈನಿಂಗ್ ಬೂಮ್! ಆನಂತರ ಇಲ್ಲಿ ಜನರ ನೆತ್ತಿಯ ಮೇಲೆ ಕಾಗೆ ಹಾರಿದಂತೆ ಹೆಲಿಕಾಪ್ಟರು-ವಿಮಾನ ಹಾರಿದವು. ಆಟೋ…

  • ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಜೋಗಿಯವರು ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರೆದ ಲೇಖನಗಳ ಸಂಗ್ರಹವೇ ‘ರವಿ ಕಂಡದ್ದು-ರವಿ ಕಾಣದ್ದು’. ರವಿ ಕಂಡದ್ದು ವಿಭಾಗದಲ್ಲಿ ರವಿ ಬೆಳಗೆರೆಯವರ ಲೇಖನಗಳಿವೆ. ಇವುಗಳ ವೈಶಿಷ್ಟ್ಯವೆಂದರೆ ಬದುಕನ್ನು ತಲಸ್ಪರ್ಶಿಯಾಗಿ ನೋಡುವ ಕ್ರಮ. ಕಂಡದ್ದನ್ನು ಚುರುಕಾಗಿ, ಆಸಕ್ತ ಪೂರ್ಣವಾಗಿ ದಾಖಲಿಸುವ ಅಭಿವ್ಯಕ್ತಿ ವಿಧಾನ ಮತ್ತು ಇವೆಲ್ಲಕ್ಕೂ ಒಂದು ಆರೋಗ್ಯಪೂರ್ಣ ವ್ಯಂಗ್ಯವನ್ನು ಬೆರೆಸಿ ಹೇಳಬಲ್ಲ ಜೀವಂತ ಶೈಲಿ. ಲಾಲ್ ಬಾಗ್ ಪ್ರೇಮಿಗಳ ಬಗ್ಗೆಯಾಗಲೀ, ಶೆಟ್ಟರುಗಳ ಬಗ್ಗೆಯಾಗಲೀ, ಸಮಾನ ತೀವ್ರತೆಯಿಂದ ರವಿ ಬೆಳಗೆರೆ ಬರೆದಿದ್ದಾರೆ.

    ‘ರವಿ ಕಂಡದ್ದು' ರವಿ ಬೆಳಗೆರೆಯವರು…

  • ಜಯಶ್ರೀ ಕಾಸರವಳ್ಳಿ ಅವರ ಎರಡನೆಯ ಕಥಾ ಸಂಕಲನ ಇದು. ಶಿವಮೊಗ್ಗದಲ್ಲಿ ಬಾಲ್ಯದ ಶಿಕ್ಷಣ ಪಡೆದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದವರು. ಹಲವು ವರುಷ ಚೆನ್ನೈಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ಅನಂತರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

    ವಿಶಿಷ್ಟ ಸಂವೇದನೆಯ ಕತೆಗಾರ್ತಿಯೆಂದು ಗುರುತಿಸಲ್ಪಟ್ಟಿರುವ ಜಯಶ್ರೀ, "ನನ್ನ ಮಾತಿ"ನಲ್ಲಿ ಬಾಲ್ಯದ ಘಟನೆಯೊಂದನ್ನು ಹಂಚಿಕೊಂಡು (ಮೂರು ಹೆಣ್ಣು ಮಕ್ಕಳನ್ನು ಹೆತ್ತ ತಾಯಿಯೊಬ್ಬಳು, ಗಂಡು ಮಗುವಿಗಾಗಿ ಮನೆಯವರೆಲ್ಲರ ಒತ್ತಾಯಕ್ಕೆ ಮತ್ತೆ ಗರ್ಭಿಣಿಯಾಗಿ, ಪುನಃ ಹೆಣ್ಣು ಹೆತ್ತಾಗ ಮಾಡುವ ಬಿಡುಗಡೆಯ ಉದ್ಗಾರ) ಹೀಗೆ ಬರೆಯುತ್ತಾರೆ: “ಬರೆಯುವ ಪ್ರತಿ ಕ್ಷಣದಲ್ಲೂ ಬಾಲ್ಯದ ಈ ಘಟನೆ ನನಗೆ ನೆನಪಿಗೆ ಬರುತ್ತಿರುತ್ತದೆ. ಪ್ರಾಯಶಃ ಎಲ್ಲವೂ ಒಂದು ಬಿಡುಗಡೆಯ ಪ್ರಯತ್ನವೇ.…

  • ಹೆಸರೇ ಹೇಳುವಂತೆ ಇದೊಂದು ಅಡುಗೆ ಪುಸ್ತಕ. ಚಪಾತಿಗೆ ಸೂಕ್ತವೆನಿಸುವ ೧೦೦ ಕರಿಗಳನ್ನು ಅಥವಾ ಮೇಲೋಗರಗಳನ್ನು ಲೇಖಕಿಯವರು ಈ ಪುಸ್ತಕದಲ್ಲಿ ನೀಡಿದ್ದಾರೆ. ದಿನಕ್ಕೊಂದು ಕರಿಯನ್ನು ಮಾಡಿದರೂ ನೂರು ದಿನಕ್ಕೆ ತೊಂದರೆಯಿಲ್ಲ.  

    ಕರ್ನಾಟಕ ಸರಕಾರದಲ್ಲಿ ಸಚಿವೆಯಾಗಿದ್ದ ರಾಣಿ ಸತೀಶ್ ಅವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ “ ಹದವರಿತು ಅಡುಗೆ ಮಾಡುವುದು ಒಂದು ಕಲೆ. ಅಡುಗೆಯಲ್ಲಿ ವೈವಿಧ್ಯತೆಯನ್ನು ಕಾಣಿಸುವ ಕಲಾವಂತಿಕೆಯ ಜೊತೆಗೆ ಬದುಕಿಗೆ ಶಕ್ತಿ ಕೊಡುವ, ಆರೋಗ್ಯವನ್ನು ಕಾಪಾಡಿಕೊಳ್ಳುವ ಯುಕ್ತಿಯನ್ನು ಕಲಿತರೆ ‘ಊಟ ಬಲ್ಲವನಿಗೆ ರೋಗವಿಲ್ಲ' ಎನ್ನುವ ಉಕ್ತಿಯ ಶಕ್ತಿಯನ್ನು ನಮ್ಮದಾಗಿಸಿಕೊಳ್ಳಬಹುದು. 

  • ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ೧೯೮೯-೯೦ರ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಕೈಗೊಂಡಿರುವ 'ಜನಪ್ರಿಯ ಪುಸ್ತಕ ಮಾಲೆ' ಒಂದು ಮೊದಲ ಹೆಜ್ಜೆ. ಇಂದಿನ ಈ ಪುಸ್ತಕ ಪ್ರಕಟಣೆ ಯೋಜನೆಯು ಮುಂದೆ ‘…

  • ಇತ್ತೀಚೆಗೆ ಮಹಾತ್ಮ ಗಾಂಧೀಜಿಯವರ ಬಗೆಗೆ ವಿಪುಲವಾದ ಸಾಹಿತ್ಯ ಪ್ರಕಟಗೊಳ್ಳುತ್ತಿರುವುದು ಸ್ವಾಗತಾರ್ಹ. ಸಾಮಾನ್ಯವಾಗಿ ಗಾಂಧಿಯ ಬಗೆಗೆ ಬರೆಯುವವರು ಎರಡು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಗಾಂಧಿ ಚರಿತ್ರೆಗೆ ಸಂಬಂಧಿಸಿದ್ದು, ಮತ್ತೊಂದು ಗಾಂಧಿವಾದಕ್ಕೆ ಸಂಬಂಧಿಸಿದ್ದು. ಆದರೆ ಉದಯ ಕುಮಾರ ಹಬ್ಬು ಅವರು ಇವೆರಡಕ್ಕಿಂತ ಭಿನ್ನವಾದ, ಇದುವರೆಗೆ ಯಾರೂ ಬರೆಯದ ಕಥನ ಮಾರ್ಗದ ಮೂಲಕ ಗಾಂಧಿಯ ಅಗೋಚರ, ಅಪರಿಚಿತ ಹಾಗೂ ಅಪರೂಪದ ಮಾರ್ಗ ಹಿಡಿದಿರುವುದು ವಿಶೇಷ. ಇಲ್ಲಿ ಮಹಾತ್ಮ ಗಾಂಧಿಯವರ ಜೀವನದಲ್ಲಿ ನಡೆದ ಹತ್ತು ಹಲವು ಪ್ರಸಂಗಗಳಿಗೆ ಕನ್ನಡಿ ಹಿಡಿದಿದ್ದಾರೆ. ಹಬ್ಬು ಅವರು ಗಾಂಧಿಯನ್ನು ನೋಡುವ, ರೂಪಿಸುವ ಮಾದರಿಯೇ ಭಿನ್ನ ಹಾಗೂ ಅನನ್ಯ.