ಪುಸ್ತಕ ಸಂಪದ

  • ಈ ಉಪಯುಕ್ತ ಪುಸ್ತಕದ ಉಪಶೀರ್ಷಿಕೆ: ಔಷಧಿಗಳ ಗುಣ, ಉಪಯೋಗ ಮತ್ತು ಸೇವಿಸುವ ವಿಧಾನಗಳು. ಜೊತೆಗೆ “ವೈದ್ಯರ ಉಪಯೋಗಕ್ಕಾಗಿ ಮಾತ್ರ" ಎಂಬ ಎಚ್ಚರಿಕೆ ಮುಖಪುಟದಲ್ಲೇ ಇದೆ.

    ಗಮನಾರ್ಹ ಸಂಗತಿಯೆಂದರೆ ಇದರ ಕನ್ನಡ ಆವೃತ್ತಿಯ 25,000 ಪ್ರತಿಗಳನ್ನು ಮುದ್ರಿಸಲಾಗಿದೆ! ಕನ್ನಡದ ಪುಸ್ತಕಗಳ ಒಂದು ಸಾವಿರ ಪ್ರತಿಗಳನ್ನು ಮುದ್ರಿಸುವುದನ್ನು ನಿಯಮದಂತೆ ಪಾಲಿಸಲಾಗುತ್ತದೆ (ಇದಕ್ಕೆ ಕೆಲವು ವಿನಾಯ್ತಿಗಳಿವೆ). ಯಾಕೆಂದರೆ, ಬಹುಪಾಲು ಪುಸ್ತಕಗಳ ಒಂದು ಸಾವಿರ ಪ್ರತಿಗಳು ಮಾರಾಟವಾಗಲು 3ರಿಂದ 10 ವರುಷ ತಗಲುತ್ತದೆ! ಹಾಗಿರುವಾಗ, ವೈದ್ಯರು ಮಾತ್ರ ಓದುಗರಾಗಿರುವ ಈ ಪುಸ್ತಕದ ಇಪ್ಪತ್ತೈದು ಸಾವಿರ ಪ್ರತಿಗಳನ್ನು ಮುದ್ರಿಸಿದ್ದು ಪ್ರಕಾಶಕರ ಸಾಹಸ.

    ಪ್ರಕಾಶಕರು ಆಯುರ್ವೇದಕ್ಕೆ ಸಂಬಂಧಿಸಿದ ಇತರ 43 ಪುಸ್ತಕಗಳನ್ನು ಸಂಸ್ಕೃತ, ಹಿಂದಿ…

  • ತಾವು ಬದುಕಿದ ಅಲ್ಪ ಕಾಲದಲ್ಲೇ ಮರೆಯಲಾಗದ ಛಾಪನ್ನು ಮೂಡಿಸಿ ನಮ್ಮಿಂದ ಅಗಲಿದ ಮಹನೀಯರನ್ನು ಪರಿಚಯಿಸುವ ‘ಅಲ್ಪಾಯುಷಿ ಮಹಾನ್ ಸಾಧಕರು' ಮಾಲಿಕೆಯ ದ್ವಿತೀಯ ಭಾಗ ಈ ಕೃತಿ. ಈ ಕೃತಿಯಲ್ಲಿ ತಮ್ಮ ಅಲ್ಪಾಯುಷ್ಯಲ್ಲೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ೨೫ ಮಹನೀಯರ ಪರಿಚಯವನ್ನು ಈ ಪುಸ್ತಕದಲ್ಲಿ ಮಾಡಿಕೊಡಲಾಗಿದೆ. 

    ‘ಅನನ್ಯ’ ಬಳಗದ ಮ್ಯಾನೇಜಿಂಗ್ ಟ್ರಸ್ಟಿಯಾದ ಡಾ. ಆರ್ ವಿ ರಾಘವೇಂದ್ರ ಇವರು ಪುಸ್ತಕದ ಬೆನ್ನುಡಿ ಬರೆದಿದ್ದಾರೆ. ಅವರು ತಮ್ಮ ನುಡಿಯಾದ ‘ಅಪರೂಪದ ದಾಖಲಾತಿ'ಯಲ್ಲಿ ಹೇಳುವುದು ಹೀಗೆ-

    “ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಕುರಿತು ಆಯಾ…

  • "ವಂಶೀ ಸಂದೇಶ" ಎಂಬ ರಸಾನುಭೂತಿ - ಶತಾವಧಾನಿ ಡಾ. ಆರ್ ಗಣೇಶರ ಕಾವ್ಯಾನುಸಂಧಾನ(ಯಥಾಮತಿ)

    ವಾಲ್ಮೀಕಿಯ ಶೋಕ ರಾಮಾಯಣ ಮಹಾಕಾವ್ಯಕ್ಕೆ ಕಾರಣವಾಯಿತು. ಆ ಶೋಕಭಾವ ವಿಶುದ್ದ ಕರುಣರಸಕ್ಕೇರಿ ಅತ್ಯಪೂರ್ವ ಆದಿಕಾವ್ಯವನ್ನು ಸೃಜಿಸುವಲ್ಲಿ ಆದಿಕವಿಯ ಕಲಾಶ್ರೀಮಂತಿಕೆ, ಅಭಿಜ್ಞತೆ ಕಾರಣವೆಂದು ಅರಿವಾಗುತ್ತದೆ. ಸತ್ಕವಿಯಲ್ಲಿ ಮೂಡಿದ ಯಾವುದೇ ಭಾವ ವ್ಯರ್ಥವಾಗದು; ಅವು ರಸದ ತುದಿಗೆ ತಲುಪಿ ಅಲ್ಲಿಂದ ಮತ್ತೊಂದು ಕಲಾಸೃಷ್ಟಿಯಾಗುತ್ತದೆ. ಅದೇ ರೀತಿಯ ಮನೋಹರ, ರಸಾರ್ದ್ರ ಕಾವ್ಯಸೃಷ್ಟಿ ಡಾ| ಶತಾವಧಾನಿ ಆರ್. ಗಣೇಶ ಅವರ  "ವಂಶೀ ಸಂದೇಶ" ಎಂಬ ಹಳಗನ್ನಡ ಕಾವ್ಯಗುಚ್ಛದಲ್ಲಿದೆ. ಗಣೇಶರ ಮೂವತ್ತರ ಹರೆಯದಲ್ಲಿ ಅವರಲ್ಲಿ…

  • ಸುರೇಶ ದೇಸಾಯಿ ಅವರ ʼ ಬೇಸಾಯದ ಕಲೆ- ಸಮೃದ್ಧ ಕೃಷಿ ಪ್ರಯೋಗಗಳುʼ ಸಾಧಕನೊಬ್ಬ, ಪ್ರಯೋಗ- ಅನುಭವದ ಮೂಲಕ ಕಂಡುಕೊಂಡ ಕೃಷಿ ಆವಿಷ್ಕಾರಗಳ ದಾಖಲೆ. ದಶಕಗಳ ಆಳ ಆನುಭವ ಇಲ್ಲಿ ಫಲರೂಪಿಯಾಗಿ ಅನಾವರಣಗೊಂಡಿದೆ. ಕರ್ನಾಟಕದಲ್ಲಿ ನಾರಾಯಣ ರೆಡ್ಡಿ, ಭರಮಗೌಡರಷ್ಟೇ ಧೀಮಂತ ಸ್ಥಾನ ಸುರೇಶ ದೇಸಾಯಿ (ಹಾಗೂ ಸೋಮನಾಥ ರೆಡ್ಡಿ ಪೂರ್ಮಾ) ಅವರಿಗಿದೆ. 

    ಕರ್ನಾಟಕದ ಸೀಸನಲ್‌ ಬೆಳೆ ಬೆಳೆಯುವ ಪ್ರದೇಶಗಳ ಬೆಳೆಗಳಲ್ಲಿ ಸುಸ್ಥಿರ ಕೃಷಿ/ ಕೃಷಿ ಪರಿಸರ ವಿಧಾನಗಳ ಬಗ್ಗೆ  ರೈತರಿಗೆ ಒಗ್ಗುವ ರೀತಿಯಲ್ಲಿ ಹೇಳುವ ವಿವರಗಳೇ ಇಲ್ಲ. ಉದಾ: ನೀರಿನಬಳಕೆ ಬಗ್ಗೆ, ಹಸಿರುಬೆಳೆಸುವ ಬಗ್ಗೆ, ಮಲ್ಚಿಂಗ್/‌ ಮುಚ್ಚಿಗೆ ಬಗ್ಗೆ,  ಅಂತರದ ಬಗ್ಗೆ…

  • “ಚಾಣಕ್ಯ ಒಬ್ಬ ಮಹಾನ್ ಕನಸುಗಾರ. ಒಂದು ರಾಜ್ಯ ಮತ್ತು ಸಂಸಾರದಲ್ಲಿ ಸನ್ಮಾರ್ಗ ಮತ್ತು ಸಂತೋಷದ ವಿಜಯವನ್ನು ನಿರೂಪಿಸುವ ಮಹಾಕಾವ್ಯ ಮಹಾಭಾರತ. ಒಂದು ಆಶ್ಚರ್ಯಕರ ಸೂತ್ರ ನೀಡುತ್ತದೆ. “ ಸಂತೋಷದ ಮೂಲ ಧರ್ಮ". ಚಾಣಕ್ಯ ಇದನ್ನೇ ಅನುಸರಿಸಿದ್ದಾನೆ.

    ಚಾಣಕ್ಯನ ಬೋಧನೆಗಳು ಜೀವನಕ್ಕೆ ಸಂಪದ್ಭರಿತವಾಗಿವೆ. ಶತಮಾನಗಳೇ ಕಳೆದರೂ, ಸ್ವಾಭಾವಿಕ ಅನಾಹುತಗಳು ಈ ಗ್ರಹದ ರೂಪ ರೇಷೆಗಳನ್ನೇ ಬದಲಾಯಿಸಿದರೂ, ಅವು ಜೀವಂತ, ಅತ್ಯಾವಶ್ಯಕ ಮತ್ತು ವಿನೂತನವಾಗಿರುತ್ತವೆ. ಅಂತಹ ಬೋಧನೆಗಳು ಎಂದೂ ನಾಶವಾಗುವುದಿಲ್ಲ; ಅಂತಹ ಮಹಾನ್ ವ್ಯಕ್ತಿಗಳು ನಿರಂತರ ನಮ್ಮೊಡನಿರುತ್ತಾರೆ. ಯಾವುದು ನಿಜವಾಗಿ ಶ್ರೇಷ್ಟತಮವಾದುದೋ ಅದನ್ನು ಎಂದೂ ನಿರ್ಮೂಲಗೊಳಿಸಲಾಗದು.” ಈ ವಾಕ್ಯಗಳು ‘ಚಾಣಕ್ಯ-ಅದ್ಭುತ ಕನಸುಗಾರ…

  • ಕತೆಗಾರ ತಮ್ಮಣ್ಣ ಬೀಗಾರ  ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ. ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು ಖುಷಿಯ ಬೀಜ ಹಾಗೂ ಹಾಡಿನ ಹಕ್ಕಿ - ಮಕ್ಕಳ ಕವನ ಸಂಕಲನ. ಮಿಂಚಿನ ಮರಿ - ಶಿಶುಪ್ರಾಸ ಹೊತ್ತಿಗೆ ಕಪ್ಪೆಯ ಪಯಣ, ಜಿಂಕೆಮರಿ, ಹಸಿರೂರಿನ ಹುಡುಗ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

    ತಮ್ಮಣ್ಣ ಬೀಗಾರ…

  • ಶಾಂತಾ ರಂಗಾಚಾರಿ ಮಕ್ಕಳಿಗಾಗಿ ಇಂಗ್ಲಿಷಿನಲ್ಲಿ ಬರೆದ ಐದು ಪೌರಾಣಿಕ ಕತೆಗಳ ಸಂಕಲನ ಇದು. ಇವನ್ನು ಕನ್ನಡಕ್ಕೆ ಅನುವಾದಿಸಿದವರು ಕೆ.ವಿ. ಸುಬ್ಬಣ್ಣ. ಚಂದದ ಚಿತ್ರಗಳನ್ನು ಬರೆದವರು ಪಿ. ಖೇಮರಾಜ್. ಇದರಲ್ಲಿರುವ ಕತೆಗಳು:
    ಸಾವಿನ ಜತೆಗೆ ಸಂಭಾಷಣೆ (ಸಾವಿತ್ರಿ - ಸತ್ಯವಾನ)
    ಏಳು ದಿನಗಳ ಕಾವಲು (ಪರೀಕ್ಷಿತ ರಾಜ - ತಕ್ಷಕ ಸರ್ಪ)
    ಉಪಮನ್ಯು ಕಲಿತ ಪಾಠ (ಗುರು ಧೌಮ್ಯ ಆಚಾರ್ಯ - ಶಿಷ್ಯ ಉಪಮನ್ಯು)
    ಭೀಮ ಕೊಂದ ಬಕಾಸುರ
    ಖಾಂಡವ ದಹನ (ಅಗ್ನಿಯ ಖಾಂಡವ ವನ ದಹನಕ್ಕೆ ಅರ್ಜುನನ ರಕ್ಷಣೆ)

    ಇವೆಲ್ಲ ನಮ್ಮಲ್ಲಿ ಹಲವರಿಗೆ ಗೊತ್ತಿರುವ ಪೌರಾಣಿಕ ಕತೆಗಳೇ ಆಗಿವೆ. ಶಾಂತಾ ರಂಗಾಚಾರಿ ಅವರು ಮಕ್ಕಳಿಗಾಗಿ ಅವನ್ನು ಸರಳ ಭಾಷೆಯಲ್ಲಿ ಹೇಳಿರುವುದೇ ಈ ಕತೆಗಳ ವಿಶೇಷ. ಜೊತೆಗೆ, ಕತೆಗಳ ಸಂದೇಶವು ಮನಮುಟ್ಟುವಂತೆ ಅವನ್ನು…

  • ೧೯೪೪ರಲ್ಲಿ ಪ್ರಥಮ ಮುದ್ರಣ ಕಂಡ, ಮಕ್ಕಳ ಸಾಹಿತಿ ಎಂದೇ ಖ್ಯಾತ ಪಡೆದ ಜಿ.ಪಿ.ರಾಜರತ್ನಂ ಅವರ ಕೃತಿಯೇ “ವೈಣಿಕನ ವೀಣೆ". ಡೆನ್ಮಾರ್ಕ್ ದೇಶದ ಕಿನ್ನರ ಕಥೆಗಾರ ಹಾನ್ಸ್ ಕ್ರಿಸ್ಟಿಯನ್ ಆಂಡರ್ ಸನ್ ಅವರು ಬರೆದ ಆರು ಕತೆಗಳನ್ನು ರಾಜರತ್ನಂ ಅವರು ರೂಪಾಂತರ ಮಾಡಿಕೊಟ್ಟಿದ್ದಾರೆ. ನಮ್ಮ ಜೀವನಕ್ಕೆ ಹೊಂದಿಕೊಳ್ಳುವಂತೆ ರೂಪಾಂತರ ಮಾಡಿದ್ದೇನೆ ಎಂದು ರಾಜರತ್ನಂ ಅವರೇ ತಮ್ಮ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. ಇದರಲ್ಲಿರುವ ಆರು ಕತೆಗಳೆಂದರೆ, ಕಡ್ಡಿ ಬುಡ್ಡಿ ಜಗಳ, ಬಲು ಚೆಲುವು ಗುಲಾಬಿ, ಒಬ್ಬ ತಾಯಿಯ ಕತೆ, ಬೆಂಡು ಬುಗುರಿ, ಸಮಾಧಿಯಾದ ಶಿಶು, ಹೋಮರನ ಸಮಾಧಿಯ ಹೂವು. 

    ಈ ಕೃತಿಗೆ ವೈಣಿಕನ ವೀಣೆ ಎಂಬ ಹೆಸರು ನೀಡಿದ್ದು ಏಕೆ ಎನ್ನುವ ಬಗ್ಗೆ ಜಿ.ಪಿ.ರಾಜರತ್ನಂ ಅವರು ಹೀಗೆ…

  • ಕನ್ನಡದ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರು ೧೯೫೯-೭೧ರ ಅವಧಿಯಲ್ಲಿ ಬರೆದ ಅಮೂಲ್ಯ ಕವನಗಳ ಸಂಕಲನವೇ ‘ವರ್ಧಮಾನ'. ಇದೊಂದು ಹತ್ತು ಕವನಗಳನ್ನೊಳಗೊಂಡ ಪುಟ್ಟ ಪುಸ್ತಕ. ಈ ಪುಸ್ತಕಕ್ಕೆ ಪ್ರಸ್ತಾವನೆ ಬರೆದಿದ್ದಾರೆ ಖ್ಯಾತ ಸಾಹಿತಿಗಳಾದ ಸುಮತೀಂದ್ರ ನಾಡಿಗರು. ಇವರು ತಮ್ಮ ‘ಪ್ರಸ್ತಾವನೆ' ಯಲ್ಲಿ ಬರೆದ ಕೆಲವೊಂದು ಸಾಲುಗಳು ಇಲ್ಲಿವೆ.

    “ಭಾರತಕ್ಕೆ ಬರಬಹುದಾದ ಅನಿಷ್ಟ, ನಮಗೆ ಬೇಕಾದ ಆದರ್ಶ ನಾಯಕರು, ತಲೆಮಾರುಗಳ ಸಂಬಂಧ ಮತ್ತು ಕ್ರಿಯಾಶಕ್ತಿಯ ಸ್ವರೂಪ- ಇವು 'ವರ್ಧಮಾನ' ಸಂಗ್ರಹದ ಕಾವ್ಯ ವಸ್ತುಗಳು. ಸಂಗ್ರಹದ ಮೊದಲ ಮೂರು ಕವನಗಳಾದ 'ಬರುತ್ತಾರೆ' ' ಎಡ-ಬಲ'  ಮತ್ತು 'ಗಜೇಂದ್ರ ಮೋಕ್ಷ' ನಮ್ಮಲ್ಲಿ ಕಾಣಿಸಿಕೊಂಡ ಎಡಪಂಥೀಯ ಧೋರಣೆಗಳಿಂದ ಭಾರತಕ್ಕೆ  ಒದಗಬಹುದಾದ ಅಪಾಯಗಳನ್ನು …

  • ಮಾಕೋನಹಳ್ಳಿ ವಿನಯ್ ಮಾಧವ್ ಅವರು ಹುಟ್ಟಿದ್ದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯವರು. ೧೯೯೬ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ ಕೆಲಸ ಆರಂಭಿಸಿದರು. ೨೫ ವರ್ಷಗಳಿಂದ ಹುಟ್ಟೂರಿಗೆ ಹೋಗಿ ಕಾಫೀ ಪ್ಲಾಂಟರ್ ಆಗಿ ಕಾರ್ಯನಿರ್ವಹಿಸುವ ಕನಸು ಕಾಣುತ್ತಿದ್ದಾರೆ.

    ಮಾಕೋನಹಳ್ಳಿ ವಿನಯ್ ಮಾಧವ್ ಅವರ ಕಾದಂಬರಿ ‘ಸಿಕೆಜಿ ಸ್ಪೋರ್ಟ್ಸ್ ಕ್ಲಬ್ ಮಾಕೋನಹಳ್ಳಿ’. ಒಕ್ಕಲೊಂದರ ಆತ್ಮಕಥೆಯೆಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಕೃತಿಯಲ್ಲಿ ಲೇಖಕ, ಹಿರಿಯ ಪತ್ರಕರ್ತ ಜೋಗಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕುವೆಂಪು ಅವರ ಕಾನೂರು ಹೆಗ್ಗಡಿತಿ…