ಇತಿಹಾಸ, ವಿಜ್ಞಾನದ ಮಾಹಿತಿಗಳನ್ನು ಸೊಗಸಾಗಿ ಬರೆಯುವ ಲೇಖಕರಾದ ಕೆ ನಟರಾಜ್ ಅವರ ನೂತನ ಕೃತಿ ‘ಕೊರೋನಾ - ಈ ಜಗ ತಲ್ಲಣ'. ಪುಸ್ತಕದ ಬೆನ್ನುಡಿ ಹೇಳುವಂತೆ “ಕೊರೋನಾ ನಮ್ಮ ಕಾಲದ ಒಂದು ದೊಡ್ಡ ದುಃಸ್ವಪ್ನ. ಅದೆಷ್ಟು ಜನ ಆತ್ಮೀಯರನ್ನು ನಾವು ಕಳೆದುಕೊಂಡಿದ್ದೇವೆ... ಇದಕ್ಕೆ ಬಲಿ ತೆತ್ತ ಮಹನೀಯರೆಷ್ಟು? ಇಡೀ ಪ್ರಪಂಚವೇ ಕಳೆದುಕೊಂಡದ್ದೆಷ್ಟು? ಇದರ ವಿರುದ್ಧದ ಹೋರಾಟದ ಬಲಿದಾನಗಳನ್ನು ನೆನಪಿಸಿಕೊಳ್ಳದಷ್ಟು ಬಲಹೀನರಾಗಿಬಿಟ್ಟಿದ್ದೇವೆ ! ಆಗಿನ ನಮ್ಮ ಮನಸ್ಥಿತಿಯನ್ನು ನೆನಪಿಸಿಕೊಂಡರೆ ನಾವು ಸಂಪೂರ್ಣ ವಿವಶರಾಗಿಬಿಡುತ್ತೇವೆ.
ಆದರೂ ಬಹುತೇಕ ಜನರನ್ನು ಕರೋನಾ ವಾಸ್ತವದ ನೆಲಗಟ್ಟಿಗೆ ತಂದದ್ದು ಸುಳ್ಳೇನಲ್ಲ; ಬಹಳಷ್ಟು ಜನಕ್ಕೆ ಜೀವನವನ್ನು ಅರ್ಥಮಾಡಿಸಿದ್ದೇ ಈ ಕೊರೋನಾ.…