ಬುದ್ಧನ ಎರಡು ಜಾತಕ ಕತೆಗಳು ಈ ಮಕ್ಕಳ ಪುಸ್ತಕದಲ್ಲಿವೆ. ಇವುಗಳ ಮೂಲ ಲೇಖಕರಾದ ಕೃಷ್ಣ ಚೈತನ್ಯರು ಬರೆದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದವರು ಹೆಚ್.ಕೆ. ರಾಮಕೃಷ್ಣ. ಸಿದ್ಧಾರ್ಥನು ಜ್ನಾನೋದಯ ಪಡೆದು ಬುದ್ಧನಾಗಿ, ಜೀವನದ ಅರ್ಥ ತಿಳಿದುಕೊಂಡ. ಸುಖಶಾಂತಿಗಳ ಗಳಿಕೆಗಾಗಿ ಮನುಷ್ಯರು ಹೇಗೆ ಬದುಕಬೇಕೆಂಬ ಸಂದೇಶ ನೀಡಿದ. ಅದಕ್ಕಾಗಿ ಮಾನವರು ನಿಸ್ವಾರ್ಥಿಗಳಾಗಿ, ಕರುಣಾಳುಗಳಾಗಿ ಬಾಳಬೇಕೆಂಬುದೇ ಅವನು ತೋರಿದ ಪಥ.
ತನ್ನ ಸಹಜೀವಿಗಳ ನೆರವಿಗಾಗಿ ಬುದ್ಧನು ಅನೇಕ ಪುನರ್ಜನ್ಮ ತಳೆದನೆಂದು ಪ್ರತೀತಿ. ಇಂತಹ ಪ್ರತಿಯೊಂದು ಪುನರ್ಜನ್ಮದ ಕತೆಯನ್ನು ಜಾತಕ (ಜನ್ಮ) ಕತೆಯೆಂದು ಕರೆಯಲಾಗಿದೆ. ಕಾಲಕ್ರಮೇಣ ಈ ಎಲ್ಲ ಕತೆಗಳನ್ನು ಪಾಳಿ ಭಾಷೆಯಲ್ಲಿ ಬರೆಯಲಾಯಿತು (ಹಿಂದೆ ಮಗಧ - ಈಗಿನ ಬಿಹಾರ - ರಾಜ್ಯದ ಜನರ ಭಾಷೆ). ಐನೂರಕ್ಕೂ ಹೆಚ್ಚು ಜಾತಕ…