ಪುಸ್ತಕ ಸಂಪದ

  • ಬುದ್ಧನ ಎರಡು ಜಾತಕ ಕತೆಗಳು ಈ ಮಕ್ಕಳ ಪುಸ್ತಕದಲ್ಲಿವೆ. ಇವುಗಳ ಮೂಲ ಲೇಖಕರಾದ ಕೃಷ್ಣ ಚೈತನ್ಯರು ಬರೆದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದವರು ಹೆಚ್.ಕೆ. ರಾಮಕೃಷ್ಣ. ಸಿದ್ಧಾರ್ಥನು ಜ್ನಾನೋದಯ ಪಡೆದು ಬುದ್ಧನಾಗಿ, ಜೀವನದ ಅರ್ಥ ತಿಳಿದುಕೊಂಡ. ಸುಖಶಾಂತಿಗಳ ಗಳಿಕೆಗಾಗಿ ಮನುಷ್ಯರು ಹೇಗೆ ಬದುಕಬೇಕೆಂಬ ಸಂದೇಶ ನೀಡಿದ. ಅದಕ್ಕಾಗಿ ಮಾನವರು ನಿಸ್ವಾರ್ಥಿಗಳಾಗಿ, ಕರುಣಾಳುಗಳಾಗಿ ಬಾಳಬೇಕೆಂಬುದೇ ಅವನು ತೋರಿದ ಪಥ.

    ತನ್ನ ಸಹಜೀವಿಗಳ ನೆರವಿಗಾಗಿ ಬುದ್ಧನು ಅನೇಕ ಪುನರ್ಜನ್ಮ ತಳೆದನೆಂದು ಪ್ರತೀತಿ. ಇಂತಹ ಪ್ರತಿಯೊಂದು ಪುನರ್ಜನ್ಮದ ಕತೆಯನ್ನು ಜಾತಕ (ಜನ್ಮ) ಕತೆಯೆಂದು ಕರೆಯಲಾಗಿದೆ. ಕಾಲಕ್ರಮೇಣ ಈ ಎಲ್ಲ ಕತೆಗಳನ್ನು ಪಾಳಿ ಭಾಷೆಯಲ್ಲಿ ಬರೆಯಲಾಯಿತು (ಹಿಂದೆ ಮಗಧ - ಈಗಿನ ಬಿಹಾರ - ರಾಜ್ಯದ ಜನರ ಭಾಷೆ). ಐನೂರಕ್ಕೂ ಹೆಚ್ಚು ಜಾತಕ…

  • ‘ಬಾ ಇಲ್ಲಿ ಸಂಭವಿಸು..' ಎನ್ನುವುದು ರಾಷ್ಟ್ರಕವಿ ಕುವೆಂಪು ಅವರ ಜನಪ್ರಿಯ ಕವಿತೆಯ ಸಾಲು. ಲೇಖಕರಾದ ಕೆ. ನಟರಾಜ್ ಅವರು ತಮ್ಮ ದ್ವಿತೀಯ ಕವನ ಸಂಕಲನಕ್ಕೆ ಇದೇ ಹೆಸರನ್ನು ಇರಿಸಿದ್ದಾರೆ. ಈ ಕವನ ಸಂಕಲನದಲ್ಲಿ ೧೦೪ ಪುಟ್ಟ ಕವನಗಳಿವೆ. ಕೆ ನಟರಾಜ್ ಅವರು ತಮ್ಮ ಮಾತಿನಲ್ಲಿ ಅಭಿಪ್ರಾಯ ವ್ಯಕ್ತ ಪಡಿಸುವುದು ಹೀಗೆ-

    “ ‘ಬಾ ಇಲ್ಲಿ ಸಂಭವಿಸು...' ಎಂದರೆ ನಮ್ಮ ಸತ್ಯಾತ್ಮವನ್ನು ನಾವು ಕರೆಯುವ ಪರಿ. ಜೀವನದ ಈ ತೊಳಲಾಟದಲ್ಲಿ, ಹೋರಾಟದಲ್ಲಿ ಕೊನೆಗೂ ಸತ್ಯಕ್ಕೆ ಶರಣಾಗುವ ಸಾಲುಗಳು. ಬಹುಷಃ ಈ ಮನದಾಳದ ಸಂಘರ್ಷದಲ್ಲಿ ಈ ಸತ್ಯಾವತಾರ ಹುಟ್ಟಿಬಂದಾಗಲೇ ನಮ್ಮ ಮನಸ್ಸಿಗೆ ಮುಕ್ತಿಯೇನೋ? ಈ ಜೀವನದಲ್ಲಿ ಎಲ್ಲ ತರಹದ ಪಾತ್ರಗಳನ್ನೂ ನಾವು ವಹಿಸಿಬಿಡುತ್ತೇವೆ. ತಾಮಸ ಗುಣಗಳಲ್ಲೇ ಬೇಯುವ…

  • ಎಂ ಸುಬ್ರಮಣ್ಯರಾಜೇ ಅರಸ್ ಅಥವಾ ಚದುರಂಗ ಅವರ ಖ್ಯಾತ ಕಾದಂಬರಿ ‘ಸರ್ವಮಂಗಳ'. ಚದುರಂಗ ಅವರು ತಮ್ಮ ಹಿಂದಿನ ಎರಡು ಕಾದಂಬರಿಗಳಲ್ಲಿ ಹೆಣ್ಣಿನ ಭಾವನೆಗಳನ್ನು ಬಹಳ ಚೆನ್ನಾಗಿ ಬರೆದಿದ್ದರು. ಇದರಲ್ಲಿಯೂ ಅವರ ಬರವಣಿಗೆ ಅಷ್ಟೇ ಚೆನ್ನಾಗಿದೆ, ಜೊತೆಗೆ ಗ್ರಾಮೀಣ ಭಾಷೆಯ ಊಪಯೋಗವೂ ಸುಂದರವಾಗಿದೆ. ಲೇಖಕ ಚದುರಂಗ ಅವರ ʻಸರ್ವಮಂಗಳʼ ಕೃತಿಯನ್ನು ಓದಿದ ಬಳಿಕ ನನಗೆ ಅನಿಸಿದ್ದು....

    “ಸರ್ವಮಂಗಳ- ಚದುರಂಗ ಅವರ ಮತ್ತೊಂದು ಒಳ್ಳೆಯ ಕಾದಂಬರಿ. 1930ರ ಆಸುಪಾಸಿನಲ್ಲಿ ನಡೆಯುವ ಈ ಪುಸ್ತಕದ ಘಟನಾವಳಿಗಳು ಬಹಳ ಚೆನ್ನಾಗಿ ಬರೆದಿದ್ದಾರೆ ಚದುರಂಗ. ಒಂದು ವರ್ಷವಾಗಿದ್ದಾಗಲೇ ನಟರಾಜನ ತಂದೆ ತಾಯಿ ನದಿಯಲ್ಲಿ ಮುಳುಗಿ ಸತ್ತರು. ತಮ್ಮ ಉದಾರತನಕ್ಕೆ ಹೆಸರಾಗಿದ್ದ ಶಂಕರಯ್ಯ ಬಹಳ ವರ್ಷದ ಮೇಲೆ…

  • ‘ಬಣ್ಣದ ಕಾರು' ಪುಟಾಣಿ ಮಕ್ಕಳಿಗೆ ಇಷ್ಟವಾಗುವಂತಹ ಕೃತಿ. ಬಹಳ ಸರಳ ಪದಗಳ ಸಣ್ಣ ಸಣ್ಣ ಸಾಲುಗಳ ಗೀತೆಗಳ ಗುಚ್ಚ. ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಿದ ಗೀತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆರಂಭದ ಗೀತೆ 'ಮಕ್ಕಳ ಲೋಕ'ದಲ್ಲಿ ಜೇನು, ಬಾನು, ಗಾಳಿ, ಬೇವಿನ ಮರ ಬರುತ್ತವೆ. ಎರಡನೇ ಗೀತೆ 'ಹಸಿರು', ಸಂಪೂರ್ಣವಾಗಿ ಪರಿಸರದ ಕುರಿತದ್ದಾಗಿದೆ. ನಂತರದ ಗೀತೆ 'ಬಣ್ಣದ ಕಾರು', ಇದರಲ್ಲಿಯೂ ಸಹ ಪರಿಸರದ ಅಂಶಗಳು ತುಂಬಿಕೊಂಡಿವೆ ಎನ್ನುತ್ತಾರೆ ಈ ಕೃತಿಗೆ ಮುನ್ನುಡಿಯನ್ನು ಬರೆದ ಲೇಖಕರಾದ ಹ.ಸ.ಬ್ಯಾಕೋಡ ಇವರು. ಇವರು ಮುನ್ನುಡಿಯಲ್ಲಿ ಪ್ರಸ್ತಾಪಿಸಿದ ಪ್ರಮುಖ ಅಂಶಗಳು ನಿಮ್ಮ ಓದಿಗಾಗಿ...  

    “ಸದಾ ಮಕ್ಕಳ ಒಡನಾಟದಲ್ಲಿದ್ದುಕೊಂಡು ಸಾಹಿತ್ಯ…

  • “ಸರಳವೂ ಅಲ್ಲದ, ಜೊತೆಗೆ ಕ್ಲಿಷ್ಟತೆಯು ಇಲ್ಲದೆ ನೇರವಾಗಿ ಕವಿತೆಯ ಜೊತೆ ಮತ್ತೆ ಮತ್ತೆ ಕೇಳಿ ಮಾತಾಡುವಂತೆ ಇಲ್ಲಿನ ಬರಹಗಳು ಭಾಸವಾಗುತ್ತವೆ. ಲೋಕದ ಅಸಂಖ್ಯ ಸಂಗತಿಗಳು ಮೂವತ್ತೊಂದು ಕವಿತೆಗಳಲ್ಲಿ ವೈವಿಧ್ಯಮಯವಾಗಿ ತೆರೆದುಕೊಂಡಿದೆ” ಎನ್ನುವುದು ನನ್ನ ಅಭಿಪ್ರಾಯ. ದೇವು ಮಾಕೊಂಡ ಅವರ ʻಗಾಳಿಗೆ ತೊಟ್ಟಿಲ ಕಟ್ಟಿʼ ಪುಸ್ತಕದ ಬಗ್ಗೆ ಬರೆದ ನಾ ಬರೆದ ವಿಮರ್ಶೆ ನಿಮ್ಮ ಓದಿಗಾಗಿ ಇಲ್ಲಿದೆ...

    “ಗಾಳಿಗೆ ತೊಟ್ಟಿಲು ಕಟ್ಟಲು ಸಾಧ್ಯವೇ? ಅಸಾಧ್ಯವೇ? ಕಾವ್ಯ ನೇಯುವ ಸೃಜನಶೀಲತೆಯಿಂದ ಇವೆರಡನ್ನೂ ಮಾಡಬಹುದು ಎಂದಿದ್ದಾರೆ ʻಗಾಳಿಗೆ ತೊಟ್ಟಿಲು ಕಟ್ಟಿʼ ಎಂಬ ಅಭೂತಪೂರ್ವ ಶೀರ್ಷಿಕೆ ಹೊತ್ತ ಕವನಸಂಕಲನದ ಕರ್ತೃ ದೇವು ಮಾಕೊಂಡ. ಅಸಾಧ್ಯವಾದುದನ್ನು ಸಾದುವಾಗಿಸಿ ಮಾಗಿಸುವ ಪ್ರಕ್ರಿಯೆ…

  • ಭಾರತದ 13 ಭಾಷೆಗಳ ಶ್ರೇಷ್ಠ ಮಕ್ಕಳ ಕತೆಗಳ ಸಂಕಲನ ಇದು. ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದೀ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳ ಕತೆಗಳು ಇದರಲ್ಲಿವೆ.
    ಇವನ್ನು ಎಲ್. ಎಸ್. ಶೇಷಗಿರಿರಾಯರು ಕನ್ನಡಕ್ಕೆ ಅನುವಾದಿಸಿದ್ದಾರೆ.

    ವಿಶೇಷ ಬಹುಮಾನ (ಅಸ್ಸಾಮಿ) ಕತೆ ವಿದ್ಯಾರ್ಥಿಯೊಬ್ಬ ತುಂಟನಂತೆ ಕಂಡರೂ ಅಂತಃಕರಣದ ಹುಡುಗ ಎಂಬುದನ್ನು ಪ್ರಸ್ತುತಪಡಿಸುತ್ತದೆ. ಆತನನ್ನು ಶಿಕ್ಷಿಸಿದ ಮುಖ್ಯೋಪಾಧ್ಯಾಯರೇ ಅವನ ಸನ್ನಡತೆ ಕಂಡಾಗ ಬೆನ್ನು ತಟ್ಟುತ್ತಾರೆ. ಶಾಲಾ ವಾರ್ಷಿಕೋತ್ಸವದಲ್ಲಿ ಅತ್ಯುತ್ತಮ ಗುಣನಡತೆಗಾಗಿ ಅವನಿಗೇ ವಿಶೇಷ ಬಹುಮಾನ ನೀಡುತ್ತಾರೆ. ವ್ಯಕ್ತಿಯೊಬ್ಬನು ಏನು ಮಾಡುತ್ತಾನೆ ಎಂಬುದರಿಂದ ಅವನ ಗುಣನಡತೆ ಅಳೆಯಬೇಕು ಎಂಬ ದೊಡ್ಡ ಪಾಠ ಇದರಲ್ಲಿದೆ.

  • ಪದ್ಮಾಲಯ ನಾಗರಾಜ್ ಅವರ ಸಣ್ಣ ಕಥೆಗಳ ಸಂಕಲನವೇ “ಅಚಲ ಕಥಾಲೋಕ". ಈ ಕೃತಿಯಲ್ಲಿ ಸೊಗಸಾದ ಸಣ್ಣಸಣ್ಣ ಕತೆಗಳಿವೆ. ಸುಭಾಷಿತಗಳಂತಹ ಹೇಳಿಕೆಗಳಿವೆ. ಕವಿತೆಯಂತಹ ವಚನಗಳಿವೆ. ಘಟನೆಯ ನಿರೂಪಣೆಗಳಿವೆ. ಮಾತುಕತೆಯ ಭಾಗಗಳಿವೆ. ಇದೊಂದು ಬಹುನಿರೂಪಣ ವಿನ್ಯಾಸವುಳ್ಳ ದಾರ್ಶನಿಕ ಕೃತಿ ಎಂದಿದ್ದಾರೆ ಮುನ್ನುಡಿ ಬರೆದ  ಸಾಹಿತಿ ರಹಮತ್‌ ತರೀಕೆರೆ. ಆ ಮುನ್ನುಡಿಯಲ್ಲಿ...

    “ನಮಗೆ ನಮ್ಮೂರ ಬದಿಯಲ್ಲಿ ಹರಿವ ಹೊಳೆಗಳ ಪರಿಚಯ ವಿರುತ್ತದೆ. ಆದರೆ ಆ ಹೊಳೆಗಳ ಜಲಮೂಲವಾಗಿರುವ ಆಗಸದ ಮೋಡ, ಪರ್ವತದಗರ್ಭ, ದಟ್ಟಕಾಡು ಮತ್ತು ಹಿಮಗಡ್ಡೆಗಳ ಬಗ್ಗೆ ಅಷ್ಟಾಗಿ ಆಸ್ಥೆಯಿರುವುದಿಲ್ಲ. ಈ ವಿಸ್ಮೃತಿ ಅಥವಾ ಅಸಡ್ಡೆ ಭಾರತದ ಗುರುಪಂಥಗಳ ವಿಷಯದಲ್ಲಿಯೂ ನಿಜ. ಗುರುಪಂಥದ ಅನೇಕ ಧಾರೆಗಳ ಹಿನ್ನೆಲೆಗಳನ್ನು…

  • ಅಸಮಾನತೆ, ಅನ್ಯಾಯ, ಅಪಮಾನ, ಶೋಷಣೆಯ ಪರಿಣಾಮಗಳನ್ನು ಹೇಳುತ್ತಲೇ; ಸಮಾನತೆಯ ಸಮಾಜ ನಿರ್ಮಾಣಕ್ಕೆ ಹೋರಾಡಬೇಕಾದ ಛಲವನ್ನು ಇವು ಕಲಾತ್ಮಕವಾಗಿ ಅಭಿವ್ಯಕ್ತಿ ಮಾಡಿವೆ. ಹಾಡುಗಾರರಿಗೆ ಹಾಡುಗಳಾಗಿ, ಭಾಷಣಕಾರರಿಗೆ ವಿಚಾರಗಳಾಗಿ, ಹೋರಾಟ ನಿರತ ಜನರಿಗೆ ಹೋರಾಟದಲ್ಲಿ ತೊಡಗಲು ಮಾನಸಿಕ, ಭಾವನಾತ್ಮಕ ಪ್ರೇರಕ ಶಕ್ತಿಗಳಾಗಿ ಕ್ರಿಯಾಶೀಲವಾಗಿವೆ ಎನ್ನುತ್ತಾರೆ ಬಿ.ಎಂ. ಪುಟ್ಟಯ್ಯ . ಅವರು ಎಚ್. ವೆಂಕಟೇಶ್ ಹಾಗೂ ಜ್ಯೋತಿ .ಎಸ್‌ ಅವರ ಸಂಪಾದಿತ “ಹೋರಾಟದ ಹಾಡುಗಳು” ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ......

    “ಎಚ್. ವೆಂಕಟೇಶ್ ನನ್ನ ಆತ್ಮೀಯರು. ಇವರು ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕರು. ಇವರಿಗಿರುವ ಕಲಿಯುವ ಕುತೂಹಲ ಮತ್ತು ಆಸಕ್ತಿ ಇಂದಿನ ವಿದ್ಯಾರ್ಥಿ ಸಮೂಹವನ್ನು…

  • ಗಾಯತ್ರಿ ರಾಜ್ ಅವರ ನೀಳ್ಗತೆ ‘ಟ್ರಾಯ್' ಎಂಬ ಕೃತಿ. ‘ಟ್ರಾಯ್‌ʼಯ ಎಲ್ಲ ಪಾತ್ರಗಳಲ್ಲೂ ನಮ್ಮ ಭಾರತೀಯ 'ಸೆಂಟಿಮೆಂಟ್' ಶೈಲಿಯನ್ನು ತಂದು ಕೊಟ್ಟು ಗಾಯತ್ರಿ ರಾಜ್ ಯಶಸ್ವಿಯಾಗಿದ್ದಾರೆ. ಅಲ್ಲಿಯ ಎಲ್ಲ ಪಾತ್ರಗಳು ದೂರದ ಯಾವುದೋ ದೇಶದ ಕಾಣದ ವ್ಯಕ್ತಿತ್ವಗಳೇ ಆಗಿದ್ದರೂ ಅವರು ಮಾತನಾಡುವಾಗ ನಮ್ಮವರೇ ಅನಿಸಿಬಿಡುತ್ತದೆ. ಇಷ್ಟವಾಗಿಬಿಡುತ್ತದೆ” ಎನ್ನುತ್ತಾರೆ ಮುನ್ನುಡಿಯನ್ನು ಬರೆದ ಎಂ.ಎಲ್. ಪ್ರಸನ್ನ. ಅವರು ಗಾಯತ್ರಿ ರಾಜ್ ಅವರ ʻಟ್ರಾಯ್ʼ ಪುಸ್ತಕದಲ್ಲಿ ಬರೆದ ಮುನ್ನುಡಿಯ ಸಾಲುಗಳು ನಿಮ್ಮ ಓದಿಗಾಗಿ...

    “ಮೊದಲಿಗೇ ಒಂದು ಮಾತು ಹೇಳಿಬಿಡುತ್ತೇನೆ. ಗಾಯತ್ರಿ ರಾಜ್ ಅವರು, ಅವರ ಪ್ರೇಮಬರಹಗಳ ಮೂಲಕವೇ ನನಗೆ ಚೆನ್ನಾಗಿ ಪರಿಚಿತರು. ಅವರ ಬರಹದಲ್ಲಿ ನನಗೆ ತುಂಬ ಇಷ್ಟವಾದ…

  • ‘ಫಾರೆಸ್ಟರ್ ಪೊನ್ನಪ್ಪʼ ಮಲೆನಾಡಿನಲ್ಲಿ ಬದಲಾದ ಮತ್ತು ಸಾಮಾಜಿಕ ವ್ಯವಸ್ಥೆಯ ಸುತ್ತಲೂ ಹೆಣೆದಿರುವ ಆರ್ಥಿಕ ಕಾದಂಬರಿ. ಇಲ್ಲೊಂದು ಜೀವನವಿದೆ, ಬದಲಾವಣೆ ಇದೆ ಮತ್ತು ಆ ಬದಲಾವಣೆಯನ್ನು ಜೀರ್ಣಿಸಿಕೊಳ್ಳಲು ಆಗದ ಆರ್ದ್ರತೆ ಇದೆ” ಎನ್ನುತ್ತಾರೆ ಲೇಖಕ ವಿನಯ್‌ ಮಾಧವ್.‌ ಲೇಖಕ ನೌಶಾದ್‌ ಜನ್ನತ್ತ್‌ ರವರ ʻಫಾರೆಸ್ಟರ್ ಪೊನ್ನಪ್ಪʼ ಪುಸ್ತಕಕ್ಕೆ ಅವರು ಬರೆದ ಮುನ್ನುಡಿಯ ಸಾಲುಗಳು ಇಲ್ಲಿವೆ...

    “ಮಲೆನಾಡಿನ ಜನರ ಬದುಕಿನಲ್ಲಿ ಮಹತ್ತರ ತಿರುವು ಬಂದಿದ್ದು ತೊಂಬತ್ತನೇ ದಶಕದ ಆದಿಯಲ್ಲಿ. ಕಾಫಿ ಬೋರ್ಡ್ ಎಂಬ ಕೇಂದ್ರ ಸರ್ಕಾರದ ಸಾಮ್ಯದ ಸಂಸ್ಥೆಯ ಆಡಿಯಲ್ಲಿ ದಶಕಗಳಿಂದ ನಲುಗಿದ್ದ ಕಾಫಿ ಬೆಳೆಗಾರರಿಗೆ ಮುಕ್ತ ಮಾರುಕಟ್ಟೆ ಎಂಬ ಹೊಸ ವ್ಯವಸ್ಥೆ ಬದುಕನ್ನೇ ಬದಲಿಸಿತ್ತು.