ಪುಸ್ತಕ ಸಂಪದ

  • ಆಯುರ್ವೇದ ರತ್ನ ಡಾ. ಗುರುಶಾಂತ ಲಿಂಬಿತೋಟ ಇವರು ಸುಮಾರು ೪೦ ಬಗೆಯ ಹಣ್ಣು ಹಾಗೂ ತರಕಾರಿಗಳ ಔಷಧೀಯ ಗುಣಗಳನ್ನು ಸವಿವರವಾಗಿ ನೀಡಿದ್ದಾರೆ. ನಮ್ಮದೇ ತೋಟದ ಹಣ್ಣುಗಳು ಅಥವಾ ತರಕಾರಿಗಳು ನಮಗೆಷ್ಟು ಪ್ರಯೋಜನಕಾರಿ ಎಂಬುದಾಗಿ ವಿವರಿಸಿದ್ದಾರೆ. ಡಾ. ಸುನೀತಾ ಲಿಂಬಿತೋಟ ಇವರು ಪುಸ್ತಕದ ಪ್ರಾರಂಭದಲ್ಲಿ ಹಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವುಗಳೆಂದರೆ…

    * ಹಸಿರು ತರಕಾರಿ ಸೇವನೆ ಆರೋಗ್ಯದ ಹಿತದೃಷ್ಟಿಯಿಂದ ಅತ್ಯವಶ್ಯಕವಾಗಿದೆ. ಆದರೆ ಹಣ್ಣು-ತರಕಾರಿಗಳನ್ನು ಚೆನ್ನಾಗಿ ತೊಳೆಯದೆ ಉಪಯೋಗಿಸಿದರೆ ‘ನರ ವ್ಯವಸ್ಥೆ’ಯ ಮೇಲೆ ಸೋಂಕು ಬರುವ ಸಂಭವವಿರುತ್ತದೆ. ಈ ರೋಗ ಹಂದಿಗಳಲ್ಲಿರುವ ‘ಟೆನಿಮಾಸೋಲಿಯಮ್' ಕ್ರಿಮಿಗಳಿಂದ ಬರುತ್ತದೆ.

  • ನೊಬೆಲ್ ಪ್ರಶಸ್ತಿ ಪುರಸ್ಕೃತ ಮಾರ್ಕ್ವೆಜ್‌ನ ಕಾದಂಬರಿಗಳಲ್ಲೊಂದಾದ ಇದನ್ನು ಕನ್ನಡಕ್ಕೆ ತಂದವರು ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ. ಅವರು “ಓದುಗರೊಡನೆ" ಹಂಚಿಕೊಂಡ ಕೆಲವು ಮಾತುಗಳು: “ಇದು ನಾನು ತುಂಬ ಮೆಚ್ಚಿದ ಕೃತಿ. ಈ ಕೃತಿಯನ್ನು ಕನ್ನಡಿಗರಿಗೆ ತಲುಪಿಸಬೇಕೆನ್ನುವ ಹುಮ್ಮಸ್ಸಿಗೆ ಬಿದ್ದು ಇದನ್ನು ಅನುವಾದಿಸುವ ಹುಚ್ಚು ಸಾಹಸಕ್ಕೆ ಕೈಹಾಕಿದ್ದೇನೆ. ಇಂತಹ ಸಾಹಸಕ್ಕೆ ತೊಡಗುವ ಮುನ್ನ ಎಷ್ಟೊಂದು ಕಠಿಣ ಸವಾಲುಗಳನ್ನು ಎದುರಿಸಬೇಕಾದೀತೆಂಬ ಕಿಂಚಿತ್ ಕಲ್ಪನೆಯೂ ನನಗಿರಲಿಲ್ಲ…. ಮೂಲ ಸ್ಪ್ಯಾನಿಶ್ ಭಾಷೆಯಲ್ಲಿದ್ದ ಈ ಕಾದಂಬರಿಯನ್ನು ಜೆ. ಎನ್. ಬರ್ನ್‌ಸ್ಟಿನ್ ಎಂಬವರು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ನಾನು ಕನ್ನಡೀಕರಿಸಲು ಅವಲಂಬಿಸಿದ್ದು ಈ ಇಂಗ್ಲಿಷ್ ಅನುವಾದವನ್ನು. …. ಸ್ಪ್ಯಾನಿಶ್ ಜನರ ಜೀವನ ಕ್ರಮ, ನಡೆ-ನುಡಿ, ನಂಬುಗೆ…

  • ೧೯೭೩ರಲ್ಲಿ ಮೊದಲ ಮುದ್ರಣ ಕಂಡ ಡಿ.ವಿ.ಜಿ.ಯವರ ಕೃತಿ ‘ದೇವರು- ಒಂದು ವಿಚಾರ ಲಹರಿ'. ಅಂದಿನಿಂದ ಇಂದಿನವರೆಗೆ ಸುಮಾರು ೧೩ ಮುದ್ರಣಗಳನ್ನು ಕಂಡ ಅಪರೂಪದ ಮಾಹಿತಿಗಳನ್ನು ಒಳಗೊಂಡ ಪುಸ್ತಕವಿದು. ಈ ಪುಸ್ತಕವು “ದೇವರು ಇದ್ದಾನೆಯೇ? ದೇವರು ಎಂಬ ವಸ್ತು ನಿಜವಾಗಿ ಉಂಟೆ? ದೇವರು ಎಂದರೆ ಏನು? ಅದರ ಸ್ವರೂಪ ಎಂಥದು? ಅದರಿಂದ ನಮಗೆ ಆಗಬೇಕಾದ್ದೇನು? ಈ ಜಗತ್ತು ಏಕೆ ಸೃಷ್ಟಿಯಾಯಿತು? ಇದರ ವ್ಯವಸ್ಥೆಯ ತತ್ವವೇನು? ನಾನಾ ಮತಧರ್ಮಗಳ ಮೂಲತತ್ವವೇನು? ಇಂಥ ಪ್ರಶ್ನೆಗಳು ಸಾಮಾನ್ಯವಾಗಿ ಅನೇಕರ ಮನಸ್ಸಿನಲ್ಲಿ ಒಂದಲ್ಲ ಒಂದು ಕಾಲದಲ್ಲಿ, ಕಾಣಿಸಿಕೊಂಡಿರುತ್ತವೆ. ಆದರೆ ಅವುಗಳಿಗೆ ಸರಿಯಾದ ಉತ್ತರ ಕಾಣದೆ ಹಲುಬುವರು ಬಹುಮಂದಿ. ಹೀಗೆ ಮನುಷ್ಯನ ಮನದಲ್ಲಿ ಸಾಮಾನ್ಯವಾಗಿ ಉದ್ಭವಿಸುವ ಈ ಗಹನವಾದ ಪ್ರಶ್ನೆಗಳಿಗೆ ಸಾಧ್ಯವಾದ…

  • ಸಚಿನ್ ತೆಂಡೂಲ್ಕರ್ ಎಂದೊಡನೆ ಕ್ರಿಕೆಟ್ ಪ್ರೇಮಿಗಳಲ್ಲಿ ಒಂಥರಾ ಪುಳಕ. ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಇವರನ್ನು ಸಾಕ್ಷಾತ್ ಕ್ರಿಕೆಟ್ ದೇವರು ಎಂದು ಕರೆಯುವವರೂ ಹಲವಾರು ಮಂದಿ ಇದ್ದಾರೆ. ಅವರ ಕ್ರೀಡಾ ಜೀವನವನ್ನು ಒಂದೆಡೆ ಕಟ್ಟಿಕೊಡುವುದು ಸಾಹಸದ ಪ್ರಯತ್ನವೇ ಸರಿ. ‘ಸಚಿನ್’ ಪುಸ್ತಕದ ಲೇಖಕರಾದ ಅರುಣ್ ಹಾಗೂ ಮೋಹನ್ ಅವರು ಇವರ ಕ್ರೀಡಾ ಬದುಕಿನ ಪ್ರಮುಖ ಘಟನೆಗಳನ್ನು ಬಹಳ ಆಪ್ತವಾಗಿ ಚಿತ್ರಿಸಿದ್ದಾರೆ. ಪುಸ್ತಕದ ಪ್ರಾರಂಭಿಕ ಪುಟಗಳಲ್ಲಿ ಸಚಿನ್ ಕ್ರಿಕೆಟ್ ಜೀವನ ಹಾಗೂ ಬಾಲ್ಯದ ಫೋಟೋ ಆಲ್ಬಮ್ ಒಂದನ್ನು ನೀಡಿದ್ದಾರೆ. 

    ಪುಸ್ತಕದ ಬೆನ್ನುಡಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಮಾತುಗಳನ್ನೇ ಪ್ರೇರಣಾ ಸ್ವರೂಪವಾಗಿ ನೀಡಿದ್ದಾರೆ. “ವಿಶ್ವ ಕ್ರಿಕೆಟ್ ನ…

  • ‘ಭಾವಸಿಂಚನ’ ಎಂಬ Orkut ಕವಿತೆಗಳ ಸಂಗ್ರಹವನ್ನು 3K ಬಳಗದವರು ಹೊರತಂದಿದ್ದಾರೆ. ಈ ಪುಸ್ತಕದ ಎಲ್ಲೂ ಈ ಕವಿತೆಗಳನ್ನು ಸಂಪಾದನೆ ಮಾಡಿದವರ ಹೆಸರಿಲ್ಲ. ಅದರ ಬದಲಾಗಿ 3K ಕನ್ನಡ ಕವಿತೆ ಕವನ ಎಂದು ನಮೂದಿಸಿದ್ದಾರೆ. ತಮ್ಮದೇ ಆದ ಆರ್ಕುಟ್ ಬಳಗದಲ್ಲಿನ ಸದಸ್ಯರ ಕವನಗಳನ್ನು ಆಹ್ವಾನಿಸಿ ಉತ್ತಮ ಆಯ್ಕೆಗಾರರಿಂದ ಅವುಗಳನ್ನು ಆರಿಸಿ ಪುಸ್ತಕ ರೂಪದಲ್ಲಿ ಹೊರತಂದಿರುವುದು ಶ್ಲಾಘನೀಯ. ಲಾಭದ ದೃಷ್ಟಿಯಿಂದ ಈ ಕಾರ್ಯವನ್ನು ಮಾಡದೇ ಇರುವುದು ಇನ್ನಷ್ಟು ಅಚ್ಚರಿ ತರುತ್ತದೆ. ಏಕೆಂದರೆ ಇದರ ಬೆಲೆ : ‘ಕನ್ನಡವನ್ನು ಪೋಷಿಸಿ ಬೆಳೆಸಲು ಬಯಸುವವರಿಗೆ 3K ಬಳಗದ ಉಡುಗೊರೆ’ ಎಂದು ಮುದ್ರಿಸಿದ್ದಾರೆ. ಹಾಗೆಯೇ ಈ ಪುಸ್ತಕವನ್ನು ‘ಸಹೃದಯ ಕನ್ನಡಿಗರಿಗೆ’ ಅರ್ಪಿಸಿದ್ದಾರೆ.

    ಪುಸ್ತಕದ…

  • ಇನ್ಫೋಸಿಸ್ ಪ್ರತಿಷ್ಠಾನದ ಸಮಾಜಮುಖಿ ಕೆಲಸಕಾರ್ಯಗಳಿಂದಾಗಿ ಸುಧಾ ಮೂರ್ತಿಯವರು ಒಳ್ಳೆಯ ಹೆಸರು ಗಳಿಸಿದ್ದಾರೆ. ತನ್ನ ಇತರ ಬರಹಗಳ ಜೊತೆಗೆ, ಅಲ್ಲಿನ ಕೆಲಸದ ಸಂದರ್ಭಗಳಲ್ಲಿ ತನಗಾದ ಅನುಭವಗಳನ್ನೂ ಬರಹಗಳಾಗಿಸಿ ಸಾಹಿತಿಯಾಗಿಯೂ ಹೆಸರು ಗಳಿಸಿದ್ದಾರೆ.

    ಇದರಲ್ಲಿನ ಬಹುಪಾಲು ಬರಹಗಳು ಆ ಅನುಭವಗಳ ಆಧಾರಿತ. ಈ ಬರಹಗಳ ಬಗ್ಗೆ ಮುನ್ನುಡಿಯಲ್ಲಿ ಸುಧಾ ಮೂರ್ತಿಯವರ ನೇರಾನೇರ ಮಾತು ಹೀಗಿದೆ: “ಅನುಭವಗಳು ಎಲ್ಲರಿಗೂ ಆಗುತ್ತಲೇ ಇರುತ್ತವೆ. ಆದರೆ ನನ್ನ ಅನುಭವಗಳೇ ವಿಚಿತ್ರ. ಅದಕ್ಕೆ ನಾನು ಮಾಡುವ ಕೆಲಸವೇ ಕಾರಣ. ನನ್ನ ಅನುಭವಗಳ ಬರಹವು ಕಾಲ್ಪನಿಕವಲ್ಲ. ಅವೆಲ್ಲಾ ಸತ್ಯ ಘಟನೆಗಳು. ಬರೆಯುವಾಗ ಹೆಸರನ್ನೂ, ಸ್ಥಳಗಳನ್ನೂ ಬದಲಿಸುತ್ತೇನೆ. ಆ ವ್ಯಕ್ತಿಗಳ ಅನುಮತಿಯನ್ನೂ ತೆಗೆದುಕೊಳ್ಳುತ್ತೇನೆ. ಹೀಗಾಗಿ ಈ ಅನುಭವಗಳ ಬರಹ ನಿಷ್ಠೆಯಿಂದ ಕೂಡಿದೆ.…

  • ಹಾಸ್ಯ ಬರಹಗಳು ಹಾಗೂ ನಗೆಹನಿಗಳ ರಚನೆಗೆ ಖ್ಯಾತಿ ಪಡೆದ ತೈರೊಳ್ಳಿ ಮಂಜುನಾಥ ಉಡುಪ ಇವರು ಅಗಲಿದ ತಮ್ಮ ಗೆಳತಿ ‘ಶೀಲಾ’ಳ ನೆನಪಿಗೆ ‘ಶೀಲಾಳ ಬೊಂಬಾಟ್ ಜೋಕ್ಸ್'ಗಳು ಪುಸ್ತಕವನ್ನು ಹೊರತಂದಿದ್ದಾರೆ. ಮಂಜುನಾಥ ಉಡುಪರು ತಮ್ಮ ‘ಮೊದಲ ಮಾತು' ಎಂಬ ಮುನ್ನುಡಿಯಲ್ಲಿ ಬರೆಯುವುದು ಹೀಗೆ “ನಮ್ಮ ಪ್ರಕಾಶನದ ಎಂಟನೆಯ ಕೃತಿ ತೀರಾ ಲೇಟಾಗಿ ಹೊರಬರುತ್ತಿದೆ. ಇತೀಚೆಗೆ ಈ ನನ್ನ ಸಾಹಿತ್ಯಮಿತ್ರರ ವಲಯದಲ್ಲಿ ಸ್ವಾರ್ಥಿಗಳೇ ಹೆಚ್ಚಾಗಿ ಕಾಣಸಿಗುತ್ತಿದ್ದಾರೆ. ಈ ಕೃತಿಯಲ್ಲಿ ತೀರಾ ಇತ್ತೀಚೆಗೆ ಪ್ರಕಟವಾದ ನನ್ನ ೫೨ ನಗೆಹನಿಗಳಿವೆ. ಅವುಗಳನ್ನು ಪ್ರಕಟಿಸಿದ ಸ್ಪೈ ಹಾಗೂ ಹಂಸರಾಗ ಬಳಗಕ್ಕೆ ನನ್ನ ವಂದನೆಗಳು.

    ನನ್ನ ಜೋಕೆಲ್ಲಾ ಓದಿ ದೂರದ ಮುಂಬೈಯಿಂದ ಆಗಾಗ ಪತ್ರಿಸುತ್ತಾ ನನ್ನ ಮನಸ್ಸಿಗೆ…

  • ‘ವಿಶ್ವವಾಣಿ' ಪತ್ರಿಕೆಯ ಪ್ರಾರಂಭದ ದಿನಗಳಿಂದ ‘ತಿಳಿರು ತೋರಣ' ಎಂಬ ವಿಶಿಷ್ಟ ಹೆಸರಿನ ಅಂಕಣ ಬರೆಯುತ್ತಿರುವವರು ಅಮೇರಿಕಾದಲ್ಲಿರುವ ಶ್ರೀವತ್ಸ ಜೋಶಿ. ಜೋಶಿಯವರು ಈ ಹಿಂದೆಯೇ ಒನ್ ಇಂಡಿಯಾ ಕನ್ನಡ ಡಾಟ್ ಕಾಮ್, ವಿಜಯ ಕರ್ನಾಟಕ ಪತ್ರಿಕೆಗಳಿಗೆಲ್ಲಾ ಅಂಕಣ ಬರೆದಿದ್ದಾರೆ. ಪ್ರತಿಯೊಂದು ಅಂಕಣದಲ್ಲೂ ಹೊಸ ವಿಚಾರಗಳನ್ನು ಅಥವಾ ಹಳೆಯ ವಿಚಾರಗಳನ್ನೇ ಹೊಸತನದಲ್ಲಿ ಮೂಡಿಸಿ ಜನವರಿ ೨೦೧೬ರಿಂದ ನಿರಂತರವಾಗಿ ವಿಶ್ವವಾಣಿಗೆ ಬರೆಯುತ್ತಿದ್ದಾರೆ. ಅವರ ಬರಹಗಳಿನ್ನೂ ತಾಜಾ ಆಗಿವೆ ಮತ್ತು ಬೋರ್ ಹೊಡೆಸಿಲ್ಲ ಎನ್ನುವುದಕ್ಕೆ ಈ ಆರು ವರ್ಷಗಳ ನಿರಂತರ ಯಾನವೇ ಸಾಕ್ಷಿ. 

    ಪುಸ್ತಕದ ಬೆನ್ನುಡಿಯನ್ನು ಬರೆಯುತ್ತಾ ಎಸ್ಕೆ. ಶಾಮಸುಂದರ ಅವರು ತಮ್ಮದೇ ವಿಭಿನ್ನ ಶೈಲಿಯಲ್ಲಿ ಬರೆಯುವುದು ಹೀಗೆ…

  • ಹತ್ತಾರು ಕಿರು ನಾಟಕಗಳನ್ನು ಬರೆದು ಖ್ಯಾತಿ ಪಡೆದ ಪ್ರೊ. ಆರ್. ಎನ್ ಕುಲಕರ್ಣಿ (ಆರ್ ಎನ್ ಕೆ) ಇವರ ಮತ್ತೊಂದು ನಾಟಕದ ಪುಸ್ತಕ ‘ಬೀಗರ ಬಡಾಯಿ'. ಇದೊಂದು ಹಾಸ್ಯಭರಿತ, ವರದಕ್ಷಿಣೆ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಸಮಸ್ಯಾ ಪ್ರಧಾನ ನಾಟಕ. ರಂಗಸ್ಥಳದಲ್ಲಿ ಸುಮಾರು ೨೦ ರಿಂದ ೩೦ ನಿಮಿಷಗಳಲ್ಲಿ ಮುಗಿದು ಹೋಗುವ ಈ ನಾಟಕವು ಸಮಾಜಕ್ಕೆ ಬಹಳ ಪ್ರಭಾವಶಾಲಿ ಸಂದೇಶವನ್ನು ಕೊಡುತ್ತದೆ. 

    ೭ ಮಂದಿ ಪಾತ್ರಧಾರಿಗಳಿರುವ ಈ ನಾಟಕದಲ್ಲಿ ಮದುಮಗ, ಮದುಮಗಳು, ವರನ ತಂದೆ-ತಾಯಿ, ವರ ಇಬ್ಬರು ಗೆಳೆಯರು ಮತ್ತು ಪುರೋಹಿತರು ಇದ್ದಾರೆ. ಮದುವೆಯ ಮನೆಯ ದೃಶ್ಯದಿಂದ ನಾಟಕ ಆರಂಭವಾಗುತ್ತದೆ. ಮದುವೆ ಮನೆಯ ವ್ಯವಸ್ಥೆಯ ಬಗ್ಗೆ ತಕರಾರು ತೆಗೆಯುವ ವರನ ಗೆಳೆಯರು, ವರದಕ್ಷಿಣೆ ಬಗ್ಗೆ ಗುಸು ಗುಸು…

  • ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ನಾಗರಾಜ ವಸ್ತಾರೆ ಅವರದು ಕಳೆದೆರಡು ದಶಕಗಳಲ್ಲಿ ಹೊಸಗನ್ನಡದ ಕತೆಗಾರರಲ್ಲಿ ಗಮನಾರ್ಹ ಹೆಸರು. ಕತೆ, ಕವನ ಮತ್ತು ಅಂಕಣ ಬರಹ ಅವರ ಆಸಕ್ತಿ. “ಹಳೆಮನೆ ಕತೆ", “ಬಯಲು ಆಲಯ” ಮತ್ತು “ಪಟ್ಟಣ ಪುರಾಣ” ಅವರ ಅಂಕಣ ಬರಹಗಳು. ನಗರ ಬದುಕಿನ ಒಳತೋಟಿಗಳು, ಸಂಕೀರ್ಣ ಸಂಬಂಧಗಳು ಹಾಗೂ ಮೇಲ್ನೋಟಕ್ಕೆ ಕಾಣಿಸದ ಸೂಕ್ಷ್ಮ ಸಂಗತಿಗಳನ್ನು ಕತೆಗಳನ್ನಾಗಿ ಹೆಣೆಯುವುದರಲ್ಲಿ ಅವರು ಸಿದ್ಧಹಸ್ತರು.  

    ಇಲ್ಲಿನ 18 ಕತೆಗಳ ಬಗ್ಗೆ ಮುನ್ನುಡಿಯಲ್ಲಿ ಕತೆಗಾರ ನಾಗರಾಜ ವಸ್ತಾರೆ ಬರೆದದ್ದು: “..... ಇಲ್ಲಿನಷ್ಟೂ ಕತೆಗಳಷ್ಟೂ ಒಂದಲ್ಲೊಂದು ರೀತಿಯಲ್ಲಿ ಊಹೆಯಲ್ಲದ ವಾಸ್ತವವೆನ್ನುವುದನ್ನು ಮುಲಾಜಿಲ್ಲದೆ ಒಪ್ಪಿಕೊಳ್ಳುತ್ತೇನೆ. ಇಲ್ಲಿನಷ್ಟೂ ಪಾತ್ರಗಳು ನನ್ನ ಮಗ್ಗುಲಿಗೇ, ಆಸುಪಾಸಿನಲ್ಲೇ ಜರುಗಿದಂಥವು…… ಇವೊತ್ತೂ…