March 2022

  • March 31, 2022
    ಬರಹ: Ashwin Rao K P
    ಪ್ರಪ್ರಥಮವಾಗಿ ಮೊಬೈಲ್ ಫೋನ್ ಮಾರುಕಟ್ಟೆಗೆ ಬಂದಾಗ, ಅದರಲ್ಲಿ ಸಂಖ್ಯೆಗಳನ್ನು ಒತ್ತಲು ಬಟನ್ (ಕೀಪ್ಯಾಡ್) ಇರುತ್ತಿದ್ದವು. ಕಾಲಕ್ರಮೇಣ ಮೊಬೈಲ್ ಫೋನ್ ಗಳು ಸ್ಮಾರ್ಟ್ ಫೋನ್ ಗಳಾದುವು. ಇಂಟರ್ನೆಟ್ ವ್ಯವಸ್ಥೆಯೂ ಬಂತು. ಟಚ್ ಸ್ಕ್ರೀನ್ ಬಂದವು.…
  • March 31, 2022
    ಬರಹ: Ashwin Rao K P
    108 Daily ಮನಿ ಎಂಬ ಪುಸ್ತಕವು ವಿತ್ತ ಪದಗಳ ಅರ್ಥಗುಚ್ಛ.  “ನಿಮಗೆಲ್ಲಾ ಬದುಕಿನಲ್ಲಿ ಒಂದಲ್ಲ ಒಂದು ಬಾರಿ ಜಂಕ್ ಬಾಂಡ್ ಎಂದರೇನು? ಎನ್ನುವ ಪ್ರಶ್ನೆ ಬಂದಿರುತ್ತದೆ. ಮಸಾಲಾ ಬಾಂಡ್ ಎನ್ನುವ ಹೆಸರನ್ನ ಕೇಳಿರುತ್ತೀರಿ ಆದರೆ ಅದೇನು ಎನ್ನುವ…
  • March 31, 2022
    ಬರಹ: Shreerama Diwana
    ಈ ಅಭಿಯಾನ ಯಾವುದೋ ಅನಾಹುತಗಳ ಮುನ್ಸೂಚನೆ ಎಂದು ಇತಿಹಾಸದ ಅನುಭವದಿಂದ ಅನಿಸುತ್ತಿದೆ. ಹೌದು, ಇಂದಿನ ಉನ್ಮಾದದ ಸಾಕಷ್ಟು ಹೆಚ್ಚು ಜನ ಬೆಂಬಲಿಸುತ್ತಿರುವ ಸಂದರ್ಭದಲ್ಲಿ ಒಂದು ವಿಷಯದ ಬಗ್ಗೆ ಸತ್ಯವಲ್ಲದಿದ್ದರೂ ವಾಸ್ತವ ವಿಷಯದ ಬಗ್ಗೆ ನನ್ನ…
  • March 31, 2022
    ಬರಹ: ಬರಹಗಾರರ ಬಳಗ
    ನಾವು ಸಿಟ್ಟಿನಲ್ಲಿ ಏನೇನೋ ಮಾತಾಡುತ್ತೇವೆ. ಆಗ ನಮ್ಮ ಬುದ್ಧಿ ನಮ್ಮ ಕೈಯಲ್ಲಿ ಇರುವುದಿಲ್ಲ. ‘ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು’ ಮಾತೇ ಇದೆಯಲ್ಲ? ಕೋಪದಲ್ಲಿ ಕೊಯಿದ ಮೂಗು ಮತ್ತೆ ಬರಲು ಸಾಧ್ಯವೇ? ಸಂಬಂಧಗಳು ಹಾಳಾಗಲು ಸಿಟ್ಟು ಪ್ರಮುಖ…
  • March 31, 2022
    ಬರಹ: ಬರಹಗಾರರ ಬಳಗ
    ಸರಕಾರಿ ಆಸ್ಪತ್ರೆ. ಸೂರ್ಯ ಏಳುವುದಕ್ಕೆ ಇನ್ನೂ ಸಮಯವಿತ್ತು. ಅವನ ಅಲರಾಂ ಬಡಿಯುತ್ತಿಲ್ಲ ಅಂತ ಕಾಣುತ್ತೆ. ಕತ್ತಲೆಯೇ ಹೆಚ್ಚು ತುಂಬಿರುವ ಅಲ್ಲಿ ಬೆಳಕಿನ ಕೋಣೆಯೊಳಗೆ ಅವಳು ಮಲಗಿದ್ದಾಳೆ. ಇಂದು ಮಗು ಜನಿಸಬಹುದು ಎಂದು ಡಾಕ್ಟರು ಹೇಳಿದ್ದಾರೆ.…
  • March 31, 2022
    ಬರಹ: ಬರಹಗಾರರ ಬಳಗ
    ಉಳಿಸೋಣ ಉಳಿಸೋಣ  ನೀರಿನ ಮೂಲವ ಉಳಿಸೋಣ ಹಿತಮಿತವಾಗಿ ಬಳಸೋಣ ಎಲ್ಲರೊಂದಾಗಿ ಕೈ ಜೋಡಿಸೋಣ   ಸೋಗೆ ಮುಳಿಹುಲ್ಲು ಹೋಯ್ತಲ್ಲ ಹಂಚಿನ ಮಾಡು ಬೇಡವಲ್ಲ ತಾರಸಿ ಮನೆಯೇ ಬೇಕಲ್ಲ ಫಲವನು ಈಗ ಕಾಣ್ತೇವಲ್ಲ   ಮಳೆಯ ನೀರು ದೇವನ ಕೊಡುಗೆ
  • March 31, 2022
    ಬರಹ: ಬರಹಗಾರರ ಬಳಗ
    ಅಜೋಲ ಒಂದು ಅದ್ಭುತ ಜಲಸಸ್ಯ. ಪ್ರೊಟಿನ್ಸ್, ಅಗತ್ಯ ಅಮಿನೋ ಆಮ್ಲಗಳು, ವಿಟಮಿನ್ ಎ, ಬಿ-೧೨, ಬೀಟಾಕಾರೋಟಿನ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ತಾಮ್ರ, ಮೆಗ್ನೀಷಿಯಂ, ಪೊಟ್ಯಾಷಿಯಂ ಇತ್ಯಾದಿ ಖನಿಜಗಳ ಉಗ್ರಾಣ. ಇದು ನೀರಿನ ಮೇಲೆ ತೇಲಾಡಿಕೊಂಡು…
  • March 30, 2022
    ಬರಹ: Ashwin Rao K P
    ಡಾ. ಭುಜೇಂದ್ರ ಬನಪ್ಪ ಮಹಿಷವಾಡಿ ಇವರ ಹೆಸರನ್ನು ಕೇಳಿದವರ ಸಂಖ್ಯೆ ಬಹಳ ಕಮ್ಮಿ ಇರಬಹುದು. ಎಲೆ ಮರೆಯ ಕಾಯಿಯಂತೆ ಬದುಕಿ ಬಾಳಿದ ಪ್ರತಿಭಾವಂತ ಸಾಹಿತಿ, ಕವಿ ಇವರು. ನಿಮಗೆ ನೆನಪಿರಬಹುದು, ಇತ್ತೀಚೆಗೆ ಗಾನ ಕೋಗಿಲೆ ಲತಾ ಮಂಗೇಷ್ಕರ್ ಅವರು ನಿಧನ…
  • March 30, 2022
    ಬರಹ: Ashwin Rao K P
    ಕೋವಿಡ್ ಸಂಕಷ್ಟದ ಪರಿಣಾಮ ಕಳೆದ ಎರಡು ವರ್ಷದಿಂದ ಬಹುತೇಕ ಎಲ್ಲ ಕ್ಷೇತ್ರಗಳು ನಲುಗಿದವು. ರಾಜ್ಯದ ಬೊಕ್ಕಸದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತು ಎಂಬುದು ನಮಗೆ ಗೊತ್ತಿರುವಂಥದ್ದೇ. ಕರೋನಾ ಮೂರನೇ ಅಲೆ ಭಾಗಶಃ ತಗ್ಗಿ ಜನಜೀವನ…
  • March 30, 2022
    ಬರಹ: Shreerama Diwana
    ಮೇಷ ರಾಶಿ: ನಿಮ್ಮ ಸ್ನೇಹಿತರು, ಪರಿಚಿತರು, ಬಂಧುಗಳಿಂದ ನಿಮಗೆ ಮೋಸವಾಗುವ ಸಾಧ್ಯತೆ ಇದೆ. ಎಚ್ಚರವಿರಲಿ. ವೃಷಭ ರಾಶಿ: ಹಣಕಾಸಿನ ವಿಷಯದಲ್ಲಿ ಯಾರಿಗೂ ಜಾಮೀನು ಹಾಕಬೇಡಿ. ಅದರಿಂದ ತುಂಬಾ ಕಷ್ಟ ಅನುಭವಿಸುವಿರಿ. ಮಿಥುನ ರಾಶಿ: ನಿಮ್ಮ ಮನೆಯ…
  • March 30, 2022
    ಬರಹ: ಬರಹಗಾರರ ಬಳಗ
    ನಾವು ಬದುಕಿರುವಾಗಲೇ, ನಮ್ಮ ಶರೀರದಲ್ಲಿ ಶಕ್ತಿ ಇರುವಾಗಲೇ ಏನನ್ನಾದರೂ ಸಾಧಿಸಬೇಕು. ತನ್ನ ಮನಸ್ಸಿನಲ್ಲಿರುವ ಆಸೆಯನ್ನು ಸಾಧ್ಯವಿದ್ದಷ್ಟೂ ಆರೋಗ್ಯರವಾಗಿ ಪೂರೈಸಿಕೊಳ್ಳಬೇಕು. ತಾನೇನಾದರೂ ಈ ಬದುಕಲ್ಲಿ ಮಾಡಬೇಕೆಂಬ ಕನಸನ್ನು ಕಂಡಿದ್ದರೆ ಅದನ್ನು…
  • March 30, 2022
    ಬರಹ: ಬರಹಗಾರರ ಬಳಗ
    ನೂರು ಮೀಟರ್ ಓಟದ ಅಂಗಳ ತಯಾರಾಗಿತ್ತು. ಸ್ಪರ್ಧಿಗಳಾಗಿ ಇರೋರು ಎಲ್ಲರೂ ರಾಷ್ಟ್ರಮಟ್ಟದಲ್ಲಿ ಮಿಂಚಿದವರು. ದಿನವೂ ಅಭ್ಯಾಸ, ಗೆಲುವೊಂದೇ ಐಕ್ಯ ಮಂತ್ರ ಜಪಿಸಿ ಕಾಲಿನ ಸ್ನಾಯುಗಳನ್ನು ಬಿಗಿಗೊಳಿಸಿ ಓಟ ಮುಂದುವರೆಸಿದವರು. ವಿಶ್ವದಾಖಲೆಯ ಓಟದ…
  • March 30, 2022
    ಬರಹ: ಬರಹಗಾರರ ಬಳಗ
    ಪುಲ್ಲವಿತ ಪ್ರಕಟಿತ ಪರಿಮಳಿತ ಪ್ರಭಾವ ನಲಿವು ಧಾತ್ರಿಗೆ ತುಂಬಿ ರಸಭಾವ ರಸಕಾವ್ಯ ರಸರಮ್ಯ ಅಗಣಿತ ಅನುಭಾವ ಅನುರಣಿಸಿ ಆನಂದವ ವಸಂತ ಸಂಭವ.   ಹೊಸ ಚಿಗುರು ಹೊಸ ಹುರುಪು ಹೊಸತು ತಂಪು ಗಾಯನಕೆ ಕೋಗಿಲೆಯ ಗಾನವೇ ಇಂಪು ಗಾಂಧಾರಿ ಕಂಗಳಿಗೂ ಕಾಣುವ ಆಸೆ…
  • March 29, 2022
    ಬರಹ: Ashwin Rao K P
    ಒಂದು ರಾಜ್ಯದ ರಾಜನು ಒಂದು ಘೋಷಣೆ ಹೊರಡಿಸಿದ. ‘ನನ್ನ ರಾಜ್ಯದಲ್ಲಿರುವ ಎಲ್ಲಾ ಸಾಧು ಸನ್ಯಾಸಿಗಳು ದಯವಿಟ್ಟು ಮುಂದಿನ ಹುಣ್ಣಿಮೆಯ ದಿನ ರಾಜಧಾನಿಗೆ ಬರಬೇಕು'. ರಾಜನು ಯಾವುದೋ ಆಧ್ಯಾತ್ಮಿಕ ವಿಚಾರವನ್ನು ಚರ್ಚಿಸಲು ತಮ್ಮನ್ನು ಬರಹೇಳಿದ್ದಾರೆಂದು…
  • March 29, 2022
    ಬರಹ: Ashwin Rao K P
    ಅಜ್ಞಾತ ವಾಸ ಅನುಭವಿಸಲು ಪಾಂಡವರು ಕಾಡಿಗೆ ಬಂದಾಗ ಅವರು ಅನುಭವಿಸಿದ ಸಂಕಷ್ಟಗಳು ಹಾಗೂ ಅವುಗಳನ್ನು ಎದುರಿಸಿಕೊಂಡ ಬಗೆಗಳ ಕುರಿತು ಧಾರ್ಮಿಕ ಚಿಂತಕರಾದ ಡಾ. ಕೆ ಎಸ್ ನಾರಾಯಣಾಚಾರ್ಯ ಇವರು ಸವಿವರವಾಗಿ ‘ವನದಲ್ಲಿ ಪಾಂಡವರು' ಕೃತಿಯಲ್ಲಿ…
  • March 29, 2022
    ಬರಹ: Shreerama Diwana
    ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ನಡೆದು ಎಲ್ಲವೂ ಮುಕ್ತಾಯವಾಗಿ ಸೋಲು ಗೆಲುವು ನಿರ್ಧಾರವಾದ ನಂತರ ವಿಜಯ ಸಾಧಿಸಿದ ಪಾಂಡವರು ಆ ಗೆದ್ದ ಸಂಭ್ರಮ ಅನುಭವಿಸುವುದಕ್ಕೆ ಆಗುವುದಿಲ್ಲ. ಎಲ್ಲವನ್ನೂ ಎಲ್ಲರನ್ನೂ ಕರೆದುಕೊಂಡು ಅನುಭವಿಸುವುದಾದರೂ…
  • March 29, 2022
    ಬರಹ: ಬರಹಗಾರರ ಬಳಗ
    ತಾನು ಮಾತ್ರ ಉತ್ತಮ, ಉಳಿದವರೆಲ್ಲ ಅಧಮರು, ಮಧ್ಯಮರು, ಏನೂ ಪ್ರಯೋಜನವಿಲ್ಲದವರೆಂದು ಯಾವತ್ತೂ ಭಾವಿಸಬಾರದು. ಒಂದಿಲ್ಲೊಂದು ವಿಶೇಷ ಗುಣಗಳನ್ನು ಪ್ರತಿಯೊಂದು ಜೀವಿಯಲ್ಲೂ ದೇವರು ನೀಡಿರುತ್ತಾನೆ. ನಾವೆಲ್ಲ ಅದನ್ನು ಕಂಡವರು. ಆದರೂ ಹೇಳುವುದೊಂದು…
  • March 29, 2022
    ಬರಹ: ಬರಹಗಾರರ ಬಳಗ
    ಯೋಚನೆಗಳು ಹೆಚ್ಚಾದಷ್ಟು ಕೆಲಸಗಳು ಮುಂದುವರಿತಾಯಿಲ್ಲ. ಆಗಾಗ ನಾನು ಸ್ಥಗಿತಗೊಂಡಾಗ ಇದೇ ರೀತಿ ಮೇಡಂ  ಬಳಿ ಹೋಗ್ತೇನೆ. ಹಾಗೆ ಇವತ್ತು ತೆರಳಿದ್ದೆ. "ಮೇಡಂ ಪರಿಶ್ರಮ ಮಿತಿಮೀರಿ ಹಾಕ್ತಾ ಇದ್ದೇನೆ, ಪ್ರತಿಫಲಗಳು ಕಾಣುತ್ತಿಲ್ಲ. ಅದನ್ನು ನೋಡಿ…
  • March 29, 2022
    ಬರಹ: ಬರಹಗಾರರ ಬಳಗ
    ೨೭ ಮಾರ್ಚ್ ೨೦೨೨ನ್ನು ವಿಶ್ವ ರಂಗಭೂಮಿ ದಿನ (WORLD THEATRE DAY) ಎಂದು ಕರೆಯುತ್ತಾರೆ. ಈ ಕುರಿತಾದ ಪುಟ್ಟ ಬರಹ ಇಲ್ಲಿದೆ. “ರಂಗಭೂಮಿ ಎಂದರೆ ನಿಜವಾದ ಅರ್ಥದಲ್ಲಿ ನಮ್ಮ ಅನುಭವ ದಾಟಿಸಬಲ್ಲ ಪ್ರಬಲ  ಮಾಧ್ಯಮ” - ಪೀಟರ್ ಸೆಲ್ಲರ್ಸ್ ೨೦೨೨ರ…
  • March 29, 2022
    ಬರಹ: addoor
    ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದಾಗ ಶಾಲೆ ಬಿಟ್ಟ ಥಾಕರ್ಸಿ ಸವಲಿಯಾ, ಅನಂತರ ಕಲಿತದ್ದು ಪ್ರಕೃತಿಯ ಮಡಿಲಲ್ಲಿ. ತನ್ನ ತಂದೆಯ ಹಾದಿಯಲ್ಲಿ ಮುನ್ನಡೆದ ಅವರಿಗೆ ಎಪ್ಪತ್ತರ ಹರೆಯದಲ್ಲಿ ಹೊಸ ತಳಿಯೊಂದರ ಅನ್ವೇಷಕ ಎಂಬ ಗೌರವ. ಅದುವೇ "ಮೊರಾಲೊ"…