April 2018

  • April 30, 2018
    ಬರಹ: kavinagaraj
    ಎಲ್ಲಿಂದ ಹೊರಟಿಹುದೊ ತಲುಪುವುದು ಎಲ್ಲಿಗೋ ಅನವರತ ಸಾಗಿರುವ ಗೊತ್ತಿರದ ಪಯಣ | ನಿಲ್ಲದೀ ಪಯಣಕೆ ಬಂಡಿಗಳು ಹಲವು ಬಂಡವಾಳಕೆ ತಕ್ಕ ಬಂಡಿಯಿದೆ ಮೂಢ || 
  • April 29, 2018
    ಬರಹ: addoor
    ಕಾಲನದಿ ಪರಿಯುತಿರೆ ನಡುವೆ ಶೀಲದ ಶೈಲ ಗಾಳಿ ಬಿರುಬೀಸುತಿರಲಾತ್ಮಗಿರಿಯಚಲ ಹೋಳು ಹೋಳಾಗಿ ಜನ ಹಾಳಾಗುತಿರೆ ನೀನು ಬಾಳು ತಾಳುಮೆ ಕಲಿತು – ಮರುಳ ಮುನಿಯ ನಾವು ಹೇಗೆ ಬದುಕಬೇಕು? ಎಂಬದನ್ನು ತೋರಿಸಿ ಕೊಡಲು ಮಾನ್ಯ ಡಿ.ವಿ.ಜಿ.ಯವರು ಈ…
  • April 29, 2018
    ಬರಹ: BHARADWAJ B S
      ಒಮ್ಮೆ ಕೆಲಸದ ಮೇರೆಗೆ ಹೊರದೇಶಕ್ಕೆ   ಹೋಗಬೇಕಾಯಿತು. ಆದುದರಿಂದ ಎಲ್ಲಾ ತರಹದ ಸಿದ್ಧತೆಗಳನ್ನು ಮಾಡಿ ಇನ್ನೆರಡು ದಿನ ಹೋಗಬೇಕೆನ್ನುವಷ್ಟರಲ್ಲಿ ನಮ್ಮ  ಮ್ಯಾನೇಜರ್ ಒಂದು ಮಾತು ಹೇಳಿದರು "ನೋಡು ನೀನು ಹೇಗಾದರೂ ಮಾಡಿ ಆಲ್ಬರ್ಟ್  ರವರನ್ನು…
  • April 29, 2018
    ಬರಹ: kavinagaraj
         ಹಿರಿಯರೊಬ್ಬರು ನಿಧನರಾಗುವ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ'.…
  • April 28, 2018
    ಬರಹ: kavinagaraj
    ನಾವು ಹೆಣೆಯುವ ಕಥೆಗೆ ನಾವೆ ನಾಯಕರು ನಮಗಿಂತ ಉತ್ತಮರು ಬೇರಾರು ಇಹರು | ಹೊಗಳಿಕೊಳ್ಳುವ ರೋಗಕೆಲ್ಲಿಹುದು ಮದ್ದು ನಗುವವರ ಎದುರಿನಲಿ ಬೀಳದಿರು ಮೂಢ ||  -ಕ.ವೆಂ.ನಾ.
  • April 28, 2018
    ಬರಹ: shreekant.mishrikoti
    ೧) ಎಲ್ಲಾರೂ ನಮ್ಮವರೇ. ೨) ನಮ್ಮ ಬೆನ್ನು ನಮಗೆ ಕಾಣುವದಿಲ್ಲ. ೩) ಮನಸ್ಸು ಸ್ವಚ್ಚವಾಗಿರಬೇಕು. ೪) ಯಾರ ಜತೆಗೂ ಧ್ವೇಷ ಕಟ್ಟಿಕೋಬಾರದು. ೫) ಸಿಟ್ಟಿನ ಕೈಯಲ್ಲಿ ಬುದ್ದಿಯನ್ನು ಕೊಡಬಾರದು. ೬) ಯಾರ ಭಾಗ್ಯ ಹೇಗೋ ಯಾರು ಬಲ್ಲರು ? ತಿಪ್ಪೆ…
  • April 27, 2018
    ಬರಹ: shreekant.mishrikoti
    ಸಂಕ್ರಮಣ ಹಬ್ಬಕ್ಕೆ ಉತ್ತರ ಕನಾ೯ಟಕ ಮತ್ತು ಮಹಾರಾಷ್ಟ್ರದಲ್ಲಿ ಕುಸುರೆಳ್ಳು ವಿನಿಮಯದ ಪದ್ಧತಿ ಇದ್ದು, ಆ ಬಗ್ಗೆ ನಿಮಗೆ ಗೊತ್ತಿರಬಹುದು. ಈ ಕುಸುರೆಳ್ಳು ಮಾಡುವ ವಿಧಾನ ಬಹಳಷ್ಟು ತಾಳ್ಮೆ ಬೇಡುವಂಥದು. ಸಕ್ಕರೆ ಪಾಕ ಮಾಡಿಟ್ಟುಕೊಂಡು , ಇದ್ದಲ…
  • April 27, 2018
    ಬರಹ: addoor
    “ಹಾ.ಮಾ.ನಾ.” ಎಂದೇ ಹೆಸರಾದ ಡಾ. ಹಾರೋಗದ್ದೆ ಮಾನಪ್ಪ ನಾಯಕರು ಕನ್ನಡದಲ್ಲಿ ಅಂಕಣ ಬರಹವನ್ನು ಜನಪ್ರಿಯಗೊಳಿಸಿದವರಲ್ಲಿ ಮೊದಲಿಗರು. ಅವರ ಪುಸ್ತಕಗಳಲ್ಲಿ ತೀರಾ ಆಪ್ತವೆನಿಸುವ ಪುಸ್ತಕ “ನಮ್ಮ ಮನೆಯ ದೀಪ”. ಇದರಲ್ಲಿವೆ, ಅವರ ಏಳು ಬರಹಗಳು.…
  • April 26, 2018
    ಬರಹ: kavinagaraj
        "ನೀವು ಸತ್ಸಂಗಕ್ಕೆ ಏಕೆ ಹೋಗುತ್ತೀರಿ?" - ಸತ್ಸಂಗಕ್ಕೆ ಹೋಗುವ ಕೆಲವರನ್ನು ವಿಚಾರಿಸಿದಾಗ ಅವರಿಂದ ಬಂದ ಉತ್ತರಗಳಿವು: 'ಸತ್ಸಂಗಕ್ಕೆ ಹೋಗುವುದರಿಂದ ನೆಮ್ಮದಿ ಸಿಗುತ್ತದೆ.' 'ಮನಸ್ಸು ಹಗುರವಾಗುತ್ತದೆ.' 'ಮನೆ, ಕಛೇರಿಗಳ ಜಂಜಾಟದಿಂದ…
  • April 26, 2018
    ಬರಹ: kavinagaraj
    ಮುಂದೊಮ್ಮೆ ಒಳಿತ ಕಂಡೆ ಕಾಣವೆವೆಂದು ದುಗುಡ ದುಮ್ಮಾನಗಳ ಸಹಿಸಿಹರು ಇಂದು | ಮೇಲೇರುವಾ ಆಸೆ ಜೀವಿಯ ಗುಣವಹುದು ಆಸೆಯಲೆ ಬದುಕಿಹುದು ಗೊತ್ತಿಹುದೆ ಮೂಢ|| 
  • April 25, 2018
    ಬರಹ: kavinagaraj
    ಸಕಲರನು ಪಾಲಿಪುದು ಪೊರೆಯುವುದೆ ಧರ್ಮ ಜಗದಗಲ ಜಗದುದ್ದ ಭೇದವೆಣಿಸದ ಮರ್ಮ | ಕೈಹಿಡಿದು ಮೇಲೆತ್ತಿ ನಿಲಿಸುವುದೆ ಧರ್ಮ ಇಹಪರಕೆ ಸಾಧನವು ಕರ್ಮವೋ ಮೂಢ || 
  • April 23, 2018
    ಬರಹ: kavinagaraj
         ದೂರುವವರು, ದೂಷಿಸುವವರು ಇರುವ ಕಾರಣದಿಂದಲೇ ಜನರು ತಮ್ಮ ನಡವಳಿಕೆಯ ಬಗ್ಗೆ ಎಚ್ಚರದಿಂದಿರುತ್ತಾರೆ. ಪಕ್ಷಿಗಳಿಗೆ ಅಪಾಯವಿರದಿರುತ್ತಿದ್ದರೆ ಅವು ನಿರಾತಂಕವಾಗಿ ಓಡಾಡಿಕೊಂಡಿದ್ದು ಹಾರುವುದನ್ನೇ ಮರೆತುಬಿಡುತ್ತಿದ್ದವಲ್ಲವೇ? ಅದೇ ರೀತಿ…
  • April 22, 2018
    ಬರಹ: addoor
    ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು ತೇಲುತ್ತ ಭಯವ ಕಾಣದೆ ಸಾಗುತಿರಲು ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ ಮೇಲ ಕೀಳಾಗಿಪುದು - ಮಂಕುತಿಮ್ಮ ಕಾಲವೆಂಬ ನದಿಯಲ್ಲಿ ಸಾಗುವ ಬಾಳೆಂಬ ದೋಣಿ – ಇದು ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.…
  • April 22, 2018
    ಬರಹ: kavinagaraj
         ಮಿತ್ರ ಸುಬ್ರಹ್ಮಣ್ಯ ನಿವೃತ್ತ ಪ್ರೌಢಶಾಲಾ ಶಿಕ್ಷಕರು. ನನಗೆ ಬಾಲ್ಯಕಾಲದಿಂದಲೂ ಪರಿಚಿತ ಮತ್ತು ಬಂಧು. ಕಳೆದ ವರ್ಷ ಅವರ ಪತ್ನಿ ಶ್ರೀಮತಿ ಚಂದ್ರಲೇಖಾ ವಿಧಿವಶರಾದರು. ಚಂದ್ರಲೇಖಾ ಸುಬ್ರಹ್ಮಣ್ಯರು ಬಾಲ್ಯದ ಒಡನಾಡಿಗಳು, ಸಂಬಂಧಿಗಳು. ಆ…
  • April 21, 2018
    ಬರಹ: kavinagaraj
         ಮುಕ್ತಿಪಥ       ಆದಿಗುರು ಶ್ರೀ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತಿ-ನೀತಿಗಳನ್ನು ತಿಳಿಸುವ ಅಪೂರ್ವ ರಚನೆ. ಪರಮ ಸತ್ಯದ ದರ್ಶನ ಮಾಡಿಸುವ ಶ್ರೇಯಸ್ಕರ, ಸನ್ಮಾರ್ಗದ ಪಥವನ್ನು ತೋರಿಸುವ ಈ ಪಂಚಕದಲ್ಲಿ…
  • April 20, 2018
    ಬರಹ: addoor
    “ಸಾವಯವ ಉತ್ಪನ್ನ” ಎಂಬ ಆಹಾರ ಪೊಟ್ಟಣಗಳನ್ನು ಗಮನಿಸಿದ್ದೀರಾ? ಸಾಮಾನ್ಯವಾಗಿ ಅವುಗಳ ಬೆಲೆ, ಈ ಲೇಬಲ್ ಇಲ್ಲದ ಅಂತಹದೇ ಉತ್ಪನ್ನದ ಪ್ಯಾಕೆಟಿನ ಒಂದೂವರೆ ಪಟ್ಟು ಅಥವಾ ಎರಡು ಪಟ್ಟು ಜಾಸ್ತಿ. ಆದರೆ, ಆ ಉತ್ಪನ್ನ (ತರಕಾರಿ, ಹಣ್ಣು, ಧಾನ್ಯ…
  • April 16, 2018
    ಬರಹ: kavinagaraj
    ಹಸಿದವಗೆ ಹುಸಿ ವೇದಾಂತ ಬೇಡ ಕಥೆ ಕವನ ಸಾಹಿತ್ಯ ಬೇಡವೇ ಬೇಡ | ಬಳಲಿದ ಉದರವನು ಕಾಡಬೇಡ ಮುದದಿ ಆದರಿಸಿ ಮೋದಪಡು ಮೂಢ ||      ಒಂದು ಕಾಲವಿತ್ತು. ಯಾರಾದರೂ ಅತಿಥಿಗೆ, ಹಸಿದವರಿಗೆ, ಪ್ರಯಾಣಿಕರಿಗೆ ಊಟ ಹಾಕದೆ ಮನೆಯ ಯಜಮಾನ ಊಟ…
  • April 16, 2018
    ಬರಹ: Vibha vishwanath
    "ಹೆಣ್ಣು ಬರಿ ಕಾಮದ,ಭೋಗದ ವಸ್ತುವೇ?ಪುಟ್ಟ ಹೆಣ್ಣು ಹಸುಳೆಯಿಂದ ಹಿಡಿದು ಮುದುಕಿಯವರೆಗೂ ಬೇಕಾಗಿರುವುದು ಅವಳ ದೈಹಿಕ ಸುಖ ಮಾತ್ರವೇ?" ಇಂತದ್ದೊಂದು ಪ್ರಶ್ನೆ ಪ್ರತಿ ದಿನವೂ ಮೂಡಿ ಮರೆಯಾಗುತ್ತಿರುವುದು ಸುಳ್ಳಲ್ಲ.ಇದಕ್ಕೆ ಪುಷ್ಠಿ ಒದಗಿಸುವಂತೆ…
  • April 15, 2018
    ಬರಹ: addoor
    ಕಷ್ಟ ಭಯ ತೋರ್ದಂದು, ನಷ್ಟ ನಿನಗಾದಂದು ದೃಷ್ಟಿಯನು ತಿರುಗಿಸೊಳಗಡೆ ನೋಡಲ್ಲಿ ಸೃಷ್ಟಿಯಮೃತದ್ರವಂ ಸ್ರವಿಸುವುದು ಗುಪ್ತಿಯಿಂ   ಪುಷ್ಟಿಗೊಳ್ಳದರಿಂದೆ – ಮರುಳ ಮುನಿಯ ಅದೇ ಚಿಂತನೆಯನ್ನು ಈ ಮುಕ್ತದಲ್ಲಿಯೂ ಮಿನುಗಿಸಿದ್ದಾರೆ ಮಾನ್ಯ ಡಿ.ವಿ.ಜಿ…
  • April 14, 2018
    ಬರಹ: kavinagaraj
    "ನಮಸ್ಕಾರ, ತಹಸೀಲ್ದಾರ್ ಸಾಹೇಬರಿಗೆ." "ಓಹೋಹೋ, ರಾಯರು! ಬನ್ನಿ ಸಾರ್. ದೇವರ ದರ್ಶನ ಆದಂತಾಯಿತು. ಕೂತ್ಕೊಳಿ ಸಾರ್" ಎನ್ನುತ್ತಾ ತಹಸೀಲ್ದಾರರು ಶಿಷ್ಯನಿಗೆ ಕಾಫಿ ತರಲು ಹೇಳಿದರು. "ಹೇಳಿ ಸಾರ್, ಏನು ಬರೋಣವಾಯಿತು?" "ಒಂದು ಜಾತಿ ಸರ್ಟಿಫಿಕೇಟ್…