ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

|| ಕಣ್ಣೀರು...||

ಕಣ್ಣೀರ ಧಾರೆ ನಂಗೇಕೆ
ಎನ್ನುವ  ಮನಕೆ...

ಮನದ  ಭಾವ-ಅಭಾವಗಳ  ಭಾವ;
ಮನದ ತರಂಗಗಳ  ನುಡಿ ;
ಸಾಗರದಲೆಗಳ  ದನಿ ;

ಆಸೆ - ಆಕಾಂಕ್ಷೆ - ಗೆಲುವುಗಳ
ಹೊನ್ನುಡಿ ;
ನೋವು-ಹತಾಶೆ-ಸೋಲುಗಳ
ಬೆನ್ನುಡಿ ;
ಮನಧರೆಯ  ಜ್ವಾಲಾಮುಖಿ
ಸೋಕಿಸದೆ  ತಟ್ಟುವ  ತಪರಾಕಿ ;

ಕಲ್ಲಾದ  ಮನಕೆ  ಬದುಕ ಸಿಂಚನ ;
ಅರಳುವ  ಮನಕೆ  ಅರಳಿದ  ಹೂಬನ ;

ರೋಗಿಯನ್ನು ನೋಡಲು ಹೋಗುವವರು

ಆಸ್ಪತ್ರೆ ಸೇರಿದವರನ್ನು ವಿಚಾರಿಸಲು ಹೋಗುವ ರೋಗಿ(ಯ ಬಂಧುಮಿತ್ರರು)ಗಳು-

ಮಾಲಿಗಳು :
ಕೆಲವರು ‘ಮಾಲ್’ಗೆ ಹೋಗುವುದಕ್ಕೂ ಆಸ್ಪತ್ರೆಗೆ ರೋಗಿಯನ್ನು ನೋಡಲು ಹೋಗುವುದಕ್ಕೂ ವ್ಯತ್ಯಾಸವೇ ಇಲ್ಲ. ಅಲ್ಲಿರುವ ಎಲ್ಲಾ ವಸ್ತುಗಳನ್ನು ನೋಡಿ, ಮುಟ್ಟಿ, ತೆಗೆದು, ವಿಚಾರಿಸಿ.. ಇಡುವರು.

ಸೀರಿಯಲ್‌ ಲವರ್ಸ್ :

ಬಿಗ್ ಟಿವಿ - ಕನ್ನಡ ಮತ್ತು ರಾಷ್ಟ್ರ ಭಾಷೆ !!

ರಿಲಾಯನ್ಸ್ ನವರು ಬಿಗ್ ಟಿ.ವಿ ಅನ್ನೋ ಡಿ.ಟಿ.ಎಚ್ ಸೇವೆ ಶುರು ಮಾಡ್ತಾ ಇದ್ದಾರಂತೆ, ಅವರ ಸೇವೆಯಲ್ಲಿ ಕನ್ನಡಕ್ಕೆ ಒಳ್ಳೆ ಆದ್ಯತೆ ಕೊಟ್ಟಿದ್ದಾರೆ ಅಂತೆ ಅನ್ನುವ ಅಂತೆ-ಕಂತೆ ಕೇಳಿ ಸಕತ್ ಖುಷಿ ಆದೋರಲ್ಲಿ ನಾನು ಒಬ್ಬ.

ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ..

ಪ್ರಿಯ ಓದುಗ ವೃಂದಕ್ಕೆ ನನ್ನ ಹೃದಯಪೂರ್ವಕ ನಮಸ್ಕಾರ. ನೀವೇನೋ ಗೌರಿ,ಗಣೇಶ ಹಬ್ಬ ಮಾಡೊದಕ್ಕೆ ನಿಮ್ಮ ನಿಮ್ಮ ಊರಿಗೆ ಹೊರಟ್‌ಹೋಗಿಬಿಟ್ಟಿದ್ರಿ. ಆದ್ರೆ ಇಲ್ಲಿ..ನನ್ನ ಬ್ಲಾಗಿನಲ್ಲಿ ನಾ ಬರೆದ ಕವನಗಳು, ಲೇಖನಗಳು ಓದುವವರು ಯಾರೂ ಇಲ್ವಲಪ್ಪ ಅಂತ ಒಂದೇ ಸಮನೆ ಅಳ್ತಾ ಇದ್ದವು.

ಇವರ ಬಿಟ್ಟು ಇವರ್ಯಾರು?

ಈ ಫೋಟೋನಲ್ಲಿ ಇರುವ ಎಷ್ಟು ಕನ್ನಡ ಸಾಹಿತಿಗಳನ್ನು ನೀವು ಗುರುತಿಸಬಲ್ಲಿರಿ?
ಬೇರೆಯವರ ಉತ್ತರಗಳನ್ನು ನೋಡದೇ ನಿಮ್ಮ ಉತ್ತರವನ್ನು ಬರೆಯಿರಿ.
ಸರಿಯಾದ ಉತ್ತರಗಳು ಇಲ್ಲಿ ಇವೆ.

ಕಾರಣ

ಮೋಡ ಕವಿದ ವಾತಾವರಣ
ಮುಸುಕು ಕವಿದ ಅಂತಃಕರಣ
ಕಳೆದು ಹೋಗಿದೆ ಬಾಳ ಕವಿತೆಯ ಚರಣ
ಹುಡುಕಬೇಕಿದೆ ಇದಕೆಲ್ಲ ಕಾರಣ!!

-Vರ ( Venkatesha ರಂಗಯ್ಯ )

ಯಾಕೆ ಹೀಗಾಯ್ತು ???

ಹೂವಿನ ಅಂದ ಮೈಯರಳಿ ನಿಲ್ಲುವುದು ಕಿರಣಗಳ ಸ್ಪರ್ಶದಿಂದ
ದುಂಬಿಯೊಂದು ಹರ್ಷಿಸುವುದು ಪರಿಮಳ ಭರಿತ ಮಲ್ಲಿಗೆಯ ರಸಪಾನದಿಂದ
ಪದಗಳು ಹುಟ್ಟುವುದು ನಿನ್ನ ಅಂದದಿಂದ
ಮೈಮರೆತು ಹಾಡೊಂದು ಗುನುಗುತಿರುವೆನು ನಿನ್ನ ನಾ ಕಂಡ ಕ್ಷಣದಿಂದ !!!

-Vರ ( Venkatesha ರಂಗಯ್ಯ )

ಎ೦.ಎಫ್ ಹುಸೇನ್ ಸಹಾಯಕ್ಕೆ ಸುಪ್ರೀ೦ ಕೋರ್ಟ್

ಭವ್ಯ ಭಾರತದ ಸುಪ್ರೀ೦ ಕೋರ್ಟ್ ಎ೦.ಎಫ್ ಹುಸೇನ್ ಸಹಾಯಕ್ಕೆ ಬ೦ದಿದೆ. ಭಾರತ ಮಾತೆಯನ್ನು ನಗ್ನವಾಗಿ ಚಿತ್ರಿಸಿದ್ದರೂ ಅದು ಕೇವಲ ಕಲಾಕೃತಿ ಎ೦ದಿದೆ (ಟೈಮ್ಸ್ ಸುದ್ದಿ ).

ನಮ್ಮ ರೈತರು ‘ಪರಿಸರ ಸ್ನೇಹಿ ನೆಲಮೂಲಜ್ನಾನ’ದ ಅದ್ಭುತ ವಿಜ್ನಾನಿಗಳು..!

ನಮ್ಮ ರೈತರಿಗೆ ಪರಿಸರವೇ ಶಿಕ್ಷಕ ಎಂಬುದರಲ್ಲಿ ಎರಡು ಮಾತಿಲ್ಲ. ನಿಸರ್ಗವೇ ಅವರ ‘ಅನುಭವ ಕಲಿಕೆ’ಯ ಅತ್ಯುತ್ತಮ ಅನುಭಾವಿ ಪ್ರಯೋಗಶಾಲೆ ಎಂಬುದರಲ್ಲಿ ಸಂದೇಹವೇ ಇಲ್ಲ. ಕೃಷಿ, ಕೃಷಿ ಸಂಬಂಧಿ ಕಾಯಕ ಹಾಗು ಗ್ರಾಮೀಣ ಬದುಕಿಗೆ ಸಂಬಂಧಿಸಿದಂತೆ ಅವರಲ್ಲಿರುವ ಪರಿಸರ ಸ್ನೇಹಿ ನೆಲಮೂಲಜ್ನಾನದ ಪ್ರಯೋಗಗಳು ನಮಗೆ ಬೆರಗು ಹುಟ್ಟಿಸಬಲ್ಲವು. ಇರಲಿ..ಇಲ್ಲದಿರಲಿ. ಶಿವ ಕೊಡಲಿ..ಕೊಡದಿರಲಿ. ಆ ಸಂತೃಪ್ತಿಯ, ನೆಮ್ಮದಿಯ ಬದುಕು ಅವರು ಕಂಡುಕೊಂಡಿದ್ದು, ಕಟ್ಟಿಕೊಂಡಿದ್ದು ಇದೆಯಲ್ಲ..ಬಹಳ ಸಾರಿ ನನ್ನಲ್ಲಿ ವಿಸ್ಮಯ ಮೂಡಿಸಿದೆ.

ಯಾವ ವಿಶ್ವವಿದ್ಯಾಲಯದಲ್ಲಿಯೂ ಕಲಿಸಲಾಗದ. ನಾಲ್ಕು ಗೋಡೆಗಳ ಮಧ್ಯೆ ಹೇಳಿಕೊಡಲಾಗದ, ತಮ್ಮ ಅನುಭವ, ಸಾಂದರ್ಭಿಕ ಸಮಸ್ಯೆಗಳನ್ನು ಆಧರಿಸಿ ತಕ್ಷಣ ಪರಿಹಾರ ಕಂಡುಕೊಳ್ಳುವ ವಿಶಿಷ್ಠ ಪ್ರಯೋಗಗಳ ಜ್ನಾನ ಭಂಡಾರ ಅವರಲ್ಲಿದೆ. ಹಾಗಾಗಿ ‘ವಿಜ್ನಾನಿಗಳು’ ನಮ್ಮ ನೇಗಿಲಯೋಗಿಗಳು. ಅನುಭವದಲ್ಲಿ ಅಮೃತತ್ವ ಸವಿದ, ಸಿಹಿ-ಕಹಿಯ ಸಮಪಾಕದ ಬದುಕನ್ನು ಅನುಭವಿಸಿ ಅರಿತವರು ಅವರು.