ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಿಟಕಿಯಾಚೆ ಚಂದ್ರ

ಮೊನ್ನೆ ಮೊನ್ನೆಯಷ್ಟೇ ಕರಗಿ ಹೋದಂತಿದ್ದ ಚಂದ್ರ ಮತ್ತೆ ಬಂದಿದ್ದಾನೆ.

ಇಷ್ಟೇ ಇಷ್ಟು ಚೂರು. ಈಕೆ ಮಗ್ಗಲು ಹೊರಳಿ, ತಲೆಯನ್ನು ದಿಂಬಿನಂತೆ ಅಡ್ಡ ಇಟ್ಟಾಗ ಮುರಿದ ಬಳೆ ಚೂರಿನಂತೆ. ಆದರೆ, ಬೆಳ್ಳಗೆ ತಂಪಾಗಿ ನಳನಳಿಸುತ್ತಿದ್ದಾನೆ.

ಮಾಧ್ಯಮಗಳು ನಿದ್ದೆ ಮಾಡುವುದೇಕೆ?

ಈ ಕೊಂಡಿ ನೋಡಿ...
ಈಡೇರದ ಮಲ್ಲೇಶ್ವರಂ ಅಂಡರ್ ಪಾಸ್ ಉದ್ದೇಶ
http://www.kannadaprabha.com/NewsItems.asp?ID=KPD20080518151050&Title=District+Page&lTitle=%C1%DBd%C0+%C8%DB%7D%E6%25&Topic=0&dName=%86%E6MV%DA%D7%DA%E0%C1%DA%DF&Dist=1

ಮಲ್ಲೇಶ್ವರದ ಅಂಡರ್ ಪಾಸ್ ಗೆ ಸಾಕಷ್ಟು ಬೊಬ್ಬೆ ಹೊಡೆದರೂ ಸಾಲದಾಗಿತ್ತೆ?

ಕಳಪೆ ಕಾವೇರಿ ಅಂಡರ್ ಪಾಸ್ ಆದ ಮೇಲೆ, ಸದ್ಯದಲ್ಲೇ ಗಂಗಾನಗರದಲ್ಲಿ ಕಾಮಗಾರಿ ಶುರು ಮಾಡಲಿದೆ...

ಸರ್ ಕಾಫೀ/ಟೀ???

ಸಂಜೆ ಟೈಮ್ ಅಲ್ಲಿ, ನನ್ನ ಫ್ರೆಂಡ್ ಮತ್ತು ನಾನು, ಒಂದು ಗ್ರೌಂಡ್ ಅಲ್ಲಿ, ಕೂತು ಹುಡ್ಗಿರನ್ನ, ನೋಡಿ ಟೈಮ್ ಪಾಸ್ ಮಾಡೋಣ ಅಂತ ಹೊದಿವಿ.ಮಸ್ತ್ ಹುಡಗಿರು ಬಂದಿದ್ರು ಮಜಾ ಮಾಡ್ತಾ ಇದ್ದೀವಿ ಹಾಗೆ ಹುಡಗಿರ್ಗೆ ಏನೇನೋ ಅಂತ ತುಂಬ ನಗ್ತಾ ಇದ್ದೀವಿ.
ಅಲ್ಲಿ, ಒಬ್ಬ ಚಿಕ್ಕ ಹುಡುಗ ಹೆಚ್ಚು ಕಮ್ಮಿ ಅಂದ್ರೆ ೫-೮ ವರ್ಷ ವಯಸ್ಸು ಇರಬಹುದು ಟೀ/ಕಾಫೀ ಅಂತ ಬಂದ ನಮ್ಮ ಹತ್ರ.

"ಮುಸ್ಸಂಜೆಮಾತು" ಬಗ್ಗೆ ಒಂದಿಷ್ಟು ಮಾತು

"ಜೀವನದಲ್ಲಿ ಸಜೆಷನ್ಸ್ ಕೊಡೋದು ಸುಲಭ, ಆದ್ರೆ ನಮ್ ಜೀವನದಲ್ಲಿ ಅದನ್ನು ಫಾಲೋ ಮಾಡದು ಬಹಳ ಕಷ್ಟ."

ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ," ಡಾ. ಎಮ್. ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಏರ್ಪೋರ್ಟ್," ಎಂದು ಹೆಸರಿಡಬೇಕೆಂಬುದು ನಮ್ಮೆಲ್ಲರ ಕಳ-ಕಳಿಯ ಮನವಿ" !

ಈಗ ಹೊಸದಾಗಿ ನಿರ್ಮಾಣವಾಗಿರುವ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಪ್ರಾರಂಭೋತ್ಸವದ ಸಿದ್ಧತೆಯಲ್ಲಿರುವ ವಿಮಾನ ನಿಲ್ದಾಣಕ್ಕೆ, " ಡಾ. ಎಮ್. ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಏರ್ಪೋರ್ಟ್," ಎಂದು ಹೆಸರಿಡಬೇಕೆಂಬುದು ನಮ್ಮೆಲ್ಲರ ಕಳ-ಕಳಿಯ ಮನವಿ" !


ಬೆಂಗಳೂರಿನ ಹೊಸ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನ ಹೆಸರನ್ನು ಭಾರತದ ಸುಪುತ್ರ, ಡಾ. ವಿಶ್ವೇಶ್ವರಯ್ಯ ಇಂಟರ್ ನ್ಯಾಶನಲ್ ಏರ್ ಪೋರ್ಟ್ ಎಂದು ಹೆಸರಿಸುವುದು ಅತಿ ಉಪಯುಕ್ತ ! ಭಾರತದ ಔದ್ಯೋಕರಣದ ಶಿಲ್ಪಿಯೆಂದೇ ಎಲ್ಲರ ಗೌರವಕ್ಕೆ ಪಾತ್ರರಾದ ಮಹಾಶಿಲ್ಪಿ, ಸರ್ ಎಮ್. ವಿಶ್ವೇಶ್ವರಯ್ಯ ನವರ ಜೀವನವೇ ಒಂದು ಆದರ್ಶಮಯ ತೆರೆದ ಪುಸ್ತಕದಂತೆ ಇದೆ. ಅವರ ಸೇವೆಗೆ ನಮ್ಮ ಕೃತಜ್ಞತೆಯನ್ನು ತೋರಿಸುವ ಕಾಲ ಬಂದಿದೆ.

ಲೇಖನಗಳ ಆಹ್ವಾನ

ಸೂಚನೆ: ಲೇಖನಗಳನ್ನು ಕಳುಹಿಸಲು ಮತ್ತೊಂದು ವಾರದ ಸಮಯಾವಕಾಶ ನೀಡಲಾಗಿದೆ. ಲೇಖನಗಳನ್ನು ಕಳುಹಿಸಲು ಕೊನೆಯ ದಿನಾಂಕ: ಜೂನ್ ೭, 2008.

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ [:http://kannada.indiawaterportal.org|ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ] ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.
ವಿಷಯಕ್ಕೆ ಬದ್ಧವಾದ ಉತ್ತಮ ಲೇಖನಗಳನ್ನು ಆಯ್ದು ಇಂಡಿಯಾ ವಾಟರ್ ಪೋರ್ಟಲ್ ನ ಪ್ರಮುಖ ಚಾವಡಿಯಲ್ಲಿ ಪ್ರಕಟಿಸಲಾಗುವುದು. ಜೀವಸೆಲೆಯಾದ ನೀರಿನ ಸುತ್ತ ಈಗಾಗಲೇ ಬರೆದು ಖ್ಯಾತರಾಗಿರುವ ಶ್ರೀಪಡ್ರೆ, ಜಲಗಾರ (ಭರತ್) ಮುಂತಾದವರ ಲೇಖನಗಳೊಂದಿಗೆ ಆಯ್ಕೆ ಮಾಡಿದ ಲೇಖನಗಳು ಪ್ರಕಟವಾಗುವುದು.

• ಲೇಖನಗಳನ್ನು ಕಳುಹಿಸಲು ಕೊನೆಯ ದಿನಾಂಕ: ಮೇ 30, 2008. ಜೂನ್ ೭, 2008.
• ಲೇಖನಗಳು ಕನ್ನಡ ಲಿಪಿಯಲ್ಲಿ ಯೂನಿಕೋಡ್ ನಲ್ಲಿರಬೇಕು (ಸಂಪದದಲ್ಲಿ ಸಾಧಾರಣ ಪೋಸ್ಟ್ ಮಾಡುವಂತೆ)
• ಲೇಖನ ೩೦೦ ಪದಗಳನ್ನು ಮೀರಿರಬಾರದು.
• ಸೂಕ್ತ ಚಿತ್ರಗಳನ್ನು ಹೊಂದಿರುವ ಲೇಖನಗಳಿಗೆ ಆದ್ಯತೆ ಉಂಟು. ಸೂಕ್ತ ಫೋಟೋಗಳಿಗೆ ಗೌರವ ಧನ ಉಂಟು.

ಲೇಖನಗಳನ್ನು hpn@sampada.net ವಿಳಾಸಕ್ಕೆ ಕಳುಹಿಸಿಕೊಡಿ. ಪ್ರಶ್ನೆಗಳಿದ್ದಲ್ಲಿ ನನಗೊಂದು ಸಂದೇಶ ಕಳುಹಿಸಿ.

'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

ಎಡಿಟ್ - ಜೂನ್ ೧೭. ಓದುಗರ ಗಮನಕ್ಕೆ: ಈ ಸೂಚನೆ ಹಾಕಿದ್ದು ಮೇ, ೨೦೦೮ ರಲ್ಲಿ. ಈಗಿನಂತೆ ಇದು ಲಾಗೂ ಆಗುವುದಿಲ್ಲ.

'ಸಂಪದ.ನೆಟ್' ಹಾಗೂ ಜೊತೆಗಿರುವ ವೆಬ್ಸೈಟುಗಳ backendನಲ್ಲಿ ಕೆಲವು ಬದಲಾವಣೆಗಳನ್ನು, ಅಪ್ದೇಟುಗಳನ್ನು ಹಮ್ಮಿಕೊಂಡಿರುವುದರಿಂದ ಇಂದಿನಿಂದ ಪ್ರಾರಂಭಿಸಿ ಗುರುವಾರದವರೆಗೂ ಈ ವೆಬ್ಸೈಟುಗಳಲ್ಲಿ ಆಗಿಂದಾಗ ಲೋಡ್ ಆಗುವ ಪೇಜುಗಳಲ್ಲಿ ಸ್ವಲ್ಪ ವ್ಯತ್ಯಯವಾಗಬಹುದು.

ಹೀಗೆ ತೊಂದರೆಗಳು ಕಂಡುಬಂದಲ್ಲಿ [:contact|ಕೂಡಲೆ ನಮಗೆ ತಿಳಿಸಿ] 'ಸಂಪದ'ವನ್ನು ಉತ್ತಮಪಡಿಸುವಲ್ಲಿ ಸಹಕರಿಸಿ.

ಎಲ್ಲಾ ಓಕೆ , ಸೆನ್ಸಾರ್ ಯಾಕೆ?

censor ಎಂದೊಡನೆ ತಕ್ಷಣ ಮನಸ್ಸು ಸೆನ್ಸಾರ್ ಬೋರ್ಡ್ ಕಡೆಗೆ ಯೋಚನೆ ಮಾಡುವುದು ಯಾಕೆ?! corporate censorship, political censorship ಬಗ್ಗೆ ಯೊಚನೆ ಮಾಡುವುದು ಬಿಟ್ಟು.
ಸೆನ್ಸಾರ್ ಬಗೆಗೆ ನನ್ನ ಅನಿಸಿಕೆಗಳು

೧. ಫಿಲ್ಮಿನ ಸೆನ್ಸಾರ್ :
ಸೆನ್ಸಾರ್ ಬೋರ್ಡ್ ಅವರ ಪ್ರಯತ್ನಗಳಿಂದ ಪೋರ್ನ್/offesive ಸಿನಿಮಾಗಳು ತೆರೆ ಕಾಣುವುದು ನಿಂತಿದೆಯಾ? ಅವರು ರೇಟಿಂಗ್ ಕೊಟ್ಟ ಮಾತ್ರಕ್ಕೆ ಜನ ನೋಡುವುದು ನಿಲ್ಲಿಸಿದ್ದಾರ? ಅಥವಾ ನಮ್ಮ ದೇಶದಲ್ಲಿ "refusal for public display" ಅಂತ ಕೊಟ್ಟರೂ ಇಂಟರ್ನೆಟ್ಟಿನಲ್ಲಿ ಸಿಗಲಾರದೇ? ಮೊರಾಲಿಟಿ (morality) ಪ್ರಪಂಚದ ಎಲ್ಲಾ ಜನರಿಗೂ ಒಂದೇ ಆಗಿರುತ್ತದಾ? ಅಥವಾ ನಾವು "ಅಂತ" ಸಿನಿಮಾಗಳನ್ನು ನೋಡದಿದ್ದರಿಂಲೇ, ನಮ್ಮ ಜನಸಂಖ್ಯೆ, ನಮ್ಮ ಸಮಾಜದಲ್ಲಿ ನಡೆಯುವ ಅಪರಾಧಗಳು ಬಹಳ ಕಮ್ಮಿಯಾಗಿದೆಯಾ?

ಕನಸು

ಬ್ಯಾಡದ್ದು ನೂರಾರು, ಬ್ಯಾಕದ್ದು ಯಾವುದೋಒಂದು
ಇವೆ ಸದ್ದು ಹಲ್ವಾರು, ಇಲ್ಲ ಸರಹದ್ದು ಇದ್ಕೊಂದು

ಜಾಡಿಸ್ತೈತೆ ಒಮ್ಮೆ ಹುರ್ಕೊಂಡು, ನಗ್ಸ್ತೈತೆ ಮತ್ತೊಮ್ಮೆ ಹಾರ್ಕೊಂಡು
ಉರುಸ್ತೈತೆ ಇನ್ನೂ ಹೊತ್ತಾರೆ, ಮಲಗ್ಸ್ತೈತೆ ಅನ್ನು ಮರ್ತಾರೆ

ತೋರ್ಸ್ತೈತೆ ಕಂಡದ್ ಚೆಲುವೆನಾ, ಹೆದ್ರಸ್ತೈತೆ ಹತ್ತ್ರ ಹೋದಾಗ

ಕುಂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ ಈ ಜಿಂಕೆ ಮರಿಗಳು

ಈ ಚಿತ್ರದಲ್ಲಿರುವ ತ್ರಿವಳಿಗಳನ್ನು ನಾನು ಇತ್ತೀಚೆಗೆ ಮೈಸೂರಿಗೆ ಮದುವೆಯೊಂದಕ್ಕೆ ಹೋದಾಗ ಕಂಡೆ. ಈಗ ಸುಮಾರು ಒಂದೂವರೆ ವರ್ಷ ವಯಸ್ಸಿನ ಈ ಸುಂದರ ತ್ರಿವಳಿಗಳನ್ನು ಕಂಡಾಗ ಆದ ಆನಂದ ಅಷ್ಟಿಷ್ಟಲ್ಲ. ಅದನ್ನು ಸಂಪದದ ಓದುಗರೊಂದಿಗೆ ಹಂಚಿಕೊಳ್ಳುವವರೆಗೂ ನನ್ನ ಮನಸ್ಸಿಗೆ ಸಮಾಧಾನವಿರಲಿಲ್ಲ.