ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಳೆ ನಿಂತರು ಮರದ ಹನಿ ಬಿಡದು - 2

ಹಾಗೆ ನೊಡಿದರೆ ರಾಮನ ನಿಖರವಾದ ವಯಸ್ಸು ಎಸ್ಟೆಂಬುದು ಇಡಿ ಊರಿಗೆ ಗೊತ್ತಿರದ ವಿಶಯ.ಎಂಬತ್ತು ಧಾಟಿದೆ ಯೆಂದು ಎಲ್ಲರು ಎಧೆ ತಟ್ಟಿ ಹೇಳಿದರು, ಅದರ ಮೇಲಿನ ಅಂಕಿ ಅಂಶಗಳು ಅವರವರ ಅನುಭವಕ್ಕೆ ಬಿಟ್ಟಿದ್ದು.ಯಾರನ್ನಾದರು ಕೆಳಿದರೆ "ನೋಡು ,ನಿಮ್ಮಪ್ಪನಿಗೆ ಈಗ 56,ನಿಮ್ಮ ಅಪ್ಪನಿಗೆ ಆಡಿಸಿ ಇಜು ಕಲಿಸಿದ್ದನೆಂದರೆ ಅವನಿಗೆ ಆಗ 20 ಆದರು ಇರಬೆಕು,ನಿಮ್ಮ ಅಪ್ಪ ಎನು , ನಿಮ್ಮ ದೊಡ್ಡ

ಪದಬಂಧ

ಪದಬಂಧ
=====

ಪದಗಳ ಆಟವೇ
ಪದಬಂಧ
ಎನಿತೋ ವರುಷದ
ಸಂಬಂಧ

ಸುಳಿವಿನ ರಾಶಿಯು
ಗೋಜಲೋ ಗೊಜು
ಗಾಳಕೆ ಸಿಕ್ಕರೆ
ಮೋಜೋ ಮೊಜು

ಪದಗಳು ಸಿಗದಿರೆ
ಬಲು ತಿಕ್ಕಾಟ
ಸಿಕ್ಕರೆ ಇವುಗಳು
ಇದೆ ಗೆದ್ದಾಟ

ಮುಖವಾಡದ ಪದಗಳ
ಅಟ್ಟಹಾಸ!
ಕಳಚಿರೆ ಇವನು
ಅರೆ! ಸುಹಾಸ!

ತಿಣುಕಿದೆ ಏಕೋ?
ಅಯ್ಯೋ ಪೆದ್ದೆ!
ಎಲ್ಲವೂ ಸಿಕ್ಕರೆ
ನೀನೇ ಗೆದ್ದೆ

ಆಡಿವೆ ಏಕೆ,
ಕಣ್ಣು ಮುಚ್ಚಾಲೆ?
ಬರದಿಹೆ ಪ್ರೀತಿಯ

ನವರಾತ್ರಿಯ ನಾಲ್ಕನೇ ದಿನ

ಇವತ್ತು ದಸರಾ ಹಬ್ಬದ ನಾಲ್ಕನೇ ದಿನ. ಈಗಾಗಲೇ ಮೊದಲ ಮೂರು ದಿನಗಳಲ್ಲಿ, ತ್ಯಾಗರಾಜರ, ಮುತ್ತಯ್ಯಭಾಗವತರ ಮತ್ತು ಶಾಮಾಶಾಸ್ತ್ರಿ ಅವರ ಒಂದೊಂದು ರಚನೆಗಳ ಬಗ್ಗೆ ಬರೆದಿದ್ದೆ. ಕೇಳಿಲ್ಲದವರು ಕೇಳಿ ಆನಂದಿಸಿ.

ನವರಾತ್ರಿಯ ನಾಲ್ಕನೇ ದಿನ ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಹಾಡುವ ಸ್ವಾತಿ ತಿರುನಾಳರ ಕೃತಿ ತೋಡಿ ರಾಗದಲ್ಲ್ರಿರುವ ಭಾರತಿ ಮಾಮವ ಎಂಬ ರಚನೆ. ಅಂದಹಾಗೆ, ಸಂಗೀತದ ಸೊಗಸು ಬರೀ ಮಾತಾಡಿದಾಗ- ಬರೆದಾಗ ಸಿಗುವುದಿಲ್ಲವಲ್ಲ? ಹಾಗಾಗಿ, ನೆನ್ನೆ ಇಲ್ಲಿ ನಡೆದ ಸಂಗೀತ ಕಚೇರಿಗೆ ಹೋಗುವ ಅವಕಾಶ ಸಿಕ್ಕಿತು ನನಗೆ- ಹಾಗಾಗಿ ನನ್ನ ಬರೀ ಮಾತುಗಳಲ್ಲೂ ಸ್ವಲ್ಪ ಅರ್ಥ ಕೂಡಿದಂತಾಯಿತು ನನಗೆ. ನನ್ನ ಬಾಲ್ಯದಲ್ಲಿ, ನನ್ನ ಊರಿನಲ್ಲಿ ನಡೆಯುತ್ತಿದ್ದ ನವರಾತ್ರಿ-ಗಣೇಶೋತ್ಸವದ ನೆನಪು ಮರುಕಳಿಸಿತು.

ಇವತ್ತು ನಾನು ವಿವರಿಸಹೊರಡಲಿರುವ ದೇವೀ ಪರವಾದ ಕೃತಿ ೨೦ನೇ ಶತಮಾನದಲ್ಲಿ ಬಂದ ಒಬ್ಬ ಮಹಾನ್ ಕಲಾವಿದರ ರಚನೆ. ಇವರು ಸಂಗೀತಗಾರರಷ್ಟೇ ಅಲ್ಲದೆ, ತಮಿಳು ಸಿನಿಮಾ ರಂಗದಲ್ಲೂ ಹೆಸರು ಮಾಡಿದ್ದವರು. ಇವರೇ ಜಿ.ಎನ್.ಬಿ. ಎಂಬ ಹೆಸರಿನಲ್ಲೇ ಚಿರಪರಿಚಿತರಾದ ಜಿ.ಎನ್.ಬಾಲಸುಬ್ರಮಣಿಯನ್.

ಜಿ.ಎನ್.ಬಿ. (೧೯೧೦- ೧೯೬೫) ಸಂಗೀತ ರಂಗಕ್ಕೆ ಪರಿಚಿತರಾಗಿದ್ದು ಒಂದು ವಿಶಿಷ್ಟ ಸಂದರ್ಭದಲ್ಲಂತೆ. ಒಮ್ಮೆ, ಯಾರೋ ವಿದ್ವಾಸರು ಒಂದು ಕಚೇರಿಗೆ ಬರಲಾಗಲಿಲ್ಲ. ಆಗ, ಆ ಸಮಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಜಿ.ಎನ್.ಬಿ. ಅವರನ್ನು, ಅವರ ಸ್ಥಾನ ತುಂಬಲು ಕಳಿಸಲಾಯಿತಂತೆ. ಅಂದು ತಮ್ಮ ಶೈಲಿಯಿಂದ ಇವರು ಎಲ್ಲ ರಸಿಕರ ಮನಗೆದ್ದುಬಿಟ್ಟ ಜಿ.ಎನ್.ಬಿ. ಮತ್ತೆ ಹಿಂತಿರುಗಿ ನೋಡಲಿಲ್ಲ.

ಕೇವಲ ಐವತ್ತೈದು ವರ್ಷದ ಕಿರಿಯ ವಯಸ್ಸಿನಲ್ಲೇ ರಸಿಕರು ಇವರನ್ನು ಕಳೆದುಕೊಳ್ಳಬೇಕಾಯಿತು. ಆದರೆ, ಇವರ ಹಲವಾರು ಶಿಷ್ಯರು ಇವರ ಪರಂಪರೆಯನ್ನು ಮುಂದುವರೆಸಿಕೊಂಡುಹೋಗಿದ್ದಾರೆ. ಪ್ರಸಿದ್ಧ ಸಂಗೀತಗಾರರಾದ ಎಮ್.ಎಲ್.ವಸಂತಕುಮಾರಿ, ತ್ರಿಶೂರು ರಾಮಚಂದ್ರನ್, ರಾಧಾ-ಜಯಲಕ್ಷ್ಮಿ ಇವರೆಲ್ಲ ಜಿ.ಎನ್.ಬಿ. ಪರಂಪರೆಯವರೇ.

ಜಿ.ಎನ್.ಬಿ. ಅವರು ಸುಮಾರು ಐವತ್ತಕ್ಕೂ ಹೆಚ್ಚು ರಚನೆಗಳನ್ನು ಸಂಸ್ಕೃತ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಚಿಸಿದ್ದಾರೆ. ಹಿಂದೆ ಕೇಳಿಲ್ಲದ ಹೊಸ ರಾಗಗಳನ್ನು ಸೃಷ್ಟಿಸಿ, ಅದರಲ್ಲಿ ಕೃತಿಗಳನ್ನು ಮಾಡಿದ್ದಾರೆ. ಆದರೆ, ಇವರು ತಮ್ಮ ಕಚೇರಿಗಳಲ್ಲಿ ತಮ್ಮ ಕೃತಿಗಳನ್ನು ಹೆಚ್ಚಾಗಿ ಹಾಡುತ್ತಿರಲಿಲ್ಲ ಎಂದು ಕೇಳಿದ್ದೇನೆ.

ಮಹಿಳಾ ಸಾಹಿತ್ಯ ಯಾಕೆ ಹೀಗಿದೆ?

"ಮಾನಸ" ಎಂಬ ಹೆಸರಿನಿಂದ ಒಂದು ಮಾಸಪತ್ರಿಕೆ ನನಗೆ ತಿಳಿದಂತೆ ಸುಮಾರು ೧೯೯೮ರಿಂದಲೂ ಬರುತ್ತಾ ಇತ್ತು. ಕಳೆದ ಎರಡು ವರ್ಷದ ಹಿಂದೆ ಅದು ಇದ್ದಕ್ಕಿದ್ದಂತೆ ನಿಂತು ಹೋಯಿತು. ಇದೀಗ ಮತ್ತೆ "ನಮ್ಮ ಮಾನಸ" ಎಂಬ ಹೆಸರಿನಿಂದ ಮತ್ತಷ್ಟು ಮೈತುಂಬಿಕೊಂಡು, ಹೊಸ ಗುರುತ್ವವನ್ನೂ ಮೈಗೂಡಿಸಿಕೊಂಡು ಹೊರಬರುತ್ತಿದೆ. ಈಚಿನ ಕೆಲವು ಸಂಚಿಕೆಗಳಲ್ಲಿ ಕಾಣಿಸಿಕೊಂಡ ಬರಹಗಾರರ ಹೆಸರು ಗಮನಿಸಿದರೆ ಇದು ನಿಮಗೇ ಅರ್ಥವಾದೀತು: ನೀಲಾಂಜನ ಬಿಸ್ವಾಸ್, ಎಚ್ ಎಸ್ ದೊರೆಸ್ವಾಮಿ, ಡಾ.ಚಂದ್ರಮತಿ ಸೋಂದಾ, ಎನ್ ಎಸ್ ಶ್ರೀಧರ ಮೂರ್ತಿ, ಪ್ರತಿಭಾ ನಂದಕುಮಾರ್, ಮಲತಿ ಬೇಳೂರು, ಕೋ.ಚೆನ್ನಬಸಪ್ಪ, ಡಾ.ಪಿ.ಚಂದ್ರಿಕಾ, ಎಸ್ ಮಾಲತಿ ಸಾಗರ, ಡಾ. ನಿರಂಜನ ವಾನಳ್ಳಿ, ವಿ.ಗಾಯತ್ರಿ, ಪ್ರೊ.ಎಂ.ಎಚ್ ಕೃಷ್ಣಯ್ಯ, ಯು.ಮಹೇಶ್ವರಿ, ಸಿ.ಜಿ.ಮಂಜುಳಾ, ಬಿ.ಎಸ್.ಪೂರ್ಣಿಮಾ, ಕಮಲಾ ಭಾಸಿನ್, ಮಮತಾ ಜಿ.ಸಾಗರ, ಕೆ.ಸತ್ಯನಾರಾಯಣ ಇತ್ಯಾದಿ. ರಾಜೇಶ್ವರಿ ಎಚ್ ಎಸ್ ನಿರ್ವಹಿಸುತ್ತಿರುವ ಈ ಪತ್ರಿಕೆಯ ಹಿಂದೆ ಹಲವರಿದ್ದಾರೆ. ವೆಂ. ವನಜ ಬೇರೆ ಭಾಷೆಗಳ ಮಹತ್ವದ ಲೇಖನಗಳನ್ನು ಕನ್ನಡಕ್ಕೆ ತರುತ್ತಿದ್ದಾರೆ. (ವಾರ್ಷಿಕ ಚಂದಾ ಕೇವಲ ನೂರು ರೂಪಾಯಿ. ವಿಳಾಸ: ನಮ್ಮ ಮಾನಸ, ೧೧೪/೫, ೯ನೆಯ ತಿರುವು, ೨ನೆಯ ಮುಖ್ಯ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು- ೫೬೦ ೦೧೮)

ಈ ಬಾರಿಯ "ನಮ್ಮ ಮಾನಸ"ದಲ್ಲಿ ಖ್ಯಾತ ಕತೆಗಾರ ಕೆ. ಸತ್ಯನಾರಾಯಣ ಮಹಿಳಾ ಸಾಹಿತ್ಯದ ಕೆಲವು ಸಂಗತಿಗಳತ್ತ ಗಮನ ಸೆಳೆಯುವ ಒಂದು ಲೇಖನ ಬರೆದಿದ್ದಾರೆ. ಹೊಸ ಕಾಲದ ಬರಹಗಾರ್ತಿಯರಿಂದ ಹೂವಯ್ಯ, ರಾಮ, ಲಚ್ಚ, ಗುತ್ತಿ, ಚೋಮನಂಥ ಬಹುಕಾಲ ನೆನಪಿನಲ್ಲಿ ಉಳಿಯಬಲ್ಲ, ಹಾಗೆ ಉಳಿದು ಕ್ರಮೇಣ ನಮ್ಮ ನಡುವಿನ ಜೀವಂತ ವ್ಯಕ್ತಿಗಳೇ ಆಗಬಲ್ಲಂಥ ಗಟ್ಟಿ ಪಾತ್ರಗಳು ಸೃಷ್ಟಿಯಾಗಿಲ್ಲ - ಯಾಕಿರಬಹುದು ಎಂಬ ಒಂದು ಬಗೆಯ ಸ್ವಗತದ ಹಾಗೆ ಕೇಳಿಕೊಂಡ, ಮೆಲುದನಿಯ ಜಿಜ್ಞಾಸೆ ಇಲ್ಲಿದೆ. ಇದೇ ಸಂಚಿಕೆಯಲ್ಲಿ ಡಾ.ಪಿ. ಚಂದ್ರಿಕಾ ಈ ಜಿಜ್ಞಾಸೆಗೆ ತಮ್ಮ ಅನಿಸಿಕೆಗಳ ಸಾಥ್ ನೀಡಿದ್ದಾರೆ. ಅಭಿನವ ಹೊರತಂದ ಪುಸ್ತಕಗಳನ್ನು ಗಮನಿಸಿದವರಿಗೆ ಪಿ. ಚಂದ್ರಿಕಾ ಗೊತ್ತು. ಚಂದ್ರಿಕಾ ಅವರಿಗೆ ಮಹಿಳಾ ಸಾಹಿತ್ಯ ಎನ್ನುವುದು ಪುರುಷ ಸಾಹಿತ್ಯವನ್ನು ಮಾದರಿಯಾಗಿಟ್ಟುಕೊಂಡು, ಅದು ತುಳಿದ ಹಾದಿಯಲ್ಲೇ ಸಾಗಬೇಕೆಂಬ ಪುರುಷ- ನಿರೀಕ್ಷೆಯ ಕುರಿತೇ ಸಹಮತವಿಲ್ಲ. ಹೊಸ ಕಾಲದ ಬರಹಗಾರ್ತಿಯರು ಇಂಥ ಮಾದರಿಗಳಿಲ್ಲದೆ ಸ್ವತಂತ್ರವಾಗಿ ಸಾಕಷ್ಟು ಗಟ್ಟಿಯಾದ ಕೃತಿಗಳನ್ನು ಕೊಟ್ಟಿದ್ದಾರೆಂದು ಅವರು ಬರೆಯುತ್ತಾರೆ. ಈ ಚರ್ಚೆ ಕುತೂಹಲಕರವಾಗಿದೆ ಯಾಕೆಂದರೆ ಈ ಇಬ್ಬರ ಗಮನಿಸುವಿಕೆಯಲ್ಲೂ ಸತ್ಯಗಳಿವೆ, ತೀರ್ಮಾನಗಳಿಲ್ಲ. ಹಾಗೆಯೇ ಈ ಸಂವಾದ ಎಲ್ಲರಿಗೂ ಮುಕ್ತವಾಗಿರುವುದರಿಂದ ನಮ್ಮ ಸಂಪದದ ಓದುಗರು, ಸದಸ್ಯರು ಇದನ್ನು ಗಮನಿಸಲಿ, ಚರ್ಚಿಸಲಿ ಎಂದು ನನಗೆ ಆಸೆ.

ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?

ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?
ಆನೆ 'ಹಲ್ಲು' ಎಂದು ಏಕೆ ಬಳಸುವುದಿಲ್ಲ...
ಹಿನ್ನೆಲೆ ಇದೆಯೇನು?

ನಮ್ಮ ದಸರಾದ ಬಲರಾಮನನ್ನು ನೋಡಿದಾಗ ಈ ಪ್ರಶ್ನೆ ಹೊಳೆಯಿತು :)

-ಶ್ರೀ

ಅವಳು...

ನಾ ಹೊರ ಬಂದಾಗ

ಅವಳು ನಿಂತಿದ್ದಳು,

ಇಲ್ಲೇ...ಐದೇ ಐದು ಅಂಗುಲ ದೂರದಲ್ಲಿ...

ನಾ ನೋಡಿದೆ

ಅವಳೂ ನೋಡಿದಳು...

ನೋಡಿ ನಕ್ಕಳು...

ನಾ ನೋಡಿ ಬೆರಗಾದೆ...

     ಹಿಂದುರುಗಿ ನೋಡಲು

     ಯಾರೂ ಇರಲಿಲ್ಲ...

     ಅವಳು ಆ ಸುಂದರ

     ನಗು ತೆಗೆದು ಕೊಟ್ಟದ್ದು

     ನನಗೆಂದು ಖಾತರಿಯಾಗಿ

     ತಿರುಗಲು...

     ಅವಳು ಅಲ್ಲಿರಲಿಲ್ಲ....!?

ಪಯಣ

ಪಯಣ
*****

ಅಲೆದಾಡುವ ಮನ
ಅರಸಿದೆ ನೆಲೆಯನು.
ಮಿಂಚ ಮಿಂಚಿಸುವ ವೇಗದಲಿ
ಹುಡುಕಿದೆ ಏನನೋ!!

ಎತ್ತ ಸಾಗಿದೆ ಪಯಣ ?
ಎಲ್ಲಿಹುದು ಎನ್ನ ಗುರಿ ?
ಪಯಣದಲಿ ಜೊತೆಯಾಗೋ
ಗೆಳೆಯರಾರೋ ?

ನವರಾತ್ರಿಯ ಮೂರನೆಯ ದಿನ

ಇವತ್ತು ನವರಾತ್ರಿಯ ಮೂರನೆಯ ದಿನ. ಮೈಸೂರು ಮತ್ತು ತಂಜಾವೂರು ಎರಡೂ ೧೮-೧೯ ನೆ ಶತಮಾನಗಳಲ್ಲಿ ದಕ್ಷಿಣ ಭಾರತದ ಪ್ರಮುಖ ಸಾಂಸ್ಕೃತಿಕ ನೆಲೆಗಳಾಗಿ ರೂಪುಗೊಂಡವು. ಹಾಗಾಗಿಯೇ ಇಂದಿಗೂ ನಾವು ವೀಣೆ, ಚಿತ್ರಕಲೆ ಮತ್ತು ಭರತನಾಟ್ಯ ಇವೆರಡರಲ್ಲೂ, ಮೈಸೂರು ಶೈಲಿ ಮತ್ತು ತಂಜಾವೂರು ಶೈಲಿ ಎಂದು ಎರಡು ಪ್ರಮುಖ ಶೈಲೆಗಳನ್ನು ನೋಡಬಹುದು.

ಓ ಮನಸೇ...

ಈಗಲೂ ಅವರು ಆ ಕಾಡಿನ ನಡುವೆ ಎನ್ನಬಹುದಾದ ಒಂಟಿ ಮನೆಯಲ್ಲಿ ಹೆಂಡತಿ ಮತ್ತು ಮಗನೊಂದಿಗೆ ಇದ್ದಾರೆ. ದೊಡ್ಡ ಮನೆ, ಎಕರೆಗಟ್ಟಲೆ ಅಡಿಕೆ ತೋಟ, ಆಳು ಕಾಳು, ಓಡಾಟಕ್ಕೆ ಕಾರು ಎಲ್ಲ ಇದೆ. ವಯಸ್ಸಾಯಿತು, ಸುಮಾರು ಎಪ್ಪತ್ತರ ಹತ್ತಿರ ಹತ್ತಿರ ಅನಿಸುತ್ತದೆ. ಒಮ್ಮೆ ಅವರ ಪ್ರೀತಿಯ ವ್ಯಕ್ತಿಯೊಬ್ಬರ ಜೊತೆ ಅವರ ಮನೆಗೆ ಹೋಗಿದ್ದೆ, ಒಂದು ರಾತ್ರಿ ಅವರಲ್ಲೇ ನಿಂತಿದ್ದೆ ಕೂಡ. ಹಬ್ಬದಡಿಗೆ ಮಾಡಿ, ಬಡಿಸಿ ಖುಶಿಪಟ್ಟಿದ್ದರು, ಆ ದಂಪತಿ ಮತ್ತು ಮಗ. ರಾತ್ರಿಯೆಲ್ಲ ಕೂತು ಅದೂ ಇದೂ ಹರಟಿದ್ದೆವು. ಅಂತರಂಗದಲ್ಲಿ ತೀರ ಒಂಟಿಯಾದ, ತುಂಬ ಸೂಕ್ಷ್ಮ ಸಂವೇದನೆಗಳ ಮನುಷ್ಯ, ಭಾವುಕ.

ಆನಂತರ ಹೀಗೇ, ಆಗಾಗ ಫೋನು ಮಾಡಿ ಮಾತನಾಡುವುದು, ಅವರು ಮಂಗಳೂರಿಗೆ ಬಂದಾಗ ನಾನು ಹೋಗಿ ಭೇಟಿಯಾಗುವುದು, ಮದುವೆ ಮುಂಜಿಗಳೆಂದರೆ, ಸಭೆ ಸಮಾರಂಭಗಳೆಂದರೆ ವಿಚಿತ್ರ ರೇಜಿಗೆಯಿದ್ದ ಅವರೂ ನಾನೂ ಹೊರಗೆ ಕಾರಿನಲ್ಲೇ ಕೂತು ಅದೂ ಇದೂ ಮಾತನಾಡಿ ಬರುವುದು ಎಲ್ಲ ಇತ್ತು. ಪ್ರತಿಸಲವೂ ವಿದಾಯ ಹೇಳುವ ಮೊದಲು ಕಾಗದ ಬರೆಯಿರಿ ಅಂತಲೋ ಬರೆಯುತ್ತೇನೆ ಅಂತಲೋ ಮಾತು ಮುಗಿಸುತ್ತಿದ್ದುದು ಅವರು. ಈಗ ಯಾರು ಕಾಗದ ಬರೆಯುತ್ತಾರೆ, ಅಲ್ಲವ? ಈಮೇಲ್ ಆದರೆ ಸ್ವಲ್ಪ ಸುಲಭ. ಆಫೀಸಿನ ಕೆಲಸದ ನಡುವೆಯೇ ಎರಡು ಸಾಲು ಎಳೆದು ಕಳಿಸಿಬಿಡಬಹುದು. ಪತ್ರ ಬರೆಯುವುದು ಕಷ್ಟ ಅನಿಸಹತ್ತಿದೆ. ಆದರೆ ಇವರ ಬಳಿ ಆಯ್ತು ಬರೆಯುತ್ತೇನೆ ಎಂದ ಮೇಲೆ ಬರೆಯದೇ ಇರುವುದು ಕೂಡ ಒಂದು ಸಂಕಟವಾಗಿ ಬಿಡುತ್ತದೆ. ಅದರಿಂದ ತಪ್ಪಿಸಿಕೊಳ್ಳಲಿಕ್ಕಾದರೂ ಬರೆಯಲು ಕೂರುತ್ತೇನೆ. ಆದರೆ ಎಂಥ ಕಷ್ಟ, ಬರೆಯಲಿಕ್ಕೆ ಏನೂ ಇಲ್ಲದೆ ಪತ್ರ ಬರೆಯುವುದು! ಕೊನೆಗೆ ಪತ್ರಿಕೆಯಲ್ಲಿ ಇತ್ತೀಚೆಗೆ ಓದಿದ ಕತೆಗಳು, ಲೇಖನಗಳು, ಇಷ್ಟವಾದ ಕಾದಂಬರಿ, ಪುಸ್ತಕ ಎಂದೆಲ್ಲ ಬರೆಯಲು ತೊಡಗಿದರೆ ಅದು ಅನುದ್ದಿಶ್ಯ ಉದ್ದವಾಗಿ ಬಿಡುತ್ತದೆ! ಆದರೆ ಇಲ್ಲಿ ಸಂಪಾದಕರ "ಒಂದೇ ಪುಟದ ಮಿತಿಯಲ್ಲಿರಲಿ" ಎಂಬ ನಿರ್ದೇಶವಿಲ್ಲದಿರುವುದರಿಂದ ಮತ್ತು ಅವರಿಗೂ ಇದರಲ್ಲೆಲ್ಲ ಆಸಕ್ತಿ ಇರುವುದರಿಂದ ತೊಂದರೆಯೇನಿಲ್ಲ ಬಿಡಿ.

ಹೇಳಲು ಹೊರಟಿದ್ದು ಇದನ್ನೆಲ್ಲ ಅಲ್ಲ. ಮೊನ್ನೆ ಭಾನುವಾರ, ಇನ್ನೂ ಮುಂಜಾನೆ ಎನ್ನಬಹುದಾದ ರೀತಿ ಮೋಡ ಮುಸುಕಿದ್ದ ಬೆಳಗ್ಗೆ ಇವರು ಇದ್ದಕ್ಕಿದ್ದ ಹಾಗೆ ಫೋನ್ ಮಾಡಿದರು. ಅವರ ಆತ್ಮೀಯ ಮಿತ್ರರೊಬ್ಬರು, ಬಾಲ್ಯದ ಗೆಳೆಯ, ಸರಿ ಸುಮಾರು ಅವರದೇ ವಯಸ್ಸಿನವರು, ಎಲ್ಲೋ ವಿದೇಶದಲ್ಲಿ ಉಪನ್ಯಾಸಕನ ಕೆಲಸ ಸಿಕ್ಕಿ ಹೊರಟು ಹೋದ ವಿಷಯ ತಿಳಿಸಿದರು. ನನಗೇನೂ ಅನಿಸದಿದ್ದರೂ ಹೌದ ಎಂದೆ. ಇಲ್ಲೇ ಇರುವಾಗ ವಾರಕ್ಕೊಮ್ಮೆಯಾದರೂ ಫೋನ್ ಮಾಡುತ್ತಿದ್ದರು, ಆಗಾಗ ಪತ್ರವನ್ನೂ ಬರೆಯುತ್ತಿದ್ದರು ಎಂದರು. ಮುಂದುವರಿದು, ಇನ್ನು ಮೇಲೆ ಅದೂ ಇಲ್ಲ ಎಂದರು. ಆ ಧ್ವನಿ ಸಣ್ಣದಾಗಿತ್ತು.