ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ರಾಮಾಯಣ'ದ ಆಟ ಆಡಿ...

ರಾಮಾಯಣ - ವರ್ಜಿನ್ ಕಾಮಿಕ್ಸ್
ಮಿಶ್ರಿಕೋಟಿಯವರು ಬರೆದಿರುವ ಪುಟ್ಟ ಬರಹ [:http://sampada.net/blog/shreekant_mishrikoti/22/08/2007/5475|ತಮಸಾ ನದೀ ತೀರದಲ್ಲಿ] ಓದಿ ನನಗೆ ಹಲವು ದಿನಗಳ ಹಿಂದೆ ಓದಿದ ಒಂದು ಸುದ್ದಿಯ ನೆನಪಾಯಿತು.

ರಾಮಾಯಣ ಈಗ MMO (Massively Multi-player Online game) ಆಗಿ ಹೊರಬರಲಿದೆಯಂತೆ. MMO ಎಂದರೆ ನೇರ ಅಂತರ್ಜಾಲದಲ್ಲಿ ಹಲವು ಆಟಗಾರರೊಂದಿಗೆ ಆಡಬಹುದಾದ ವಿಡಿಯೋ ಗೇಮ್. ಇದನ್ನು ಹೊರತರುತ್ತಿರುವುದು ಸೋನಿ ಕಂಪೆನಿಯಂತೆ.

ಮಿ. ಇಂಡಿಯ, ಬ್ಯಾಂಡಿಟ್ ಕ್ವೀನ್ ಹಾಗೂ ಎಲಿಝಬೆತ್ ಮುಂತಾದ ಪ್ರಮುಖ ಚಿತ್ರಗಳನ್ನು ನಿರ್ದೇಶಿಸಿದ ಶೇಖರ್ ಕಪೂರ್ ಇದರ ಹಿಂದೆ ಇದ್ದಾರಂತೆ. ಇವರು ಅದರ ಸ್ಕ್ರಿಪ್ಟ್ ಬರೆದವರು. ವರ್ಜಿನ್ ಕಾಮಿಕ್ಸ್ ಸ್ಥಾಪಿಸಿದವರಲ್ಲಿ ಇವರೂ ಒಬ್ಬರು. ವರ್ಜಿನ್ ಕಾಮಿಕ್ಸ್ ಹೋದ ವರುಷ ರಾಮಾಯಣವನ್ನು ಕಾಮಿಕ್ಸ್ ಜಗತ್ತಿಗೆ ಪಾಶ್ಚಿಮಾತ್ಯ ಜಗತ್ತಿಗೆ ಹಿಡಿಸುವ ರೀತಿಯಲ್ಲಿ ಹೊರತಂದದ್ದು ನೆನಪಿಸಿಕೊಳ್ಳಬಹುದು. ಪುಸ್ತಕ ಹಾಗೂ ಕಾಮಿಕ್ ಜಗತ್ತಿನಲ್ಲಿ ಪ್ರಖ್ಯಾತ ಹೆಸರುಗಳಾದ ದೀಪಕ್ ಚೋಪ್ರ ಹಾಗೂ ಅವರ ಮಗ ಗೋಥಮ್ (ಗೌತಮ್) ಚೋಪ್ರ ಕೂಡ ಇದರಲ್ಲಿದ್ದಾರಂತೆ (ಇವರುಗಳೂ ವರ್ಜಿನ್ ಕಾಮಿಕ್ಸ್ ಸ್ಥಾಪಕರು).

ತಮಸಾ ನದೀ ತೀರದಲ್ಲಿ - ವಾಲ್ಮೀಕಿ

ರಾಮಾಯಣಕ್ಕೆ ಕಾರಣವಾದ ಘಟನೆ ನಿಮಗೆಲ್ಲ ಗೊತ್ತೇ ಇದೆ . ಅದೇ , ಹಕ್ಕಿ ಜೋಡಿ , ಬೇಡ ಒಂದನ್ನು ಕೊಲ್ಲುವದು , ಇನ್ನೊಂದರ ವಿರಹವೇದನೆಯಿಂದ ವಿಚಲಿತನಾದ ವಾಲ್ಮೀಕಿ ಮಹರ್ಷಿ ಆ ಬೇಡನನ್ನು ಶಪಿಸುವದು .ಇದೆಲ್ಲ ಸರಿ , ಆದರೆ ಆ ಶಾಪಕ್ಕೂ ರಾಮಾಯಣ ರಚನೆಗೂ ಸಂಬಂಧ ಸ್ಪಷ್ಟವಾಗಿ ನಿಮಗೆ ತಿಳಿದಿರಲಿಕ್ಕಿಲ್ಲ ಅಲ್ಲವೇ ? ನಾನು ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರರ ಪುಸ್ತಕದಲ್ಲಿ ಓದಿದ್ದನ್ನು ಇಲ್ಲಿ ಬರೆಯುತ್ತಿರುವೆ.

ಹಕ್ಕಿಯನ್ನು ಕೊಂದು ಇನ್ನೊಂದರ ನೋವಿಗೆ ಕಾರಣವಾದ ಬೇಡನನ್ನು ನೀನೆಂದೂ ಉದ್ಧಾರ ಆಗೋದು ಬೇಡ ( ಮಾ ನಿಷಾದ ... ) ಎಂದು ಛಂದೋಬದ್ಧವಾಗಿ ಶಪಿಸಿದ ವಾಲ್ಮೀಕಿ ನಂತರ ತಾನು ಶಾಪ ಕೊಟ್ಟಿದ್ದಕ್ಕೆ ನೊಂದುಕೊಳ್ಳುತ್ತಾನೆ. ತಾನು ಮಾಡಿದ್ದು ಸರಿಯೇ ? ಹಕ್ಕಿಯ ಕೊಲ್ಲುವಿಕೆ , ಇನ್ನೊಂದು ಹಕ್ಕಿಗೆ ಅಗಲಿಕೆಯನ್ನುಂಟು ಮಾಡಿದ್ದು ತನ್ನನ್ನು ವಿಚಲಿತಗೊಳಿಸಿದ್ದು ನಿಜ .. ಆದರೆ ತಾನು ಇದೇನು ಮಾಡಿಬಿಟ್ಟೆ ?
ಅವನಿಗೆ ಹಕ್ಕಿ , ಬೇಡ , ತಾನು ಬೇರೆ ಬೇರೆ ಅಲ್ಲ ; ಹಕ್ಕಿಯ ನೋವು ಅವನ ನೋವೂ ಕೂಡ ; ಇಂಥ ಸೂಕ್ಷ್ಮ ಮನಸ್ಸಿನ ಆತನಿಗೆ ನಂತರ ಭೆಟ್ಟಿಯಾದ ಬ್ರಹ್ಮನು ನೀನು ಮಾನವ ಸ್ವಭಾವವನ್ನು , ಸಂಸಾರದ ಆಗುಹೋಗುಗಳನ್ನು ಅರಿತುಕೊಳ್ಳಬಲ್ಲವನಾದ್ದರಿಂದ , ಆದರ್ಶಪುರುಷ ಶ್ರೀ ರಾಮಚಂದ್ರನ ಕುರಿತು ನೀನೇ ಕಾವ್ಯವನ್ನು ರಚಿಸು . ಈ ಶಾಪವು ಕಾವ್ಯವಾಗಲಿ ಹೊರತು ಅನ್ಯಥಾ ಆಗದಿರಲಿ. ನಿನ್ನ ಸ್ವಭಾವದಿಂದಾಗಿ ಈ ರಾಮಾಯಣದ ಕಥೆಯನ್ನು ಅಂಗೈಯಲ್ಲಿನ ನೆಲ್ಲಿಯ ಹಾಗೆ - ಅದರಲ್ಲಿನ ಎಳೆಗಳು ಕಣ್ಣಿಗೆ ಕಾಣುವ ಹಾಗೆ - ಸ್ಪಷ್ಟವಾಗಿ ಊಹಿಸಬಲ್ಲೆ ಎಂದು ಒಪ್ಪಿಸುತ್ತಾನೆ.

ಚಿಂಟು: ನಂಗೇನಿಷ್ಟ ಅಂದ್ರೆ...

[Please refer : ನಾ ಮೆಚ್ಚಿದ ಕಥೆ ಕನ್ನಡದಲ್ಲಿ..]

ಅಪ್ಪನ ಕಾಲಿಗೆ ಜೋತು ಬಿದ್ದು 'ಬೊರ್-ಬೊರ್-ಅಂಗಿ' ಆಡೋದು. ಚೆಸ್ ಆಟ ಇಷ್ಟ. ನಾನು ಗೆದ್ರೆ ಮಾತ್ರ! ಗೆಲ್ಲಲಿಲ್ಲಾ ಅಂದ್ರೆ ಖಂಡಿತಾ ಇಷ್ಟ ಇಲ್ಲ.

ನಾ ಮೆಚ್ಚಿದ ಕಥೆ ಕನ್ನಡದಲ್ಲಿ..

ಪುಸ್ತಕದ ಹೆಸರು: The Adventures of Dennis [Translated from the Russian by Fainna Glagoleva ] 

ಬರೆದವರು: Victor Dragunsky source: http://home.freeuk.com/russica2/books/den/book.html 
ಕನ್ನಡಲ್ಲಿ ಪುಸ್ತಕದ ಹೆಸರು: 'ಚಿಂಟುವಿನ ಸಾಹಸಗಳು' ಆಗಬಹುದಲ್ವೇ?!

ಈ ಜಗದ ಪರಿ

ಕಡಲಿನಾಳವ ಅರಿತವರಾರು
ಈ ಜಗದ ಪರಿಯ ಬಲ್ಲವರಾರು

ಇದ್ದವಗೆ ಬಿರುದು ಸನ್ಮಾನ
ಇಲ್ಲದವಗೆ ಬೇಗೆಯ ಬಹುಮಾನ

ದ್ವೇಷ ಅಸೂಯೆಗಳ ತಾಂಡವ
ಮೋಸ ಮತ್ಸರಗಳ ಪರ್ವ

ಕೊಟ್ಟೇಕೆ ಕಪಟಿಗೆ ನಗುವ ಮುಖವ?
ಹಾಲು ಮನಸ್ಸಿಗೆ ಕುರುಡು ಹ್ರದಯವ?

ಹೇಳಲೊಲ್ಲೆ ನಾ ನಿನಗೆ ಜಯವ
ತಂದೆ ನಮಗೇಕೆ ಈ ನರಕವ?

ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!

ಒಂದೊಮ್ಮೆ ಆರಾಮಾಗಿ ಹೊದ್ದುಕೊಳ್ಳಬಹುದಾದ ಅಗಲ ಕೌದಿಯಂತಿದ್ದ ಕರುನಾಡು, ಇಂದು ಹಳೆಯ ಹರಕಲು ಬಟ್ಟೆಯಂತೆ ಕಾಣುತ್ತದೆ. ಬೇಕಾಬಿಟ್ಟಿ ಕಟಿಂಗ್ ಮಾಡಿದ ತಲೆ, ಯಾರೋ ಜೋರಾಗಿ ಗುದ್ದಿದಂತ ಹೊಟ್ಟೆ. ಮಹಾರಾಸ್ಟ್ರಾ, ಏ.ಪಿಗಳು ನೋಡಿ ಕೊಬ್ಬಿದ ಕೋಣಗಳಂತಿವೆ.

ಈ ವರ್ಷದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ - ಶ್ಯಾಮ್ ಬೆನೆಗಲ್ !

" ಅಂಕುರ್" ಚಿತ್ರ ನೋಡಿದ ಪ್ರೇಕ್ಷಕರಿಗೆ, ಶ್ಯಾಮ್, ಹೊಸಬರೇನಲ್ಲ. ಭೂಮಾಲೀಕತ್ವದ ಅನೇಕ ಜನರು ಬಡವರನ್ನು, ಶೋಷಿತರನ್ನು ಕಾಡುವ ಚಿತ್ರವಾದ ಇದು ; ಭೂಮಾಲೀಕರ ಮತ್ತು ಅವರ ಜೀವನದಒಳ-ನೋಟಗಳನ್ನು ವಿಸ್ತರಿಸುತ್ತಾ ಸಾಗುತ್ತದೆ. ಅದನ್ನು ತಯಾರಿಸಿದಾಗ ಅವರಿಗೆ ೩೭ ವರ್ಷ. ಮುಂದೆ 'ಚರಣದಾಸ್ ಚೋರ್,' ಎಂಬ ಮಕ್ಕಳ ಚಿತ್ರ ತಯಾರಿಸಿದರು.

ಜಾಹಿರಾತು ಇದ್ರೇನೆ ಒಳ್ಳೇದು!

ಅನ್ಯ ದೇಶಗಳಲ್ಲಿ ಕ್ರಿಕೆಟ್ ಪ್ರಸಾರವಾಗುವಾಗ ಜಾಹಿರಾತು ಕಡಿಮೆ ಎಂಬ ವಿಷಯ ಅದೆಷ್ಟೋ ಸಾರಿ ಕೇಳಿಬರುತ್ತಿರುತ್ತದೆ. ಅದಕ್ಕೆ ಹೋಲಿಸಿ ನೋಡಿದರೆ ಪ್ರತಿ ಓವರಿನ ಮಧ್ಯೆ ಜಾಹಿರಾತು ತೋರಿಸುವುದು ಹುಚ್ಚುತನವೆನಿಸಿಬಿಡಬಹುದು.

ಬೆಳಗಾವಿ ಹೆಸರು ಬದಲಾವಣೆಗೆ ಕೇಂದ್ರ ಸರಕಾರ ನಕಾರ, ಇದು ನ್ಯಾಯವೇ?

http://www.kannadaprabha.com/NewsItems.asp?ID=KPH20070820220514&Title=Headlines+Page&lTitle=%AE%DA%C3%C8%DA%DF%DFR%D1%DA%DF%A6%A7&Topic=0&Dist=0

ಸೆಂಟ್ರಲ್ ಗೊರ್ಮೆಂಟ್ ನಮಗೆ ಈ ಇಚಾರದಲ್ಲಿ ಅಣ್ಣೆ ಮಾಡುತ್ತಿದೆ. ಇದು ಸರಿನಾ? ನಮ್ಮ ಕಡೆ ನಾವು ಕನ್ನಡಿಗರು ಬೆಳಗಾವಿಯನ್ನು  ಬೆಳಗಾವಿ ಅಂತನೇ ಕರಿತೀವಿ. ನಮ್ಮ ನಾಡಿನ ಪಟ್ಟಣವನ್ನು ನಮ್ಮದೇ ಹೆಸರಿಟ್ಟು ಕರೆಯಲು ಈ ದೊಣ್ಣೇ ನಾಯಕರ ಅಪ್ಪಣೆ ಬೇಕಾ?