ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅತ್ತು ಉಳಿದದ್ದು

ಅಳು ಬರುತ್ತದೆ: ಅಳುವಂಥದ್ದನ್ನು ನೋಡಿ ಜನ ನಕ್ಕಾಗ ಅಥವಾ ನಗದೇ ತುಟಿ ಬಿಗಿದು ಹಿಡಿದಾಗ ಅಥವಾ ಏನು ಮಾಡಬೇಕೆಂದು ಗೊತ್ತಾಗದೇ ಮುಖಮುಖ ನೋಡಿದಾಗ.
ಅಳು ಬರುತ್ತದೆ: ನೆನಪಿಟ್ಟುಕೊಳ್ಳಬೇಕಾದ್ದನ್ನು ಜನ ಮರೆತಾಗ ಅಥವಾ ನೆನಪು ಮಾಡಿಕೊಳ್ಳಲು ಹೆಣಗಿದಾಗ ಅಥವಾ ನೆನಪಾಗದೇ ಮಿಕಮಿಕ ನೋಡಿದಾಗ.

ಮೇಘರಾಜನೂರಿಗೆ ಮಳೆಗಾಲದ ಚಾರಣ

ಕಲ್ಲುಗುಂಡಿನಂತೆ ಮೈಗೆ ಬಡಿಯೋ ಮಳೆ ಹನಿಗಳನ್ನ ಸುರಿಸುವ ಮೋಡ ತಲೆ ಮೇಲೆ ಕಾಣಿಸದು. ಮೋಡದ ನಡುವೆಯೇ ನಡೆಯುವಾಗ ಎರಡು ಮೂರು ಮಾರು ದೂರದ ಹೊರಗಿನದು ಏನೂ ತಿಳಿಯದು. ಹಬ್ಬಿದ ಮಂಜಿನ ನಡುವೆಯೇ ಜೀವ ಜೋಲಿ ತಪ್ಪುವಂತೆ ಬೀಸುವ ಗಾಳಿಯ ಬಿರುಸೇ ಹೇಳಬೇಕು ನಾವೆಷ್ಟು ಎತ್ತರದಲ್ಲಿ ನಿಂತಿದ್ದೇವೆಂದು. ಪಕ್ಕದಲ್ಲೇ ಇರುವ ಸಾವಿರಾರು ಅಡಿಗಳ ಕಂದಕ ಕಾಣದ ಕುರುಡು ಕಣ್ಣಿಗೆ ಕಾಲಿನ ರಕ್ತ ಸವಿಯುತ್ತಿರುವ ಜಿಗಣೆ ಮಾತ್ರ ಸ್ಪಷ್ಟವಾಗಿ ಕಂಡೀತು. ಎಲ್ಲವನ್ನೂ ಮುಚ್ಚಿಹಾಕಿಬಿಟ್ಟಿರುವ ಮೋಡ-ಮಂಜನ್ನು ಬಾಯಿ ಪಾಪಿ ಎಂದು ಶಪಿಸಿದರೂ ಸ್ವರ್ಗ ಸದ್ರಶ ಆಷಾಢದ ಕೊಡಚಾದ್ರಿಯನ್ನು ಬಿಟ್ಟುಬರಲು ಮನಸ್ಸಿಗೆ ಮನಸ್ಸಾಗದು.
ಜುಲೈ ತಿಂಗಳ ಮಧ್ಯಭಾಗದ ಒಂದು ದಿನ ಬೆಂಗಳೂರಿಂದ ಬಂದ ಸ್ನೇಹಿತರನ್ನು ಶಿವಮೊಗ್ಗದಲ್ಲಿ ಸೇರಿಕೊಂಡು ಮಳೆಯಲ್ಲಿ ನೆನೆಯುತ್ತಾ ಬೈಕ್ ಓಡಿಸಿಕೊಂಡು ನಗರದ ಕೋಟೆಯನ್ನೊಮ್ಮೆ ಇಣುಕಿ ನೋಡಿ ಸಂಪೇಕಟ್ಟೆ ಸೇರುವಷ್ಟರಲ್ಲಿ ಮಧ್ಯಾಹ್ನ ಒಂದು ಗಂಟೆ. ಮಳೆಗಾಲದಲ್ಲಿ ಕೊಡಚಾದ್ರಿಗೆ ಹೋಗಬೇಡ್ರೋ , ಸಿಕ್ಕಪಟ್ಟೆ ಉಂಬುಳ, ಜೀಪ್ ಬೇರೆ ಹೋಗೋದಿಲ್ಲ ಅನ್ನೋ ಸಲಹೆಗಳನ್ನೆಲ್ಲ ನಿರ್ಲಕ್ಷಿಸಿ 9 ಕಿಲೋ ಮೀಟರ್ಗಳ ಮಳೆಗಾಲದ ಚಾರಣವನ್ನು ಆರಂಭಿಸಿಯೇ ಬಿಟ್ಟಿದ್ದೆವು. ನಮ್ಮ ಪಾಲಿಗೆ ಬಹುಶಃ ಕೊಡಚಾದ್ರಿಗೆ ಇದೇ ಮಳೆಗಾಲದ ಕೊನೇ ಚಾರಣವೇನೊ ಎಂಬ ಕಳವಳವೂ ಇತ್ತಲ್ಲ . ಮಳೆ ಮುಗೀತಿದ್ದಂಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೊಡಚಾದ್ರಿಗೆ ಒಂದು ಒಳ್ಳೇ ರಸ್ತೆ ಆಗುತ್ತದೆ. ಗಾಡಿ ಹೋಗೋವಾಗ ನಡ್ಕೊಂಡು ಹೋಗೋ ತಿಕ್ಕಲುತನ ಇರ್ತದಾ? ಮುಂದಿನ ಮಳೆಗಾಲದ ಹೊತ್ತಿಗೆ ಮೋಡಗಳಷ್ಟೇ ಮಲಗುವ ಗುಡ್ಡದ ನೆತ್ತಿಯ ಮೇಲೆ 'ಐ ಜಸ್ಟ್ ಕಾಂಟ್ ಬಿಲೀವ್ ದಿಸ್' ಅನ್ನೋ ಪ್ರವಾಸಿಗರ ಧ್ವನಿ ಮೊಳಗುತ್ತಿರುತ್ತದಾ? ಯೋಗರಾಜ ಭಟ್ಟರ 'ಗಾಳಿಪಟ' ಚಿತ್ರ ನೋಡಿ ಇಲ್ಲಿಗೆ ಬರುವವರ ಸಂಖ್ಯೆ ಎಷ್ಟು ಹೆಚ್ಚಾಗಬಹುದು? ಬೆಟ್ಟದ ಮೇಲೊಂದು ರೆಸಾರ್ಟ್ ಆದ್ರೂ ಆಶ್ಚರ್ಯವಿಲ್ಲವಲ್ಲ? ಎಂದೆಲ್ಲ ಯೋಚಿಸುತ್ತ, ಉಂಬುಳಗಳಿಗೆ ರಕ್ತ ದಾನ ಮಾಡುತ್ತ ಕಟ್ಟಿನಹೊಳೆಯಿಂದ ಕೊರಕಲು ದಾರಿ ಹಿಡಿದು ನಡೆಯಲಾರಂಭಿಸಿದ್ದೆವು.

ಪ್ರಮಾದ

ನೋಡಲಾಗುವುದೆ ಮಾನವನ ದುರ್ನಡತೆಯ ಅನೀತಿ…
ಮಾರಣಹೋಮವಾಗುತ್ತಿದೆ ನಾಯಿಗಳ ಸಂತತಿ…
ಪ್ರಮಾದವೆಂದರೆ ನಡೆಯುತ್ತಿದೆ ಅವುಗಳ ಗಣತಿ…
ವಿಜೃಂಭಿಸ ಹೊರಟಿಹನು ತೋರಿಸುತ್ತ ತನ್ನ ಸಣ್ಣ ಬುದ್ಧಿಯ ಮತಿ….

ಮೇಘರಾಜನೂರಿಗೆ ಮಳೆಗಾಲದ ಚಾರಣ

ಕಲ್ಲುಗುಂಡಿನಂತೆ ಮೈಗೆ ಬಡಿಯೋ ಮಳೆ ಹನಿಗಳನ್ನ ಸುರಿಸುವ ಮೋಡ ತಲೆ ಮೇಲೆ ಕಾಣಿಸದು. ಮೋಡದ ನಡುವೆಯೇ ನಡೆಯುವಾಗ ಎರಡು ಮೂರು ಮಾರು ದೂರದ ಹೊರಗಿನದು ಏನೂ ತಿಳಿಯದು. ಹಬ್ಬಿದ ಮಂಜಿನ ನಡುವೆಯೇ ಜೀವ ಜೋಲಿ ತಪ್ಪುವಂತೆ ಬೀಸುವ ಗಾಳಿಯ ಬಿರುಸೇ ಹೇಳಬೇಕು ನಾವೆಷ್ಟು ಎತ್ತರದಲ್ಲಿ ನಿಂತಿದ್ದೇವೆಂದು.

ಜನಪದ ತ್ರಿಪದಿಗಳು

ಪದವಿ ಓದುತ್ತಿದ್ದಾಗ ಕನ್ನಡ ಭಾಷಿಕದಲ್ಲಿ ಜನಪದ ತ್ರಿಪದಿಗಳು ಎಂಬ ಪಾಠವಿತ್ತು. ಅದರಲ್ಲಿ ಒಂದು ತ್ರಿಪದಿ ಹೀಗಿತ್ತು:

"ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ

ಕೂಸು ಕಂದವ್ವ ಒಳ ಹೊರಗ ಆಡಿದರ

ಬೀಸಣಿಗಿ ಗಾಳಿ ಸುಳಿದಾವ"

ಶಿವನಿಗೇ ಸಡ್ಡು ಹೊಡೆದ ಕೆಚ್ಚೆದೆಯ ಕನ್ನಡಿಗ - ಭಾಗ ೧

ಿವನಿಗೇ ಸಡ್ಡು ಹೊಡೆದ ಕೆಚ್ಚೆದೆಯ ಕನ್ನಡಿಗ - ಭಾಗ ೧
ದಕ್ಷಿಣಾದಿ ಸಂಗೀತಕ್ಕೆ ಕರ್ನಾಟಕ ಸಂಗೀತವೆಂದು ಹೆಸರು ಬರಲು, ಭಾರತೀಯ ಸಂಗೀತ ಎರಡಾಗಿ ಕವಲಾದಾಗ ದಕ್ಷಿಣದ ಕವಲನ್ನು ರೂಢಿಸುವುದರಲ್ಲಿ ಕರ್ನಾಟಕದವರು ಹಲವರು ಲಾಕ್ಷಣಿಕರು ಕೆಲಸ ಮಾಡಿದ್ದೂ ಕೂಡ ಪ್ರಮುಖ ಕಾರಣಗಳಲ್ಲೊಂದು. ಯಾವುದೇ ಕಲೆ, ನಿಂತ ನೀರಲ್ಲ.

ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]

- - - -
ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
- - - -

ಕಾದು ನೋಡೋಣ ಯಾರು ಮೊದಲು ಸರಿಯಾದ ಉತ್ತರವನ್ನು ಕೊಡಬಹುದೆಂದು :-)

ಕನ್ನಡಿಗ
-ಗಿರೀಶ

ನನ್ನ ಹಿಂದಿ ಬ್ಲಾಗ್

ಕನ್ನಡವನ್ನು ಹಿಂದಿಲಿ ಓದಿ, ಇಲ್ಲಾ ಕನ್ನಡ ಫಾಂಟಲ್ಲಿ ಬರೆದಿದ್ದೆಲ್ಲಾ ಕನ್ನಡ ಅಂದುಕೊಳ್ಳೋರು ಹಿಂದಿನೋ, ತಮಿಳನ್ನೋ, ತೆಲುಗನ್ನೋ ಕನ್ನಡದಲ್ಲಿಯೇ ಓದಿ. :)

http://bhomiyo.com/hi.xliterate/obbakannadiga.blogspot.com

http://bhomiyo.com/

ನನ್ನಿ.