ಇಂದು ಕಡಿದಾಳು ಶಾಮಣ್ಣ... ನಾಳೆ?
ಇಂದು ಕಡಿದಾಳು ಶಾಮಣ್ಣ... ನಾಳೆ?
- Read more about ಇಂದು ಕಡಿದಾಳು ಶಾಮಣ್ಣ... ನಾಳೆ?
- 7 comments
- Log in or register to post comments
ಇಂದು ಕಡಿದಾಳು ಶಾಮಣ್ಣ... ನಾಳೆ?
ಬೆಂಗಳೂರಿನಿಂದ ಹೆಸರಘಟ್ಟಕ್ಕೆ ಹೋಗುವ ದಾರಿಯಲ್ಲಿ ಬಾಣಾವರ ದಾಟಿ ತರಬನಹಳ್ಳಿಯ ಬಳಿ ಬಲಕ್ಕೆ ತಿರುಗಿ ಮೂರು ಕಿಲೋಮೀಟರು ಕ್ರಮಿಸಿದರೆ ಸಿಗುವ ಊರು ಶಿಲ್ವೆಪುರ. ಚಿಕ್ಕಬೆಟ್ಟಳ್ಳಿ ಮಾರ್ಗವಾಗಿ ಶಿವಕೋಟೆಗೆ ಸಾಗುವ ರಸ್ತೆಯಲ್ಲಿ ಬ್ಯಾಲದಕೆರೆ ಬಳಿ ಎಡಕ್ಕೆ ಮೂರು ಕಿಲೋಮೀಟರು ನಡೆದರೂ ಈ ಊರು ಸಿಗುತ್ತದೆ. ಈ ಊರಿನ ಇತಿಹಾಸ ಕೇವಲ ೧೨೦ವರ್ಷಗಳ ಈಚಿನದು.
೧೮೭೬ ರಿಂದ ೧೮೭೮ರವರೆಗೆ ತಲೆದೋರಿದ ಭೀಕರ ಕ್ಷಾಮಕ್ಕೆ ಸಾವಿರಾರು ಜನರು ಮರಣವನ್ನಪ್ಪಿ, ಅನೇಕ ಸಾವಿರ ಜನರು ತಮ್ಮ ಹಳ್ಳಿಗಳನ್ನು ತೊರೆದು ಉದರ ಪೋಷಣೆಗಾಗಿ ಪಟ್ಟಣಗಳನ್ನು ಆಶ್ರಯಿಸಬೇಕಾಯಿತು.
ಇಂಡಿಯಾದ ಪೂರ್ವ ಕಡಲತೀರವನ್ನು ಫ್ರೆಂಚರು ಕೊರೊಮ್ಯಾಂಡೆಲ್ ತೀರ ಎನ್ನುತ್ತಿದ್ದರು. ಈ ಕೊರೊಮ್ಯಾಂಡೆಲ್ ತೀರ ಪ್ರದೇಶದ ಪಾಂಡಿಚೇರಿ ಅವರ ವಸಾಹತು ಆಗಿತ್ತು. ಈ ಕೇಂದ್ರದಿಂದಲೇ ಅವರು ದಕ್ಷಿಣ ಭಾರತದಾದ್ಯಂತ ತಮ್ಮ ಧರ್ಮ ಪ್ರಚಾರದ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದರು. ಅದನ್ನು ಅವರು ಕರ್ನಾಟಿಕ್ ಮಿಷನ್ (Carnatic Mission) ಎಂಬುದಾಗಿ ಕರೆಯುತ್ತಿದ್ದರು.
ವ್ಯಾಟಿಕನ್ ಸುಧಾರಣೆಗಳು ಘೋಷಣೆಯಾಗುವ ಮುನ್ನ ಚರ್ಚ್ ವಲಯದಲ್ಲಿ "ಕೀರ್ತನೆ ಪುಸ್ತಕ" ತುಂಬಾ ಜನಪ್ರಿಯವೆನಿಸಿತ್ತು. ಅದರಲ್ಲಿ ಮೂರು ಭಾಗಗಳಿದ್ದು ಫ್ರೆಂಚ್ ಧಾಟಿಯ ಹಾಡುಗಳ ಕನ್ನಡ ರೂಪಾಂತರವೂ, ಕರ್ನಾಟಕ ಶಾಸ್ತ್ರೀಯ ಸಂಗೀತದ ಕನ್ನಡ ಗೀತೆಗಳೂ, ಕೊನೆಯಲ್ಲಿ ಲಾತಿನ್ ಗೀತೆಗಳೂ ಮುದ್ರಿತವಾಗಿದ್ದವು.
ಹಾರೋಬೆಲೆ ಮಹಿಮೆ ಎಂಬ ನಾಟಕ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮವು ಪುರಾತನ ಕ್ರೈಸ್ತ ಕೇಂದ್ರವಾಗಿದ್ದು ಮಹಿಮೆ ಎಂಬ ನಾಟಕ ಪ್ರದರ್ಶನದಿಂದ ಪ್ರಖ್ಯಾತವಾಗಿದೆ. ೧೯೦೬ರಿಂದಲೂ ನಿರಂತರವಾಗಿ ಪ್ರತಿ ವರ್ಷ ಶುಭಶುಕ್ರವಾರ, ಪವಿತ್ರ ಶನಿವಾರಗಳಂದು ಪ್ರದರ್ಶಿತವಾಗುತ್ತಿರುವ ಈ ನಾಟಕವನ್ನು ಪ್ರಾರಂಭಿಸಿದವರು ಸ್ವಾಮಿ ಲಾಜರ್ ಅವರು.
೧. ಹಟದಿಂದ ಹೆಣ್ಣು ಕೆಟ್ಟಳು ಚಟದಿಂದ ಗಂಡು ಕೆಟ್ಟ
೨. ಗಂಡಸರ ಕೈಯಲ್ಲಿ ಕೂಸು ನಿಲ್ಲದು ಹೆಂಗಸರ ಕೈಯಲ್ಲಿ ಮಾತು ನಿಲ್ಲದು
೩. ಎಳ್ಳಿನಲ್ಲಿ ಎಣ್ಣೆ ಅಡಕ ಹಾಲಿನಲ್ಲಿ ಬೆಣ್ಣೆ ಅಡಕ
೪. ಮೇಲೆ ಬಸಪ್ಪ ಒಳಗೆ ವಿಷಪ್ಪ
೫. ಹೊರಗೆ ಬೆಳಕು ಒಳಗೆ ಕೊಳಕು
೬. ಹಿಟ್ಟೂ ಹಳಸಿತ್ತು ನಾಯಿಯೂ ಹಸಿದಿತ್ತು
೭. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ
ಯೇಸುಕ್ರಿಸ್ತ ಶಿಲುಬೆಗೇರುವ ಮುನ್ನ ಆತನ ವಿರೋಧಿಗಳು ಅವನನ್ನು ಬಂಧಿಸುವ ಪರಿ, ಆತನ ನ್ಯಾಯವಿಚಾರಣೆ, ಅವನಿಗೆ ನೀಡಿದ ಹಿಂಸೆ, ನಂತರ ಶಿಲುಬೆ ಹೊರಿಸಿ ಮೆರವಣಿಗೆ ಮಾಡಿದ್ದು ಇವೆಲ್ಲವನ್ನೂ ಶುಭಶುಕ್ರವಾರಕ್ಕೆ ಮುಂಚಿನ ೪೦ ದಿನಗಳಲ್ಲಿ ಮತ್ತೆ ಮತ್ತೆ ಸ್ಮರಿಸಿಕೊಳ್ಳುವುದು ಕ್ರೈಸ್ತರಲ್ಲಿ ವಾಡಿಕೆ.
ಮನೆ ಹತ್ರ ಒನ್ದ್ ಮಾರುತಿ ವಾನ್-ನಲ್ಲಿ ಸೀರೆ ಮಾರಕ್ಕೆ ಅಂಥ ತಂದ್ರಪ್ಪ...
ಹೆಣ್ಮಕ್ಕಳು ಏನು ನೂಕು ನುಗ್ಗಲು ಅಂತೀರ...
ಅದನ್ನ ನೋಡ್ದಾಗ ನನ್ೆ ಯೋಚನೆ ಬಂದಿದ್ದು ಗಂಡಂದಿರ್ ಪಾಡು...
ಸ್ಯಾರೀ!!
ಬೇಕೆಂದು Saree,
ದುಂಬಾಲು ಬಿದ್ದಳು ಎನ್ನ ನಾರಿ.
ನಾನೆಂದೆ - "ಈಗ ಬೇಡ, Sorry!
ಅಡಿಗೆ ಮನೆಯಿಂದಲೇ
ಗುಡುಗಿದಳು - ನನಗೆ ಗಾಬರಿ!
"ನೀವೇ ಆರಿಸಿರಿ!"
"ನನಗೆ Saree,
ಇಲ್ಲ - ನಿಮಗೆ ಗೋರಿ!!!"