ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪಲ್ಲಕ್ಕಿ ಚಿತ್ರದಲ್ಲಿ ಇರುವ ಉತ್ತಮ ಅಂಶಗಳು..

ಬಹು ನಿರೀಕ್ಷಿತ ಪ್ರೇಮ್ ಚಿತ್ರ ಪಲ್ಲಕ್ಕಿಯನ್ನು ಹಿಂದಿನ ಯಶಸ್ವಿ ಚಿತ್ರಗಳ ದೃಷ್ಟಿಯಲ್ಲಿ ನೋಡಿದರೆ ಸಾಮನ್ಯ ಚಿತ್ರ ಅನಿಸಬಹುದು,
ನಿರ್ದೇಶಕ ನರೇಂದ್ರ ಬಾಬು ಚಿತ್ರದಲ್ಲಿ ಹೊಸತೇನು ಕೊಟ್ಟಿಲ್ಲ ಎಂದು ಎಲ್ಲರಿಗೂ ಚಿತ್ರ ನೋಡಿದ ಕೂಡಲೆ ಅನಿಸುತ್ತದೆ, ಎಕೆಂದರೆ

ಪ್ರಕೃತಿಯೇ ಪಾಠಶಾಲೆ (ಇ-ಲೋಕ-27)(18/6/2007

 ಪ್ರಕೃತಿಯಿಂದ ನಾವು ಕಲಿಯಬೇಕಾದ್ದು ಬಹಳವಿದೆ. ಈ ಜಗತ್ತಿನ ಪ್ರತಿ ಜೀವಿಯೂ ಒಂದು ಅದ್ಭುತ. ಹಾಗೆ ನೋಡಿದರೆ ನಮ್ಮ ಸುತ್ತಲಿನ ಪ್ರತಿವಸ್ತುವೂ ಒಂದು ಪ್ರ್‍ಆಕೃತಿಕ ಕಲಾಕೃತಿ.ಇದು ತಡವಾಗಿಯಾದರೂ ನಮ್ಮ ತಂತ್ರಜ್ಞರಿಗೆ ಹೊಳೆದಿದೆ.

ಅಪ್ಪನ ದಿವಸಕ್ಕೆ ಏನು ವಿಶೇಷ?

"ಅಪ್ಪ" ಅಂದರೆ ಬಾಯಲ್ಲಿ ನೀರೂರುತ್ತದೆಯೇ? ಹೌದು, "ಅಪ್ಪ"ದ ರುಚಿ ನಿಮಗೆ ಗೊತ್ತಿದ್ದರೆ! ಓದಿ:ಶ್ರೀವತ್ಸ ಜೋಷಿಯವರು ಅಪ್ಪನ ದಿನ ವಿಕದಲ್ಲಿ ಪ್ರಕಟಿಸಿದ ಬರಹ:
http://vijaykarnatakaepaper.com/pdf/2007/06/17/20070617a_008101003.jpg

ಎಲ್ಲೆಲ್ಲೂ ಸಂಗೀತವೇ...

ರಾತ್ರಿ ಝೀ,ಸ್ಟಾರ್ ಪ್ಲಸ್, ಸೋನಿ ಟಿ.ವಿ. ನೋಡಿ ಜೇಸುದಾಸ್ ಅವರು ಹಾಡಿದ ಹಾಡು ನೆನಪಾಯಿತು.
ಒಂದರಲ್ಲಿ Voice of India, ಇನ್ನೊಂದರಲ್ಲಿ Challenge SaReGaMaPa, ಮತ್ತೊಂದರಲ್ಲಿ Indian Idol, ಜತೆಜತೆಯಲ್ಲೇ ಬಿತ್ತರವಾಗುತ್ತಿದೆ.

ಕೆಲವು ವಚನಗಳು

೧) ಬಲ್ಲಿದನು ಬೆಲ್ಲವನು
ಹೊಂದಿಹನು
ಇಲ್ಲದವನ ಮನೆಗೆ
ಇರುವೆಯೂ ಹತ್ತದೂ ಕಾಣಾ ಭರತೇಶ

೨) ಹಣದ ಕುಪ್ಪರಿಗೆ ಏರಿದವನಿಗೆ
ಮಣ್ಣ ಗಂಧ ತಿಳಿಯದು
ಹೆಣದ ಪಕ್ಕದಲಿ ಎನಿತು
ಕೂತರೂ ಹೊರಡದು ಮಾತು ಕಾಣಾ ಭರತೇಶ

ಸಂಪದದಲ್ಲಿ spam ಕಂಡುಬಂದಲ್ಲಿ ಗಮನಕ್ಕೆ ತನ್ನಿ

ಓದುಗರೆ,

ಸಂಪದದಲ್ಲಿ spam ಕಂಡುಬಂದಲ್ಲಿ ಕೂಡಲೆ [:http://sampada.net/contact|ನಿರ್ವಾಹಕರ ಗಮನಕ್ಕೆ ತನ್ನಿ]. ಬಾಟ್ ಗಳು ಹಾಗೂ ಸ್ಕ್ರಿಪ್ಟುಗಳ ಬಲ್ಕ್ ಹೊಡೆತಗಳಿಗೆ ಸಂಪದ ಹೊರತಾದರೂ ಪ್ರಜ್ಞಾಪೂರ್ವಕವಾಗಿ ಸ್ಪ್ಯಾಮ್ ಮಾಡಿದರೆ ಅದನ್ನು ಅಳಿಸಿಹಾಕಬೇಕಷ್ಟೆ - ಫಿಲ್ಟರ್ ಮಾಡಲಾಗದು . ಹೀಗಾಗಿ ಇಂತಹ ಸ್ಪಾಮ್ ಕಂಡುಬಂದಲ್ಲಿ ಕೂಡಲೆ ನಿರ್ವಹಣೆ ತಂಡದ ಗಮನಕ್ಕೆ ತನ್ನಿ - ಕೂಡಲೆ ಅಳಿಸಿಹಾಕಲಾಗುವುದು.

ಇದಲ್ಲದೆ ನಕಲಿ ಪ್ರೊಫೈಲುಗಳು ನಿಮ್ಮ ಗಮನಕ್ಕೆ ಬಂದಲ್ಲಿ ಅಥವ ಫ್ಲೇಮ್ ಮಾಡೋದಕ್ಕಾಗಿಯೇ ಸೃಷ್ಟಿಸಿದಂತಹ ಐಡಿ ಗಳು ಕಂಡಲ್ಲಿ ಕೂಡ ಗಮನಕ್ಕೆ ತರಬಹುದು.

- ನಿರ್ವಹಣೆ ತಂಡದ ಪರವಾಗಿ,

ಭಾರತದಲ್ಲಿ ಯೆಹೂದ್ಯರು

ನಮ್ಮ ಸಿಂಧೂ ಬಯಲಿನ ನಾಗರೀಕತೆ ಪ್ರಚ್ಛನ್ನವಾಗಿದ್ದ ಕಾಲದಲ್ಲಿ ಏಷ್ಯಾ ಖಂಡದ ಮತ್ತೊಂದು ಬದಿಯಲ್ಲಿ ಅಂದರೆ ಯೂಫ್ರ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ಬಯಲಿನಲ್ಲಿ ಇನ್ನೊಂದು ನಾಗರೀಕತೆ ರೂಪುಗೊಂಡಿತ್ತು. ಅದೇ ಪುರಾತನ ಯೆಹೂದೀ ನಾಗರೀಕತೆ. ಯೆಹೂದಿಗಳು ಸಹಸ್ರಾರು ವರ್ಷಗಳ ಹಿಂದೆಯೇ ಲಿಪಿಯನ್ನು ಅಳವಡಿಸಿಕೊಂಡು ತಮ್ಮ ದಿನನಿತ್ಯದ ಆಗುಹೋಗುಗಳನ್ನು ಬರೆದಿಡುತ್ತಾ ಬಂದರು. ಈ ಕಾರಣದಿಂದ ಯೆಹೂದ್ಯ ಸಂಸ್ಕೃತಿಯ ಇತಿಹಾಸ ಸ್ಪಟಿಕಸ್ಪಷ್ಟವಾಗಿದೆಯಲ್ಲದೆ ಅದು ಆಯಾ ಕಾಲಘಟ್ಟಗಳ ಜನಾಂಗೀಯ ಸಂಘರ್ಷ, ರಾಜವಂಶಗಳು, ದಿರಿಸುಗಳು, ಆಚಾರ ವಿಚಾರಗಳ ಕುರಿತು ಬೆಳಕು ಚೆಲ್ಲುತ್ತದೆ.
ಸಕಲಕ್ಕೂ ಸೃಷ್ಟಿಕರ್ತನಾದ ಸರ್ವಶಕ್ತ ದೇವರೆಂಬುವನು ಒಬ್ಬನೇ. ಆತ ಸಕಲ ಜನ ಪ್ರಾಣಿಪಕ್ಷಿ ಆಕಾಶ ಭೂಮಿಗಳೆಲ್ಲದಕ್ಕೂ ಒಡೆಯನಾಗಿದ್ದಾನೆ ಹಾಗೂ ಆತ ಆರಿಸಲ್ಪಟ್ಟ ಪ್ರವಾದಿಗಳ ಮೂಲಕ ಮಾತನಾಡುತ್ತಾನೆ. ಅವನನ್ನು ಓಲೈಸುವವರಿಗೆ ರಕ್ಷಣೆಯಿದೆ, ವಿರೋಧಿಸುವವರಿಗೆ ಆ ಕ್ಷಣವೇ ಶಿಕ್ಷೆ ಇದೆ ಎಂದು ನಂಬುವ ಯೆಹೂದ್ಯರು ಆಧುನಿಕ ವಿಚಾರವಾದದಿಂದ ಎಂದೂ ವಿಚಲಿತರಾದವರಲ್ಲ. ತೋರಾ ಎಂಬ ಧರ್ಮಸಂಹಿತೆಯಿಂದ ಬಂಧಿತರಾದ ಅವರು ಮೂರ್ತಿ ಪೂಜೆಯಿಂದ ದೂರ ಉಳಿದವರು. ಪ್ರವಾದಿ ಮೋಸೆಸನ ಮೂಲಕ ದೇವರು ದಶ ಕಟ್ಟಳೆಗಳನ್ನು ಕೊಡಮಾಡಿದರೆಂದೂ ಆ ಕಟ್ಟಳೆಗಳ ಪ್ರಕಾರ ಕೊಲೆ, ಕಳ್ಳತನ, ಸುಳ್ಳು, ವ್ಯಭಿಚಾರ ಮುಂತಾದವುಗಳು ವರ್ಜ್ಯವೆಂದೂ ಹೇಳಲಾಗಿದೆಯಲ್ಲದೆ ದೇವರನ್ನು ಮಾತ್ರ ಆರಾಧಿಸು, ದೇವರ ಹೆಸರನ್ನು ಕ್ಷುಲ್ಲಕ ಕಾರಣಗಳಿಗಾಗಿ ಬಳಸಬೇಡ, ತಂದೆ ತಾಯಿಯರನ್ನು ಗೌರವಿಸು, ಪರಸ್ತ್ರೀಯನ್ನೂ ಪರರ ವಸ್ತುಗಳನ್ನೂ ಬಯಸಬೇಡ ಎಂದೂ ತಾಕೀತು ಮಾಡಲಾಗಿದೆ. ಇದಕ್ಕೆ ವಿರುದ್ಧವಾಗಿ ನಡೆದುಕೊಂಡವನನ್ನು ಬಯಲಲ್ಲಿ ನಿಲ್ಲಿಸಿ ಸಮಾಜದ ಇತರೆಲ್ಲರೂ ಕಲ್ಲಿನಿಂದ ಹೊಡೆದು ಸಾಯಿಸಬಹುದೆಂಬ ಕಠೋರ ನೀತಿಗಳೂ ಇವರಲ್ಲಿವೆ. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಎಂಬ ಹಮ್ಮರಾಬಿಯ ನೀತಿಯೂ ಯೆಹೂದ್ಯ ನೀತಿಯಿಂದಲೇ ಪ್ರೇರಿತವಾಗಿದೆಯೆಂದರೆ ಉತ್ಪ್ರೇಕ್ಷೆಯಲ್ಲ.