ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುಂಗಾರು ಮಳೆ ನೋಡಿದ ಮೇಲೆ

-೧-
ಮುಂಗಾರು ಮಳೆಯನ್ನು ಯಾಕೆ ಅಷ್ಟೊಂದು ಜನ ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ? ಈ ಪ್ರಶ್ನೆ ನನ್ನನ್ನು ಕಾಡಿದ್ದು ಮುಂಗಾರು ಮಳೆಯನ್ನು ಮೊನ್ನೆ ಸಿಡ್ನಿಯಲ್ಲಿ ನೋಡಿದಾಗ. ಸಾಧಾರಣವಾಗಿ ಎರಡು ಶೋಗಳು ನಡೆಯುವ ಇಲ್ಲೂ ಮೂರು ಶೋಗಳಿದ್ದು ಮೂರಕ್ಕೂ ಜನ ತುಂಬಿದ್ದರು.
ಪ್ರೀತಂನ ಮಾತುಗಳಿಗೆ ಮೊದಮೊದಲು ಜನ ನಗುತ್ತಲೇ ಚಿತ್ರ ಮೊದಲುಗೊಂಡಿತು. ಪ್ರೀತಂನ ಮಾತುಕತೆ ಎಲ್ಲಾ, ಬೆಂಗಳೂರಿನ ಶ್ರೀಮಂತ ಹುಡುಗನ ಉಡಾಫೆ, ಸಲೀಸಾಗಿ ಹರಿಯುವ ಇಂಗ್ಲೀಷ್ ಮಿಶ್ರಿತ ಕನ್ನಡ, ಮನಸ್ಸಿಗೆ ಹಿಡಿದ ಹುಡುಗಿ ಬೇಕೇ ಬೇಕು ಎಂಬಂತೆ ಹಿಂಬಾಲಿಸುವ ಮನೋಧರ್ಮ, ಇದರ ಸುತ್ತಲೇ ಸುತ್ತುತ್ತ ಢಾಳಾಗಿ ನಮ್ಮ ಮುಂದೆ ನಿಲ್ಲುತ್ತದೆ. ಒಳಗೇನೂ ಇಟ್ಟುಕೊಳ್ಳದೆ ಬೇಕಾದ್ದನ್ನು ಆಡುವ, ಆಡಿದಂತೆ ನಡೆಯುವ ಹುಡುಗ. ಇವೆಲ್ಲಾ ಹೊಸದೇನಲ್ಲ. ಆದರೆ, ಹೊಸ ಬಗೆಯ ಸ್ವಾವಹೇಳನ (self-depricating) ಹಾಸ್ಯ ಕನ್ನಡ ಚಿತ್ರದ ಹೀರೋಗೆ ಹೊಸದಿರಬಹುದು. ಆ ಅಂಶ ಅಲ್ಲಲ್ಲಿ ಕನ್ನಡದ ಚಿತ್ರಗಳಲ್ಲಿ ಈ ಹಿಂದೆ ಬಂದಿದ್ದರೂ, ಇಲ್ಲಿ ಅದು ಪ್ರೀತಂನ ಸ್ವಭಾವದ ಒಂದು ದೊಡ್ಡ ಭಾಗವೇ ಆಗಿರುವುದು ಹೊಸದೇನೋ ಅನಿಸಿತು. ಆಗಾಗ ಸಂದರ್ಭದ ಹೊರಗೆ ನಿಂತು ಚಟಾಕಿ ಹಾರಿಸುವ ಕ್ಷಣಗಳು ಮುದಕೊಡುವಂಥವು. ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಂ ಬಳಸುವ ಬೆಂಗಳೂರಿನಂಥ ನಗರದ ಭಾಷೆಯಿಂದಾಗಿ ಅದು ಹೊಸದಾಗಿ ಕಾಣುತ್ತವೆ ಕೂಡ. ಆದರೆ ಚಿತ್ರದ ಉತ್ತರಾರ್ಧದ ಹೊತ್ತಿಗೆ ಅವನ ಮಾತು ಕತೆ ಹಾಗೇ ಮುಂದುವರೆಯುವುದು ಪಿಚ್‌ ಎನಿಸುತ್ತದೆ.

ಸುಭಾಷಿತ

ಹತ್ತೆಡೆಯೊಳು ತೋಡಿ ಒಂದಡಿಯಷ್ಟನು ಬರಲಿಲ್ಲ ನೀರೆನ್ನಬೇಡ ಒಂದೆಡೆಯೊಳು ತೋಡು ಹತ್ತಡಿಯಷ್ಟನು ಚಿಮ್ಮುವುದುದಕವು ನೋಡಾ

ಹನಿಗವನ

ಕನ್ನಡದಲ್ಲಿ ಹನಿಗವನ ಎ೦ದರೆ ದು೦ಡಿರಾಜರು, ದು೦ಡಿರಾಜರೆ೦ದರೆ ಹನಿಗವನವೆ೦ಬುವಷ್ಟು ಮನೆಮಾತಗಿದೆ.  ಇ೦ದಿನ ವಿ.ಕ ದಲ್ಲಿ ಪ್ರಕಟವಾದ  ಅವರ ಒ೦ದು ಹಾಸ್ಯ ಬರಿತ ಹನಿಗವನವಿಲ್ಲಿದೆ ಆನ೦ದಿಸಿ :).
 
ಕಣ್ಣಾ ಮುಚ್ಚೆ ಲವರ್ಸ್ ಡೇ
ಕಾಡೇಗೂಡೇ ಡೇಟಿ೦ಗ್ ಡೇ
ಉದ್ದಿನ ಮೂಟೇ ಪ್ರೆಗ್ನೆ೦ಟ್ಸ್ ಡೇ
ಉರುಳೇ ಹೋಯ್ತು ಡೆಲಿವರಿ ಡೇ

:)

ನೀರಿಂಗಿಸಿ

ನೀರು ರಸಾತಳವನ್ನುಮುಟ್ಟಿದೆ. ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಮುಗಿಲು ಮುಟ್ಟಲಿದೆ. ಇದಕ್ಕೆ ಪರಿಹಾರವನ್ನೂ ಮುಗಿಲೇ ನೀಡಬಹುದು. ಹೇಗೆ ಎನ್ನುವುದು ಗೊತ್ತೇ? ಇಲ್ಲಿ ಓದಿ:
http://vijaykarnatakaepaper.com/pdf/2007/06/11/20070611a_014101001.jpg

ನಚಿಕೇತ VS ಯಮ !!! ಕಠೋಪನಿಷತ್

ಕಠೋಪನಿಷತ್ ನಿ೦ದ ಕೆಲವು Dialogues !!!

ಇವು ಬಾಲಕನೊಬ್ಬ ಮೃತ್ಯು ವನ್ನು ಪ್ರಶ್ನಿಸುವುದರಿ೦ದ ಪ್ರಾರ೦ಭವಾಗಿ ಅ೦ತಿಮವಾಗಿ ಸತ್ಯದತ್ತ ನಮ್ಮನ್ನು ಕರೆದುಕ್ಕೊ೦ಡು ಹೋಗುತ್ತದೆ.

ಕೃಪೆ :: ಸ್ವಾಮಿ ಆದಿದೇವಾನ೦ದ.ರಾಮ ಕೃಷ್ನಾಶ್ರಮ.

ರವಿ ಬೆಳಗೆರೆಯವರ ಲೇಖನ - ದಟ್ಸ್ ಕನ್ನಡದಲ್ಲಿ

ಇಲ್ಲಿ ನೋಡಿ:

http://thatskannada.oneindia.in/column/ravibelagere/110607caste_religion_intellectuals.html

ನಾನು ಬೆಳಗೆರೆಯವರ ಕ್ರೈಮ್ ಡೈರಿಯ ಅಭಿಮಾನಿಯೇನೂ ಅಲ್ಲ - ಆದರೆ ಇಲ್ಲಿ ಅವರು ಬರೆದಿರುವುದು ನನಗೆ ಸರಿ ಕಂಡಿತು.

ಎ ಬಿ ತಪ್ಪಿದ್ದೆಲ್ಲಿ?

ಬೆಲ್ ಬಾಟಮ್ ಪ್ಯಾಂಟ್,ಷರ್ಟ್ ನ ಮೇಲಿನ ಎರಡು ಗುಂಡಿ ಬಿಚ್ಚಿ ,ಮೂಳೆ ಕಾಣಬಾರದೆಂದು ಬನಿಯನ್ ಹಾಕಿಕೊಂಡು, ಷರ್ಟ್ ಕೈನ ಎರಡು ಮಡಕೆ ಮಡಚಿ,ತಲೆಯ ಗುಂಗುರು ಕೂದಲನ್ನೂ ಸಹ ನೀರು ಹಾಕಿ ಒತ್ತಿ ಒತ್ತಿ ಬಾಚಿ, ಅಮಿತಾಬ್ ಸ್ಟೈಲಲ್ಲಿ ತಿರುಗುತ್ತಿದ್ದೆವು.

ಓ ಜೀವನವೇ ರಿಲ್ಯಾಕ್ಸ್ ಪ್ಲೀಸ್....ಸೃಜನಶೀಲರಾಗಿ

ಸುಖಬೋಧಾನಂದರ ಚಿಂತನೆಗಳು ಸುಧಾ ಪತ್ರಿಕೆಯಲ್ಲಿ ಮೇಲೆ ಹೇಳಿದ ಅಂಕಣದಲ್ಲಿ ಪ್ರಕಟವಾಗುತ್ತಿದೆ. ಈ ವಾರದ ಅಂಕಣ ಓದಿ, ಸೃಜನಶೀಲರಾಗಿ!
http://www.sudhaezine.com/pdf/2007/06/14/20070614a_009101001.jpg

ನಗೆಹೊನಲು

ಸ್ವಲ್ಪ ನಕ್ಕರೆ ಮನಸ್ಸು ಹಗುರವಾಗುತ್ತದೆ. ಇಲ್ಲಿ ಕ್ಲಿಕ್ಕಿಸಿ, ಒಂದೆರಡು ಮುಗುಳ್ನಗು ಅರಳದಿದ್ದರೆ ಕೇಳಿ!

http://www.sudhaezine.com/pdf/2007/06/14/20070614a_038101001.jpg

ನಾನೇಕೆ ಬರೆಯುತ್ತೇನೆ?

ಬರೆಯಬೇಕೆಂಬ ಮಹದಾಸೆ ಬಹಳ ದಿನದಿಂದಿದ್ದರೂ, ಸೋಮಾರಿತನದಿಂದ ಬಹು ಕಾಲ blog Create ಮಾಡಿ ಹಾಗೆಯೇ ಬಿಟ್ಟಿದ್ದೆ. ಇವತ್ತೇಕೊ ಶುರೊ ಮಾಡಬೇಕೆಂಬ ಉತ್ಸಾಹ ಪುಟಿದೆದ್ದಿದೆ. ಅನಿಸಿದ್ದನ್ನು ಬರೆಯಲೆ? ಎಲ್ಲರೂ ಮಾಡುವುದು ಅದನ್ನೆ, ನಡೆದದ್ದನ್ನು ಅನುಕರಿಸಲೇ? ಮಕ್ಕಳಾಟಿಕೆಯಾದೀತೆಂಬ ಭಯ. ಸಾಮಾನ್ಯ ಸಂಗತಿಯನ್ನು ಅಸಾಮಾನ್ಯವೆಂಬಂತೆ ಅಭಿವ್ಯಕ್ತಿಸಲೇ?