ಮಹಾತ್ಮ ಗಾಂಧಿ
ಸತ್ಯವನ್ನು ಹೇಳುವಾಗ ಅದಷ್ಟೂ ಪ್ರೀತಿಯಿಂದ, ಒಳ್ಳೆಯ ರೀತಿಯಿಂದ ಹೇಳಬೇಕು. ಇಲ್ಲವಾದಲ್ಲಿ ಸತ್ಯದ ಆ ಸಂದೇಶ ಮತ್ತು ಸಂದೇಶ ನೀಡುವ ವ್ಯಕ್ತಿ ಇಬ್ಬರೂ ತಿರಸ್ಕರಿಸಲ್ಪಡುವ ಸಾಧ್ಯತೆಯೇ ಹೆಚ್ಚು.
ಸತ್ಯವನ್ನು ಹೇಳುವಾಗ ಅದಷ್ಟೂ ಪ್ರೀತಿಯಿಂದ, ಒಳ್ಳೆಯ ರೀತಿಯಿಂದ ಹೇಳಬೇಕು. ಇಲ್ಲವಾದಲ್ಲಿ ಸತ್ಯದ ಆ ಸಂದೇಶ ಮತ್ತು ಸಂದೇಶ ನೀಡುವ ವ್ಯಕ್ತಿ ಇಬ್ಬರೂ ತಿರಸ್ಕರಿಸಲ್ಪಡುವ ಸಾಧ್ಯತೆಯೇ ಹೆಚ್ಚು.
ಅಹಿಂಸೆಯೆನ್ನುವುದು ಕೇವಲ ಶಕ್ತಿವಂತರು ಮಾತ್ರ ಆಚರಿಸಲು ಸಾಧ್ಯವಿರುವ ವಿಧಾನ! - ಮಹಾತ್ಮ ಗಾಂಧಿ
ಇವತ್ತು ಎಲ್ಲಾ ಸಮಾಚಾರ ಚಾನಲ್ ಗಳಲ್ಲಿ ಬರೀ "ಅಸ್ಸಾಂ ಹಿಂಸಾಚಾರದ" ಸುದ್ದಿನೇ ! ಅಸ್ಸಾಂನಲ್ಲಿ ಸುಮಾರು ೬೯ ಹಿಂದಿ ಮಾತಾಡುವ ಜನರನ್ನ ULFA ಗುಂಡಿಕ್ಕಿ ಕೊಂದಿದೆ. ಇದರಿಂದ ಅಸ್ಸಾಂನಿಂದ ಹಿಂದಿಗರ ವಲಸೆ ಶುರುವಾಗಿದೆ. ಎಲ್ಲಾ ಚಾನಲ್ ಗಳಲ್ಲೂ ವಿಮರ್ಶಕರು ಬೆರಳು ತೋರಿಸ್ತಾ ಇರೋದು ಪಾಕಿಸ್ತಾನದ ISI, ಬಾಂಗ್ಲಾದೇಶ etc etc. ಪಾಕಿಸ್ತಾನದಿಂದ, ಬಾಂಗ್ಲಾದೇಶದಿಂದ ಶಸ್ತ್ರಾಸ್ತ್ರ ದೊರಕಿರಬಹುದು ಆದ್ರೆ ಈ ರೀತಿ ಹಿಂಸಾಚಾರಕ್ಕೆ ನಮ್ಮ ನೆರೆ ದೇಶದವರು ನೇರ ಕಾರಣವೆ ? ಮೊದಮೊದಲು ಇದನ್ನ ನಂಬಬೋದಿತ್ತು. ಆದ್ರೆ ಈಗ ನಾವೂ ಕೂಡ ಹಿಂದಿಗರ ಚಾಳಿಯನ್ನ ಕಣ್ಣಾರೆ ನೋಡಿದ್ದೇವೆ. ಭಾರತದಲ್ಲಿ ಎಲ್ಲೂ ಅವ್ರು ಬೇರೆ ಭಾಷೆಗೆ, ಬೇರೆ ಸಂಸ್ಕ್ರುತಿಗೆ ಮರ್ಯಾದೆ ಕೊಡೋದೇ ಇಲ್ಲ. ಅದೇನೋ ದುರಹಂಕಾರ. ಮಾತೆತ್ತಿದ್ರೆ ಹಿಂದಿ ರಾಷ್ತ್ರಭಾಷೆ ಅನ್ನೋದು, ಬೇರೆ ಭಾಷಿಕರನ್ನ ಅಪಹಾಸ್ಯ ಮಾಡೊದು - ಈ ತರ ಚಾಳಿನ ತೋರಿಸ್ತಾ ಇದ್ರೆ, ಯಾರ್ಗೆ ಆಗ್ಲಿ ಉರ್ದೋಗಲ್ವಾ ? ಒದ್ದು ಓಡುಸ್ಬೇಕು ಅಂತ ಅನ್ಸೊಲ್ವಾ ?
@ webmaster
ಅತಿ ಹೆಚ್ಚು point ಗಳಿಸಿರುವ ಸಂಪದ ಸದಸ್ಯರ ಪಟ್ಟಿಯು ನೋಡಲು ದೊರಕುವಂತಿದ್ದರೆ ಹೇಗೆ? ಟಾಪ್ 10 ನಲ್ಲಿ ಬರಲು ಸದಸ್ಯರು ಹೆಚ್ಚು ಹೆಚ್ಚು post ಬರೆಯಬಹುದು.
ನಾನು ಎಸ್.ಎಲ್. ಭೈರಪ್ಪನವರ "ಸತ್ಯ ಮತ್ತು ಸೌಂದರ್ಯ" ಪುಸ್ತಕವನ್ನು ಓದುತ್ತಿರುವಾಗ ಈ ಎರಡು ಪದಗಳನ್ನು ಎಡತಾಕಿದೆ :-
ಸಮಾಜದ ರಕ್ಷಕನಾದ ಆರಕ್ಷಕ
ಸ್ವತ: ಆಗಿದ್ದಾನೆ ಸಮಾಜ ಭಕ್ಷಕ
ಇನ್ಯಾರಾಗುವರು ಈ ಸಮಾಜದ ರಕ್ಷಕ
ಬಾನಲ್ಲಿ ಕ೦ಡ ಬೆಳದಿ೦ಗಳ ಚ೦ದಿರ
ಕ೦ಡನು ನನಗೆ ನಿನ್ನಷ್ಟೇ ಸು೦ದರ
ಕನ್ನಡ ಸುಗಮ ಸಂಗೀತ ಗೀತೆಗಳ ಸಾಹಿತ್ಯ ಸಿಗುವ ಅಂತರ್ಜಾಲ ತಾಣ ಯಾವುದಾದರೂ ಇದೆಯೆ?
ಅಶ್ವಿ
ಬಿ. ಎಂ. ಶ್ರೀ ಸಾಹಿತಿ ಮತ್ತು ಸಾಮಾಜಿಕ ಮುತ್ಸದ್ದಿ ... ! !
ಮೈಸೂರು ಅಸೋಸಿಯೇಷನ್ ಬಂಗಾರದ ದತ್ತೀ ಹಬ್ಬದ ಪ್ರಯುಕ್ತ ಯೋಗಿಸಲಾಗಿದ್ದ ದತ್ತಿ ಉಪನ್ಯಾಸ ಶನಿವಾರ ೬ ನೇ ಜನವರಿ ೨೦೦೭ರಂದು ಸಯಕಾಲ ೬-೩೦ ಕ್ಕೆ ಶುರುವಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಶ್ಯಾಮಲ ಮತ್ತು ವೃಂದದವರಿಂದ ಬಿ. ಎಂ. ಶ್ರೀ ರವರು ಬರೆದ ಕವನಗಳ ವಾಚನವಾಯಿತು. ಮೊದಲು 'ಕರುಣಾಳು ಬಾ ಬೆಳಕೆ' ಪ್ರಾರಂಭವಾಗಿ 'ವಸಂತ ಬಂದ ಋತುಗಳ ರಾಜ' ದಿಂದ ಮುಕ್ತಾಯವಾಯಿತು. ಮೈಸೂರ್ ಅಸೊಸಿಯೇಷನ್ ಅಧ್ಯಕ್ಷರಾದ ಶ್ರೀ. ದೊರೈಸ್ವಾಮಿಯವರು ಮಾತನಾಡಿ, ದತ್ತಿ ಉಪನ್ಯಾಸಮಾಲೆಯ ೨೫ ನೇ ವರ್ಷದ ಜೊತೆಗೆ ೨೫ ವರ್ಷಗಳಿಂದ ನಡೆದುಕೊಂಡು ಬಂದ ಪತ್ರಿಕೆ, 'ನೇಸರು'ವಿನ ಪ್ರತಿಯನ್ನು ರಾಯರ ಅಮೃತಹಸ್ತದಿಂದ ಬಿಡುಗಡೆಮಾಡಲಾಯಿತು. ಮೊದಲನೆಯ ದಿನದ, ಪ್ರಾಸ್ತಾವಿಕ ಭಾಷಣವನ್ನು ಡಾ. ತಾಳ್ತಜೆ ವಸಂತ ಕುಮಾರ್ ಮಾಡಿದರು. ಎಲ್.ಎಸ್.ಶೇಷಗಿರಿರಾಯರ ಪರಿಚಯ ಹೀಗಿತ್ತು.
ಒಮ್ಮೆ ಗೌತಮ ಬುದ್ಧನ ಬಳಿಗೆ ಅವನನ್ನು ತೀವ್ರವಾಗಿ ದ್ವೇಷಿಸುವ ವ್ಯಕ್ತಿಯೊಬ್ಬ ಬಂದನಂತೆ. ಬುದ್ಧನ ಸುತ್ತ ಅನೇಕ ಶಿಷ್ಯಂದಿರು ನೆರೆದಿದ್ದ ಸಮಯ. ಬಂದಾತ ಬುದ್ಧನೊಡನೆ ಚರ್ಚೆಗಿಳಿಯಲು ಬಯಸಿದ. ಬುದ್ಧ ಆತನ ಕೋರಿಕೆಯನ್ನು ಸಂತೋಷದಿಂದ ಸಮ್ಮತಿಸಿದ. ಪ್ರಾರಂಭದಲ್ಲಿ ನೇರವಾಗಿಯೇ ಸಾಗಿದ ಚರ್ಚೆ ಕ್ರಮೇಣ ಅಡ್ಡದಾರಿ ಹಿಡಿಯಿತಂತೆ. ಚರ್ಚೆಗಿಳಿದ ವ್ಯಕ್ತಿ ಬುದ್ಧನ ಬಗೆಗಿನ ವೈಯಕ್ತಿಕ ದ್ವೇಷವನ್ನು ತನ್ನ ಮಾತುಗಳಲ್ಲಿ ವ್ಯಕ್ತಪಡಿಸಲು ಆರಂಭಿಸಿದ. ಸುಳ್ಳು ಆರೋಪಗಳನ್ನು ಹೊರಿಸಿ ಬುದ್ಧನನ್ನು ನಿಂದಿಸಿದ. ಬುದ್ಧ ಮಾತ್ರ ಸ್ವಲ್ಪವೂ ಬೇಸರಗೊಳ್ಳದೇ ಶಾಂತನಾಗಿಯೇ ಕುಳಿತಿದ್ದ. ಅ ವ್ಯಕ್ತಿ ಕೊನೆಗೆ ಅವಾಚ್ಯ ಶಬ್ದಗಳಿಂದ ಬುದ್ಧನನ್ನು ನಿಂದಿಸಲು ಪ್ರಾರಂಭಿಸಿದ. ಇದನ್ನು ಸಹಿಸಲಾರದ ಬುದ್ಧನ ಶಿಷ್ಯಂದಿರು ಆತನನ್ನು ಬಲವಂತದಿಂದ ಹೊರದಬ್ಬಲು ಪ್ರಯತ್ನಿಸಿದಾಗ, ಬುದ್ಧ ನಸುನಗುತ್ತಲೇ ಅವರನ್ನು ತಡೆದ.
ಸುಮಾರು ಸಮಯ ಬುದ್ಧನನ್ನು ನಿಂದಿಸಿದ ಆ ವ್ಯಕ್ತಿ ಕೊನೆಗೆ ತಾನಾಗಿಯೇ ಹೊರಟು ಹೋದನಂತೆ. ಬುದ್ಧ ಏನೂ ನಡೆದೇ ಇಲ್ಲವೆಂಬಂತೆ ನಗುತ್ತಾ ಕುಳಿತಿದ್ದ. ಆದರೆ ಈ ಘಟನೆಯಿಂದ ಬಹಳವಾಗಿ ನೊಂದ ಆನಂದನೆಂಬ ಆಪ್ತ ಶಿಷ್ಯ ಬುದ್ಧನನ್ನು ಕೇಳಿಯೇಬಿಟ್ಟ - "ಆತ ಸುಳ್ಳು ಆರೋಪಗಳನ್ನು ನಿಮ್ಮ ಮೇಲೆ ಹೊರಿಸಿ, ಅವಾಚ್ಯ ಶಬ್ದಗಳಿಂದ ನಿಮ್ಮನ್ನು ಅವಮಾನಿಸಿದರೂ ನೀವು ಸುಮ್ಮನೇ ಇದ್ದೀರಲ್ಲ, ಇದು ಸರಿಯೇ? ಆತನಿಗೆ ಸರಿಯಾಗಿ ಪ್ರತ್ಯುತ್ತರ ಕೊಡಬಾರದಿತ್ತೇ?".