ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಿ.ಆರ್.ಎಲ್. -೬೦: ಅಭಿನಂದನಾ ಸಮಾರಂಭದ ವರದಿ

ಬೆಂಗಳೂರು, ೧೦.೦೯.೨೦೦೬: 'ಬಿ. ಆರ್. ಲಕ್ಷ್ಮಣರಾವ್‍ಗೆ ೬೦ ತುಂಬಿದ ಪ್ರಯುಕ್ತ ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭ' -ಎಂಬ ಸಾಲುಗಳನ್ನು ವಿಜಯ ಕರ್ನಾಟಕದಲ್ಲಿ ಓದುತ್ತಿದ್ದಂತೆ ಹೌಹಾರಿಬಿಟ್ಟೆ. ನಮ್ಮ ತುಂಟಕವಿ ಬಿ.ಆರ್.ಎಲ್. ಗೆ ಅರವತ್ತು ವರ್ಷ ವಯಸ್ಸಾಯಿತೇ? Impossible ! ಅದು ಹೇಗೆ ಸಾಧ್ಯ? ನನ್ನ ಅನುಮಾನವನ್ನು ಬಗೆಹರಿಸುವಂತೆ, ನಿಜವಾಗಿಯೂ ಅರವತ್ತಾಗಿದೆ ಎನ್ನುವಂತೆ ಸಾಪ್ತಾಹಿಕದಲ್ಲಿ ಜಯಂತ ಕಾಯ್ಕಿಣಿ ಬಿ.ಆರ್.ಎಲ್. ಕುರಿತು ಬರೆದ ಲೇಖನವೊಂದಿತ್ತು. ಅಭಿನಂದನಾ ಕಾರ್ಯಕ್ರಮಕ್ಕೆ ಬರಲಿರುವವರ list ನೋಡಿದೆ. ಈ ಕಾರ್ಯಕ್ರಮವನ್ನು ನಾನು attend ಮಾಡಲೇಬೇಕು ಅನ್ನಿಸಿತು. Movie ಗೆ ಹೋಗೋಣ ಎಂದು ಗೆಳೆಯರ ಜೊತೆ ಮಾತಾಡಿಕೊಂಡಿದ್ದವನು, ಅದನ್ನೆಲ್ಲಾ cancel ಮಾಡಿ, ಮಧ್ಯಾಹ್ನ ಮೂರರ ಹೊತ್ತಿಗೆ ಸೀದಾ ಕಲಾಕ್ಷೇತ್ರಕ್ಕೆ ನಡೆದೆ.

ನೂರು ವರ್ಷದ ಏಕಾಂತ - ಗೇಬ್ರಿಯಲ್ ಮಾರ್ಕ್ವೆಜ್ ನ ಕಾದಂಬರಿ

ಈ ಕಾದಂಬರಿಯನ್ನು ಹಿಂದೊಮ್ಮೆ ಓದಲು ಆರಂಬಿಸಿದ್ದೆ. ವಿಚಿತ್ರವಾಗಿದೆ . ಪ್ರಾರಂಭದ ಪುಟಗಳಲ್ಲಿ ಗಮನ ಸೆಳೆದ ಕೆಲವು ವಾಕ್ಯ ನೋಡಿ .

ಗೊತ್ತಿರುವ ಹಾಡು/ಕಥೆಗಳುಇನ್ನೊಬ್ಬರಿಗೆ ಹೇಳುವದು ಪುಣ್ಯದ ಕೆಲಸ!

ಜನಪದ ಕತೆಗಳ ಒಂದು ಪುಸ್ತಕದಲ್ಲಿ ಈ ವಿಚಾರ ಓದಿದೆ.

ನಮಗೆ ಗೊತ್ತಿರುವ ಹಾಡು / ಕಥೆಗಳನ್ನು ಇನ್ನೊಬ್ಬರಿಗೆ ಹೇಳಬೇಕು.

ಈಗ ನನ್ನ ಭಾಷೆಯನ್ನೇ ಮತ್ತೊಮ್ಮೆ ಕಲಿಯತೊಡಗಿದ್ದೇನೆ. !

ಕನ್ನಡದ ಪದಗಳನ್ನು ಗುರುತಿಸುವಲ್ಲಿ ಸಂಗನಗೌಡರು ಕೊಟ್ಟ ವಿಚಾರ ಬಹಳ ಸಹಾಯಕವಾಗಿದೆ.( ಒತ್ತಕ್ಕರ ಕುರಿತಾಗಿ)ಈಗ ಶಬ್ದಕೋಶವೊಂದನ್ನು (ಗುರುನಾಥ ಜೋಷಿಯವರದು)ತಿರುವಿ ಹಾಕುತ್ತಿದ್ದೇನೆ.

ಅಪ್ಪನ ನೆನಪು

ನನ್ನ ತೊದಲು ತುಟಿಗಳಿಗೆ ಪ್ರಾರ್ಥಿಸಲು ಕಲಿಸಿದಿರಿ,
ನನ್ನ ತಪ್ಪಡಿಗಳನು ತಿದ್ದುತ್ತ ಜೊತೆಯಲ್ಲೆ ಸಾಗಿದಿರಿ,
ಕೈಹಿಡಿದು ಬರೆಸಿ ಕೈಬರಹವನ್ನು ಚೆಂದಗಾಣಿಸಿದಿರಿ,
ನನ್ನ ಚಿತ್ತಭಿತ್ತಿಯಲಿ ನೂರಾರು ಬಣ್ಣಗಳ ತುಂಬಿದಿರಿ.

ನೆನಪಿಡಬೇಕಾದ ಕನ್ನಡ ಕಥೆ

     ಸೆಪ್ಟೆ೦ಬರ್ ೨೦೦೬ ರ 'ತುಷಾರ' ಮಾಸ ಪತ್ರಿಕೆಯಲ್ಲಿ ಪಾ.ವೆ೦.ಆಚಾರ್ಯರ 'ಒ೦ದು ಅ-ನೀತಿ ಕಥೆ' ಪ್ರಕಟವಾಗಿದೆ.  ಇದೊ೦ದು ಸು೦ದರವಾದ ನೀತಿ ಕಥೆ. ಓರ್ವ ನಾಸ್ತಿಕ- ಕರ್ತವ್ಯನಿರತ ಸತ್ಪುರುಷ- ಹೇಗೆ ನರಕದಲ್ಲಿ ಸ್ವರ್ಗವನ್ನು ಸೃಷ್ಟಿ ಮಾಡುತ್ತಾನೆ ಎ೦ಬುದು ಕಥಾವಸ್ತು. ಓರ್ವ ಪಾದ್ರಿ ಈ ನಾಸ್ತಿಕನನ್ನು ಆಸ್ತಿಕನನ್ನಾಗಿ ಪರಿವರ್ತಿಸಲು ಬಹಳ ಪ್ರಯತ್ನಿಸಿ ವಿಫಲವಾಗುತ್ತಾರೆ. ಮೊದಲು ನಾಸ್ತಿಕ ಮರಣ ಹೊ೦ದುತ್ತಾನೆ. ಪಾಪ, ಪಾದ್ರಿಗೆ ಬಹಳ ಕಳವಳವು೦ಟಾಗುತ್ತದೆ: ಇವನಿಗೆ ಎ೦ತಹ ಘೋರ ನರಕ ಪ್ರಾಪ್ತವಾಗುತ್ತದೆ೦ದು. ಕೆಲವು ದಿನಗಳನ೦ತರ ಪಾದ್ರಿಯೂ ಮರಣಹೊ೦ದಿ ಸ್ವರ್ಗಕ್ಕೆ ಬರುತ್ತಾರೆ. ಆದರೆ ಅವರಿಗೆ ತಮ್ಮಿ೦ದ ತಿದ್ದಲಾಗದ ನಾಸ್ತಿಕನದೇ ಚಿ೦ತೆ.  ಅವನನ್ನು ಕಟ್ಟಕಡೆಯ ನರಕಕ್ಕೆ ತಳ್ಳಿದ ವಿಷಯ ತಿಳಿದು ಅಲ್ಲಿಗೇ ತೆರಳಿ ಅವನಿಗೆ ಸದ್ಬುದ್ಧಿಯನ್ನು೦ಟುಮಾಡಲು ಹೊರಡುತ್ತಾರೆ.  ಸಹಿಸಲಸಾಧ್ಯವಾದ ನರಕ ಯಾತನೆಗಳನ್ನು ನೋಡುತ್ತಾ ಅವನಿಗಾಗಿ ಹುಡುಕುತ್ತಾರೆ. ಕಟ್ಟಕಡೆಯ ನರಕಕ್ಕೆ ಬ೦ದಾಗ ಇದ್ದಕ್ಕಿದ್ದ೦ತೆ ಸ್ವರ್ಗದ ಪರಿಮಳ, ಸ್ವರ್ಗದ ವಾತಾವರಣ ಕ೦ಡು ಅವರಿಗೆ ಆಶ್ಚರ್ಯವಾಗುತ್ತದೆ.  ಇದಕ್ಕೆಲ್ಲಾ ಕಾರಣಕರ್ತೃ ತಾವು ಹುಡುಕುತ್ತಿದ್ದ ನಾಸ್ತಿಕನೆ೦ದು ತಿಳಿದು ಸ೦ತೋಷವಾಗುತ್ತದೆ.  ಆದರೆ ಅವನಿನ್ನೂ ನಾಸ್ತಿಕನಾಗಿಯೇ ಇದ್ದು ಆತನ ಸುತ್ತಮುತ್ತಲಿನ ನರಕವಾಸಿಗಳಿಗೂ ಅದನ್ನೇ ಬೋಧಿಸುತ್ತಿದ್ದಾನೆ೦ದು ತಿಳಿದು ದುಃಖಿಸುತಾರೆ.  ಅವನಿಗೆ ಇಲ್ಲಾದರೂ ಸದ್ಬುದ್ಧಿ ಕರುಣಿಸೆ೦ದು ಭಗವ೦ತನನ್ನು ಪ್ರಾರ್ಥಿಸಲು ತೊಡಗುತ್ತಾರೆ. ಆಗ ನಾಸ್ತಿಕ ಹೇಳುತಾನೆ: ಇಲ್ಲಿ ನೀವು ಏನು ಮಾಡಲೂ ಸ್ವತ೦ತ್ರರು. ಆದರೆ ಇಲ್ಲಿ ದೇವರ ಪ್ರಾರ್ಥನೆ ನಿಷಿದ್ಧ.

ಹೀಗೇಕೆ...???

 ಹೀಗೇಕೆ...???

ಹಲವು ದಿನಗಳಿ೦ದ
ಚಡಪಡಿಸುತಲಿದ್ದೆ,
ಕಣ್ಮುಚ್ಚಿದರೆ
ಕಣ್ಣಿಗೆ ನಿದ್ದೆಯಿಲ್ಲ;
ಹಸಿವಾದರೂ
ತಿನ್ನಲು ಮನಸ್ಸಿಲ್ಲ;
ಕೆಲಸದಲ್ಲಿ
ಮಗ್ನತೆಯಿಲ್ಲ;
ಯೋಚನೆಯಲ್ಲಿ
ತಿರುಳಿಲ್ಲ;
ಮೊಗದಲಿ ನಗುವಿಲ್ಲ;
ಆಡಲು ಮಾತು
ಬಾರದಲ್ಲ;
ಎದೆ ಭಾರವಾಗಿದೆಯೆಲ್ಲಾ!

ನಾನು ಮತ್ತು ನನ್ನ ಹಲ್ಲುಗಳು

ಏನಪ್ಪಾ, ನಿನಗೆ ಬೇರೆ ಯಾವ ವಿಷಯವೂ ಸಿಕ್ಕಲಿಲ್ಲವೇ? ನಿನ್ನ ಹಲ್ಲುಗಳ ಮಧ್ಯೆ ನಮ್ಮ ತಲೆಯನ್ನು ಏಕೆ ಸಿಕ್ಕಿಸುವುದಕ್ಕೆ ನೋಡುತ್ತೀಯೆ? ಎ೦ದು ಪ್ರಶ್ನೆ ಕೇಳಬೇಡಿ. ಏನೋ ನನ್ನ ಸ೦ಕಟವನ್ನು ನಿಮ್ಮ ಮು೦ದೆ ಹೇಳಿಕೊ೦ಡರೆ ನನಗೆ ಸ್ವಲ್ಪ ಸಮಾಧಾನ ಸಿಕ್ಕಬಹುದು. ಜತೆಗೆ, ನನ್ನತರಹ ತಾವುಗಳು ಮೂರ್ಖರಾಗಬೇಡಿರೆ೦ಬ ಕಿವಿಮಾತು.

ತ್ಯಾಗ-ಭೋಗದ ನಡುವೆ..

ತ್ಯಾಗದಲ್ಲಿ ಸುಖವಿದೆ ಎಂಬುದು ತಾತ್ವಿಕ ನಿಲವು.
ಅದೇ ಭೋಗದಲ್ಲಿ ಸುಖವಿದೆ ಎಂಬುದಷ್ಟೇ ಸಾತ್ವಿಕ ನಿಲವಾಗಲಾರದು. ಹೇಗೆ ಬರೀ ತ್ಯಾಗವೇ ಜೀವನವಲ್ಲವೋ ಹಾಗೆಯೆ ಬೋಗವೂ ಜೀವನವಲ್ಲ. ಜೀವನದಲ್ಲಿ ತ್ಯಾಗ-ಭೋಗ ಎರಡೂ ಸಮನಾಗಿರಲಾರವು; ಒಂದೇ ತಕ್ಕಡಿಯಲ್ಲಿ ತೂಗಲಾರವು.