ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಕನ್ನಡದ ಮೇಲೆ ಸಂಸ್ಕೃತದ ಸವಾರಿ
ಕನ್ನಡದ ಮೇಲೆ ಸಂಸ್ಕೃತದ ಸವಾರಿಯಿಂದ ಕನ್ನಡಕ್ಕೆ ಹಿನ್ನಡೆಯಾಗುತ್ತದೆಯೇ? ಹೇಗೆ? ಸಂಸ್ಕೃತದ ಶಬ್ದಗಳನ್ನು ನಾವು ಕನ್ನಡದಲ್ಲಿ ಸೇರಿಸಲು ಯಾಕೆ ಬಯ್ಸಸುತ್ತೇವೆ? ವಿಶ್ಲೇಷಣೆ ಇಲ್ಲಿದೆ.
- Read more about ಕನ್ನಡದ ಮೇಲೆ ಸಂಸ್ಕೃತದ ಸವಾರಿ
- 4 comments
- Log in or register to post comments
ಮಾಯಾವತಿಯ ಇಂದ್ರಲೋಕ
ಮಾಯಾವತಿಯ ಇಂದ್ರಲೋಕ
ನಡೆದಲ್ಲಿ ನಡುಮುರಿದು ಬಿತ್ತು ಕೈ
ಕೆಸರಾಯಿತು ಕಮಲ ಮೈ
ಹಸಿರು ಸೈಕಲಿಗೆ ಕುತ್ತು
ಐರಾವತಕ್ಕೆ ಬಿತ್ತು ಒತ್ತು!
ಜಾತಿ ಉಪಜಾತಿ ಗಣಿತದಲಿ ಮಿಂಚಿ
ಎಲ್ಲ ಜಾತಿಗೂ ಕೊಂಚ ಜನಿವಾರ ಹಂಚಿ
ಸಂಚಿಗೆ ಸಿಲುಕಿದರೂ ಇಂಚು ಅಲುಗದೆ
ಜನರ ಸಿಟ್ಟೇ ಬಲ, ಸದೆ ಬಡಿದ ಗದೆ!
ಆನೆ ನಡೆದದ್ದೇ ದಾರಿ
ನಾನೆ ಇನ್ನಿಲ್ಲಿಯ ರೂವಾರಿ
ಮಾಲೆ ಹಾಕಿ ಅಂಬಾರಿಯೇರಿ
- Read more about ಮಾಯಾವತಿಯ ಇಂದ್ರಲೋಕ
- 1 comment
- Log in or register to post comments
ಕಾರಂತರು ಮತ್ತು ಧರ್ಮ
ಸಮಾಜದ, ಪರಂಪರೆಯ, ಸನಾತನ ಧರ್ಮದ ಭಯ ಮತ್ತು ನಿಯಂತ್ರಣಗಳಾಚೆಯೂ ಒಂದು ಸಂಸಾರ ತಾನು ಏಕಘಟಕವಾಗಿ ಗಟ್ಟಿಯಾಗಿ ನಿಲ್ಲುವುದಕ್ಕಾಗಿಯೇ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ವ್ಯಕ್ತಿಯ ವೈಯಕ್ತಿಕ ಧರ್ಮ ಮತ್ತು ಸಂಸಾರದ ಸಮಷ್ಟಿ ಧರ್ಮಗಳ ನಡುವೆಯೇ ಸಂಘರ್ಷ ಸುರುವಾದರೆ ಅಲ್ಲಿ ಹೊಂದಾಣಿಕೆಯಾಗಲೀ ಸಹಜೀವನವಾಗಲೀ ಸಾಧ್ಯವೆ?
ತನ್ನ ತಾಯಿ ಪರಪುರುಷನ ಹಾಸುಗೆಯ ವಸ್ತುವಾಗುವುದನ್ನು ಮನಸಾ ಒಪ್ಪಿಕೊಳ್ಳಲಾರದ ಶ್ವೇತಕೇತು ತನ್ನ ತಾಯಿಯನ್ನು ಯಾರೋ ಉದ್ಧಾಲಕನ ಪತ್ನಿ ಎಂದುಕೊಂಡು ತಾನು ನಂಬಿದ ಮೌಲ್ಯಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಾಗುವುದೆ? ಸಾಧ್ಯವಿಲ್ಲದಾಗ ಏನು ಪರಿಹಾರ? ಘಟಸ್ಫೋಟ?
ಬ್ರಾಹ್ಮಣ್ಯಕ್ಕೆ ಅಪವಾದದಂತೆ ಬದುಕಿದ ನಾರಣಪ್ಪ, ಮತ್ತೆ ಮದುವೆಯಾಗಲು ಬಯಸುವ ಕಾತ್ಯಾಯಿನಿ, ವಿದೇಶಿ ಹುಡುಗಿಯನ್ನು ಮದುವೆಯಾಗುವ ಸನಾತನಿಯ ಏಕೈಕ ಕುಲಪುತ್ರ, ಕೀಳುಜಾತಿಯವನೊಂದಿಗೆ ಓಡಿ ಹೋಗುವ ಪುರೋಹಿತರ ಮಗಳು, ಮುಸ್ಲಿಂ ಹುಡುಗನನ್ನು ಮದುವೆಯಾಗುವ ನರಸಿಂಹ ಗೌಡರ ಮಗಳು...
ಇದು ಗಂಡು ಹೆಣ್ಣು ಸಂಬಂಧಗಳು ಸಂಸಾರದಲ್ಲಿ ಎಬ್ಬಿಸುವ ಬಿರುಗಾಳಿಗಷ್ಟೇ ಸೀಮಿತವಲ್ಲ. ಹೊಸ ಮೌಲ್ಯಗಳು ಹಳೆಯದರೊಂದಿಗೆ, ಪರಂಪರೆಯೊಂದಿಗೆ ಹೂಡುವ ಸಂಘರ್ಷ ಮಾತ್ರವಲ್ಲ. ಮಾನವೀಯತೆ ಎಂಬ ಸರಳವಾದ ಒಂದು ಸಂಗತಿ ಯಾವುಯಾವುದರ ಜೊತೆಗೆಲ್ಲ ನಡೆಸಲೇ ಬೇಕಾಗಿಬಂದ ಜಿದ್ದಾಜಿದ್ದಿ ಅನಿಸುತ್ತದೆ. ಈ ಅಸಹ್ಯಕರ ಬೆಳವಣಿಗೆ ಇಂದಿನ ಕಾಲಮಾನದ ಸ್ವರೂಪವನ್ನು ನಿರ್ಧರಿಸುತ್ತದೆ.
ಅದೇ ಶಿವರಾಮ ಕಾರಂತರ ಕಾದಂಬರಿಗಳನ್ನು ಗಮನಿಸಿ. ಕಾರಂತರ ಅನೇಕ ಕಾದಂಬರಿಗಳಲ್ಲೂ ಪುರೋಹಿತಶಾಹಿಯನ್ನೆ ನೆಚ್ಚಿದ ಬ್ರಾಹ್ಮಣ ಕುಟುಂಬಗಳಿವೆ. ಅಲ್ಲಿಯೂ ಇಂಥ ಮದುವೆಗಳು, ಓಡಿಹೋಗುವುದು, ವಿಷಮಘಳಿಗೆಯಲ್ಲಿ ಕಾಲುಜಾರುವುದು ಎಲ್ಲ ಇದೆ. ಮಠದ ಸ್ವಾಮಿ, ಯೋಗಿ, ಸಂನ್ಯಾಸಿಗಳೆಲ್ಲ ಕಾರಂತರ ಹೆಚ್ಚಿನ ಕಾದಂಬರಿಗಳ ಭಾಗವೇ ಆಗಿದ್ದಾರೆನ್ನಬಹುದು. ಜಗದೋದ್ಧಾರನಾ ಕಾದಂಬರಿಯಲ್ಲಿ ವಿಷ್ಣುವಿನ ದಶಾವತಾರದ ಸಮಕಾಲೀನ ಅನುಸಂಧಾನವಿದ್ದರೆ ನಂಬಿದವರ ನಾಕ ನರಕದಲ್ಲಿ ಭಾವಾನಂದ ಸ್ವಾಮಿಗಳ ಮುಖವಾಡದ ಚಿತ್ರವಿದೆ. ಆಳ ನಿರಾಳದಲ್ಲಿ ಯಾತ್ರಾ ಡಿಲಕ್ಸ್ ಎಂಬ ತೀರ್ಥಯಾತ್ರೆಯ ರೈಲು ಪ್ರಯಾಣ ಜನಸಾಮನ್ಯರ ಬದುಕಿನ ಆಧ್ಯಾತ್ಮ, ಧಾರ್ಮಿಕ ಡಾಂಭಿಕತೆಯನ್ನು ಇನ್ನಿಲ್ಲದಂತೆ ಕಣ್ಣಿಗೆ ಕಟ್ಟುತ್ತದೆ.
ಬಾಲ್ಯ ಸಖನೋ ಸಹಪಾಠಿಯೋ ಅಥವಾ ಸ್ವಂತ ಊರಿನವನೋ ಆದ ಒಬ್ಬ ವ್ಯಕ್ತಿ ಪರಿಸ್ಥಿತಿ, ಜನರ ಮೌಢ್ಯಗಳನ್ನೇ ಬಂಡವಾಳ ಮಾಡಿಕೊಂಡು ದೂರದ ಯಾವುದೋ ಒಂದು ಊರಿನಲ್ಲಿ ದೊಡ್ಡ ಸಂತನ ಪಟ್ಟಕ್ಕೇರುವುದನ್ನೂ, ಈ ಬಾಲ್ಯದ ಗೆಳೆಯನಿಂದ, ಸಹಪಾಠಿಯಿಂದ ಅಥವಾ ಊರಿನವನಿಂದ ಎಲ್ಲಿ ತನ್ನ ನಿಜರೂಪ ಪತ್ತೆಯಾಗಿ ರಹಸ್ಯ ಬಯಲಾಗುವುದೋ ಎಂದು ಹೆದರುವುದನ್ನೂ ಅವರ ಅನೇಕ ಕಾದಂಬರಿಗಳಲ್ಲಿ ಕಾಣಬಹುದು. ಇದಕ್ಕೆ ಅವರ ನಿಜಜೀವನದ ಒಂದು ಘಟನೆಯೂ ಕಾರಣ ಎನ್ನುವವರಿದ್ದಾರೆ.
- Read more about ಕಾರಂತರು ಮತ್ತು ಧರ್ಮ
- 16 comments
- Log in or register to post comments
ಇಗೋ ಕನ್ನಡ
ಏಕಬೆಳೆ,ಪಾಮೆಣ್ಣೆ ಇಂತಹ ಬೇರೆ ಬೇರೆ ಭಾಷೆಗಳ ಶಬ್ದಗಳನ್ನು ಸಂಧಿ ಮಾಡುವುದು ಕನ್ನಡಕ್ಕೆ ಹೊಸದೇ? ಅಂತಹ ಪದಗಳು ಚಾಲ್ತಿಯಲ್ಲಿವೆಯೇ? ಓದಿ ಇಗೋ ಕನ್ನಡ
- Read more about ಇಗೋ ಕನ್ನಡ
- Log in or register to post comments
’ಮ’ಕಾರ ಬಳ್ಳಿಯಲ್ಲಿ ಮಾತೆಯ ಮಮಕಾರ
’ಮಾತೆ’ಯರ ದಿನದಂದು ಶ್ರೀವತ್ಸ ಜೋಷಿಯವರು ಅಮ್ಮನ ಮಮತೆಯ ವಿವಿಧ ಮಜಲುಗಳನ್ನು ನಮ್ಮ ಮುಂದಿರಿಸಿದ್ದಾರೆ. ಅಂದ ಹಾಗೆ ಅಮ್ಮ ಎನ್ನುವ ಶಬ್ದ ಹೆಚ್ಚಿನೆಲ್ಲಾ ಭಾಷೆಗಳಲ್ಲಿ ’ಮ’ಕಾರದೊಂದಿಗೆ ಥಳಕು ಹಾಕಿಕೊಂಡಿದೆಯಂತೆ. ಲೇಖನ ಓದಿ: ಅಮ್ಮ
- Read more about ’ಮ’ಕಾರ ಬಳ್ಳಿಯಲ್ಲಿ ಮಾತೆಯ ಮಮಕಾರ
- Log in or register to post comments
ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹತ್ತು
“ನಾನು ಹೀಗೆ ಸೆರೆಗೆ ಸಿಕ್ಕಿಬಿದ್ದೆ. ಜನ ಅದನ್ನು ಪ್ರೀತಿಯಲ್ಲಿ ಸಿಕ್ಕಿಬೀಳುವುದು ಅನ್ನುತ್ತಾರೆ. ಅವಳು ನನಗೆ ಪರಿಪೂರ್ಣ ಹೆಣ್ಣಿನಂತೆ ಕಂಡಳು. ಅವಳೆದುರು ನಾನು ಪರಿಶುದ್ಧ ಕಾಗೆಯಂತಿದ್ದೆ. ಈ ಲೋಕದಲ್ಲಿ ತನಗಿಂತ ಕೀಳಾದ ಹಾಳಾದ ಮನುಷ್ಯರು ಕಣ್ಣಿಗೆ ಬೀಳದಷ್ಟು ಪತಿತನಾದ ಮನುಷ್ಯ ಯಾರೂ ಇಲ್ಲ ಅನ್ನುವುದು ಪರಮ ಸತ್ಯ.
- Read more about ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹತ್ತು
- 1 comment
- Log in or register to post comments
ಕ್ರೂಟ್ಸರ್ ಸೊನಾಟಾ: ಅಧ್ಯಾಯ ಒಂಬತ್ತು
“ನಿಮಗೆ ಗೊತ್ತಾ” ಪಾಸ್ಡ್ನಿಶೆವ್ ಟೀಪುಡಿಯನ್ನೂ ಸಕ್ಕರೆ ಡಬ್ಬಿಯನ್ನೂ ಚೀಲಕ್ಕೆ ಹಾಕುತ್ತ ಕೇಳಿದ, “ನಿಮಗೆ ಗೊತ್ತಾ, ಜಗತ್ತನ್ನು ನರಳುವ ಹಾಗೆ ಮಾಡುವ ಹೆಣ್ಣಿನ ಶಕ್ತಿ ಈಗ ನಾನು ಹೇಳಿದ ಸಂಗತಿಗಳಿಂದಲೇ ಹುಟ್ಟಿದ್ದು.”
- Read more about ಕ್ರೂಟ್ಸರ್ ಸೊನಾಟಾ: ಅಧ್ಯಾಯ ಒಂಬತ್ತು
- Log in or register to post comments
ಕ್ರೂಟ್ಸರ್ ಸೊನಾಟಾ: ಅಧ್ಯಾಯ ಎಂಟು
“ಎಲ್ಲವೂ ಕರೆಕ್ಟಾಗಿ ಸೆಟ್ಟಾಗಿತ್ತು-ನನ್ನ ಪರಿಸ್ಥಿತಿ, ಅವಳ ಡ್ರೆಸ್ಸು, ನಮ್ಮ ಬೋಟಿಂಗು. ಬೋನಿಗೆ ಬಿದ್ದೆ. ಹಿಂದೆ ಇಪ್ಪತ್ತು ಸಾರಿ ತಪ್ಪಿಸಿಕೊಂಡಿದ್ದೆ, ಈಗ ಬಿದ್ದೆ. ಜೋಕು ಮಾಡುತ್ತಿಲ್ಲ. ಈಗಿನ ಕಾಲದ ಮದುವೆ ಅಂದರೆ ಬೋನು. ರೆಡೀ ಮಾಡಿಟ್ಟಿರುತ್ತಾರೆ. ಸಹಜವಾದ ಮದುವೆ ಹೇಗಿರುತ್ತದೆ?
- Read more about ಕ್ರೂಟ್ಸರ್ ಸೊನಾಟಾ: ಅಧ್ಯಾಯ ಎಂಟು
- Log in or register to post comments
ಕ್ರೂಟ್ಸರ್ ಸೊನಾಟಾ: ಅಧ್ಯಾಯ ಏಳು
“ಹೌದು. ಅವಳು ಧರಿಸಿದ್ದ ಜರ್ಸಿಗೆ, ಅವಳ ಉಡುಪಿನ ನಿರಿಗೆಗಳಿಗೆ, ಅವಳ ಗುಂಗುರುಕೂದಲಿಗೆ ಮರುಳಾದೆ, ಸೆರೆಯಾದೆ.
- Read more about ಕ್ರೂಟ್ಸರ್ ಸೊನಾಟಾ: ಅಧ್ಯಾಯ ಏಳು
- Log in or register to post comments