ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೆಹಲಿಯಲ್ಲಿ ಭಗವದ್ಗೀತಾ ಪ್ರವಚನ

ಆತ್ಮೀಯರೇ, ದಿನಾಂಕ ೨೬.೦೮.೨೦೦೬ ರಿಂದ ೩೦.೦೮.೨೦೦೬ರ ವರೆಗೆ ಸಂಜೆ ೬.೦೧೫ ರಿಂದ ೭.೩೦ರವೆರೆಗೆ ಖ್ಯಾತ ವಾಗ್ಮಿಗಳೂ ಹಾಗು ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ ಪಾತ್ರರೂ ಆದ ಶ್ರೀಬನ್ನಂಜೆ ಗೋವಿಂದಾಚಾರ್ಯರು ಭಗವದ್ಗೀತೆಯನ್ನು ಕುರಿತು ಶ್ರೀಮಧ್ವಾಚಾರ್ಯರ ಹಾಗು ಶ್ರೀರಾಘವೇಂದ್ರಸ್ವಾಮಿಗಳ ಜ್ಞಾನಕೌಶಲವನ್ನು ವಿವರಿಸುವ ಪ್ರವಚನವನ್ನು ಮಾಡಲಿದ್ದಾರೆ. ದೆಹಲಿ ನಗರದ ಕನ್ನಡಿಗರಿಗೆ ಇದೊಂದು ಸುಸಂದರ್ಭ. ಎಲ್ಲರಿಗೂ ಆದರದ ಸ್ವಾಗತ. ಸಂಪದಿಗರಲ್ಲಿ ಯಾರಾದರೂ ದೆಹಲಿಯಲ್ಲಿದ್ದರೆ ಈ ಕಾರ್ಯಕ್ರಮಕ್ಕೆ ತಪ್ಪದೇ ಆಗಮಿಸಬೇಕಾಗಿ ಮನವಿ.

ಇಲ್ಲದೆಯೂ ಇರುವವನ ಕಥೆ

ಸಾಮಿಯ ಮನೆಯ ಮೊದಲ ಮಹಡಿಯಲ್ಲಿ ಬಿಸಿಲಿಗೆ ಮೈಯೊಡ್ಡುವ ಸಂತೋಷಆತನ ಡಾರ್ಕ್‌ರೂಂ. ಆತ ಫೋಟೋ ಹಾಗೂ ವಿಡಿಯೋ ಕಲಾವಿದ. ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಬೇಕೆಂದೇ ಆತ ನೆಗೆಟಿವ್-ಫೋಟೋಗ್ರಫಿ ಮಾಡುತ್ತಿದ್ದ. ಆಧುನಿಕೋತ್ತರಕ್ಕೆ ಆತನದು ನೆಗೆಟಿವ್ ಪ್ರತಿಕ್ರಿಯೆ. ಆ ಡಾರ್ಕ್‌ರೂಂನಲ್ಲಿ ಚಜ್ಜೆಯನ್ನೆಲ್ಲ ಕಪ್ಪು ಬಟ್ಟೆಯಿಂದ ಮುಚ್ಚಿಬಿಟ್ಟಿದ್ದ. ಅಥವ ಕಪ್ಪು ಕೋಣೆಯನ್ನು ಡಾರ್ಕ್ ಬಟ್ಟೆಯಿಂದ ಮುಚ್ಚಿದ್ದ. ಆ ಹಳೆಯ ಕಾಲದ ಕಪ್ಪುಬಿಳುಪು ಛಾಯಾಚಿತ್ರವನ್ನು ಹಳೆಯ ಕಾಲದ್ದೆಂದು ಪರಿಣಾಮಕಾರಿಯಾಗಿ ಮೂಡಿಸಲು ಸಹಾಯಕ್ಕಾಗಿ ಅನೇಕ ಕಂಪ್ಯೂಟರ್‌ಗಳನ್ನೂ ಇರಿಸಿಕೊಂಡಿದ್ದ. ಗಾಂಧೀಜಿಯನ್ನು ಬಡತನದಲ್ಲಿ ಇರಿಸಲು ಭಾರತ ಸರ್ಕಾರವು ಸಾಕಷ್ಟು ಖರ್ಚು ಮಾಡಿದಂತಿತ್ತು ಇದು. ಸಂಸಾರಸ್ಥರ ಮನೆಯೊಂದರಲ್ಲಿ ಮೇಜು, ಕುರ್ಚಿ, ಟೀಪಾಯಿ, ಹೂದಾನಿಗಳಿದ್ದಂತೆ ಆ ಕೋಣೆಯ ತುಂಬೆಲ್ಲ ವೈರುಗಳು, 'ಮೌಸುಗಳು' (ಇಲಿಗಳಿಲ್ಲದಿದ್ದರೂ), ಫ್ಲಾಪಿಗಳು, ಡಿಸ್ಕ್‌ಗಳು ಮರದ ಬೇರುಗಳಂತೆ ಟಿಸಿಲೊಡೆದಿದ್ದವು. ಮುಂಚಿನ ವಾಕ್ಯದ ಪ್ರತಿಯೊಂದು ಪದಕ್ಕೂ ನಾನು 'ಗಳು' ಸಿಕ್ಕಿಸಿರುವುದಕ್ಕೆ ಕಾರಣ ಅಂತಹ ವಸ್ತುಗಳಲ್ಲಿ ಯಾವುವೂ ಒಂಟಿಯಾಗಿರಲಿಲ್ಲ.

ನಾಲ್ಕನೆ ಅಂತರರಾಷ್ಟ್ರೀಯ GPLv3 ಸಮ್ಮೇಳನ

ಆಗಸ್ಟ್ ೨೩, ೨೪ ರಂದು ನಾಲ್ಕನೆ ಅಂತರರಾಷ್ಟ್ರೀಯ GPLv3 (GNU Public license version 3) ಸಮ್ಮೇಳನ ಐ ಐ ಎಮ್ ಬೆಂಗಳೂರು, ಬನ್ನೇರುಘಟ್ಟ ರಸ್ತೆ - ಇಲ್ಲಿ ನಡೆಯಲಿದೆ.

ಜೀವನ

ಮೊನ್ನೆ ಸುಮ್ಮನೆ ಕುಳಿತಾಗ ತಲೆಯಲ್ಲಿ ಯೊಚನೆಯೊಂದು ಹೊಕ್ಕಿತು. ನಾನು ಜೊತೆಯಲ್ಲಿರಲು ಬಯಸುವ ವ್ಯಕ್ತಿ ಯಾರದರೂ ಇದ್ದಾರೆಯೆ? ಯೊಚಿಸಿದಾಗ ಕಂಡಿದ್ದು ಇದು: ಇದುವರೆಗೆ ನನ್ನ ಜೀವನದಲ್ಲಿ ನಾನು ಹೊಂದಿಕೊಳ್ಳಲಾಗದಂಥ ವ್ಯಕ್ತಿ ಸಿಕ್ಕಿಲ್ಲ ಮತ್ತು ನಾನು ಹೊಂದಿಕೊಳ್ಳುವ ಅವಶ್ಯಕತೆ ಇರದ ವ್ಯಕ್ತಿಯೂ ಸಿಕ್ಕಿಲ್ಲ...

'ಶಿಲೆಯೊಳಗಣ ಪಾವಕನಂತೆ'

ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಶಬ್ದದಂತೆ
ಗುಹೇಶ್ವರ, ನಿಮ್ಮ ಶರಣ ಸಂಬಂಧ

ಭಾಷೆಗೆ ಸಾಹಿತ್ಯೇತರ ಕೊಡುಗೆ

ಎಲ್ಲರಿಗೂ ಗೊತ್ತಿರುವ ವಿಷಯವಾದರೂ, ತಿರುಗಿ ನೆನಪಿಸಿಕೊಳ್ಳಬಹುದಾದದ್ದರಿಂದ ನಮೂದಿಸುತ್ತಿದ್ದೇನೆ. ಭಾಷೆಯೊಂದರ ಬೆಳವಣಿಗೆ ಕುರಿತು ಯೋಚಿಸುವಾಗ ಸಾಮನ್ಯವಾಗಿ ನಾವು ಸಾಹಿತಿಗಳನ್ನು ನೆನಪಿಸಿಕೊಳ್ಳುತ್ತೇವೆ. ಕವಿಗಳು, ಕತೆಗಾರರು, ವಿಶೇಷಜ್ನರುಗಳೆಲ್ಲ ನೆನಪಿಗೆ ಬರುತ್ತಾರೆ. ಇಂಥ ಸಂದರ್ಭದಲ್ಲಿ ನಮ್ಮ ಭಾಷೆಯ ಅಚ್ಚುಗಳನ್ನು ಮೊದಲಿಗೆ ತಯಾರಿಸಿದ, ಟೈಪರೈಟರಿನಲ್ಲಿ ಕನ್ನಡ ಅಳವಡಿಸಿದ, ಗಣಕಕ್ಕಾಗಿ ಕನ್ನಡ ತಂತ್ರಾಂಶಗಳನ್ನು ಹುಟ್ಟುಹಾಕಿದ, ಬಗೆಬಗೆಯ ಅಕ್ಷರ ಶೈಲಿಗಳನ್ನು ತಯಾರಿಸಿದ ಹಲವು ತಂತ್ರಜ್ನರನ್ನು ಭಾಷಾಬೆಳವಣಿಗೆಯ ದೃಷ್ಟಿಯಿಂದ ನೆನಪಿಸಿಕೊಳ್ಳುವುದು ಕಡಿಮೆ. ಹಲವು ಬರಹಗಾರರು, ತಂತಮ್ಮ ವಲಯಗಳಲ್ಲಿ ಬರೆದ ಪುಸ್ತಕಗಳು ಆಯಾ ವಲಯಗಳಲ್ಲಿ ನಮ್ಮ ಭಾಷೆ ಶ್ರೀಮಂತವಾಗುವಂತೇ ಮಾಡಿದ್ದಾರೆ. ಉದಾ: ಜಿ. ಟಿ. ನಾರಾಯಣ ರಾವ್ ವಿಜ್ನಾನ ಕುರಿತಾದ ಎಷ್ಟೆಲ್ಲ ಪುಸ್ತಕಗಳನ್ನು ಬರೆದಿದ್ದಾರೆ. ಎಚ್ಚೆಸ್ಕೆ ಅರ್ಥಶಾಸ್ತ್ರದ ಕುರಿತು ಬಹಳ ಬರೆದಿದ್ದಾರೆ. ಹೀಗೆ ಬರೆಯುತ್ತ ಇವರುಗಳು ಕನ್ನಡದಲ್ಲಿ ಆಯಾ ಕ್ಷೇತ್ರದ ಪರಿಭಾಷೆಗಳು ತಯಾರಾಗುವಂತೇ ಮಾಡಿದ್ದಾರೆ. ಹೀಗೆ ಬಹಳ ಜನರಿದ್ದಾರೆ. ಕನ್ನಡ ಭಾಷೆ ಆಧುನಿಕ ಜ್ನಾನವಲಯಗಳಲ್ಲಿ ತನ್ನದೇ ಶಬ್ದಗಳನ್ನು ಬೇಕಿದ್ದಷ್ಟು ಹೊಂದಿಲ್ಲವಾದರೂ, ತಂತ್ರಾಂಶಗಳನ್ನು ಬೇಕಿದ್ದಷ್ಟು ಹೊಂದಿಲ್ಲವಾದರೂ, ಆ ದಿಕ್ಕಿನಲ್ಲಿ ಕೆಲಸ ಮಾಡಿದವರನ್ನು ನಾವು ನೆನಪಿಸಿಕೊಳ್ಳುತ್ತಿರುವುದು ಒಳ್ಳೆಯದು.

ಮಿಸ್ಸಿಂಗ್ ಲಿಂಕ್ :)

ಸಬ್ಮಿಶನ್ ಕ್ಯೂ ಎನ್ನುವ ಕೊಂಡಿಗೆ ಈ ಉತ್ತರ ಬರ್ತಾ ಇದೆ. ದಯವಿಟ್ಟು ಸ್ವಲ್ಪ ನೋಡಿ.

Fatal error: Call to undefined function: tablesort_pager() in /home/hpnadig/public_html/modules/queue/queue.module on line 140

ಭಾರತೀಯ ರೈಲುಗಳ ಹೆಸರುಗಳು

ನಾನೋರ್ವ ಹವ್ಯಾಸೀ ರೈಲು ಪ್ರಯಾಣಿಕ. ಯಾವ ಜಾಗದಿಂದ ಹೊರಡುವ ರೈಲು ಯಾವ ಜಾಗ ತಲುಪುತ್ತದೆ? ಯಾವ ಹೆಸರಿನ ರೈಲು ಎಲ್ಲೆಲ್ಲಿಗೆ ಹೋಗುತ್ತದೆ? ಅದಕ್ಕೆ ಯಾವ ರೀತಿಯ ಇಂಜಿನ್ನು ಜೋಡಣೆಯಾಗಿರುತ್ತದೆ? ಅದನ್ನು ಮಾಡುವರ್ಯಾರು ಎಂದೆಲ್ಲ ವಿಚಾರಗಳನ್ನು ಮಾಡುತ್ತಾ ಕೂಡುವುದೆಂದರೆ ನನಗೆ ಬಲು ಖುಷಿ. ಜಗತ್ತಿನಲ್ಲೇ ಅದ್ಭುತವಾದ ಸಂಚಾರೀ ಜಾಲವನ್ನು ಹೊಂದಿರುವೆ ನಮ್ಮ ಭಾರತೀಯ ರೈಲ್ವೇ, ಊಹಿಸಿಕೊಳ್ಳಲೂ ಆಗದಂತಹ ಜಾಗಗಳಿಗೆಲ್ಲ ಹಳಿಗಳನ್ನು ಹಾಯಿಸಿ ತನ್ನ ತಾಣಗಳನ್ನು ನಿರ್ಮಿಸಿದೆ. ರೈಲ್ವೇ ಕಾರ್ಯ ವಿಧಾನಗಳ ಬಗ್ಗೆ ಬರೆದಷ್ಟೂ ವಿಷಯಗಳು ದೊರಕುತ್ತಾ ಹೋಗುತ್ತವೆ. ಕುತೂಹಲ ಹುಟ್ಟಿಸುವುದೆಂದರೆ ಉಗಿಬಂಡಿಯ ನಾಮಕರಣದ ಕೆಲಸ. ಎಕ್ಸ್ ಪ್ರೆಸ್ ರೈಲುಗಳಿಗೆ ನಾಮಕರಣ ಮಾಡುವ ಜವಾಬ್ದಾರಿ ಯಾರದ್ದೆಂದು ನನಗೆ ಇನ್ನೂ ಗೊತ್ತಾಗಿಲ್ಲವಾದರೂ, ಈ ಹೆಸರುಗಳನ್ನು ಇಡುವ ವ್ಯಕ್ತಿಗಳ ಬೌದ್ಧಿಕಮಟ್ಟ ಹಾಗು ಸೌಂದರ್ಯಪ್ರಜ್ಞೆ ತುಂಬ ಶ್ಲಾಘನೀಯ ಎಂದು ಎಕ್ಸ್ ಪ್ರೆಸ್ ರೈಲುಗಳ ಹೆಸರು ನೋಡಿದರೆ ಗೊತ್ತಾಗುತ್ತದೆ. ಮೊನ್ನೆ ಸುಮ್ಮನೆ ಕುಳಿತುಕೊಂಡಿದ್ದಾಗ ಸಂಪದದ ಜೊತೆಗಾರರಿಗೂ ಒಂದಿಷ್ಟು ಮಾಹಿತಿಯನ್ನು ಕೊಡಬಹುದೆನಿಸಿತು. ಸುಂದರವಾದ ರೈಲಿನ ಹೆಸರುಗಳನ್ನು ಒಂದಿಷ್ಟು ಪಟ್ಟಿ ಮಾಡಿದೆ. ಇಂಗ್ಲೀಷಿನಲ್ಲಿಯೇ ಇದೆ ಪಟ್ಟಿ. ಉಪಯುಕ್ತವೆನಿಸಿದರೆ ನಿಮ್ಮ ಪರಿಚಯದವರಿಗೂ (ಕನ್ನಡಿಗರಲ್ಲದಿದ್ದರೂ) ಕೊಡಿ.

ಸೈಬರ್‍ ಕೆಫೆಗಳಲ್ಲಿ ಕನ್ನಡದ ಅಗತ್ಯತೆ ಬಗ್ಗೆ ಅನಂತಮೂರ್ತಿಯವರ ಹೇಳಿಕೆ

ಗೆಳೆಯರೆ,

೧೮, ಆಗಸ್ಟ್, ೨೦೦೬ರ ವಿಜಯ್ ಟೈಂಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ, ಶ್ರೀಯುತ ಅನಂತಮೂರ್ತಿಯವರ ಸಂದರ್ಶನದಲ್ಲಿ, ಅವರು ಸೈಬರ್‍ ಕೆಫೆಗಳಲ್ಲಿ ಕನ್ನಡ ತಂತ್ರಾಂಶಗಳನ್ನು ಸ್ಥಾಪಿಸಬೇಕಾದ ತುರ್ತು ಅಗತ್ಯದ ಬಗೆಗೆ ಮಾತನಾಡಿದ್ದಾರೆ. ಇದನ್ನು ಕನ್ನಡಸಾಹಿತ್ಯ.ಕಾಂ ನ ಸಂಪಾದಕೀಯ ಪುಟದಲ್ಲೂ ಉದ್ಧರಿಸಲಾಗಿದೆ.