ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಮ್ಮ ಪುಟ್ಟ ಪಾಪಚ್ಚಿ- ಸಂಪದೆ !

ನಮ್ಮ ಪುಟ್ಟ ಪಾಪಚ್ಚಿ- ಸಂಪದೆ !

ಪ್ರತಿ ಕಾಲಘಟ್ಟದಲ್ಲಿ ನಿಂತು ಈ ವಿಸ್ಮಯ ಜಗತ್ತನ್ನು ವೀಕ್ಷಿಸಿದಾಗ ಅದರ ವಿಸ್ತಾರದ ಅರಿವಾಗುತ್ತದೆ. ಕೆಲವೊಂದು ವಿದ್ಯಮಾನಗಳಲ್ಲಿ ಪ್ರಕೃತಿದತ್ತವಾದ ಹಲವು ಮಾರ್ಪಾಟುಗಳು ನಮ್ಮ ಗಮನವನ್ನು ಸೆಳೆಯುತ್ತವೆ. ನಮ್ಮ ಅರಿವಿಲ್ಲದೆಯೇ ಆಗುವ ನಿರಂತರ ಬದಲಾವಣೆಗಳೊಂದೆಡೆಯಾದರೆ, ಇನ್ನು ಕೆಲವು ಮಾರ್ಪಟುಗಳನ್ನು ನಾವೇ ಕಾಲಕಾಲಕ್ಕೆ ಮಾಡುವ ಅನಿವಾರ್ಯತೆಯನ್ನು ಮನಗಾಣುತ್ತೇವೆ. ಎಲ್ಲಾ ಬೆಳೆಯುತ್ತಿರುವ ಜೀವಕೋಟಿಗಳೆಲ್ಲಾ ಮಾಡಲೇಬೇಕಾದ ಪ್ರಕ್ರಿಯೆ ಇದು ! ಇವನ್ನೇ ನಾವು ಜೀವಂತಿಕೆಯ ಸಾಕ್ಷಿಯ ಪ್ರತೀಕಗಳೆಂದು ಕರೆಯುವುದು ಕೂಡ ! ಅಂತಹ ಚಿಕ್ಕ ಬದಲಾವಣೆ ನಮ್ಮ 'ಸಂಪದ' ದಲ್ಲೂ ಮೂಡಿಬಂದಿದೆ. ಶ್ರೀಯುತ. ನಾಡಿಗರು ಅದನ್ನು ಅತ್ಯಂತ ಪ್ರಭಾವಶಾಲಿಯಾಗಿ ನಿರ್ವಹಿಸಿರುವುದು ನಿಜಕ್ಕೂ ಶ್ಲಾಘನೀಯ ! ಸಂಪದದ ಬಳಗದ ಎಲ್ಲಾ ಸದಸ್ಯರಿಗೂ 'ಶುಭ'ಕೋರಿ ಈ ಹೊಸ ದಿಟ್ಟ ಹೆಜ್ಜೆಯನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತೇನೆ. ನನ್ನ ಪ್ರೀತಿಯ ಕಾಣಿಕೆಯಾಗಿ ಈ ಕವಿತೆಯನ್ನು ಈ ಸಂದರ್ಭದಲ್ಲಿ 'ಆಶೀರ್ವಾದಪೂರ್ವಕವಾಗಿ' ಸಮರ್ಪಿಸುತ್ತಿದ್ದೇನೆ. ಆಶೀರ್ವಾದವನ್ನು ಬೇಡವೆನ್ನುವ ಪರಿಪಾಟ ನಮ್ಮ ಭಾರತೀಯ ಸಂಸ್ಕೃತಿಯಲ್ಲಿಲ್ಲ !

ಚುರುಮುರಿ ಸವಿಯಲು ಇನ್ನು ಮೈಸೂರಿಗೆ ಹೋಗಬೇಕಿಲ್ಲ...

...ಈಗ [:http://churumuri.wordpress.com/|ಅಂತರಜಾಲದಲ್ಲೇ‌ ಅದು ಲಭ್ಯವಿದೆ] ;)

ಪ್ರತಿನಿತ್ಯ ಈ ಬ್ಲಾಗ್ನಲ್ಲಿ ಒಂದಷ್ಟು ಬಹಳ ಚೆನ್ನಾಗಿರುವ ಲೇಖನಗಳು ಮೂಡಿಬರುತ್ತಿವೆ. ಈ‌ ಬ್ಲಾಗು ಓದುವಾಗ ನಾನು ರೆಗ್ಯುಲರ್ ಆಗಿ ಓದುವ [:http://www.sepiamutiny.com/sepia/|sepia mutiny] ಜ್ಞಾಪಕಕ್ಕೆ ಬರುತ್ತದೆ. ಚುರುಮುರಿ ಬ್ಲಾಗ್ ಸಮೂಹವನ್ನು ಮೈಸೂರು ಮ್ಯುಟಿನಿ ಎನ್ನೋಣವೆ ಅಂತ ಅನ್ನಿಸಿದ್ದೂ ಉಂಟು ;)

'ಹರಿಣಿ'ಯವರ ವ್ಯಂಗಚಿತ್ರಗಳು ಈಗ ಅಂತರಜಾಲದಲ್ಲಿ...

[:http://harinigallery.blogspot.com/] ‌ನೋಡಿ :)

ಈಗ 'ಸುಧಾ 'ತರಂಗ'ಗಳಲ್ಲಿ ಇವರು ಬರೆಯುತ್ತಾರೋ ಇಲ್ಲವೋ ತಿಳಿಯದು, ಆದರೆ ೫-೬ ವರ್ಷಗಳ ಹಿಂದೆ ಈ ಪತ್ರಿಕೆಗಳಲ್ಲಿ ಬರುತ್ತಿದ್ದ ಇವರ ವ್ಯಂಗ್ಯಚಿತ್ರಗಳನ್ನು ತುಂಬಾ ಫಾಲೋ ಮಾಡ್ತಾ ಇದ್ದೆ.

ಬಿಡುವಿನ ವೇಳೆಯಲ್ಲಿ ಒಂದಿಷ್ಟು ಕನ್ನಡ ಸೇವೆ

ನಾನು ಕಳೆದ ೩೭ ವರ್ಷಗಳಲ್ಲಿ ಹೆಚ್ಚಿನ ಸಮಯವನ್ನು ಓದುತ್ತಲೇ ಕಳೆದಿದ್ದೇನೆ. ( ಬರೆಯಲು ಜಾಣತನ ಬೇಕೇ ಹೊರತು ಓದಲು ಬೇಕಿಲ್ಲವಷ್ಟೆ? ) ಈವರೆಗೆ ಓದಿ ತಲೆಯಲ್ಲಿ ತುಂಬಿಕೊಂಡ ವಿಚಾರಗಳನ್ನು 'ಸಂಪದ'ದಲ್ಲಿ ಈವರೆಗೆ ಬರೆದು ತಲೆಯನ್ನು ಕೊಡವಿಕೊಂಡದ್ದಾಯಿತು. ಈ ಸಮಯದಲ್ಲಿ ಶ್ರೀ ಟಿ. ವಿ. ಶ್ರೀನಿವಾಸ ಅವರು ( ' ಸಂಪದ'ದ ಮೂಲಕವೇ ಅವರ ಪರಿಚಯವಾದದ್ದು ) ಕನ್ನಡಸಾಹಿತ್ಯ.ಕಾಂ ನ ಕುರಿತು ತಿಳಿಸಿದರು . ಅವರಿಗೆ ಬರಹಗಳನ್ನು ತಿದ್ದುವ ವಾಲಂಟೀರ್- ಸ್ವಯಂಸೇವಕರ ಅಗತ್ಯ ಇದೆ. ಎಂದು ತಿಳಿಸಿದರು .

ಒಳ್ಳೆಯ ವ್ಯಂಗ್ಯಚಿತ್ರಗಳು

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ , ಒಳ್ಳೆಯ ವ್ಯಂಗಚಿತ್ರಗಳ ಸಮೃದ್ಧಿಯಿತ್ತು. ಆಗ ಸುಧಾ , ಮಯೂರ , ತುಷಾರಗಳಲ್ಲಿ ಕೆ. ಆರ್. ಸ್ವಾಮಿ ,ನಾಡಿಗ್ , ಶ್ರೀಧರ್ , ರಾವ್ ಬೈಲ್ ಮುಂತಾದವರ ಶ್ರೇಷ್ಠ ವ್ಯಂಗ್ಯಚಿತ್ರಗಳು ಕಾಣಸಿಗುತ್ತಿದ್ದವು . ಪ್ರಜಾವಾಣಿಯಲ್ಲಿ ಆರ್‍.ಕೆ. ಮೂರ್ತಿಯವರ ರಾಜಕೀಯ ವ್ಯಂಗ್ಯಚಿತ್ರಗಳಿರುತ್ತಿದ್ದವು . ಈಗ ಅವರೆಲ್ಲ ಎಲ್ಲಿ ಹೋದರೋ ? ಹೊಸಬರು ಏಕೆ ಬರಲಿಲ್ಲವೋ ? ಈಗ ವ್ಯಂಗ್ಯಚಿತ್ರಗಳಲ್ಲಿ ಸಾಧಾರಣ ಎಂಬ ಮಟ್ಟದ್ದೂ ಕಾಣುವದಿಲ್ಲ.

'ಸಿರಿಗನ್ನಡಂ ಗೆಲ್ಗೆ' ಯಲ್ಲಿ ತಮಿಳು ಪ್ರಭಾವ?

ಮೇ ೨೦೦೬ ತುಷಾರ ಹಾಸ್ಯ ವಿಶೇಷಾ?ಕವಾಗಿ ಬಂದಿದೆ. ಅದರೆ ಅದರಲ್ಲಿ ಹಾಸ್ಯವನ್ನು ಹುಡುಕಬೇಕು! ನನಗೆ ಎರಡೇ ಎರಡು ಪುಟ್ಟ ನಗೆಹನಿಗಳು ಸಿಕ್ಕವು!!

ದೋಷ : ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಸಂಪದ ಸರಿಯಾಗಿ ಮೂಡಿ ಬರುತ್ತಿಲ್ಲ

ಸಂಪದ ನಿರ್ವಾಹಣ ಸಮೂಹಕ್ಕೆ ವಂದನೆಗಳು.

ಸಂಪದದ ಹೊಸ ವಿನ್ಯಾಸ ಚೆನ್ನಾಗಿದೆ, ಶುಭಾಷಯಗಳು!!. ಆದರೆ ಈ ವಿನ್ಯಾಸ ಸಧ್ಯಕ್ಕೆ ಅತ್ಯಂತ ಜನಪ್ರಿಯ ಜಾಲದರ್ಶಕವೆಂದೆನಿಸಿಕೊಂಡಿರುವ ಮೈಕ್ರೋಸಾಫ್ಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಸರಿಯಾಗಿ ಮೂಡಿ ಬರುತ್ತಿಲ್ಲ. ಸಂಪದದ ಹೊಸ ಆವೃತ್ತಿ ಇನ್ನೂ ನಿರ್ಮಾಣ ಹಂತದಲ್ಲಿರುವುದು ನನಗೆ ತಿಳಿದಿದೆ ಆದರೂ ಈ ವಿಷಯ ನಿಮ್ಮ ಗಮನಕ್ಕೆ ತರುವುದು ಸೂಕ್ತವೆಂದೆನಿಸಿತು. ಸಧ್ಯದಲ್ಲಿಯೆ ಈ ಬಗ್ಗೆ ಕ್ರಮ ಕೈಗೊಳ್ಳುವಿರೆಂದು ಆಶಿಸುತ್ತೇನೆ.

ಬೇಸಿಗೆ

ಈಗ ಬೆಂಗಳೂರು ಬೇಸಿಗೆ = ಶಿವಮೊಗ್ಗ, ಮೈಸೂರು ಬೇಸಿಗೆ!

ಬೆಂಗಳೂರಿನಲ್ಲಿ ಬೇಸಿಗೆಯೇ ಇರುತ್ತಿರಲಿಲ್ಲವಂತೆ! ಶಿವಮೊಗ್ಗಕ್ಕೆ ಬರುತ್ತಿದ್ದ ನಮ್ಮ cousinಉ ಯಾವಾಗಲೂ ಬೆಂಗಳೂರಿನ ಗುಣಗಾನ ಮಾಡುತ್ತಿದ್ದ. ಆದರೆ ನಾವುಗಳು ಬೆಂಗಳೂರು ಸೇರುವಷ್ಟರಲ್ಲಿ ಬೇಸಿಗೆಯಲ್ಲಿ ಬೆಂದು ಹೋಗುವಷ್ಟು ಬಿಸಿಲು ಬೆಂಗಳೂರಿನಲ್ಲಿಯೂ ಇತ್ತು.

ತಂತ್ರಾಂಶಿಗಳು ಎದುರಿಸುತ್ತಿರುವ ತೊಂದರೆಗಳು

ಕೆಲಸ ಮಾಡದೇ ದುಡಿಮೆ ಇಲ್ಲ. ದುಡಿಮೆ ಇಲ್ಲದೇ ಬಾಳಿಲ್ಲ. ದೈಹಿಕವಾಗಿ ಕೆಲಸ ಮಾಡಿ ದುಡಿಯುವವರೂ ಇದ್ದಾರೆ ಮತ್ತು ಮಾನಸಿಕವಾಗಿ ಕೆಲಸ ಮಾಡಿ ದುಡಿಯುವವರು ಇದ್ದಾರೆ. ದೈಹಿಕವಾಗಿ ಕೆಲಸ ಮಾಡುವವರನ್ನು ಸಾಮಾನ್ಯ ಭಾಷೆಯಲ್ಲಿ ಕೂಲಿಗಳೆಂದು ಕರೆಯುವುದು ವಾಡಿಕೆ. ಅವರ ಕೆಲಸ ನಿರ್ವಹಣೆಯಲ್ಲಿ ಬುದ್ಧಿಯ ಉಪಯುಕ್ತತೆ ಅಷ್ಟಾಗಿ ಬೇಕಿಲ್ಲ. ಆದರೆ ಮಾನಸಿಕವಾಗಿ ದುಡಿಯುವವರಿಗೆ ಬುದ್ಧಿಯ ಉಪಯೋಗವೇ ಪ್ರಧಾನವಾದದ್ದು.