ಮಂಗಲ್ ಪಾಂಡೆ...ನಾನು ನೋಡಿದ ಚಿತ್ರ
- Read more about ಮಂಗಲ್ ಪಾಂಡೆ...ನಾನು ನೋಡಿದ ಚಿತ್ರ
- 4 comments
- Log in or register to post comments
www.anilkumarha.com
"ದಯವಿಟ್ಟು ಇಲ್ಲಿ ಸ್ವಲ್ಪ ಬಸ್ ನಿಲ್ಲಿಸಿ"
"ಇಲ್ಲ ಮೇಡಂ. ಇಲ್ಲಿ ನಿಲ್ಲಿಸುವಂತಿಲ್ಲ. ಆಗಲೇ ಅಲ್ಲೊಂದು ಸ್ಟಾಪಿನ ಬಳಿ ನಿಲ್ಲಿಸಿದ್ದೆ. ನೀವು ನಿದ್ರಿಸುತ್ತಿದ್ದಿರಿ"
"ದಯವಿಟ್ಟು ನಿಲ್ಲಿಸಿ. ಇಲ್ಲಿ ನನ್ನ ತಾಯಿ ಕಾಯುತ್ತಿದ್ದಾಳೆ. ಕೊನೆಯ ಸ್ಟಾಪ್ ವಿಕ್ಟೋರಿಯದಲ್ಲಿ ಇಳಿದರೆ ಇಲ್ಲಿಗೆ ವಾಪಸು ಬರಲು ನನ್ನಲ್ಲಿ ಹಣವೂ ಇಲ್ಲ"
ಫಿಯರ್ ಆಫ್ ಫ್ರೀಡಂ ಎಂಬುದು ಎರಿಕ್ ಫ್ರಾಂ ಎಂಬ ಲೇಖಕನ ಒಂದು ಪುಸ್ತಕದ ಹೆಸರು. ನಿಜವಾಗಿ ನಮಗೆಲ್ಲ ಸ್ವಾತಂತ್ರ್ಯವೆಂದರೆ ಭಯ. ಸ್ವಂತವಾಗಿ ಆಲೋಚಿಸುವ, ಕ್ರಿಯೆಯಲ್ಲಿ ತೊಡಗುವ, ನಮ್ಮ ಕ್ರಿಯೆಗಳಿಗೆ, ಬದುಕಿಗೆ ನಾವೇ ಜವಾಬ್ದಾರರಾಗುವ ಸ್ವಾತಂತ್ರ್ಯವನ್ನು ಹೊಂದುವುದಕ್ಕೆ ನಮಗೆಲ್ಲ ಭಯ. ಹಿರಿಯರು ಹೇಳಿದಂತೆ, ನಮ್ಮ ಸಂಸ್ಕೃತಿ ಹೇಳಿದಂತೆ, ಶಿಕ್ಷಣ ಕಲಿಸಿದಂತೆ, ನಮ್ಮ ಸುತ್ತಲ ಹತ್ತು ಜನ ಇರುವಂತೆ ಬದುಕುವುದು ನಮಗೆಲ್ಲ ಸುಲಭ ಮತ್ತು ಇಷ್ಟ. ಸ್ವತಂತ್ರವಾಗಬೇಕೆಂಬ ಆಸೆ, ಕಲ್ಪನೆಗಳು ಮಾತ್ರ ನಮ್ಮಲ್ಲಿವೆ. ನಮ್ಮ ಪ್ರತಿಯೊಂದು ಕೆಲಸಕ್ಕೂ ನಮ್ಮ ಮನಸ್ಸು ಸಮರ್ಥನೆಯನ್ನು ಹುಡುಕುತ್ತಲೇ ಇರುವಾಗ, ಬೇರೆಯವರ ಒಪ್ಪಿಗೆಯನ್ನು ಅಪೇಕ್ಷಿಸುತ್ತ ನಿರೀಕ್ಷಿಸುತ್ತ ಇರುವಾಗ ಸ್ವತಂತ್ರವಾಗುವುದು ಹೇಗೆ ಸಾಧ್ಯ? ಸ್ವತಂತ್ರವಾಗಿರುವಂತೆ ತೋರಿಸಿಕೊಳ್ಳುವವರನ್ನು ಒಪ್ಪುತ್ತೇವೆ, ನಿಜವಾಗಿ ಸ್ವತಂತ್ರವಾಗಿರುವವರನ್ನು ದ್ವೇಷಿಸುತ್ತೇವೆ, ಅಲ್ಲವೆ?
ಝೆನ್ ಸಂನ್ಯಾಸಿನಿ ಎಶುನ್ ಅರುವತ್ತು ವರ್ಷ ದಾಟಿದ್ದಳು. ಈ ಲೋಕವನ್ನು ಬಿಡುವ ಕಾಲ ಬಂದಿತ್ತು. ಶಿಷ್ಯರನ್ನೆಲ್ಲ ಕರೆದು ಅಂಗಳದಲ್ಲಿ ಸೌದೆಗಳನ್ನು ಜೋಡಿಸುವಂತೆ ಹೇಳಿದಳು.
ಸೌದೆಗಳ ನಡುವೆ ಸ್ಥಿರವಾಗಿ ಕುಳಿತು ಕಟ್ಟಿಗೆ ರಾಶಿಗೆ ಬೆಂಕಿ ಇಕ್ಕುವಂತೆ ಹೇಳಿದಳು. ಬೆಂಕಿ ಉರಿಯಿತು.
"ಬೆಂಕಿ ಸುಡುತ್ತಿಲ್ಲವೇ?" ಎಂದು ಸಂನ್ಯಾಸಿಯೊಬ್ಬ ಕೂಗಿ ಕೇಳಿದ.
"ನಿನ್ನಂಥ ಮೂರ್ಖನಿಗೆ ಮಾತ್ರ ಇಂಥ ಪ್ರಶ್ನೆ ಹೊಳೆಯುತ್ತದೆ" ಎಂದಳು ಎಶುನ್.
ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬಂದಂತೆ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಾವುಟಗಳು ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತವೆ. ಟ್ರಾಫಿಕ್ ಸಿಗ್ನಲ್ ಗಳ ಬಳಿ ದಿನಪತ್ರಿಕೆಗಳನ್ನೋ ಮತ್ತೇನನ್ನೋ ಮಾರುವ ಹುಡುಗರ ಕೈಯಲ್ಲಿ ಪ್ಲಾಸ್ಟಿಕ್ ಬಾವುಟಗಳು ಮಾರಾಟಕ್ಕೆಂದು ರಾರಾಜಿಸುತ್ತವೆ. ಕೆಲೆವೆಡೆ ಪೆಟ್ರೋಲ್ ಬಂಕುಗಳ ಬಳಿಯೂ ಹಿಡಿದು ನಿಂತಿರುತ್ತಾರೆ. ಚಿಣ್ಣರಿಗೆ ಇದು ಬೇಕೇ ಬೇಕು!
ಅಮೆರಿಕಾಕ್ಕೆ ಹೋದ ಮೊಟ್ಟಮೊದಲ ಝೆನ್ ಗುರು ಸೋಯೆನ್ ಶಾಕು "ನನ್ನ ಹೃದಯ ಬೆಂಕಿಯಂತೆ ಉರಿಯುತ್ತಿದೆ, ನನ್ನ ಕಣ್ಣು ಮಾತ್ರ ಬೂದಿಯ ಹಾಗೆ ತಣ್ಣಗಿದೆ" ಎಂದ. ಅವನು ಕೆಲವು ನಿಯಮಗಳನ್ನಿಟ್ಟುಕೊಂಡು ಹಾಗೆಯೇ ಬದುಕಿದ್ದ. ಆ ನಿಯಮಗಳು ಇವು:
ಬೆಳಗ್ಗೆ ಎದ್ದು ಬಟ್ಟೆ ಹಾಕಿಕೊಂಡು ಸಿದ್ಧವಾಗುವ ಮೊದಲು ಧೂಪವನ್ನು ಹಾಕಿ ಧ್ಯಾನಮಾಡು.
ನಿಗದಿಯಾದ ಸಮಯದಲ್ಲಿ ಮಲಗು. ನಿಗದಿಯಾದ ಹೊತ್ತಿನಲ್ಲಿ ಊಟಮಾಡು. ಹೊಟ್ಟೆ ತುಂಬಿ ತೃಪ್ತಿಯಾಗುವಷ್ಟು ತಿನ್ನಬೇಡ.
ಇಂಗ್ಲಿಷ್ ಭಾಷೆಯನ್ನು ಯಾವ ತರಗತಿಯಿಂದ ಕಲಿಸಬೇಕು ಎಂಬ ಚರ್ಚೆಗೆ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಭಾಷಾ ಬೋಧನೆಯ ಸಾಧ್ಯತೆ ಮತ್ತು ಮಿತಿಗಳನ್ನು ಅರಿತವರಿಗಿಂತ ಹೆಚ್ಚಾಗಿ ಇಡೀ ವಿಷಯವನ್ನು ಭಾವನಾತ್ಮಕವಾಗಿ ಗ್ರಹಿಸಿದವರು ಮಾತ್ರ ಈ ವಿಷಯದ ಚರ್ಚೆಯ ಮುಂಚೂಣಿಯಲ್ಲಿದ್ದಾರೆ. ಪರಿಣಾಮವಾಗಿ ಯಾವುದು ಚರ್ಚೆಯಾಗಬೇಕಿತ್ತೋ ಅದು ಚರ್ಚೆಯಾಗದೆ ಕನ್ನಡದ ಬಳಕೆ ಎಂಬುದು ವರ್ಗ, ವರ್ಣ, ಜಾತಿ ಮುಂತಾದುವುಗಳ ಚರ್ಚೆಯಾಗಿ ಬದಲಾಗುತ್ತಿದೆ. ಭಾಷೆಯೊಂದರ ಕಲಿಕೆಯ ಹಿಂದೆ ಈ ಎಲ್ಲಾ ಸಾಮಾಜಿಕ ಅಸಮಾನತೆಗಳು ಪರಿಣಾಮ ಬೀರುತ್ತವೆಯಾದರೂ ಕೇವಲ ಅವುಗಳನ್ನಷ್ಟೇ ಪರಿಗಣಿಸಿ ಭಾಷೆಯೊಂದರ ಕಲಿಕೆಗೆ ಸಂಬಂಧಿಸಿದ ನೀತಿ ರೂಪಿಸಲು ಸಾಧ್ಯವಿಲ್ಲ.
ಯೋಗವೆಂದರೆ ಆಸನಗಳಲ್ಲ. ಆಸನಗಳು ಪತಂಜಲಿಯ ೮ ಅಂಗಗಳುಳ್ಳ ಅಷ್ಟಾಂಗಯೋಗದ ಒಂದು ಭಾಗ ಮಾತ್ರ. ಆದರೆ ರೂಢಿಯಲ್ಲಿ ಯೋಗ ಎಂದರೆ ಆಸನಗಳು ಎಂಬ ತಪ್ಪು ಅಭಿಪ್ರಾಯ ಮೂಡಿದೆ. ಸರಿಯಾಗಿ ಹೇಳಬೇಕೆಂದರೆ ಅದು ಯೋಗಾಸನ ಮಾತ್ರ. ಮನಸ್ಸಿನ ನಿಯಂತ್ರಣ ಹಾಗೂ ವೃತ್ತಿಗಳು ಮನಸ್ಸಿನಲ್ಲಿ ಏಳುವುದನ್ನು ಕಮ್ಮಿಮಾಡಿ ಕೊನೆಗೆ ಅದರ ನಿರೊಧವೇ ಪತಂಜಲಿಯ ಯೋಗ. ಪತಂಜಲಿಯ ಯೋಗ ಸೂತ್ರಗಳಲ್ಲಿ ನಾಲ್ಕು ಪಾದಗಳಿವೆ.