ಆಸೆ

ಆಸೆ

ಕವನ

ಬುದ್ಧದೇವನ ಮಾತು "ಆಸೆ ದುಃಖಕ್ಕೆ ಮೂಲ"

ಆಪ್ಯಾಯಮಾನ ನುಡಿ ಸಾರ್ವಕಾಲಿಕ ಸತ್ಯ;

 

ಆದರೂ.....

ನನಗೊಂದು ' ಆಸೆ ' ದುರಾಸೆಯಲ್ಲ.....

ಸಮಾಜಕ್ಕೊಂದು ' ಸೇವೆ ' ಮಾಡುವಾಸೆ.

ಗುರಿ ಹಿಡಿದು ನಡೆದೆ ದಾರಿಯಲಿ

ಮಳೆ ಬಿಸಿಲೆನ್ನದೆ, ಕಲ್ಲು ಮುಳ್ಳುಗಳ ದಾಟುತ್ತಲಿ...

ಮೂದಲಿಸಿದರು ಹುಚ್ಚನೆಂದರು ಕೆಲವರು

ಮನನೋಯಿಸಿದರು ಅಪಮಾನ ಅವಮಾನದಲಿ!

ನೋಬಲ್ ವಿಜ್ಞಾನಿ ಆರ್ಕಿಮಿಡಿಸ್ ನೆನಪಾದನು

' ಆ ' ಮಹಾ ವಿಜ್ಞಾನಿಗೂ ಹುಚ್ಚನೆಂದಿದ್ದಾರೆಂದು !

ನನಗೆ ನಾನೇ ಸಮಾದಾನಿಯಾದೆ

ಮತ್ತೆ ಹೊರಟೆ ' ಆ ' ಆಸೆಗೆ ....... ||

 

ಹಳ್ಳಿಯ ಮುಗ್ಧನೊಬ್ಬ ; ನೋಡಿದ ತಡೆದ ಮಾತಾಡಿದ

ಯಾರಿರುವರು? ನಿನ್ನೀ ಗುರಿ ಆಸೆ ಸಹಾಯಕ್ಕೆ?

ಒಮ್ಮೆಲೆ ಮೈ ಜುಮ್ಮೆಂದಿತು! ಏಕಾಂಗಿ ಎಂದು !

ಮೇಲುಸಿರು ಬಿಟ್ಟು ಕ್ಷಣಕಾಲ ಚಿಂತಿಸಿದೆ,

ಉತ್ತರಿಸಿದೆ ನನ್ನ ಹೃದಯದುತ್ತರವ:

 

ನನಗೆರಡು ಆಯ್ಕೆಗಳಿವೆ....

ಜನರನ್ನ ಬದಲಿಸೊದೊಂದಾಯ್ಕೆ....

ಅದು ಸಾಧ್ಯವೂ ಇಲ್ಲ! ಸಾಧುವೂ ಅಲ್ಲ...;

 

ಮತ್ತೊಂದು ಆಯ್ಕೆ ಎನಗೆ

ನನ್ನ ನಾನು ಬದಲಿಸಿಕೊಂಡು ನಡೆಯೋದು

ಮುನ್ನಡೆದು ಗುರಿಯತ್ತ ಸಾಗುತ ನಡೆಯೋದು||

 

ಜಯವಾದರೆ ಹರುಷ ಹರುಷಾನಂದವು

ಅಪಜಯವಾದರೆ ಕಲಿಕಾನಂದ ಅನುಭವಾನಂದವು ||

 

ಸ್ವಾಮಿ ವಿವಕಾನಂದರ ನುಡಿ:

"ಮಹತ್ಕಾರ್ಯಗಳಾಗಬೇಕಾದರೆ 

ಮಾಹಾತ್ಯಾಗಗಳಾಗಬೇಕು"

ಈ ನುಡಿಯ ನೆನೆ ನೆನೆಯುತ

ಗುರಿ ಮುಟ್ಟುವ ಆಸೆಗಾಗಿ ಸಾಗು ಸಾಗುತಾ ;

 

ನಡೆಯುತ ನೆನೆಯುತ ನಡೆಯುತ ನಡೆದೆ ನಡೆದೆ...

ಆಸೆಗಾಗಿ.....

- ಟಿ. ಮಂಜಪ್ಪ. ನಿ.ಮು.ಶಿ, ಶಿವಮೊಗ್ಗ. 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್