ಡಿ. ಕೆ. ರವಿ (ಭಾ. ಆ. ಸೇ)

ಡಿ. ಕೆ. ರವಿ (ಭಾ. ಆ. ಸೇ)

ಕವನ

ಅದು ಕೆಚ್ಚೆದೆಯ ಕನ್ನಡದ ಕಲಿ
ತೆರಿಗೆ ವಂಚಕರಿಗೆ ಘರ್ಜಿಸಿದ ಹುಲಿ
ದೊರಕಿದೆ ಅನಾಥ ಶವವಾಗಿ ಮನೆಯಲಿ
ಇರಬಹುದೇ ಇದೊಂದು ವ್ಯವಸ್ತಿತ ಬಲಿ?

ಪೊಲೀಸರಿಗೆ ಮೇಲ್ನೋಟಕ್ಕೆ ಆತ್ಮಹತ್ಯೆ
ಗೃಹಸಚಿವರಿಗೂ ಇದು ಸ್ವಯಂಕೃತ್ಯ
ಅದೇ ಘೋಷಣೆ ಮುಖ್ಯ ಮಂತ್ರಿಗಳದ್ದು
ಜನತೆಯ ಸಂಶಯ ಶುರು ಮಾಡಿತು ಸದ್ದು

ಹೊರಟಿದ್ದ ತರಲು ತೆರಿಗೆ ಗಂಟು
ತೆರಿಗೆ ವಂಚಕರೊಂದಿಗೆ ಮಂತ್ರಿಗಳ ನಂಟು
ನಡೆದಂತಿದೆ ಕಾಣದ ಕೈಗಳ ಕರಾಮತ್ತು
ಕೊನೆಗೆ ಸಿಕ್ಕೇ ಹೋಯ್ತು ನೇಣಿಗೆ ಕತ್ತು

ಬರುತಿವೆ ಮತ್ತೆ ಹೊಸ ವರದಿ
ಈ ಬಾರಿ ಇದು ಪ್ರೀತಿಯ ಸರದಿ
ಬೆಳೆದಿತ್ತಾ ಸಹೋದ್ಯೋಗಿಯ ಜೊತೆ ಸಲುಗೆ
ಸಲುಗೆಯೇ ಮಾಡಿರಬಹುದೇ ಪ್ರಾಣದ ಸುಲುಗೆ?

ಒಂದು ವಾರದಿಂದ ಇದ್ದ ನಕಾರ
ಈಗ ವಹಿಸಿದೆ CIDಗೆ ಸರಕಾರ
ಆಗಿರಬಹುದೆ ಇಷ್ಟರಲ್ಲಿ ಸಾಕ್ಷಿಯ ನಾಶ
ತಪ್ಪಿ ಹೋಗುವುದೇ ವಂಚರರಿಗೆ ಪಾಶ

ಸ್ವಾಗತಾರ್ಹ ಉನ್ನತ ತನಿಖೆ
ರಾಜ್ಯ ಪೊಲೀಸರದು ಇರಲಿ ಕಾಣಿಕೆ
ತಪ್ಪು ಮಾಡಿದವರಿಗೆ ಬೀಳಲಿ ನೆಣ ಕುಣಿಕೆ
ಶಾಂತಿ ಸಿಗಲಿ ಪ್ರಾಮಾಣಿಕನ ಪ್ರಾಣಕೆ

-mbp