ನಾನರಿಯೆ

ನಾನರಿಯೆ

ಕವನ

ನಾನರಿಯೆ   ನಿನ್ನಯ‌  ಪೂಜಾ  ವಿಧಿ  ವಿಧಾನವನು

ನಾನರಿಯೆ  ನಿನ್ನಯ‌  ಜಪ‌  ತಪವನು

ನಾನರಿಯೆ  ನಿನ್ನಯ‌  ಧ್ಯಾನ‌  ಉಪಾಸನೆಯನು

 

ನಾನೇನು ನಿನ್ನಯ ಪರಮ‌  ಭಕ್ತನಲ್ಲ‌.

ನಾನೇನು ನಿನ್ನಯ‌  ದಾಸಾನು ದಾಸನಲ್ಲ‌

ನಾನೇನು  ನಿನ್ನಯ‌   ಸೇವಕನಲ್ಲ‌

 

ನಾನೊಬ್ಬ   ದೀನನು

ನಾನೊಬ್ಬ‌  ಸಾಮಾನ್ಯನು

ನಾನೊಬ್ಬ‌  ದಲಿತ‌  ಪಾಮರನು

 

ಆದಾಗ್ಯೂ   ನೀ  ನೀಡಿದೆ  ಎನಗೆ   ಕ್ಱುಪೆಯನು

ಆದಗ್ಯೂ  ನೀ  ತೋರಿದೆ  ಎನಗೆ  ಕರುಣೆಯನು

ಆದಾಗ್ಯು ನೀ ಹರಿಸಿದೆ  ಎನಗೆ  ಸಕಲ‌   ಸೌಭಾಗ್ಯವನು

 

ಧನ್ಯವಾಯಿತು  ಬಾಳು  ಈ  ನಿನ್ನ‌  ಸುಂದರ‌  ಜಗದಲಿ

ಪಾವನವಾಯಿತು ಬದುಕು   ಈ  ನಿನ್ನ‌  ಭವ್ಯ‌   ವಿಶ್ಹದಲಿ

ಸಾರ್ಥಕವಾಯಿತು  ಜೀವನ‌  ಈ  ನಿನ್ನ‌  ದಿವ್ಯ‌  ದೇಗುಲದಲಿ

 

     ರಚನೆ:  ಜೈವಂತ‌  ಎಸ್.  ಗಾಂಜೇಕರ‌ , ಕುಮಟಾ (ಉ.ಕನ್ನಡ‌ )