ಕವಿ ಸ್ಮರಣೆಯಲ್ಲಿ.-------

ಕವಿ ಸ್ಮರಣೆಯಲ್ಲಿ.-------

ಕಟ್ಟಿದರೊಂದು
ಸುಂದರ, ಸ್ಮಾರಕವ
ಶ್ರೀಮಂತ ನಗರದ
ಪುರಜನರು 
ತಮ್ಮನುದ್ಧರಿಸಿದ
ಕವಿಯ ಸ್ಮರಣಾರ್ಥ - - -

ಜೋಪಾನ
ಮಾಡಿದರು
ಖಾಲಿ ಹಾಳೆಯಲಿ 
ದಾಖಲಿಸಿದ
ಅವನ ಖಾಲಿತನವ - - -

ಆಗಬಹುದಿತ್ತವ
ಸುದ್ದಿಯಾದವರ
ನಡುವೆ  ರಾರಾಜಿತ.
ಆದರೀ ಕ್ರೂರ ಜಗದ
ಕಣ್ಣಿಗೆ  ಅವನೊಬ್ಬ
ಪರಾಜಿತ - - -

ಮುರುಕು ಜೋಪಡಿ
ಮಿಣುಕು  ಹಣತೆ ಜೋಡಿ
ಮೋಡದಾಚೆಯ
ಮಿನುಗು ನಕ್ಷತ್ರದತ್ತ
ಮುಖಮಾಡಿ  ತನ್ನೆಲ್ಲ
ನೋವು ಹತಾಶೆ 
ಗಳ ಭಟ್ಟಿಯಿಳಿಸಿ ,
ಹಸ್ತಪ್ರತಿಗಳಾಗಿಸಿ
ವಾಸ್ತವತೆಯ ವ್ಯಂಗ್ಯ
ಬದುಕಿಗೆ ಬೆನ್ನುಮಾಡಿ
ಹೊರಟವನಿಗೆ  ವಿದಾಯ
ಹೇಳುತ್ತಾ.- - -

ಸಂಭ್ರಮಿಸಿದರು
ವರ್ಷ ವರ್ಷ
ಉತ್ಸವಗಳಾಚರಿಸಿ 
ಕವಿಯ ಹೆಸರಲೀ---??

ಕಟ್ಟಿದರೊಂದು
ಸುಂದರ, ಸ್ಮಾರಕವ
ಶ್ರೀಮಂತ ನಗರದ
ಪುರಜನರು  ತಮ್ಮ -
ನುದ್ದರಿಸಿದ ಕವಿಯ
ಸ್ಮರಣಾರ್ಥ - - -

ಕಮಲಾಬೆಲಗೂರ್
 

Rating
No votes yet

Comments