ಮಾಧ್ಯಮ ಕೊರೋನ ಮತ್ತು ಹಲವು ಮುಖಗಳು

  ಅದೇನು ನಡೆಯುತ್ತಿದೆಯೋ ಗೊತ್ತಿಲ್ಲ. ಕೊರೋನ ಎಂಬ ಮಹಾಮಾರಿ ಇಡೀ ಪ್ರಪಂಚವನ್ನೇ ನಡುಗಿಸುವ ಮಟ್ಟಕ್ಕೆ ಬಂದು ಬಿಟ್ಟಿದೆ. ಆದರೆ ಇದನ್ನು ನಿಭಾಯಿಸಿಕೊಂಡು ಹೋಗುವಲ್ಲಿ ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಾ ಬಂದಿರುವುದು ಮತ್ತು ಜನರಿಗೆ ಬೇಕಾದಂತಹ ಅನುಕೂಲವನ್ನು  ಮಾಡಿಕೊಟ್ಟು ಜೀವನ ವ್ಯವಸ್ಥೆಯ ಅಗತ್ಯತೆಗಳನ್ನು ಪೂರೈಸಲು ಸತತ ಪ್ರಯತ್ನ ಪಡುತ್ತಿದೆ. ನಿಜಕ್ಕೂ ಈ ರಾಷ್ಟ್ರಗಳ ಕಾರ್ಯ ವೈಖರಿಗೆ ಸೆಲ್ಯೂಟ್ ಹೊಡೆಯಲೇ ಬೇಕು. ಆದರೆ ಭಾರತದ ಕಥೆ ಕೇಳಿದರೆ ನೀವು ತೀರಾ ಮುಜುಗರ ಪಡುತ್ತೀರಾ.

Image

ಟುಟ್ಟೂ ಗಿಳಿಯ ಲೋಕಸಂಚಾರ

ಹಲವಾರು ವರುಷಗಳ ಮುಂಚೆ ರೈತನೊಬ್ಬ ಪಂಜರದಲ್ಲಿ ಗಿಳಿಯೊಂದನ್ನು ಸಾಕಿದ್ದ. ಅದರ ಹೆಸರು ಟುಟ್ಟೂ. ಅವನ ಕುಟುಂಬದ ಎಲ್ಲರಿಗೂ, ಹಳ್ಳಿಯ ಎಲ್ಲರಿಗೂ ಟುಟ್ಟೂ ಎಂದರೆ ಅಚ್ಚುಮೆಚ್ಚು. ಯಾಕೆಂದರೆ ಅದು ಮನುಷ್ಯರಂತೆಯೇ ಮಾತಾಡುತ್ತಿತ್ತು.

ಎಲ್ಲರೂ ಮೆಚ್ಚುತ್ತಿದ್ದ ಕಾರಣ ಗಿಳಿಗೆ ಅಹಂಕಾರ ಬೆಳೆಯಿತು. ತನಗೆಲ್ಲವೂ ಗೊತ್ತಿದೆ ಎಂದು ಟುಟ್ಟೂ ಭಾವಿಸಿತು. ಕ್ರಮೇಣ ಅದು ಇತರರನ್ನು ಹೀಯಾಳಿಸುತ್ತಾ ಬಯ್ಯಲು ಶುರು ಮಾಡಿತು.

ಮುದಿಯಾದ ಮನೆನಾಯಿಯನ್ನು ಗಿಳಿ ನಿಂದಿಸಿದ್ದು ಹೀಗೆ: “ಏ ನಾಯಿ, ಎಷ್ಟು ಲಕ್ಷಣಗೆಟ್ಟ ಪ್ರಾಣಿ ನೀನು! ನಿನ್ನ ಗೋಜಲು ಕೂದಲಿನಿಂದ ಮುದ್ದೆಮುದ್ದೆಯಾಗಿ ಕಾಣಿಸುತ್ತಿ. ಕುರೂಪಿ ನೀನು, ನನ್ನಿಂದ ದೂರವಿರು.”

Image

ಅಮೆರಿಕದ ‘ಬೆಂಕಿಯ ಮಳೆಗೆ’ ಭಗ್ನವಾದ ಲಾವೋಸ್

ಶಾಲೆಯಿಂದ ಮರಳುತ್ತಿದ್ದ 10 ವರ್ಷದ ಲಾ ಲೀ ದಾರಿಯಲ್ಲಿ ಟೆನಿಸ್ ಚೆಂಡಿನಂತೆ ಕಂಡ ವಸ್ತುವೊಂದನ್ನು ಹೆಕ್ಕಿಕೊಂಡು ಮನೆಗೆ ಬಂದಳು. ಕುಟುಂಬದ ಅನೇಕ ಮಂದಿ ಮನೆಯ ಕಾರ್ಯಕ್ರಮಕ್ಕೆಂದು ಅಲ್ಲಿ ನೆರೆದಿದ್ದರು. ಊರಿನ ಜನಪ್ರಿಯ ಆಟ ‘ಪೆಟಾಂಕ್’ ಗೆ ಉಪಯೋಗವಾಗುವ ಲೋಹದ ಚೆಂಡಿನಂತೆ  ಕಾಣುತ್ತಿದ್ದ ಆ ಆಟಿಗೆಯನ್ನು ತನ್ನ ಲಂಗದ ಜೇಬಿನಿಂದ ಹೊರ ತೆಗೆದು ಅಂಗಳದಲ್ಲಿದ್ದ ಓರಗೆಯವಳಿಗೆ ತೋರಿಸಿದಳು.  ಹೊರ ತೆಗೆದ ತಕ್ಷಣ ಆ ಚೆಂಡು ಸ್ಫೋಟಿಸಿತು. ಮುಗ್ಧೆ ಲೀ ಅಲ್ಲಿಯೇ ಮೃತಳಾದಳು; ನೆರೆದಿದ್ದವರಲ್ಲಿ 13 ಮಂದಿ ತೀವ್ರವಾಗಿ ಗಾಯಗೊಂಡರು. 2017ರ ಆರಂಭದಲ್ಲಿ ಸಂಭವಿಸಿದ ಈ ದುರ್ಘಟನೆ ಅಮೆರಿಕವು 1964-73ರ ಅವಧಿಯಲ್ಲಿ ಲಾವೋಸಿನಲ್ಲಿ ಹಾಕಿ  ಸ್ಫೋಟಿಸದೇ ಉಳಿದ 8 ಕೋಟಿ ಬಾಂಬುಗಳಿಂದಾಗುತ್ತಿರುವ ದುರಂತಕ್ಕೆ ಒಂದು ಉದಾಹರಣೆ.

Image

ಫಲಶ್ರುತಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಬಿ.ಜಿ.ಎಲ್. ಸ್ವಾಮಿ
ಪ್ರಕಾಶಕರು
ವಸಂತ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೧೦/-

ವಿಶ್ವವಿಖ್ಯಾತ ಸಸ್ಯತಜ್ನರಾದ ದಿವಂಗತ ಡಾ. ಬಿ.ಜಿ.ಎಲ್. ಸ್ವಾಮಿಯವರು ಸಸ್ಯಗಳ ಬಗ್ಗೆ ಬರೆದಿರುವ ಪುಸ್ತಕಗಳನ್ನು ಓದುವುದೇ ಒಂದು ಖುಷಿ. ಯಾಕೆಂದರೆ, ಆ ಬರಹಗಳು ಸಸ್ಯಗಳ ಬಗ್ಗೆ ಮಾಹಿತಿ ಒದಗಿಸುವುದರ ಜೊತೆಗೆ ಕತೆಗಳನ್ನು ಓದುವಾಗಿನ ಆನಂದವನ್ನು ನೀಡುತ್ತವೆ.

ಬರಗಾಲ: ಭಾರತದ ಬೆಂಬಿಡದ ಭೂತ

೨೦೧೬ರ ಬರಗಾಲದಿಂದ ನಮ್ಮ ದೇಶ ತತ್ತರಿಸಿದೆ. ಇದರ ಬಗ್ಗೆ ಒಂದಷ್ಟು ಅಂಕೆಸಂಖ್ಯೆಗಳು: ಬರಗಾಲದ ಬಿರುಸಿನಿಂದ ಬಸವಳಿದ ರಾಜ್ಯಗಳು ೧೦. ದೇಶದ ಒಟ್ಟು ೬೭೮ ಜಿಲ್ಲೆಗಳಲ್ಲಿ ಬರಗಾಲದಿಂದ ನಲುಗಿರುವ ಜಿಲ್ಲೆಗಳು ೨೫೪. ಈ ಜಿಲ್ಲೆಗಳಲ್ಲಿ ಬರಗಾಲದಿಂದ ಕಂಗೆಟ್ಟ ಗ್ರಾಮಗಳು ೨,೫೫,೦೦೦. ಇವುಗಳಲ್ಲಿ ಎರಡು ಲಕ್ಷ ಗ್ರಾಮಗಳಲ್ಲಿ ಆಯಾ ಗ್ರಾಮಗಳ ಗಡಿಯೊಳಗೆ ನೀರೇ ಇಲ್ಲ. ೧೯೮೭ರ ಬರಗಾಲದಿಂದ ಬವಣೆ ಪಟ್ಟ ಜನರು ೮.೫ ಕೋಟಿ ಆಗಿದ್ದರೆ, ೨೦೧೬ರ ಬರಗಾಲದಿಂದ ಸಂಕಟ ಪಡುತ್ತಿರುವ ಜನರು ೩೩ ಕೋಟಿ!

Image

೧೯೫೪ರಲ್ಲಿ ಮ್ಯಾಜಿಸ್ಟ್ರೇಟುಗಳಿಗೆ ತರಬೇತಿ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image

ಗುಬ್ಬಿ ಹಬ್ಬ: ಮಾರ್ಚ್ ೨೦

ಅದೊಂದು ಕಾಲವಿತ್ತು - ಮನೆಯೊಳಗೆ ಮತ್ತು ಮನೆಯ ಹೊರಗೆ ಗುಬ್ಬಿಗಳ ಚಿಂವ್ ಚಿಂವ್ ಸದ್ದು ಆಗಾಗ ಕೇಳುತ್ತಿದ್ದ ಕಾಲ. ಮನೆಯ ಮೂಲೆಗಳಲ್ಲಿ, ಜಂತಿಗಳಲ್ಲಿ, ಗೋಡೆಗೆ ಆನಿಸಿದ್ದ ಫೋಟೋಗಳ ಹಿಂಭಾಗದಲ್ಲಿ ಗುಬ್ಬಿಗಳು ಗೂಡುಕಟ್ಟಿ ಬಾಳುತ್ತಿದ್ದವು. ಹಗಲಿನಲ್ಲಿ ಅಂಗಳದಲ್ಲಿ ಗುಬ್ಬಿಗಳ ಆಟವೇ ಆಟ. ಈಗ ಮನುಷ್ಯರೊಂದಿಗೆ ಈ ಪುಟ್ಟ ಪಕ್ಷಿಗಳ ಸಹಜೀವನ ಕೇವಲ ನೆನಪು.

ಯಾಕೆ ಹೀಗಾಯಿತು? ಈಗ ಹುಲ್ಲಿನ ಮತ್ತು ಹಂಚಿನ ಚಾವಣಿಯ ಮನೆಗಳೇ ಅಪರೂಪ. ಆದ್ದರಿಂದ ಗುಬ್ಬಿಗಳಿಗೆ ಮನೆಯೊಳಗೆ ಗೂಡು ಕಟ್ಟಲು ಅವಕಾಶವೇ ಇಲ್ಲವಾಗಿದೆ. ಅದಲ್ಲದೆ, ಹೊಲದ ಬೆಳೆಗಳಿಗೆ ಮಾರಕ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದೆ. ಧಾನ್ಯಗಳನ್ನು ತಿನ್ನುವ ಗುಬ್ಬಿಗಳು ಆ ವಿಷದಿಂದಾಗಿ ಸಾಯುತ್ತಿವೆ.

Image

ಡಿಜಿಟಲ್ ಯೋಗಕ್ಷೇಮ - ೧

ರಾತ್ರಿಯ ಹೊತ್ತು ಮಕ್ಕಳಿಗೆ ಕಥೆ ಹೇಳಲೆಂದು ಹಿಂದಿನ ಕಾಲದಲ್ಲಿ ಪುಸ್ತಕಗಳನ್ನು ಇಟ್ಟುಕೊಳ್ಳುತ್ತಿದ್ದರು. ಈಗ ಮೊಬೈಲು ಫೋನುಗಳನ್ನು ಇಟ್ಟುಕೊಳ್ಳುತ್ತಾರೆ. ಮೊನ್ನೆ ನಲ್ಮೆಯ ಮಡದಿ ಹೀಗೆಯೇ ಮಕ್ಕಳಿಗೆ ಕಥೆ ಹೇಳಲೆಂದು ಮೊಬೈಲ್ ಹಿಡಿದುಕೊಂಡವಳು ಕಥೆ ಹೇಳುತ್ತ ಹಾಗೆಯೇ ನಿದ್ರೆ ಹೋಗಿಬಿಟ್ಟಿದ್ದಳು. ಮಕ್ಕಳೂ ನಿದ್ರೆ ಹೋಗಿದ್ದರು. ಆದರೆ ಮೊಬೈಲು ಮಾತ್ರ ಇವರುಗಳ ನಡುವೆ ಸಿಕ್ಕಿಹಾಕಿಕೊಂಡು ಕಾದು ಕೆಂಡದಂತೆ ಬಿಸಿಯಾಗಿತ್ತು. ನಾನು ನೋಡದೇ ಹೋಗಿದ್ದರೆ ಅದು ಬಹುಶಃ “ಭಡ್" ಅಂದಿರುತ್ತಿತ್ತೋ ಏನೋ. ಸ್ವಲ್ಪದರಲ್ಲಿ ಬದುಕಿಕೊಂಡೆವು. ಹಿಂದಿನ ಕಾಲದವರಿಗೆ ಈ ಸಮಸ್ಯೆ ಇರಲಿಲ್ಲ. ಪುಸ್ತಕದ ಮೇಲೆ ಮಲಗಿ ಹೊರಳಾಡಿದರೂ ಕೂಡ ಬೆಳಗಾಗುವವರೆಗೂ ಜಡವಾಗಿ ಬಿದ್ದಿರುತ್ತಿದ್ದವು ಎನಿಸುತ್ತದೆ, ಹೀಗಾಗಿ ಇದರ ಬಗ್ಗೆ ಯಾರಾದರೂ ಬರೆದಿದ್ದು ಓದಿ ಕಾಣೆ.

Image

ಮಳೆಗಾಲದ ದಿನದಿನವೂ ಕಪ್ಪೆ ಯಾಕೆ ಕೂಗುತ್ತದೆ?

ಒಂದಾನೊಂದು ಕಾಲದಲ್ಲಿ ಮರಿಗಪ್ಪೆಯೊಂದು ತಾಯಿಕಪ್ಪೆಯೊಂದಿಗೆ ವಾಸಿಸುತ್ತಿತ್ತು. ಈ ಮರಿಗಪ್ಪೆ ತನ್ನ ತಾಯಿಯ ಯಾವ ಮಾತನ್ನೂ ಕೇಳುತ್ತಿರಲಿಲ್ಲ. ತನಗೆ ಖುಷಿ ಬಂದಂತೆ ಮಾಡುತ್ತಿತ್ತು.

“ಮಗೂ, ಹೊರಗೆ ಹೋಗಿ ಆಟವಾಡು. ಯಾಕೆಂದರೆ ನಾನು ಮನೆ ಶುಚಿ ಮಾಡಬೇಕಾಗಿದೆ” ಎಂದು ತಾಯಿ ಕಪ್ಪೆ ಹೇಳಿದರೆ, ಮರಿಗಪ್ಪೆ ಮನೆಯೊಳಗೇ ಅತ್ತಿತ್ತ ಓಡಾಡುತ್ತಿತ್ತು ವಿನಃ ಹೊರಗೆ ಹೋಗುತ್ತಿರಲಿಲ್ಲ. ಬೆಟ್ಟಕ್ಕೆ ಹೋಗಿ ಬಾ ಎಂದು ತಾಯಿಕಪ್ಪೆ ಹೇಳಿದರೆ, ಮರಿಗಪ್ಪೆ ನದಿಗೆ ಹೋಗುತ್ತಿತ್ತು. ಮರದ ಬುಡಕ್ಕೆ ಹೋಗೆಂದರೆ ಬಾವಿಯ ಹತ್ತಿರ ಹೋಗುತ್ತಿತ್ತು.

Image

ಬರದಿಂದ ಬಚಾವ್ ತಂತ್ರ – ಕೊಳವೆಬಾವಿಯಿಂದ ಜಲಮರುಪೂರಣ

ಎಚ್.ಕೆ. ಆನಂದಪ್ಪ ಅವರ ಎರಡು ಹೆಕ್ಟೇರ್ ಜಮೀನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನನಾಯಕನಹಳ್ಳಿಯಲ್ಲಿದೆ. ೫೮ ವರುಷ ವಯಸ್ಸಿನ ಅವರು ತನ್ನ ಜಮೀನಿನಲ್ಲಿ ಕೊರೆಸಿದ ಕೊಳವೆಬಾವಿಗಳ ಸಂಖ್ಯೆ ಹನ್ನೊಂದು.
ಅವುಗಳ ಗತಿ ಏನಾಯಿತು? ಕೆಲವು ಕೊಳವೆಬಾವಿಗಳಲ್ಲಿ ನೀರೇ ಸಿಗಲಿಲ್ಲ. ಇನ್ನುಳಿದ ಕೊಳವೆಬಾವಿಗಳು ಒಂದೆರಡು ವರುಷ ನೀರು ಒದಗಿಸಿದ ನಂತರ ಬತ್ತಿ ಹೋದವು. ಈ ಬೆಂಬಿಡದ ಸೋಲಿನಿಂದಾಗಿ ಹತಾಶರಾದ ಆನಂದಪ್ಪ ಅದೊಮ್ಮೆ ಆತ್ಮಹತ್ಯೆ ಮಾಡಬೇಕೆಂದು ಯೋಚಿಸಿದ್ದರು. “೨೦೦೮ರಲ್ಲಿ ನನ್ನ ಸಾಲದ ಹೊರೆ ತಾಳಿಕೊಳ್ಳುವಂತಿರಲಿಲ್ಲ” ಎಂದು ಅಂದಿನ ಶೋಚನೀಯ ಪರಿಸ್ಥಿತಿಯನ್ನು ನೆನೆಯುತ್ತಾರೆ ಅವರು..

Image