ದಿಕ್ಕು ತೋಚದಾದಾಗ ದೇವರಿಗೆ ಶರಣಾಗಿ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image

ಜನಸಾಮಾನ್ಯರ ದನಿಯಾದ ಹಲ್ದಾರ್ ನಾಗ್ ಎಂಬ ಕವಿ

ಕೆಲವು ವರ್ಷಗಳ ಹಿಂದೆ ಭರತಬಾಲಾ ನಿರ್ದೇಶನದಲ್ಲಿ ‘ವರ್ಚುವಲ್ ಭಾರತ್’ ಎಂಬ ಸಂಸ್ಥೆ ಸಾವಿರ ಚಿತ್ರಗಳ ಪ್ರಯಾಣ (A 1000 film journey, one story at a time) ಎಂಬ ಕಿರು ಸಾಕ್ಷ್ಯ ಚಿತ್ರಗಳ ಸರಣಿಯನ್ನು ಪ್ರಾರಂಭಿಸಿತ್ತು. ಈ ಸರಣಿಯಲ್ಲಿ ಹಲವಾರು ಎಲೆ ಮರೆಯ ಕಾಯಿಗಳಂತಿರುವ ಸಾಧಕರ ಬದುಕನ್ನು ಹೊರ ಜಗತ್ತಿಗೆ ತೆರೆದಿಡುವ ಪ್ರಯತ್ನ ಮಾಡಿತ್ತು. ಅವರು ಗುರುತಿಸಿದ ಓರ್ವ ವ್ಯಕ್ತಿಯೇ ಹಲ್ದಾರ್ ನಾಗ್ ಅಥವಾ ಹಲ್ದೋರ್ ನಾಗ್.

Image

5 ಪೈಸೆ ವರದಕ್ಷಿಣೆ

ಪುಸ್ತಕದ ಲೇಖಕ/ಕವಿಯ ಹೆಸರು
ವಸುಧೇಂದ್ರ
ಪ್ರಕಾಶಕರು
ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೬೦.೦೦ ಮೊದಲ ಮುದ್ರಣ ೨೦೧೬

ಆಕರ್ಷಕವಾದ ಹೆಸರನ್ನು ಹೊಂದಿರುವ ೫ ಪೈಸೆ ವರದಕ್ಷಿಣೆ ಎಂಬ ಪುಸ್ತಕವು ವಸುಧೇಂದ್ರ ಇವರ ಸುಲಲಿತ ಪ್ರಬಂಧಗಳ ಸಂಗ್ರಹ. ಸುಲಲಿತ ಪ್ರಬಂಧಗಳನ್ನು ಬರೆಯುವುದರಲ್ಲಿ ವಸುಧೇಂದ್ರ ಇವರದ್ದು ಎತ್ತಿದ ಕೈ. ಈ ಪುಸ್ತಕದಲ್ಲಿ ೨೪ ಪುಟ್ಟ ಪುಟ್ಟ ಪ್ರಬಂಧಗಳಿವೆ. ಚೆನ್ನಾಗಿ ಓದಿಸಿಕೊಂಡೂ ಹೋಗುತ್ತದೆ. ೫ ಪೈಸೆಯನ್ನು ಒಂದೊಂದು ಪೈಸೆಯಾಗಿ ವಿಂಗಡಿಸಿ ಒಂದೊಂದರ ಅಡಿಯಲ್ಲಿ ೪-೬ ಪ್ರಬಂಧಗಳು ಬರುವಂತೆ ಮಾಡಿದ್ದಾರೆ. 

ವಿನೋಬಾ ಭಾವೆಯವರ ಪಪ್ಪಾಯಿ ಹಣ್ಣಿನ ಕತೆ

ವಿನಾಯಕ ನರಹರಿ ಭಾವೆಯೇ ನಮಗೆಲ್ಲಾ ಚಿರಪರಿಚಿತರಾಗಿರುವ ವಿನೋಬಾ ಭಾವೆ. ವಿನೋಬಾಬಾವೆಯವರು ಮಹಾತ್ಮಾ ಗಾಂಧಿಯವರ ಒಡನಾಡಿಯಾಗಿದ್ದರು. ಉತ್ತಮ ಲೇಖಕರೂ, ಬಹುಭಾಷಾ ಪಂಡಿತರೂ ಆಗಿದ್ದರು. ಹುಟ್ಟಿದ್ದು ಮಹಾರಾಷ್ಟ್ರದಲ್ಲಾದರೂ ಅವರಿಗೆ ಕನ್ನಡ ಭಾಷೆಯ ಅರಿವು ಚೆನ್ನಾಗಿಯೇ ಇತ್ತು. ಕನ್ನಡ ಲಿಪಿಯನ್ನು ಅವರು ‘ಲಿಪಿಗಳ ರಾಣಿ' ಎಂದು ಕರೆಯುತ್ತಿದ್ದರು. ಸೆಪ್ಟೆಂಬರ್ ೧೧, ೧೮೯೫ರಲ್ಲಿ ಜನಿಸಿದ ಇವರು ‘ಭೂದಾನ’ ಚಳುವಳಿಯ ಹರಿಕಾರರೆಂದೇ ಖ್ಯಾತಿ ಪಡೆದಿದ್ದಾರೆ. ಶ್ರೀಮಂತ ಜಮೀನ್ದಾರರ ಮನವೊಲಿಸಿ ಎಕರೆಗಟ್ಟಲೆ ಭೂಮಿಯನ್ನು ದಾನವಾಗಿ ಪಡೆದು ಬಡ ರೈತರಿಗೆ ಹಸ್ತಾಂತರ ಮಾಡಿದ ಕೀರ್ತಿ ಇವರದ್ದು. ನವೆಂಬರ್ ೧೫, ೧೯೮೨ರಲ್ಲಿ ತಮ್ಮ ೮೭ನೇ ವಯಸ್ಸಿನಲ್ಲಿ ನಿಧನಹೊಂದುತ್ತಾರೆ.

Image

ಕೊರೋನಾ ಅವ - ಲಕ್ಷಣ

    ಆಕಾಶ ತಲೆಯ ಮೇಲೆ  ಬಿದ್ದಂತೆ ಕುಳಿತಿದ್ದ ಗುಂಡಾಚಾರಿಯನ್ನು  ನೋಡಿ, ಒಳಬಂದ ಅವನ ಸ್ನೇಹಿತ, ಕಾಶಿಗೆ ಆಶ್ಚರ್ಯವಾಯಿತು.
    `ಏನು ಗುಂಡಣ್ಣ, ಹೀಗೆ ಕೂತಿದ್ದೀಯಾ?’ ಕಾಶಿ ಪ್ರಶ್ನಿಸಿದ. ನಿಟ್ಟುಸಿರುಬಿಟ್ಟ ಗುಂಡನೆಂದ - `ಕರೋನಾ ವಕ್ಕರಿಸಿದೆ ಕಣೋ.' ಆರಡಿ ದೂರ ಹಾರಿ ಬಿದ್ದ ಕಾಶಿ - `ಟೆಸ್ಟ್ ಮಾಡಿಸಿದ್ಯಾ?'
    `ಟೆಸ್ಟ್ ಮಾಡ್ಲಿಲ್ಲ, ಟೇಸ್ಟ್ ಮಾಡಿದೆ, ಗೊತ್ತಾಯ್ತು'
    `ಅಂದ್ರೆ. . . ?'

ಲೋಕಸಂಗ್ರಹ ಎಂದರೇನು ?

ಭಗವದ್ಗಿತೆಯಲ್ಲಿ 'ಲೋಕಸಂಗ್ರಹ ' ದ  ಪ್ರಸ್ತಾಪ ಇದೆ. 

ಈ ಶಬ್ದದ ಕುರಿತು ಅಂತರ್ಜಾಲದಲ್ಲಿ ಹುಡುಕಾಡಿದಾಗ ತಿಳಿದು ಬಂದ ಸಂಗತಿ ಈ ಕೆಳಗಿದೆ.

ಸಾಮಾನ್ಯ ಜನರನ್ನು ತಪ್ಪುದಾರಿಗೆ ಹೋಗದಂತೆ ಧರ್ಮದ ಮರ್ಯಾದೆಯಲ್ಲಿರಲು ದಾರಿ ತೋರಿಸಲು ಮಾಡುವ ಕೆಲಸವನ್ನು ಆಚಾರ್ಯ ಶಂಕರರು 'ಲೋಕಸಂಗ್ರಹ' ಎಂದಿದ್ದಾರೆ. ಲೋಕಕ್ಕೆ ಮಾದರಿಯಾಗಿ, ನೋಡಿದೊಡನೆಯೇ ಕೆಟ್ಟದಾರಿ ಬೇಡ, ಒಳ್ಳೆಯ ದಾರಿಯಲ್ಲಿ ಸಾಗಬೇಕೆಂಬ ಪ್ರೇರಣೆ ನೀಡುವ ಸಾಧು-ಮಹಾತ್ಮರೇ ನಿಜವಾದ ಲೋಕಸಂಗ್ರಹ ಮಾಡುವವರು. ಕೇವಲ ಸಮಾಜಸೇವೆ ಲೋಕಸಂಗ್ರಹವಾಗದು. ವೈಯಕ್ತಿಕ ಜೀವನದಲ್ಲಿ ಧರ್ಮದ ಆಚರಣೆ ಮಾಡಿ, ಸಾಮಾನ್ಯ ಜನರ ಜೀವನದಲ್ಲಿ ಪರಿಣಾಮವಾಗುವಂತೆ ಮಾಡುವುದೇ ಲೋಕಸಂಗ್ರಹ.

ಇಲ್ಲಿ ನೀವು ಟೀ ಕುಡಿದ ನಂತರ ಟೀಕಪ್ ತಿನ್ನಬಹುದು!

ನೀವೆಲ್ಲಾ ಚಹಾ (ಟೀ) ಅಥವಾ ಕಾಫಿ ಕುಡಿಯುವವರೇ ಆಗಿದ್ದರೆ ಕುಡಿದ ಕಪ್ ಏನು ಮಾಡುತ್ತೀರಿ? ಸ್ಟೀಲ್ ಅಥವಾ ಗಾಜಿನದ್ದಾಗಿದ್ದರೆ ತೊಳೆದು ತೆಗೆದು ಇರಿಸುತ್ತೀರಿ. ಅದೇ ಪ್ಲಾಸ್ಟಿಕ್ ನದ್ದಾಗಿದ್ದರೆ? ಕಸದ ಡಬ್ಬಕ್ಕೆ ಬಿಸಾಕುತ್ತಿರಿ ಅಲ್ಲವೇ? ಅದೇ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದೇ ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತದೆ. ಈ ವಿಷಯಗಳು ನಿಮಗೆ ತಿಳಿದೇ ಇದೆ. ಅದೇ ನೀವು ಚಹಾ ಕುಡಿದ ನಂತರ ಕಪ್ ಅನ್ನು ಬಿಸಾಕದೇ ತಿಂದು ಬಿಡುವಂತಾಗಿದ್ದರೆ? ಏನು ತಮಾಷೆ ಮಾಡುತ್ತೀರಾ ಎಂದು ಕೇಳಬಹುದು. ಆದರೆ ಇದು ಸತ್ಯ. 

Image

ಕಾವ್ಯ ಸಂಗಮ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕ: ಮೇಟಿ ಮುದಿಯಪ್ಪ
ಪ್ರಕಾಶಕರು
ಮೇಟಿ ಪ್ರಕಾಶನ, ಕೊಪ್ಪಳ
ಪುಸ್ತಕದ ಬೆಲೆ
೧೫೦.೦೦ ಮೊದಲ ಮುದ್ರಣ : ೨೦೧೭

ಕಾವ್ಯ ಸಂಗಮವೆನ್ನುವುದು ಹೆಸರೇ ಹೇಳುವಂತೆ ಕವನಗಳ ಸಂಗ್ರಹ. ಕರಾವಳಿ ತೀರದ ಕವಿ/ಕವಯತ್ರಿಯವರ ೯೬ ಕವನಗಳು ಈ ಪುಸ್ತಕದಲ್ಲಿವೆ. ಇವನ್ನೆಲ್ಲ ಅತ್ಯಂತ ಆಸಕ್ತಿಯಿಂದ ಸಂಪಾದನೆ ಮಾಡಿದವರು ಸ್ವತಃ ಕವಿಯಾದ ಮೇಟಿ ಮುದಿಯಪ್ಪ ಇವರು.

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ-೬) -ಏಕಲವ್ಯ

ಮಹಾಭಾರತದ ಕಥೆಯಲ್ಲಿ ಪಾಂಡು ಪುತ್ರ ಅರ್ಜುನನಿಗೆ ಸರಿಸಾಟಿಯಾಗಿದ್ದ ವ್ಯಕ್ತಿಗಳಲ್ಲಿ ಓರ್ವ ಕರ್ಣ. ಈ ಸಂಗತಿ ಎಲ್ಲರಿಗೂ ಗೊತ್ತು. ಮತ್ತೊರ್ವ ಅತಿರಥನೆಂದರೆ ಏಕಲವ್ಯ. ಈಗಿನಂತೆಯೇ ಅಂದಿನ ಕಾಲದಲ್ಲೂ ಬೇರೂರಿದ್ದ ಜಾತಿಯ ಅಸಮಾನತೆಯು ಓರ್ವ ಅತ್ಯಂತ ಪರಾಕ್ರಮಿ ಯೋಧನನ್ನು ಬಲಹೀನನನ್ನಾಗಿಸಿತು. ಏಕಲವ್ಯನ ಗುರು ಭಕ್ತಿಯ ಬಗ್ಗೆ ಬಹುತೇಕರಿಗೆ ತಿಳಿದಿದೆ. ಆದರೂ ಅವನ ಬಗ್ಗೆ, ಅವನ ಅಂತ್ಯದ ಬಗ್ಗೆ ಸ್ವಲ್ಪ ನಾನು ಸಂಗ್ರಹಿಸಿದ ಸ್ವಲ್ಪ ಮಾಹಿತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುವೆ.

Image

ಪುಸ್ತಕನಿಧಿ: ರಸ್ಕಿನ್ ಬಾಂಡ್ ಅವರ the Blue umbrella

ಹಿಂದೆ ಯಾವಾಗಲೋ ನಮ್ಮ ಹರಿಪ್ರಸಾದ್  ನಾಡಿಗರು ಈ ಕಿರು ಕಾದಂಬರಿಯ ಬಗ್ಗೆ ಹೇಳಿದ್ದರು. ರಸ್ಕಿನ್ ಬಾಂಡ್ ತುಂಬಾ ಒಳ್ಳೆಯ ಬರಹಗಾರ.  ತುಂಬಾ  ಸರಳ ಭಾಷೆ ಬಳಸುತ್ತಾರೆ.  ಅವರು ಬರಹದ ಓದು ತುಂಬಾ ಸುಖಕರ. ಆರ್ ಕೆ ನಾರಾಯಣ್ ಅವರ ಬರಹಗಳ ತರಹ ಹೇಳಬಹುದು . 

(ಅವರ  ' ರಸ್ಟಿಯ   ಸಾಹಸಗಳು' ಎಂಬ ಪುಸ್ತಕ ಕನ್ನಡದ ಅನುವಾದದಲ್ಲಿ ಓದಿದ್ದೆ.  Digital library of India ದಿಂದ ನಾನು ಇಳಿಸಿಕೊಂಡಿದ್ದ ಅದು ನನ್ನ ಬಳಿ pdf ರೂಪದಲ್ಲಿ ಇದೆ. ಬೇಕಾದವರು ನನ್ನನ್ನು  9920759710 ಸಂಖ್ಯೆಗೆ ಒಂದು message ಕಳಿಸುವ ಮೂಲಕ ಪಡೆಯಬಹುದು.)