ದೇಶದ ಸಮಸ್ಯೆಗಳು ನಿಜಕ್ಕೂ ಬಗೆಹರಿಯುತ್ತಾ?
ಬಹಳ ಹಿಂದೆ ಅನಿಲ್ ಕಪೂರ್ ನಾಯಕರಾಗಿರುವ ನಾಯಕ್ ಎಂಬ ಒಂದು ಹಿಂದಿ ಚಲನ ಚಿತ್ರ ತೆರೆ ಕಂಡಿತ್ತು. ಅದರಲ್ಲಿ ಟಿವಿ ವರದಿಗಾರನಾಗಿರುವ ನಾಯಕ ರಾಜ್ಯದ ಮುಖ್ಯ ಮಂತ್ರಿಯಾಗಿ ನಟಿಸಿದ ಅಮರೀಶ್ ಪುರಿಯವರಿಗೆ ರಾಜ್ಯದಲ್ಲಾದ ಗಲಭೆಯ ವರದಿಯನ್ನು ತೋರಿಸಿದಾಗ ಆ ಮುಖ್ಯಮಂತ್ರಿ ಒಂದು ದಿನಕ್ಕೆ ರಾಜ್ಯದ ಆಡಳಿತವನ್ನು ಆ ವರದಿಗಾರನ ಕೈಗೆ ನೀಡಿ ಆಡಳಿತ ನಡೆಸುವುದು ಎಷ್ಟು ಕಷ್ಟ ಎಂದು ನಿರೂಪಿಸಲು ಬಯಸುತ್ತಾನೆ. ಆಗ ಮುಖ್ಯಮಂತ್ರಿಯ ಪಾತ್ರಧಾರಿಯಾದ ಅಮರೀಶ್ ಪುರಿ ಒಂದು ಮಾತು ಹೇಳುತ್ತಾರೆ ರಾಜಕಾರಣಿಗಳು ಯಾವತ್ತೂ ಯಾವ ಸಮಸ್ಯೆಯನ್ನೂ ಪರಿಹಾರ ಮಾಡಲು ಹೋಗಬಾರದು. ಆ ಸಮಸ್ಯೆಯನ್ನು ಪರಿಹರಿಸಿದರೆ ಮುಂದಿನ ಚುನಾವಣೆಯಲ್ಲಿ ಜನರಿಗೆ ಯಾವ ವಿಷಯದ ಬಗ್ಗೆ ಭರವಸೆಯನ್ನು ಕೊಡುವುದು? ಹೇಗೆ ಚುನಾವಣೆಯನ್ನು ಗೆಲ್ಲುವುದು?
- Read more about ದೇಶದ ಸಮಸ್ಯೆಗಳು ನಿಜಕ್ಕೂ ಬಗೆಹರಿಯುತ್ತಾ?
- Log in or register to post comments