ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕತ್ತೆ ಕಲಿಸಿದ ಪಾಠ

ಕತ್ತೆ ಎಂದ ಕೂಡಲೇ ಸೋಮಾರಿ, ಹೆಡ್ಡ, ಪೆದ್ದ ಎಂದೇ ನಮ್ಮ ಭಾವನೆ. ಯಾರಾದರೂ ಕರ್ಕಶವಾಗಿ ಹಾಡಿದರೆ ಆಹಾ, ಎಂಥ ಗಾರ್ದಭ ಸ್ವರ ಎಂದು ಗೇಲಿ. ಬಾಲ್ಯದ ನೆನಪು. ಐದನೇ ಕ್ಲಾಸಿನಲ್ಲಿ ಗಣಿತದಲ್ಲಿ ನಾನು ಹಿಂದೆ ಇದ್ದಿದ್ದರಿಂದ ಸುಶೀಲಮ್ಮ ಟೀಚರ್ ಬೆನ್ನಿಗೆ ಒಂದು ಏಟು ಹಾಕುತ್ತಾ ಹೇಳಿದ್ದು ‘ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯಿತು” ಅಂತ. ಇಷ್ಟಕ್ಕೇ ಸೀಮಿತ ಕತ್ತೆಯ ಬಗೆಗಿನ ನಮ್ಮ ಜ್ಞಾನ. ಕೆಳಗಿದೆ ನೋಡಿ ಕತ್ತೆ ನಮಗೆ ಕಲಿಸುವ ಬದುಕಿನ ಪಾಠ. ಯಶಸ್ವೀ ಬದುಕಿಗೆ ಬೇಕಾದ ಸೂತ್ರ ಕಲಿಸಲು ಸ್ಟೀಫನ್ ಕವೇ, ದೀಪಕ್ ಚೋಪ್ರ ಅಥವಾ “ಎಕ್ಹಾರ್ಟ್ ತೂಲೇ” ಯಂಥ ಮಾಡರ್ನ್ “ಗುರು” ಗಳೇ ಆಗಬೇಕೆಂದಿಲ್ಲ. ಕತ್ತೆಯೂ ಸಹ ಆಗಬಹುದು ಗುರುವರ್ಯ.

ಕಾಯುವಿಕೆ ಅಂತ್ಯ ....

ಹಾಗೆ ಪೇಪರ್ ಓದುತ್ತಾ ಕುಳಿತಿದ್ದೆ. ಪೇಪರ್ ನಲ್ಲಿ ಅತಿ ಪ್ರಾಮಾಣಿಕತೆಯಿಂದ ನೋಡುವ ಒಂದು ಅಂಕಣ ಎಂದರೆ ನನ್ನ ಭಯದ + ವಿಷಯ (ಭವಿಷ್ಯ). ಈ ವಾರ ನಿಜವಾಗಿಯೂ ಭಯದ ವಿಷಯವೇ ಇತ್ತು ಅನ್ನಿ. ಏಕೆಂದರೆ ಈಗ ಅಪ್ರೈಸಲ್ ಸಮಯ.... ಕಳೆದ ವಾರ ಕೈ ಕೆರೆತ ಬೇರೆ ಆಗಿ ಒಂದು ವಾರ ರಜೆ ತೆಗೆದುಕೊಂಡಿದ್ದಕ್ಕೆ, ನನ್ನ ಬಾಸ್ ಬೇರೆ ಕೋಪ ಮಾಡಿಕೊಂಡಿದ್ದರು. ಹೀಗಾಗಿ ನನ್ನ ಭವಿಷ್ಯ ಭಯದ ವಿಷಯವಾಗಿ ಪರಣಮಿಸಬಹುದು ಎಂದು ನಾನು ಎಣಿಸಿದ್ದೆ. ಹೇಗಿದ್ದರು ಭವಿಷ್ಯ ನಮ್ಮ ಮನೋಜನೆ ಬರೆಯೋದು ಚೆನ್ನಾಗೆ ಬರೆದಿರುತ್ತಾನೆ ಎಂದು ತೆಗೆದು ನೋಡಿದೆ. ನನ್ನ ರಾಶಿ ಮೀನಕ್ಕೆ ಕಣ್ಣು ಆಡಿಸಿದೆ. ಚೆನ್ನಾಗಿ ಬರೆದಿದ್ದ. ಖುಷಿಯಾಗಿ ನೋಡಿ ಪೇಪರ್ ಬಂದು ಮಾಡ ಇಡ ಹತ್ತಿದಾಗ, ಮಡದಿ ಏನ್ರೀ?. ನಿಮ್ಮ ಭವಿಷ್ಯ ಅಷ್ಟು ನೋಡಿದರೆ ಆಯಿತ?, ಥೂss.. ನಿಮ್ಮ ಎಂದು ಉಗಿದಳು.

ವಿಷವಿಲ್ಲದ ಹಾವು; ಹಲ್ಲಿಲ್ಲದ ಮುಂಗಸಿ; ಕಾಳಗ ಜಿದ್ದಾ-ಜಿದ್ದಿ!

ಸಂಸತ್ತಿನ ಇಡೀ ಚಳಿಗಾಲದ ಅಧಿವೇಶನ ಶೂನ್ಯದಲ್ಲಿ ಮುಗಿದುಹೋಯಿತು. ವಿರೋಧ ಪಕ್ಷದವರಿಗೆ ಘಟ್ಟಿಸುವ ಉತ್ಸಾಹವಿರಲಿಲ್ಲ; ಆಳುವವರಿಗೆ ಎದುರಿಸುವ ತಾಖತ್ ಇರಲಿಲ್ಲ! ಅಧಿವೇಶನವನ್ನು ಕಾಟಾಚಾರಗೊಳಿಸುವಲ್ಲಿ ಇಬ್ಬರೂ ಯಶಸ್ವಿಯಾದರು!


                ವಿಷವಿಲ್ಲದ ಹಾವು; ಹಲ್ಲಿಲ್ಲದ ಮುಂಗುಸಿ; ಜಿದ್ದಾ-ಜಿದ್ದೀ ಹೋರಾಟ! ಈ ಭಂಡ-ಷಂಡತನವೇ ಬಜೆಟ್ ಅಧಿವೇಶನಕ್ಕೂ ಮುಂದುವರೆಯುತ್ತದಂತೆ; ಅದು “ನಮ್ಮ ಕರ್ಮ”!


                ಜಂಟೀ ಸದನ ಸಮಿತಿ, ಕೇಂದ್ರ ತನಿಖಾ ದಳ, ಕೇಂದ್ರ ವಿಚಕ್ಷಣಾ ದಳಗಳಿಗೆ ಅಂಜುವ ಮಾನ-ಮರ‍್ಯಾದೆ ಪ್ರಜ್ಞೆ ಇಂದಿನ ರಾಜಕೀಯಕ್ಕಿದೆಯೇ?! ‘ಇಲ್ಲ’ದ್ದಕ್ಕೆ ನಾಚುವ ಸ್ವಂತಿಕೆ-ಸ್ವಾತಂತ್ರ್ಯಗಳಾದರೂ ಸನ್ಮಾನ್ಯ ಶಾಸಕ-ಸಂಸದವರೇಣ್ಯರಿಗಿರುತ್ತದೆಯೇ?! ಇವರ ಜುಟ್ಟು ಏನಿದ್ದರೂ ಯಾವುದೊ ಕೊಚ್ಚೆ, ಕೆಸರು, “ರಾಡಿ”ಗಳಲ್ಲಿ ಸಿಕ್ಕುಗಟ್ಟಿರುವುದಲ್ಲವೇ?!

ಲಿನಕ್ಸ್ ವೆಬ್ಸೈಟ್‌ನಲ್ಲಿ ವಿಂಡೋಸ್ ಜಾಹೀರಾತು!

ಇವತ್ತು ಹಾಗೇ ಲಿನಕ್ಸಿನ ಬಗ್ಗೆ ಜಾಸ್ತಿ ತಿಳಿದುಕೊಳ್ಳೋಣ ಎಂದು ಗೂಗಲ್‌ನಲ್ಲಿ ಹುಡುಕುತ್ತಿದ್ದೆ. ಹಾಗೆಯೇ ಲಿನಕ್ಸಿನ ಅಧಿಕೃತ ವೆಬ್ಸೈಟನ್ನೂ ತೆಗೆದೆ. ಅದರಲ್ಲಿ ನೋಡಿದರೆ ಒಂದು ಆಶ್ಚರ್ಯ ಕಾದಿತ್ತು. ಲಿನಕ್ಸ್ ವೆಬ್ಸೈಟ್‌ನಲ್ಲಿ ವಿಂಡೋಸಿನ ಜಾಹೀರಾತು! ದುಡ್ಡು ಕೊಟ್ಟು ಕೊಳ್ಳುವ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಪರ್ಯಾಯವಾಗಿ ಹುಟ್ಟಿಕೊಂಡ ಪ್ರಮುಖ ಸ್ವತಂತ್ರ ತಂತ್ರಾಂಶವಾದ ಲಿನಕ್ಸಿನ ಅಧಿಕೃತ (http://linux.org) ತಾಣದಲ್ಲಿ ಅದೇ ದುಡ್ಡು ಕೊಟ್ಟು ಕೊಳ್ಳುವ ವಿಂಡೋಸಿನ ಜಾಹೀರಾತು. ಅದೂ ಅಲ್ಲದೇ ವಿಂಡೋಸ್7ನ ವರ್ಣನೆ ಬೇರೆ! ಎಂತಹಾ ವಿಪರ್ಯಾಸ ಅಲ್ಲವೇ?

ಮೂಢ ಉವಾಚ -50

            ಮೂಢ ಉವಾಚ -50


ಪಂಚಭೂತಗಳಿಂದಾದುದೀ ಮಲಿನ ದೇಹ|
ಹೊಲಸು ತುಂಬಿರುವ ಕೊಳಕು ಚರ್ಮದ ಚೀಲ||
ಬಣ್ಣಬಣ್ಣದ ಬಟ್ಟೆಯಲಿ ಮುಚ್ಚುವರು ಕೊಳಕ|
ಇಂತಪ್ಪ ದೇಹವನು  ನಾನೆನಲೆ ಮೂಢ||


ತನುವು ಸುಂದರವೆಂದು ಉಬ್ಬದಿರು ಮನುಜ|
ಹೊಳೆವ ಚರ್ಮದೊಳಗಿಹುದು ಹೊಲಸು||
ತನುವಿನೊಳಿಲ್ಲ ಬಣ್ಣದೊಳಿಲ್ಲ ಚೆಲುವು ಹೊರಗಿಲ್ಲ|
ಒಳಗಿನ ಗುಣದಲ್ಲಿ ಚೆಲುವಿಹುದು ಮೂಢ||


********************


-ಕವಿನಾಗರಾಜ್.

ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ

ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ


ಮಂಥರೆಯ ಕೆಂಗಣ್ಣಿಗೆ ಗುರಿಯಾಗಿ ಅಡವಿ ಪಾಲಾದೆಯ ರಾಮ..


 


ನವವಧು ಸೀತಾಮಾತೆ, ಲಕ್ಷ್ಮಣರೊಂದಿಗೆ ಹೊರಟೆ ಅಡವಿಗೆ


ಕಲ್ಲು ಮುಳ್ಳುಗಳ ದುರ್ಗಮ ಹಾದಿಯ ಸವೆಸುತ ಹೊರಟೆ..


ಸರ್ವಸುಖವ ಅನುಭವಿಸಿದ ನಿನಗೆಂಥ ಪರೀಕ್ಷೆಯಯ್ಯ ರಾಮಾ..


ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ


 


ಮಾಯಾಜಿಂಕೆಯ ರೂಪದಲ್ಲಿ ಬಂದ ದುಷ್ಟ ಅಸುರನು..


ಭಿಕ್ಷಾಂ ದೇಹಿ ಎಂದ ದುಷ್ಟ ರಾವಣನು ಸೀತಮಾತೆಯ ಅಪಹರಿಸಿದನು..


ಸೀತಾಮಾತೆಯ ವಿರಹ ವೇದನೆಯ ಕಾಡಿತಲ್ಲೋ ರಾಮಾ..


ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ


 


ಅಗಸನ ಮಾತಿಗೆ ಬೆಲೆಕೊಟ್ಟು ಅತಿಕಷ್ಟದಿ ಸೀತಾಮಾತೆಯ


ಅಡವಿ ಪಾಲು ಮಾಡಬೇಕಾಯಿತಲ್ಲ ರಾಮಾ..


ಸೀತಮಾತೆಯ ಅನುಪಸ್ಥಿತಿಯಲ್ಲಿ ಮಾಡಿದೆಯಾ ಅಶ್ವಮೇಧ ಯಾಗವ..

ಎಂಜಲು ಎಲೆ ಮೇಲೆ ಉರಳು ಸೇವೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿರುವ ಎಂಜಲು ಎಲೆ ಮೇಲೆ ಉರುಳು ಸೇವೆ ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದೆ. ದಲಿತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಪುರೋಹಿತಶಾಹಿ ವಿರುದ್ದ ಧ್ವನಿ ಎತ್ತುತ್ತಿದೆ. ಹಾಗಾದರೆ ಇಲ್ಲಿ ನಡೆದಿದ್ದೇನು.

ಕಳೆದ ಹತ್ತಾರು ವರ್ಷಗಳಿಂದ ಈ ರೀತಿಯ ಆಚರಣೆಗಳು ಕೇವಲ ಕುಕ್ಕೆ ಸುಬ್ರಹ್ಮಣ್ಯ ಮಾತ್ರವಲ್ಲದೆ, ಚಿಕ್ಕ ಬಳ್ಳಾಪುರ ಸೇರಿದಂತೆ ಹಲವೆಡೆ ನಡೆಯುತ್ತಿದೆ. ಅವಾಗ ಏಳದ ಧ್ವನಿ ಈಗ ಬರುತ್ತಿರುವುದಕ್ಕೆ ಕಾರಣವಾದರೂ ಏನು?, ಇದೊಂದು ಪ್ರಚಾರದ ಗಿಮಿಕ್ಕಾ? ಅಥವಾ ಪುರೋಹಿತ ವರ್ಗದವರಿಗೆ ಏನು ಮಾಡಿದರೂ ಸುಮ್ಮನಿರುತ್ತಾರೆ ಎನ್ನುವ ಕಾರಣವಾ? ಇದನ್ನು ಸಂಬಂಧ ಪಟ್ಟವರೇ ತಿಳಿಸಬೇಕಾಗಿದೆ. ಹಾಗೇ ಚಿಂತಿಸುವಂತಹ ಕಾರ್ಯವಾಗಬೇಕಿದೆ.

ಸೂರಗಿದ ಚಂದ್ರ ಮತ್ತು ನನ್ನ ತುಟಿಗೆ ಅವಳ..

"ಹುಣ್ಣಿಮೆ ಬೆಳಕನು ಚೆಲ್ಲುತ

 ಚಂದ್ರನು ಹಾಕಿದ ಭೂಮಿಯ ಸುತ್ತ

 ಭೂಮಿಯು ಒಲಿಯಲಿ ತನೆಗೆ ಎನ್ನುತಾ

 

 ಭೂಮಿಯು ನೋಡಲಿಲ್ಲ ಚಂದ್ರನತ್ತ

 ಚಂದ್ರನ ಮನಸಿಗೆ ಆಯಿತು ಘಾತ

 ಅದಕೆ ಚಂದ್ರ ಸೊರಗಿ ಸೊರಗಿ ಸತ್ತ...!

 

.........................................

 

"ನಿನ್ನ ತುಟಿಗೆ ನನ್ನ ತುಟಿ ಇಟ್ಟು

 ನೀ ನನಗೆ ಮುತ್ತಿಟ್ಟು

 ತಿಳಿಸಿದೆ ನಮ್ಮ ಪ್ರೀತಿಯ ಸಿಹಿ ಈ ಮುತ್ತಿನಷ್ಟು

 

 ಈ ಮುತ್ತುಗಳ ಸಾಲ ಕೊಟ್ಟು

 ಎಲ್ಲಿಗೆ ಹೊರಟೆ ನನ್ನ ಬಿಟ್ಟು

 ಬಾ ತೀರಿಸುವೆ ಮುತ್ತುಗಳ ಸಾಲ ಬಾಕಿ ಉಳಿಯದಷ್ಟು..!