ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶ್.............!

ಅದೊ೦ದು ಭಾರೀ ಪಾಳು ಬ೦ಗಲೆ, ರಾತ್ರಿಯ ಎರಡು ಘ೦ಟೆ, ನರಿಗಳ ಊಳಿಡುವ, ಝೀರು೦ಡೆಗಳ, ಇತರ ನಿಶಾಚರಿಗಳ ಕಿಚಕಿಚ ಸದ್ದು, ಮ೦ದವಾದ ಬೆಳಕು, ಎ೦ತಹ ಗ೦ಡೆದೆಯವನಲ್ಲೂ ಸಣ್ಣನೆಯ ನಡುಕ ಹುಟ್ಟಿಸುವ೦ತಹ ವಾತಾವರಣ.  ಆ ಸರಿ ರಾತ್ರಿಯಲ್ಲಿ ಹದಿಹರೆಯದ ಯುವತಿಯೊಬ್ಬಳು ಆಳೆತ್ತರದ ಗೇಟನ್ನು ದಾಟಿ ಒಬ್ಬ೦ಟಿಯಾಗಿ, ಆ ನಿರ್ಜನ ಪ್ರದೇಶದಲ್ಲಿ ಜೀವ ಕೈಯಲ್ಲಿ ಹಿಡಿದುಕೊ೦ಡು ಸಣ್ಣ ಟಾರ್ಚಿನ ಬೆಳಕಿನಲ್ಲಿ ನಡೆದು ಬರುತ್ತಾಳೆ.  ಕ೦ಪಿಸುವ ಶರೀರದೊ೦ದಿಗೆ "ಓ೦ ಶ್ರೀ ಸಾಯಿನಾಥಾಯ ನಮಃ" ಎ೦ದು ಸಾಯಿಬಾಬಾರನ್ನು ನೆನೆಯುತ್ತಾ, ಭಯ ತು೦ಬಿದ ಕಣ್ಣುಗಳೊ೦ದಿಗೆ ಆ ಭಯ೦ಕರ ರಾತ್ರಿಯಲ್ಲಿ ಪಾಳು ಬ೦ಗಲೆಯ ಒಳಗೆ ಅಡಿಯಿಡುತ್ತಾಳೆ.  ತನ್ನ ಕೈಲಿರುವ ಪುಟ್ಟ ಟಾರ್ಚಿನ ಬೆಳಕಿನಲ್ಲಿ ಅದೇನನ್ನೋ ಹುಡುಕುತ್ತಾಳೆ, ತನ್ನಷ್ಟಕ್ಕೆ ತಾನೇ ಮಾತಾಡುತ್ತಾಳೆ, ಭಯವಾದಾಗ "ಅಮ್ಮಾ" ಎ೦ದು ಕಿಟಾರ

ನನ್ನ ಚಿತ್ರ.. ನಿಮ್ಮ ಕಲ್ಪನೆ.. !!!

ಸಂಪದಿಗರೇ..

ಈ ಚಿತ್ರಕ್ಕೆ.. ನಿಮ್ಮ ಕಲ್ಪನೆ ಸೇರಿಸಿ.. ಒಂದಷ್ಟು ಬರಹ, ಶೀರ್ಷಿಕೆ ಅಥವಾ ಕವನ ನೀಡಬಹುದೇ?

ನಿಮ್ಮ ಪ್ರಯತ್ನಕ್ಕಾಗಿ ಕಾದಿರುವೆ.. :)

 

ಹಾಗೇ.. ಇದರ ಬಗ್ಗೆ ಒಂದೆರೆಡು ಮಾತು..

ಇದು ಒಂದು ಭಿನ್ನ ಕೋನದಿಂದ ತೆಗೆದ ಸಾಮಾನ್ಯ ನೋಟದ ಚಿತ್ರ.. ಇದರ ನೇರ ನೋಟದ ಚಿತ್ರವನ್ನ ಸದ್ಯದಲ್ಲೇ ಪ್ರಕಟಿಸುವೆ..

ವೈರುಧ್ಯ ಸ್ವಭಾವ = ಅನ್ಯೋನ್ಯ ಸಂಸಾರ!

ಸುಖ ಸಂಸಾರದ ಸೂತ್ರಗಳೇನು? ಬ್ಯಾಚಲರ್ ಆದ ನಾನು ಇದರ ಬಗ್ಗೆ ಮಾತನಾಡುವುದು ತೀರಾ ಅಸಂಬದ್ಧವಾದೀತು. ಆದರೂ ಕಂಡದ್ದು, ಓದಿದ್ದನ್ನೆಲ್ಲಾ ಯೋಚಿಸಿದಾಗ ಒಬ್ಬ ವ್ಯಕ್ತಿ ಹೇಗಿರಬೇಕು ಎಂದರೆ ಶಿವನಂತಿರಬೇಕು ಎನ್ನುತ್ತೇನೆ ನಾನು. ಏಕೆ ಹೇಗೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯೋಣ.

ಹಿಮಾಲಯ(ಕೈಲಾಸ)ದಲ್ಲಿ ಸರ್ವಸಂಗ ಪರಿತ್ಯಾಗಿಯಾಗಿ ಭೂತಗಣಾಧಿಪತಿಯಾಗಿ ಆಸೀನಾಗುವ ಶಿವನಿಗೂ ಸಂಸಾರವೆಂಬ ಮಾಯಾಜಾಲಕ್ಕೂ ’ಎತ್ತಣ ಮಾಮರ ಎತ್ತಣ ಕೋಗಿಲೆ’ ಸಂಬಂಧ! ಯೋಗಿಯಾಗಿ ಬದುಕುವವನಿಗೂ ಭೋಗದ ಅಗತ್ಯವಿದೆಯೆನ್ನುವುದು ಆತನನ್ನು ಪರಿಪೂರ್ಣ ಮನುಷ್ಯನನ್ನಾಗಿ ಮಾಡುವ ಕಲ್ಪನೆ.

ಎ೦ಥ ವಿಸ್ಮಯ......!

ಎ೦ಥ ವಿಸ್ಮಯವಿದು ದೈವ ಲೀಲೆ
ಕುತೂಹಲ ನಗುವ ಕ೦ದಮ್ಮನ ಕಣ್ಣಲಿ
ನಿರ್ಭಾವ ಇಹವ ಮುಗಿಸಿದ ಹಿರಿಯಮ್ಮನಲಿ
ಜಗವ ಕಾಣುವ ಕುತೂಹಲ ಮುಗ್ಧ ಕಣ್ಣಲಿ
ಬಾಳಿ ಹಣ್ಣಾದ ಹಿರಿ ಜೀವ ಈಗ ಮುಪ್ಪಿನಲಿ
ಕಾಯುತಿದೆ ಕಾಲನ ಕರೆಯ ತವಕದಲಿ
ಹಲವು ಪ್ರಶ್ನೆಗಳು ನೋಡುಗರ ಮೊಗದಲಿ!

ಫೊಟೋಕಾಪಿ ಡಾಕ್ಟರಿಕೆ

ಮೊನ್ನೆ ಸಂಜೆ ವಾಕಿಂಗ್ ಹೋಗುತ್ತಿದ್ದಾಗ ನನ್ನ ಡಿಪಾರ್ಟ್‌ಮೆಂಟಿನ ಹನುಮಪ್ಪ ಎದುರಿಗೆ ಸಿಕ್ಕಿದ.
"ಏನ್ ಹನುಮಪ್ಪಾ, ಟೌನಿಗ್‍ಹೋಗಿ ಬರ್ತಿರೋದಾ?" ಎಂದು ಉಪಚಾರಕ್ಕೆ ವಿಚಾರಿಸಿದೆ.

ಹೀಗೊಂದು ಕವನ ಸಂಪದದಂಗಳಕೆ ಕಾಲಿಡುವ ಮುನ್ನ

ನಾನು ಕವಿಯಲ್ಲ


ಆದರೂ  ಬರೆಯಲು ತೊಡಗಿರುವೆನು


ಕವಿತೆಯ ಮರ್ಮ ಅರಿಯೆನು


ಆದರೂ ಅಕ್ಷರ ಜ್ಞಾನ  ತಿಳಿದಿರುವೆನು


 


ಕವನದ ಬಗ್ಗೆ ಎಂದೂ ಯೋಚಿಸದ ನಾನು


ಇಂದೇಕೋ ಲೇಖನಿ ಹಿಡಿದಿರುವೆನು


ಮನದ ಭಾವನೆಗಳು ಹೆಚ್ಚಾಗಲು


ಕಾಗದದ ಮೇಲೆ ಬರೆದಿರುವೆನು


 


ಶುರು ಮಾಡಿದೆನು ಒಂದು ಪದದಿಂದ


ಕೊನೆಗೂ ಅಕ್ಷರ ಮಾಲೆಯನು ಮಾಡಿರುವೆನು


ಪದ ಪದ ಜೊತೆ ಸೇರಿಸಿ


ಸಾಲುಗಳ ರಚಿಸಿರುವೆನು


 


ನಾನು ಕವಿಯಲ್ಲ


ಆದರೂ  ಬರೆಯಲು ತೊಡಗಿರುವೆನು


ಕವಿತೆಯ ಮರ್ಮ ಅರಿಯೆನು


ಆದರೂ ಅಕ್ಷರ ಜ್ಞಾನ  ತಿಳಿದಿರುವೆನು


 


ಯಾರಿಗೆ ತೋರಿಸಲಿ ಇದನೆಂದು ಯೋಚಿಸಲು


ಗೆಳೆಯ ಸಂಪದನನ್ನು ನೆನಪಿಸಿರುವೆನು


ನನ್ನ ಪ್ರೋತ್ಸಾಹಿಸಲು ಸದಾ ಕಾದಿರುವ


ಗೆಳೆಯ ಗೆಳತಿಯರನು ನೆನಪು ಮಾಡಿರುವೆನು


 

ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೪

http://sampada.net/article/24590 - ಭಾಗ ೦೧

http://sampada.net/article/24910 - ಭಾಗ ೦೨

http://sampada.net/article/28021 - ಭಾಗ ೦೩


ಭಾಗ - ೦೪