ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗಾದೆಮಾತಿನ ಮೂಲ

ಆಗ ತಾನೆ ಬಿ.ಇ ಪದವಿಯನ್ನು ಮುಗಿಸಿ ಉದ್ಯೋಗ ಹುಡುಕಲು ಬೆಂಗಳೂರಿಗೆ ಬಂದಿದ್ದೆವು.

 

ಬೆಳಗಿನ ಉಪಹಾರಕ್ಕೆಂದು ಸ್ನೇಹಿತರೊಡನೆ ದರ್ಶಿನಿಗೆ ಹೋಗುತ್ತಿದ್ದೆವು. ಸ್ವಸಹಾಯ ಹಾಗು ಮಾಣಿಗಳ ಸೇವೆಯ ತರಹದ ಪದ್ಧತಿಗಳು, ಇಲ್ಲಿಗೆ ಬಂದಮೇಲೆಯೇ ನಮಗೆ ಗೊತ್ತಾಗಿದ್ದು.

 

ಈ ಸೇವೆಗಳ ಬೆಲೆಯಲ್ಲಿರುವ ವ್ಯತ್ಯಾಸವನ್ನು ನೋಡಿ, ಮನೆಯಿಂದ ಕಳುಹಿಸಿದ ಹಣವನ್ನು ದುಂದುವೆಚ್ಚ ಮಾಡಬಾರದೆಂದು ಸ್ವಸಹಾಯ ಪದ್ಧತಿಯಲ್ಲಿಯೇ ತಿಂಡಿ ತಿಂದು ಬರುತ್ತಿದ್ದೆವು. ಹೋದಾಗಲೆಲ್ಲ ನನಗೆ ಅನಿಸುತ್ತಿತ್ತು "ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು" ಎಂಬ ಗಾದೆಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ, ಹೀಗೆ ನಮ್ಮಂತೆ ಉದ್ಯೋಗಾರ್ಜನೆಗಾಗಿ ಬರುವ ಯುವಕರೆಂದು.    

ಮೊದಲ ಹನಿ

ವಿಘ್ನ ವಿನಾಶಕನಿಗೆ ಸಲ್ಲಿಸುತ ಬರೆಯುತಿರುವೆ ಮೊದಲ ಹನಿಗವನ 

ಹರಸಿ ಓದುಗರಾದ ನೀವೆಲ್ಲರೂ ಗೆಲ್ಲುವೇನೆಂದು ಎಲ್ಲರ ಜನಮನ||

 

ಕುವೆಂಪು ಅಡ್ಡಾಡಿದ ಕುಪ್ಪಳಿಯಲ್ಲಿ...

ದಿ.೨೧ ರಿಂದ ೨೩ ರ ವರೆಗೆ ಕುಪ್ಪಳಿಯಲಿ ನಡೆದ ಕಥಾಕಮ್ಮಟದಲ್ಲಿ ಭಾಗವಹಿಸುವ
ಸದವಕಾಶ ಬಂದಿತ್ತು. ನನ್ನ ತಮ್ಮ ಚಾರುದತ್ತ ಈಗಾಗಲೇ ಇಂತಹ ಕಮ್ಮಟಗಳಲ್ಲಿ ಪಾಲ್ಗೊಂಡವ..ಮೊದಲೇ ಕಿವಿ ಮಾತು ಹೇಳಿದ್ದ ತೀರ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಹೋಗಬೇಡ ಅಂತ. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ
ಬಸ್ಸು ಕುಪ್ಪಳಿಕ್ರಾಸ್ ಗೆ ನನ್ನ ಇಳಿಸಿದಾಗ ಗಂಟೆ ಮುಂಜಾನೆಯ ಒಂಬತ್ತಾಗಿತ್ತು. ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ, ಕುವೆಂಪು ಪ್ರತಿಷ್ಠಾನ, ಕುವೆಂಪು ಅಧ್ಯಯನ ಕೇಂದ್ರ ಕನ್ನಡ ವಿ.ವಿ ಹೀಗೆ ಮೂರು ಸಂಸ್ಥೆಗಳು  ಈ ಕಮ್ಮಟ

ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ...

ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ


ಸುತ್ತುವರಿಯುತ ಅವಳ ಕಾಣಿಸುವುದು


ಅವಳೆದುರು ಬಂದಾಗ ಮಾತಿರದೆ ಮೌನದಲಿ


ಕಣ್ಣ ನೀಲಿಯೇ ನನ್ನ ಮೀಯಿಸುವುದು


 


ಮಾತಿನೋಲೆಗಳೆಲ್ಲ ಅವಳೊಂದು ನಗೆಯಲ್ಲಿ


ಮರೆತು ಹೋಗುವುದೆನ್ನ ಕನಸ ಬುತ್ತಿ


ಬೇಸರವೇ ಜಾರುವುದು ಅವಳ ಸಾಮೀಪ್ಯದಲಿ


ಮತ್ತೆ ಬರುವುದು ಕನಸು ಸುತ್ತಿ ಸುತ್ತಿ


 


ನಿಜವಾದ ಚೆಲುವನ್ನು ಹೊಗಳಲಾರದೆ ನಾನು


ಮರುಗುವೆನು ಅವಳಿರುವ ಎಲ್ಲಾ ಕ್ಷಣವು


ಜಲದ ನಾದದ ದನಿಯು ನನ್ನೆದುರು ಕುಣಿವಾಗ


ಎಲ್ಲಿಯೋ ಅಡಗುವುದು ನನ್ನ ಸ್ವರವು


 

ನಾನು ಮತ್ತು ಗಿಳಿ !!

    ೧


ಏನೋ ಕನಸಿನ ಹಿಂದೆ ಕೈಚಾಚುತ್ತಿದ್ದಾಗ

ಕಂಡೆ ನಾನೊಂದು ಗಿಳಿ ಕಿಟಕಿಯಲ್ಲಿ 

ಹಸುರುಟ್ಟ ಗದ್ದೆಯ ಬಣ್ಣ, ಕೆಂಪು ಕೊಕ್ಕು 

ಈ ಹಕ್ಕಿ ಎಸ್ಟೊಂದು ಚೆನ್ನ

ಪ್ರಕೃತಿದೇವಿಗೆ ನನ್ನದೊಂದು ನಮನ

 

ಅಷ್ಟು ಸ್ನೇಹಿಯೇ ನಾನು ?

ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಹಕ್ಕಿ

ಹೆದರದೇ ಕುಳಿತಿದೆಯಲ್ಲ

ಹೀಗೆಲ್ಲಾ ಉಂಟು!

ಬೃಹತ್ ಬೆಂಗಳೂರಿನ ಕೆಲವು ಅನುಭವಗಳನ್ನು ನಾನೀಗ  ಹೇಳ ಹೊರಟಿರುವೆ .ನೆನಪಾದರೆ ನಗು, ಅಳು ಎರಡೂ ಬರುವ ಘಟನೆಗಳವು. ಅದೊಂದು ಶನಿವಾರ ರಜೆಯಿದ್ದ ಕಾರಣ ಸ್ನೇಹಿತೆಯ ರೂಮಿಗೆ  ಹೊರಟಿದ್ದೆ. ನಾನಿದ್ದ BTM ನಿಂದ ಅಷ್ಟು ದೂರದ ಕೋರಮಂಗಲಕ್ಕೆ  ಆಟೋದಲ್ಲೇ ಹೊರಟಿದ್ದೆ. .(ನನ್ನಂತಹ ಇನ್ನೊಂದು ೪ ಜನರಿದ್ದರೆ ಆಟೋದವರ ಹೊಟ್ಟೆಪಾಡು ಬಹು ಸುಲಭ !)ಕೋರಮಂಗಲ (ಮೊನ್ನೆ ಮೊನ್ನೆ ಗೊತ್ತಾಗಿದ್ದು ಹೆಸರು )ದಲ್ಲೊಂದು ಸಿಗ್ನಲ್ ಬಿತ್ತು.ಇಳಿಯಲಿರುವ ಸ್ಟಾಪ್ ಮುಂದಿತ್ತು.ನಾನು

ಗುರುಗಳ ಆಶೀರ್ವಚನ

ಬಹಳ ದಿನಗಳ ನಂತರ ನಮ್ಮ ಹಳ್ಳಿಗೆ ಶ್ರೀ ಶ್ರೀ ಶ್ರೀ ಗುಲ್ಕನ್ 120 ಸ್ವಾಮೀಜಿ ಆಗಮಿಸಿದ್ದರು. ಇವರು ವಿದೇಶಗಳಲ್ಲೂ ಬಹಳ ಫೇಮಸ್ ಅಂತೆ. ಸಂಸ್ಕ್ಋತ, ಉರ್ದು, ಅರೇಬಿಕ್, ಇಂಗ್ಲೀಷ್ ಮತ್ತೆ ಕನ್ನಡ ಸೇರಿದಂತೆ ಹಲವು ಭಾಷೆಗಳನ್ನು ಲೀಲಾಜಾಲವಾಗಿ ಮಾತನಾಡುವುದು ಮಾತ್ರವಲ್ಲದೆ ಉತ್ತಮ ಆಶೀರ್ವಚನ ಕೊಡ್ತಾರಂತೆ ತಿಳಿದಿತ್ತು. ಹಾಗಾಗಿ ನಮ್ಮ ಹಳ್ಳಿಗೂ ಕರೆಸಿ ಇವರ ಮಾತುಗಳನ್ನು ಕೇಳಬೇಕು ಎನ್ನುವುದು ನಮ್ಮೆಲ್ಲರ ಆಸೆಯಾಗಿದ್ದ ಕಾರಣ, ಊರ ಹಿರಿಯರಾದ ಗೌಡರಿಗೆ ಇಸ್ಯಾ ತಿಳಿಸಿದ್ವಿ, ಪಾದಪೂಜೆಗೇನೇ ಒಂದು ಲಕ್ಷ ರೂಪಾಯಿ ಅಂದ್ರು, ಲೇ ಇವರ ಕಾಲೇನು ಚಿನ್ನದ್ದ ಅಂದ ಸುಬ್ಬ, ಹಂಗೆಲ್ಲ ಅನ್ಬೇಡಲಾ, ಸ್ವಾಮೀಜಿ ಬೇಜಾರ್ ಆಯ್ತಾರೆ ಅಂದ ಗೌಡಪ್ಪ. ಕಾಲು ತೊಳೆದು ನೀರು ಕುಡಿದು ತಲೆಗೆ ಒರಿಸ್ಕೊ ಬೇಕಲಾ ಅಂದ ಗೌಡಪ್ಪ. ಹೌದು ಇದೇನು ಗುಲ್ಕನ್ 120.

ಕಣ್ಣೀರ್

ಅತ್ತರೆ ಕಣ್ಣೀರ್ ಅಂತೆ ಸ್ರವಿಸುವಳು ನೊಂದರೆ ನೋವಾಗಿ ಖಾಲಿಯಾಗುವಳು ನೆನಪ ಶಿಖರದ ಮೇಲೆ ಸ್ವಪ್ನದ ಗೊಡಿದೆ ಅದರಲಿ ಮೌನ ಪ್ರೇಮದ ದ್ಯಾನವಿದೆ ತಿರಸ್ಕೃತ