ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬ್ಲಾಗರ್‍ ಟೆಂಪ್ಲೇಟ್‌ನ್ನು restore ಮಾಡುವ ವಿಧಾನ

ಬ್ಲಾಗರ್‌ನಲ್ಲಿರುವ ನಿಮ್ಮ ಬ್ಲಾಗ್‌ನಲ್ಲಿ ಏನೇ ಬದಲಾವಣೆ ಮಾಡಬೇಕಾದರೂ ಮೊದಲು ಈಗಿರುವ ಟೆಂಪ್ಲೇಟ್‌ನ್ನು ಸೇವ್ ಮಾಡಿಟ್ಟುಕೊಳ್ಳಿ, ಇದರಿಂದ ಬದಲಾವಣೆ ಮಾಡಿದ ಮೇಲೆ ಏನಾದರೂ ತೊಂದರೆಯಾದರೆ ಮೊದಲಿದ್ದ ರೂಪಕ್ಕೇ ಬ್ಲಾಗನ್ನು ಮರಳಿಸಬಹುದು.

(ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಅದಕ್ಕಾಗಿ ಮೊದಲು ನಿಮ್ಮ ಬ್ಲಾಗರ್‍ ಡ್ಯಾಶ್‌ಬೋರ್ಡ್‌ನಲ್ಲಿ Design ಮೇಲೆ ಕ್ಲಿಕ್ ಮಾಡಿ, ನಂತರ Edit HTML ಒತ್ತಿ.

ಸುದ್ದಿ ವಾಹಿನಿಗಳು ತಿದ್ದಿಕೊಳ್ಳಬೇಕು

 
  ಕನ್ನಡದ ಕಿರುತೆರೆ ಸುದ್ದಿವಾಹಿನಿಗಳ ವರದಿಗಾರರು ಹಾಗೂ ನಿರೂಪಕರು ಕೆಲವೊಮ್ಮೆ ಎಷ್ಟು ಎಳಸಾಗಿ ಆಡುತ್ತಾರೆಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ.
  * ಜಿ.ವೆಂಕಟಸುಬ್ಬಯ್ಯ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದಾಗ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರಗೊಂಡ ಅವರ ಸಂದರ್ಶನದಲ್ಲಿ ವಾಹಿನಿಯ ವರದಿಗಾರ್ತಿಯು ಜಿವೆಂ ಅವರಿಗೆ ಕೇಳಿದ ಪ್ರಶ್ನೆ ಹೀಗಿತ್ತು. "ಈಗ ನಿಮಗೆ ಅಧ್ಯಕ್ಷ ಸ್ಥಾನದ ಗೌರವ ಸಿಕ್ಕಿದೆ, ಕನ್ನಡಕ್ಕೆ ಮುಂದೆ ಏನು ಕೆಲಸ ಮಾಡಬೇಕೂಂತಿದೀರಿ?"

ಮಿಸ್ಟರಿ ಮುದುಕ ಮತ್ತು ಕ್ರಿಕೆಟ್ ಮ್ಯಾಚು

’ಕೋರ್!’ ಮುದಿಯ ಜೋರಾಗಿ ಚಪ್ಪಾಳೆ ತಟ್ಟಿದ. ಆಗಷ್ಟೇ ಪ್ರಾರಂಭವಾಗಿದ್ದ ಬೆಳ್ಮಣ್ಣು ಪ್ರೀಮಿಯರ್ ಲೀಗಿನ ಸೆಮಿ ಫೈನಲ್ ಪಂದ್ಯದಲ್ಲಿ ನಮ್ಮ ಮತ್ತು ನಂದಳಿಕೆ ತಂಡದ ನಡುವೆ ಹಣಾಹಣಿ ನಡೆಯುತ್ತಿತ್ತು. ರಾಜೀವ್ ಮತ್ತು ಪ್ರವೀಣ್ ಆಗಲೇ ಕ್ರೀಸಿಗಿಳಿದಿದ್ದರು. ಮೊದಲ ಚೆಂಡನ್ನೇ ಪುಲ್ ಮಾಡಿದ ರಾಜೀವ್ ಹೊಡೆತ ಚೆಂಡನ್ನು ಆಗಲೇ ಬೌಂಡರಿಯಾಚೆ ಅಟ್ಟಿತ್ತು. ಪೆವಿಲಿಯನ್ ಎಂಬ ಬೌಂಡರಿ ಪಕ್ಕದಲ್ಲಿ ನೀರು ಎಂಬ ಎನರ್ಜಿ ಡ್ರಿಂಕನ್ನು ಕುಡಿಯುತ್ತಾ ನಾನು ಒಮ್ಮೆ ಮುದಿಯನನ್ನು ನೋಡಿದೆ.

ಮಾಟ-ಮಂತ್ರದ ತಂತ್ರಕ್ಕೆ ಕತ್ತೆಯಂತಹ ಮತದಾರ ಪ್ರಾಣಿ ಬಲಿ!

ವಿರೋಧ ಪಕ್ಷಗಳವರು ಕತ್ತೆಯಂಥಾ ಪ್ರಾಣಿಗಳನ್ನು ಬಲಿಗೊಟ್ಟು ತಮ್ಮ ವಿರುದ್ಧ ಮಾಟ-ಮಂತ್ರ ಮಾಡಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ಅಲವತ್ತುಕೊಂಡಿದ್ದಾರೆ. ಇಮತಹ ವಿದ್ಯಮಾನಗಳಿಂದ ವಿಚಲಿತರಾಗಬಾರದೆಂಬ ಹಿತೋಕ್ತಿಯನ್ನು, ‘ವಿಚಾರವಾದಿಗಳ ಮೂಢನಂಬಿಕೆ’ ಎಂದೇ ತಳ್ಳಿಹಾಕಬೇಕೇನೊ! ಏಕೆಂದರೆ ವೈಚಾರಿಕತೆಗೂ, ರಾಜನೀತಿಗೂ ಇಂದು ಅಷ್ಟೇನೂ ತಾಳ-ಮೇಳ ಕಂಡುಬರುವುದಿಲ್ಲ. ಅಧಿಕಾರ ರಾಜಕೀಯದಲ್ಲಿ ಸೋಲು-ಗೆಲವುಗಳೇನಿದ್ದರೂ, Floor-test, ರಾಜಭವನದ Parade ಇತ್ಯಾದಿ Fashion showಗಳಿಗಷ್ಟೇ ಸಿಮಿತವಲ್ಲವೇ?

ಚಿತ್ರಾನ್ನ ಚಿತ್ರಾನ್ನ... ಟ್ವಿಟರ್ ನ ಟ್ವೀಟುಗಳು.. ಭಾಗ-5

1)ಯಳವತ್ತಿ ಟ್ವೀಟ್:-
ಬೈಕ್ ಕೊಡಿಸ್ಲಿಲ್ಲ ಅಂತಾ ಅಪ್ಪ ಅಮ್ಮನ ಜೊತೆ ಜಗಳ ಆಡ್ಕೊಂಡು, ಮನೆ ಬಿಟ್ಟು ಬಂದು ಪಾರ್ಕಲ್ಲಿ ಕೂತಿದ್ದೆ..
ದೇವರ ಜಪ ಮಾಡಿದ್ರೆ ದೇವರು ಪ್ರತ್ಯಕ್ಷ ಆಗಿ ವರ ಕೊಡ್ತಾರಂತೆ ಅಂತಾ ಎಲ್ಲೋ ಕೇಳಿದ್ದೆ..
ಇರಲಿ ನೋಡೋಣ, ದೇವರನ್ನೇ ಬೈಕ್ ಕೇಳೋಣ ಅಂತಾ ಪಾರ್ಕಲ್ಲಿ ದೇವರ ಜಪ ಮಾಡ್ತಾ ಕೂತೆ..
ಅರ್ಧ ರಾತ್ರಿ ಕಳೆದಿತ್ತು..ಆದರೂ ಆಸೆ.. ಒಮ್ಮೆಯಾದರೂ ಪ್ರತ್ಯಕ್ಷವಾಗಲಿ ಅಂತಾ..
ಅಂತೂ ಸುಮಾರು ರಾತ್ರಿ ಮೂರೂವರೆಲಿ ಇಬ್ಬರು ದೇವರುಗಳು ಪ್ರತ್ಯಕ್ಷವಾದರು..
"ದೇವರೇ ನಂಗೆ ಬೈಕ್ ಕೊಡಿಸಿ" ಅಂತಾ ಬಾಯಿ ತೆಗೆದೆ..