ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೀವಿಗೆಯ ಹಬ್ಬ

 

ಹಚ್ಚು ದೀಪದಿಂದ ದೀಪ
ದೂರವಾಗಲಿ ಮನದ ಹುಚ್ಚು ತಾಪ
ಕರಗಲಿ ಎಲ್ಲರ ಮನದ ಕೋಪ
ಬರುವನು ಧರೆಗಂದು ಬಲಿ ಭೂಪ

ಹೊಟ್ಟೆಗಾಗಿ ಕಾದಿದೆ ವಿವಿಧ ವ್ಯಂಜನ
ತಲೆಗಾಗಿ ತೈಲ ಅಭ್ಯಂಜನ
ಮನಕೆ ಕತ್ತಲ ತೊಡೆವ ದೀಪದ ರಂಜನ
ಜೀವನಕೆ  ತತ್ವ ರಸ ಗಾಯನ

ಮನದ ಒಳಗಿನ ಕತ್ತಲ ಒಗೆದು
ಸ್ನೇಹದ ಬಂಧನ ಬಿಗಿದು
ಸಂತಸದ ಸಿಹಿಯನು ಸವಿದು
ಹರಸುವ ಎಲ್ಲರ ಪ್ರೀತಿಯ ಮೊಗೆದು

ಎಲ್ಲ ಸಂಪದ ಮಿತ್ರರಿಗೆ ದೀವಿಗೆಯ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಈ ದೀಪಾವಳಿ ಎಲ್ಲರ ಮನೆ ಮನಗಳಿಗೆ ಸಂತೋಷ ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ

ಕೆಲವು ಹನಿಗವನಗಳು

ಪ್ರೇಮದ frame

 ನಮ್ಮ family photoಗೆ

 frame ಇಲ್ಲ;

 ಪ್ರೇಮದ ಚೌಕಟ್ಟಿದೆ.

 

ನೀನು

 ನನ್ನವಳಾಗುವ ತನಕ

 ಮನದೊಡತಿ

 ನನ್ನವಳಾದ ಬಳಿಕ

 ಮನೆಯೊಡತಿ

 

 

 ನನ್ನವಳು

 ಅಂದು 

ದೀಪಾವಳಿಗೆ ಅ೦ತರಾತ್ಮದ ದೀಪ ಬೆಳಗಲಿ..

ಸಣ್ಣಗೆ ಉರಿಯುತ್ತಿದೆ ದೀಪ,


ಅ೦ತರಾತ್ಮದ ದೀಪ.


 


 ಕುಸಿದ ಜೀವನ ಮೌಲ್ಯಗಳಿ೦ದ


ದೀಪದ ಸುತ್ತಲೂ


ಕಪ್ಪು ಧೂಮ ಕವಿದು


ಮರೆಮಾಡುತ್ತಿದೆ ಪ್ರಕಾಶವನ್ನು - ತೇಜೋವಧೆ!


ಕೆಲ ದೀಪಗಳು ಹೇಳಹೆಸರಿಲ್ಲದೆಯೇ


ಅಳಿಯುತ್ತಲಿವ.


 


ಇನ್ನು ಹಲವು ದೀಪಗಳು


ಸೂರ್ಯನೆತ್ತರಕ್ಕೆ ಪ್ರಜ್ವಲಿಸುತ್ತಿವೆ.


ಬುದ್ಧನದೋ? ವಿವೇಕನದೋ? ಇನ್ಯಾವ ಮಹಾತ್ಮನದೋ?..


ಅರೆರೇ! ಇದೇನಿದು ಆಶ್ಚರ್ಯ!

ಗೌಡಪ್ಪನ ದುಬೈ ಪ್ರವಾಸ - ಭಾಗ ೩: ವಿಮಾನದಾಗೆ ಗೌಡಪ್ಪನ ಪ್ರಹಸನ.

ಅ೦ತೂ ಇ೦ತೂ ಕ್ಯಾಪ್ಟನ್ ಲತಾ ಒದ್ದಾಡಿಸ್ಕೊ೦ಡು ವಿಮಾನ ಮೇಲಕ್ಕೇರಿಸಿದ್ರು,

ಒಬಾಮಾ ಭಾರತಕ್ಕೆ ಏಕೆ ಬರುತ್ತಿದ್ದಾರೆ ಗೊತ್ತೇ?

ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ನಾಡಿದ್ದು, ಭಾರತಕ್ಕೆ ಭೇಟಿ ನೀಡುತ್ತಿರುವ ಪ್ರಮುಖ ಉದ್ದೇಶವೇನು ಎನ್ನುವುದು ಇದೀಗ ನಂಬಲರ್ಹ ಮೂಲಗಳಿಂದ ಬಂದ ಸಮೋಸಾದಿಂದ ಬೆಳಕಿಗೆ ಬಂದಿದೆ.


ಆತ ನಮ್ಮ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಆ ನಕಲಿ ಗಾಂಧಿ ಸೋನಿಯಾರನ್ನು ಭೇಟಿಮಾಡಿ ಒಂದೇ ಒಂದು ಬೇಡಿಕೆಯನ್ನು ಮುಂದಿಡಲಿದ್ದಾರಂತೆ:


ಬೇಡಿಕೆ ಏನು ಅಂತೀರಾ?

 

ಇಲ್ಲಿದೆ ಓದಿ:

 

 

"ತಾವುಗಳು ಬೇಕಿದ್ದರೆ, ಅಮೇರಿಕಾದ ಎಲ್ಲಾ ತಂತ್ರಜ್ಞರನ್ನು, ನಾಸಾದ ವಿಜ್ಞಾನಿಗಳನ್ನು, ಮಿಲಿಟರಿಯ ಎಲ್ಲಾ ಸೈನಿಕರನ್ನು ತೆಗೆದುಕೊಳ್ಳಿ. ಆದರೆ ದಯವಿಟ್ಟು ನಿಮ್ಮ "ರಜನೀಕಾಂತ್"ರನ್ನು ನಮಗೆ ನೀಡಿ"

:)

ಆಪ್ತರಕ್ಷಕ ನೋಡಲು ಹೋಗಿ ಆದ ಅವಾಂತರ

ಅಂದು ಭಾನುವಾರ. ಹಿಂದಿನ ದಿನವೇ ನನಗೆ ನನ್ನ ಅಕ್ಕ ಫೋನಾಯಿಸಿ ಭಾನುವಾರ ನನ್ನನ್ನು ನನ್ನ ತಂಗಿಯನ್ನು ಅಪ್ತರಕ್ಷಕ ಚಿತ್ರಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು. ನಾನು ನನ್ನ ತಾಯಿಗೆ ಹೇಳಲು ಮರೆತೇಬಿಟ್ಟಿದ್ದೆ. ನಮ್ಮ ಮನೆಯಲ್ಲಿ ನನ್ನ ತಂದೆ ಹಾಗೂ ತಾಯಿ ಬಹಳ ಸಂಪ್ರದಾಯಸ್ಥರು. ಸಿನಿಮಾ ಹೋಟೆಲ್ಗಳಿಗೆಲ್ಲ ಹೋಗುವ ಪದ್ಧತಿಯೇ ಇಲ್ಲ. (ಪ್ರತಿ ಭಾನುವಾರ ನಮ್ಮ ತಂದೆ ಊರಿಗೆ ಹೋಗುತ್ತಾರೆ ಹಾಗಾಗಿ ಭಾನುವಾರ ಅಮ್ಮನನ್ನು ಒಪ್ಪಿಸಿದರೆ ಹೋಗಬಹುದೆಂದುಕೊಂಡೆವು)ಭಾನುವಾರ ಅಕ್ಕ ಭಾವ ಇಬ್ಬರು ಬಂದರು. ನಮಗೆ ಭಯ ಶುರುವಾಯಿತು.

ಆಕಾಶ ಬುಟ್ಟಿ...ಜೋಕುಮಾರನ ಹೊಟ್ಟೆ

ಆಕಾಶ ಬುಟ್ಟಿ... ಅಪ್ಪನ ಹೊಟ್ಟೆ ..ಎಂದು ಮಡದಿ,ಮಗ ಆಡಿಕೊಳ್ಳುತ್ತಾ ಇದ್ದರು. ನನಗು ಹಾಗೆ ಅನ್ನಿಸಿತು. ಕೋಪದಿಂದ ಈ ಹೊಟ್ಟೆ ಕತ್ತರಿಸಿ ಒಗೆದು ಬಿಡಬೇಕು ಎಂದು. ಎಷ್ಟೇ ಆದರೂ ನನ್ನ ಹೊಟ್ಟೆ ತಾನೇ?. ದಿನಾಲೂ ಬೇಗ ಎದ್ದು ವಾಕಿಂಗ್ ಹೋಗಬೇಕು ಎಂದು ಯೋಚಿಸುತ್ತಿದ್ದೆ. ಆದರೆ ಸೂರ್ಯನಿಗಿಂತ ಬೇಗ ಎದ್ದರೆ, ಸೂರ್ಯನ ಕರ್ತವ್ಯ ನಿಷ್ಟೆ ನಾನು ಹಾಳು ಮಾಡಿದ ಪಾಪ ನನಗೆ ಯಾಕೆ ಎಂದು ಸುಮ್ಮನಿದ್ದೆ. ದಿನಾಲೂ ಸೂರ್ಯ ಎದ್ದಮೇಲೆಯಾದರೂ ಏಳಬೇಕು ಎಂದು. ಆದರೆ ನನ್ನ ಕರ್ಮಕ್ಕೆ ಆ ಜ್ಯೋತಿಷಿ ಮನೋಜ ಬೆಳಗಿನ ಜಾವದ ಕನಸು ನನಸು ಆಗುತ್ತೆ ಕಣೋ ಎಂದು ಹೇಳಿದ್ದ. ದಿನಾಲೂ ಬೆಳಗಿನ ಜಾವದಲ್ಲಿ ಯಾವುದಾದರೂ ಒಳ್ಳೆಯ ಸುಂದರಿಯ ಕನಸು, ಇಲ್ಲ ಫಾರಿನ್ ನಲ್ಲಿ ಇದ್ದ ಹಾಗೆ ಕನಸು ಹೀಗೆ ಮಜ.. ಮಜ.. ಕನಸುಗಳು. ಎದ್ದರೆ, ಕನಸು ಹಾಳಾಗುತ್ತೆ ಎಂಬ ಭಯ.